ಪರಮ ಪೂಜ್ಯ ಶ್ರೀ ಈಶಪ್ರಿಯ ತೀರ್ಥ ಸ್ವಾಮಿಯವರ ಆಶೀರ್ವಚನ | ಶ್ರೀಲ ಪ್ರಭುಪಾದ ಚರಿತಾಮೃತಮ್ | ಇಸ್ಕಾನ್ ಬೆಂಗಳೂರು
ಇಸ್ಕಾನ್ ಹರೇ ಕೃಷ್ಣ ಗಿರಿಯಲ್ಲಿ ನಡೆದ 'ಶ್ರೀಲ ಪ್ರಭುಪಾದ ಚರಿತಾಮೃತಮ್ - ಕನ್ನಡ ಮಹಾಕಾವ್ಯ' ಪುಸ್ತಕದ ಬಿಡುಗಡೆಯ ಸಮಾರಂಭದಲ್ಲಿ ಉಡುಪಿಯ ಶ್ರೀ ಅದಮಾರು ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಈಶಪ್ರಿಯ ತೀರ್ಥ ಸ್ವಾಮಿಯವರು ಆಶೀರ್ವಚನ ನೀಡಿದರು. "ಶ್ರೀಲ ಪ್ರಭುಪಾದರು ಭಗವಂತನನ್ನೇ ನಂಬಿ ವಿದೇಶಕ್ಕೆ ಹೋಗಿ, ಭಾಗವತ ಸಂದೇಶವನ್ನು ಹಂಚಿ, ವಿಶ್ವದಲ್ಲಿಯೇ ಜಾಗೃತಿ ಮೂಡಿಸಿದರು" ಎಂದು ಅವರ ಸಾಧನೆಯನ್ನು ಪ್ರಶಂಸಿಸಿದರು. "ಪ್ರಭುಪಾದರಂತಹ ಸಾಧಕರ ಚರಿತ್ರೆಯನ್ನು ನಾವು ಓದಿದಾಗ ನಮ್ಮ ಗೊಂದಲಗಳು ಪರಿಹಾರವಾಗುತ್ತವೆ. ಅವರ ಯೋಚನೆಗಳು ನಮ್ಮ ಅಡೆತಡೆಗಳನ್ನು ನಿವಾರಣೆ ಮಾಡುವ ಉಪಾಯಗಳನ್ನು ನೀಡುತ್ತವೆ" ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ ಶ್ರೀಲ ಪ್ರಭುಪಾದ ಚರಿತಾಮೃತಮ್ ಕೃತಿಯನ್ನು ಎಲ್ಲರೂ ಓದಬೇಕೆಂದು ಕರೆಯಿತ್ತರು. ಹಾಗೆಯೇ, ಈ ಗ್ರಂಥವು ಭಗವದ್ಭಕ್ತರ ಜನಮಾನಸದಲ್ಲಿ ಹಲವು ಶತಮಾನಗಳವರೆಗೆ ಮುಂದುವರಿಯಲೆಂದು ಹಾರೈಸಿದರು. ಇದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರಿಂದ ರಚಿತವಾದ ಶ್ರೀಲ ಪ್ರಭುಪಾದರ ಜೀವನಾಧಾರಿತ ಪ್ರಥಮ ಕನ್ನಡ ಮಹಾಕಾವ್ಯವಾಗಿದೆ. ಪುಸ್ತಕವನ್ನು ಖರೀದಿಸಲು ಭೇಟಿ ನೀಡಿ: spib.in/spc ಪುಸ್ತಕ ಬಿಡುಗಡೆಯ ಸಂಪೂರ್ಣ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಿ: https://youtube.com/live/8bz4dJOc8RM/ ಕವಿ ಮತ್ತು ಕೃತಿಯ ಪರಿಚಯ: ಆಧುನಿಕ ವಿಶ್ವಕ್ಕೆ ಭಾರತವು ನೀಡಿದ ಸರ್ವಶ್ರೇಷ್ಠ ರಾಯಭಾರಿಗಳೂ, ಇಸ್ಕಾನ್ ಸಂಸ್ಥಾಪಕಾಚಾರ್ಯರೂ ಆದ ಪರಮಪೂಜ್ಯ ಎ. ಸಿ. ಭಕ್ತಿವೇದಾಂತ ಸ್ವಾಮಿ ಶ್ರೀಲ ಪ್ರಭುಪಾದರ ದೈವಿಕ ಪ್ರಯಾಣ, ಭಕ್ತಿ, ತ್ಯಾಗ ಮತ್ತು ಬೋಧನೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಅದ್ಭುತ ಕನ್ನಡ ಮಹಾಕಾವ್ಯ, “ಶ್ರೀಲ ಪ್ರಭುಪಾದ ಚರಿತಾಮೃತಮ್”. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಕನ್ನಡ-ತುಳು ಸಾಹಿತ್ಯ ಅಕಾಡೆಮಿ ಗೌರವಿತರೂ ಮತ್ತು ಅಷ್ಟಾವಧಾನ ಪ್ರವೀಣರೂ ಆದ ಹೆಸರಾಂತ ಕವಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ಮೂಸೆಯಿಂದ ಮೂಡಿಬಂದಿರುವ ಅತ್ಯುನ್ನತ ಕೃತಿಯಿದು. ಸುಂದರ ಅಷ್ಟಾದಶಪದಿ ಗೀತಮಾಲಾ ಛಂದಸ್ಸಿನಲ್ಲಿ ರಚಿತವಾಗಿರುವ ಈ ಕಾವ್ಯವು, ಶಾಸ್ತ್ರೀಯ ನಡುಗನ್ನಡ ಹಾಗೂ ಆಧುನಿಕ ಕನ್ನಡವನ್ನು ಗಮಕ ಶೈಲಿಯಲ್ಲಿ ದಕ್ಷತೆಯಿಂದ ಸಂಯೋಜಿಸಿದೆ. ಸ್ವಸ್ತಿವಾಚನ, ಸಂಸಾರ, ಸನ್ಯಾಸ, ಸಮರ್ಪಣ ಮತ್ತು ಸರ್ವಮಂಗಳ ಎಂಬ ಐದು ಚಕ್ರಗಳಲ್ಲಿ ವಿಸ್ತರಿಸಿರುವ “ಶ್ರೀಲ ಪ್ರಭುಪಾದ ಚರಿತಾಮೃತಮ್” ಮಹಾಕಾವ್ಯವು ಕಬ್ಬಿನಾಲೆಯವರ ಐದನೇ ಮಹಾಕಾವ್ಯ. ಈ ಮಹಾಕಾವ್ಯವು ಕನ್ನಡ ಭಕ್ತಿಸಾಹಿತ್ಯಕ್ಕೆ ಒಂದು ಮಹತ್ತರವಾದ ಕೊಡುಗೆಯಾಗಿದೆ; ವೈಷ್ಣವ ಭಕ್ತಿಪರಂಪರೆ ಮತ್ತು ಆಧುನಿಕ ಸಾಹಿತ್ಯಲೋಕದ ನಡುವೆ ಜೀವಂತ ಸೇತುವೆಯಾಗಿ ನಿಲ್ಲುತ್ತದೆ.

