ಪುಸ್ತಕ ಬಿಡುಗಡೆ | ಶ್ರೀಲ ಪ್ರಭುಪಾದ ಚರಿತಾಮೃತಮ್ ಕನ್ನಡ ಮಹಾಕಾವ್ಯ | ಇಸ್ಕಾನ್ ಬೆಂಗಳೂರು

ಇಸ್ಕಾನ್ ಬೆಂಗಳೂರು ವಿಶ್ವಗುರು ಶ್ರೀಲ ಪ್ರಭುಪಾದರ ಸಮಗ್ರ ಜೀವನ ಚರಿತ್ರೆಯನ್ನು ಒಳಗೊಂಡ "ಶ್ರೀಲ ಪ್ರಭುಪಾದ ಚರಿತಾಮೃತಮ್ ಕನ್ನಡ ಮಹಾಕಾವ್ಯ" ಎಂಬ ಪುಸ್ತಕವನ್ನು ಬಿಡುಗಡೆಗೊಳಿಸುತ್ತಿದೆ. ಇದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರಿಂದ ರಚಿತವಾದ ಶ್ರೀಲ ಪ್ರಭುಪಾದರ ಜೀವನಾಧಾರಿತ ಪ್ರಥಮ ಕನ್ನಡ ಮಹಾಕಾವ್ಯವಾಗಿದೆ. ಪುಸ್ತಕ ಬಿಡುಗಡೆಯ ಸಮಾರಂಭವು ಉಡುಪಿಯ ಶ್ರೀ ಅದಮಾರು ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಈಶಪ್ರಿಯ ತೀರ್ಥ ಸ್ವಾಮಿ ಹಾಗೂ ಇಸ್ಕಾನ್ ಮೈಸೂರಿನ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಸ್ತೋಕ ಕೃಷ್ಣ ಸ್ವಾಮಿಯವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ. ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಸಂಸ್ಥೆಯ ಅಧ್ಯಕ್ಷರು ಮತ್ತು ನಿರ್ದೇಶಕರಾದ ಡಾ. ಗುರುರಾಜ ಕರಜಗಿಯವರು ಗೌರವ ಅತಿಥಿಯಾಗಿ ಉಪಸ್ಥಿತರಿರುತ್ತಾರೆ. ಗ್ಲೋಬಲ್ ಹರೇ ಕೃಷ್ಣ ಮೂವ್ಮೆಂಟ್ ನ ಅಧ್ಯಕ್ಷರು ಮತ್ತು ಮಾರ್ಗದರ್ಶಕರು ಹಾಗೂ ಇಸ್ಕಾನ್ ಬೆಂಗಳೂರು ಹಾಗೂ ಅಕ್ಷಯ ಪಾತ್ರ ಫೌಂಡೇಶನ್ ನ ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಇಸ್ಕಾನ್ ಬೆಂಗಳೂರಿನ ಹಿರಿಯ ಉಪಾಧ್ಯಕ್ಷರು ಹಾಗೂ ಅಕ್ಷಯ ಪಾತ್ರ ಫೌಂಡೇಶನ್ ನ ಉಪಾಧ್ಯಕ್ಷರಾದ ಶ್ರೀ ಚಂಚಲಾಪತಿ ದಾಸ, ಗ್ರಂಥಕರ್ತರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ಉಪಸ್ಥಿತರಿರುತ್ತಾರೆ. “ಶ್ರೀಲ ಪ್ರಭುಪಾದ ಚರಿತಾಮೃತಮ್” ಮಹಾಕಾವ್ಯದ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಾಗಲು ನಿಮಗೆ ನಮ್ಮ ಹೃತ್ಪೂರ್ವಕ ಆಮಂತ್ರಣ! ಬನ್ನಿ, ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡು, ಬಿಡುಗಡೆಯ ಬಳಿಕ ಕವಿಗಳ ಹಸ್ತಾಕ್ಷರವಿರುವ ಪ್ರತಿಯನ್ನು ಪಡೆಯುವ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ! ಪುಸ್ತಕ ಮತ್ತು ಕವಿ: ಆಧುನಿಕ ವಿಶ್ವಕ್ಕೆ ಭಾರತವು ನೀಡಿದ ಸರ್ವಶ್ರೇಷ್ಠ ರಾಯಭಾರಿಗಳೂ, ಇಸ್ಕಾನ್ ಸಂಸ್ಥಾಪಕಾಚಾರ್ಯರೂ ಆದ ಪರಮಪೂಜ್ಯ ಎ. ಸಿ. ಭಕ್ತಿವೇದಾಂತ ಸ್ವಾಮಿ ಶ್ರೀಲ ಪ್ರಭುಪಾದರ ದೈವಿಕ ಪ್ರಯಾಣ, ಭಕ್ತಿ, ತ್ಯಾಗ ಮತ್ತು ಬೋಧನೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಅದ್ಭುತ ಕನ್ನಡ ಮಹಾಕಾವ್ಯ, “ಶ್ರೀಲ ಪ್ರಭುಪಾದ ಚರಿತಾಮೃತಮ್”. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಕನ್ನಡ-ತುಳು ಸಾಹಿತ್ಯ ಅಕಾಡೆಮಿ ಗೌರವಿತರೂ ಮತ್ತು ಅಷ್ಟಾವಧಾನ ಪ್ರವೀಣರೂ ಆದ ಹೆಸರಾಂತ ಕವಿ ಕಬ್ಬಿನಾಲೆ ವಸಂತ ಭಾರದ್ವಾಜರ ಮೂಸೆಯಿಂದ ಮೂಡಿಬಂದಿರುವ ಅತ್ಯುನ್ನತ ಕೃತಿಯಿದು. ಸುಂದರ ಅಷ್ಟಾದಶಪದಿ ಗೀತಮಾಲಾ ಛಂದಸ್ಸಿನಲ್ಲಿ ರಚಿತವಾಗಿರುವ ಈ ಕಾವ್ಯವು, ಶಾಸ್ತ್ರೀಯ ನಡುಗನ್ನಡ ಹಾಗೂ ಆಧುನಿಕ ಕನ್ನಡವನ್ನು ಗಮಕ ಶೈಲಿಯಲ್ಲಿ ದಕ್ಷತೆಯಿಂದ ಸಂಯೋಜಿಸಿದೆ. ಸ್ವಸ್ತಿವಾಚನ, ಸಂಸಾರ, ಸನ್ಯಾಸ, ಸಮರ್ಪಣ ಮತ್ತು ಸರ್ವಮಂಗಳ ಎಂಬ ಐದು ಚಕ್ರಗಳಲ್ಲಿ ವಿಸ್ತರಿಸಿರುವ “ಶ್ರೀಲ ಪ್ರಭುಪಾದ ಚರಿತಾಮೃತಮ್” ಮಹಾಕಾವ್ಯವು ಕಬ್ಬಿನಾಲೆಯವರ ಐದನೇ ಮಹಾಕಾವ್ಯ. ಈ ಮಹಾಕಾವ್ಯವು ಕನ್ನಡ ಭಕ್ತಿಸಾಹಿತ್ಯಕ್ಕೆ ಒಂದು ಮಹತ್ತರವಾದ ಕೊಡುಗೆಯಾಗಿದೆ; ವೈಷ್ಣವ ಭಕ್ತಿಪರಂಪರೆ ಮತ್ತು ಆಧುನಿಕ ಸಾಹಿತ್ಯಲೋಕದ ನಡುವೆ ಜೀವಂತ ಸೇತುವೆಯಾಗಿ ನಿಲ್ಲುತ್ತದೆ. ವಿಶ್ವಗುರು ಶ್ರೀಲ ಪ್ರಭುಪಾದರು: ವಿಶ್ವಗುರು ಶ್ರೀಲ ಪ್ರಭುಪಾದರು, 25ನೇ ಪ್ರಾಯದ ಯುವಕನಾಗಿದ್ದಾಗಲೇ, ‘ಕೃಷ್ಣ ಭಕ್ತಿಯನ್ನು ಪಾಶ್ಚಾತ್ಯ ದೇಶಗಳಲ್ಲಿ ಪ್ರಚುರಿಸು!’ ಎಂಬ ತಮ್ಮ ಗುರುಗಳ ದಿವ್ಯಾದೇಶವನ್ನು ತಮ್ಮ ಜೀವನದ ಗುರಿಯಾಗಿಟ್ಟುಕೊಂಡು 70ರ ಇಳಿ ವಯಸ್ಸಿನಲ್ಲಿಯೂ ಕೇವಲ ನಲವತ್ತು ರೂಪಾಯಿಗಳೊಂದಿಗೆ ಒಂದು ಸರಕುಸಾಗಣೆ ಹಡಗಿನಲ್ಲಿ ಕಲ್ಕತ್ತಾದಿಂದ ಅಮೆರಿಕಾದ ನ್ಯೂಯಾರ್ಕ್ ನಗರದವರೆಗೆ ಪ್ರಯಾಣ ಬೆಳೆಸಿದರು. ಪ್ರಯಾಣದ ಮಧ್ಯೆ ಎರಡು ಹೃದಯಾಘಾತಗಳನ್ನು ಅನುಭವಿಸಿದರೂ ಸಂಪೂರ್ಣ ಅಪರಿಚಿತ ದೇಶದಲ್ಲಿ ಕೇವಲ ಗುರುಗಳ ಮತ್ತು ಕೃಷ್ಣನ ಕೃಪೆಯ ಮೇಲಷ್ಟೇ ನಿರ್ಭರರಾಗಿ, ಪಾಶ್ಚಾತ್ಯ ಭೂಮಿಯಲ್ಲಿ ಹರೇ ಕೃಷ್ಣ ಮಹಾಮಂತ್ರದ ಸಂಕೀರ್ತನೆಯೊಂದಿಗೆ ಕೃಷ್ಣಭಕ್ತಿಯನ್ನು ಪಸರಿಸುವ ಮಹತ್ಕಾರ್ಯವನ್ನು ಪ್ರಾರಂಭಿಸಿದರು. ನ್ಯೂಯಾರ್ಕ್‌ನ Tompkins Square ಉದ್ಯಾನದಲ್ಲಿ ಒಂದು ಮರದ ಕೆಳಗೆ ಕುಳಿತು ಅವರು ಹರೇ ಕೃಷ್ಣ ಮಹಾಮಂತ್ರದ ಸಂಕೀರ್ತನೆಯ ಮೂಲಕ ನಗರದ ಗದ್ದಲದಲ್ಲಿ ಮುಳುಗಿದ್ದ ಯುವ ಹೃದಯಗಳನ್ನು ಸ್ಪರ್ಶಿಸಿದರು. ಆ ಸಂಕೀರ್ತನೆಯಿಂದಲೇ ಜನಿಸಿತು ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ ಅಥವಾ ISKCON. ಹೀಗೆ, ಕೇವಲ ಹನ್ನೆರಡು ವರ್ಷಗಳಲ್ಲಿ ವಿಶ್ವದಾದ್ಯಂತ 108 ರಾಧಾಕೃಷ್ಣ ಮಂದಿರಗಳನ್ನೂ, ಜೊತೆಗೆ ವೈದಿಕ ಕೃಷಿ ಆಶ್ರಮಗಳು, ಗುರುಕುಲಗಳು ಮತ್ತು ಆಧ್ಯಾತ್ಮಿಕ ಸಮುದಾಯಗಳನ್ನೂ ಸ್ಥಾಪಿಸಿ, ಲಕ್ಷಾಂತರ ಜನರನ್ನು ಪ್ರಭುಪಾದರು ಭಕ್ತಿಮಾರ್ಗದತ್ತ ಕರೆತಂದರು. ತನ್ಮೂಲಕ ಕೃಷ್ಣಪ್ರಜ್ಞೆಯ ಬೃಹತ್ ಜಾಗತಿಕ ಚಳುವಳಿಗೆ ಪ್ರಭುಪಾದರು ಕಾರಣೀಭೂತರಾದರು. ಶ್ರೀಲ ಪ್ರಭುಪಾದರು