ಶ್ರೀ ಪಂಡಿತ ಹರಿದಾಸ ಭಟ್ಟರಿಂದ ಪ್ರವಚನ | ಶ್ರೀ ಬ್ರಹ್ಮೋತ್ಸವ 2023 | ಇಸ್ಕಾನ್ ಹರೇ ಕೃಷ್ಣ ಗಿರಿ

ಪುಸ್ತಕ ಬಿಡುಗಡೆ | ಶ್ರೀಲ ಪ್ರಭುಪಾದ ಚರಿತಾಮೃತಮ್ ಕನ್ನಡ ಮಹಾಕಾವ್ಯ | ಇಸ್ಕಾನ್ ಬೆಂಗಳೂರು

ಪೂಜೆ ಅರ್ಚನೆಗಳು ಕೆಡಿಸಬಾರದು|ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು|ಶ್ರೀ ಕಾಡಸಿದ್ದೇಶ್ವರ ಸ್ವಾಮಿಜಿ|ಅಮೂಲ್ಯ ಮಾತು.

ಖ್ಯಾತ ಗಾಯಕಿ ಎಸ್.ಜಾನಕಿ ನಿಜಕ್ಕೂ 'ಗೃಹ ಬಂಧನ'ದಲ್ಲಿದ್ದರಾ? Beyond Limits | Ganesh Kasaragod | S Janaki |

ಸಾಂಪ್ರದಾಯಿಕ ರುಚಿಯಲ್ಲಿ ಅಮ್ಮ ಮಾಡೋ ಪುಳಿಯೋಗರೆ ಗೊಜ್ಜು | 1 ವರ್ಷದವರೆಗೂ ಕೆಡದಂತೆ ಸ್ಟೋರ್ ಮಾಡಬಹುದು

ಹಿಂದುತ್ವಕ್ಕೆ ಅಣ್ಣಾಮಲೈ ಗುಡ್ ಬೈ ! ವಿಜಯ್ ನೀತಿಗೆ ಬೆಂಬಲ ! BJP ನಿಲುವಿಗೆ ವಿರುದ್ಧನಿಂತ ಅಣ್ಣಾ ! ಬೆಂಬಲಿಗರು ಶಾಕ್

S ಜಾನಕಿ 750 ಕೋಟಿ ಆಸ್ತಿ ಇದ್ದರು ನೆಮ್ಮದಿ ಇಲ್ಲದೆ ಸತ್ತಿದ್ಯಾಕೆ | SINGER S JANAKI #sjanaki

ಶ್ರೀಮದ್ಭಾಗವತ ಪ್ರವಚನ I ಶ್ರೀ ಶುಚಿ ಶ್ರವ ದಾಸ I SB 1.18.29 | 14.6.2026 | ISKCON Bangalore Kannada

ಎಂತಹ ತಪಸ್ಸು ಮಾಡಿದರೆ ಗ್ರಹಸ್ಥನಾದವನು ಖುಷಿಯಾಗಿರಬಲ್ಲ!

P.t Prabhanjanacharya Avarinda Sumadhva Pravachana Part - 1🙏🪷🙏🚩

Santosh Hegde EXCLUSIVE: RSS ಬ್ಯಾನ್ ನಿರ್ಧಾರಕ್ಕೆ ನೇರ ಸವಾಲ್ ಹಾಕಿದ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ

ಪರಮ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಆಶೀರ್ವಚನ|ಶ್ರೀ ಬ್ರಹ್ಮೋತ್ಸವ 2022|ಇಸ್ಕಾನ್ ಹರೇ ಕೃಷ್ಣ ಗಿರಿ

ಮೊಮ್ಮಗಳು ಯೋಗ ಕ್ವೀನ್! ಜಾನಕಮ್ಮನ ಆಸ್ತಿ ಎಷ್ಟಿದೆ? | S.Janaki Biography, Husband, Son, Granddaughter

ANANTHKUMARHEGDE || Fire Brand || ಅನಂತಕುಮಾರ ಹೆಗಡೆ, ಬೆಂಕಿ ಭಾಷಣ.... RSS ಬ್ಯಾನ್ ಮಾಡೊ ಧಮ್ ಇದೆಯಾ?

ಶ್ರೀಮದ್ಭಾಗವತ ಪ್ರವಚನ I ಶ್ರೀ ಹರಿ ಸ್ಮರಣ ದಾಸ I SB 1.18.32 | 5.7.2026 | ISKCON Bangalore Kannada

1ನೇ ದಿನದ ಅಪರೂಪದ ಉಪನ್ಯಾಸ- ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರಿಂದ ಭಾಗವತ ಸಪ್ತಾಹ

Part 2 - ಮುಖ್ಯಮಂತ್ರಿ ಚಂದ್ರು ಫ್ಯಾಮಿಲಿ Exclusive - ಮಜಾ ಮಾತುಕತೆ | Keerthi ENT Clinic

ಮಂಗಳವಾರ ದಿನ ಅಮಾವಾಸ್ಯೆ ಈ ಹಾಡುಕೇಳಿದರೆ ದಾರಿದ್ರ್ಯತೊಲಗಿ ಸಕಲ ಸಂಪತ್ತು ಪ್ರಾಪ್ತಿಯಾಗುವದು - Sri Rama Dhoothyam

S.Janaki Final Moments: ಜಾನಕಿ ಅಮ್ಮನ ಬಗ್ಗೆ ಸಾಕುಮಗ ಏನು ಹೇಳಿದ್ರು ನೋಡಿ | Naveen