ಭಗವದ್ಗೀತೆ, ಶ್ರೀಮದ್ಭಾಗವತ, ಚೈತನ್ಯ ಚರಿತಾಮೃತ ಸೇರಿದಂತೆ 80ಕ್ಕೂ ಹೆಚ್ಚು ವೈದಿಕ ಗ್ರಂಥಗಳ ಮೂಲಕ ಪರಮ ಪುರುಷ ಭಗವಂತ ಶ್ರೀಕೃಷ್ಣನ ತತ್ವವನ್ನು ಇಡೀ ಜಗತ್ತಿಗೆ ಪ್ರಕಾಶಿಸಿದರು. ಅಮೆರಿಕಾದಿಂದ ರಷ್ಯಾವರೆಗೆ, ಆಸ್ಟ್ರೇಲಿಯಾದಿಂದ ಸ್ವಿಟ್ಜರ್‌ಲ್ಯಾಂಡ್‌ನವರೆಗೆ, ಶ್ರೀಲ ಪ್ರಭುಪಾದರು ಒಂದು ವೈಶ್ವಿಕ ಭಕ್ತಿ ಚಳವಳಿಯನ್ನೇ ಪ್ರಾರಂಭಿಸಿದರು. ಇಂದಿಗೂ ಆ ಚಳವಳಿ ಇಸ್ಕಾನ್ ರೂಪದಲ್ಲಿ ಜಗತ್ತಿನಾದ್ಯಂತ ನಾನಾ ದೇಶಗಳಲ್ಲಿ ಸತತವಾಗಿ ವಿಸ್ತರಿಸುತ್ತಲೇ ಇದೆ. 0:00 ಕೀರ್ತನೆ 1:22 ಕಾರ್ಯಕ್ರಮದ ಪರಿಚಯ ಮತ್ತು ಗಣ್ಯವ್ಯಕ್ತಿಗಳ ಆಗಮನ 12:32 ಪ್ರಾರ್ಥನೆ 16:51 ಪರಮಪೂಜ್ಯ ಶ್ರೀ ಸ್ತೋಕ ಕೃಷ್ಣಸ್ವಾಮಿಯವರಿಂದ ಸ್ವಾಗತ ಭಾಷಣ 28:00 ವಿಡಿಯೋ ಪ್ರದರ್ಶನ - ಶ್ರೀಲ ಪ್ರಭುಪಾದ ಚರಿತಾಮೃತಮ್ ಕನ್ನಡ ಮಹಾಕಾವ್ಯದ ಪರಿಚಯ 33:32 ಪುಸ್ತಕ ಬಿಡುಗಡೆ - ಶ್ರೀಲ ಪ್ರಭುಪಾದ ಚರಿತಾಮೃತಮ್ ಕನ್ನಡ ಮಹಾಕಾವ್ಯ 34:56 ಕವಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ ಭಾಷಣ 48:12 ಡಾ. ಗುರುರಾಜ ಕರಜಗಿ ಅವರ ಭಾಷಣ 1:00:38 ಡಾ. ಜ್ಯೋತಿ ಶಂಕರ್ ಅವರ ಗಮಕ ವಾಚನ 1:09:42 ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಶ್ರೀಲ ಪ್ರಭುಪಾದ ಚರಿತಾಮೃತಮ್ ಪುಸ್ತಕದ ಗೌರವಪೂರ್ವಕ ಸಮರ್ಪಣೆ 1:12:02 ಶ್ರೀ ಚಂಚಲಾಪತಿ ದಾಸ ಅವರ ಭಾಷಣ 1:22:50 ಪರಮಪೂಜ್ಯ ಶ್ರೀ ಈಶಪ್ರಿಯ ತೀರ್ಥಸ್ವಾಮಿಯವರಿಂದ ಆಶೀರ್ವಚನ 1:40:17 ಶ್ರೀ ಮಧು ಪಂಡಿತ ದಾಸ ಅವರ ಭಾಷಣ 1:51:44 ವಂದನಾರ್ಪಣೆ

ಶ್ರೀಮದ್ಭಾಗವತ ಪ್ರವಚನ I ಶ್ರೀ ಶುಚಿ ಶ್ರವ ದಾಸ I SB 1.18.29 | 14.6.2026 | ISKCON Bangalore Kannada
▶︎

ಶ್ರೀಮದ್ಭಾಗವತ ಪ್ರವಚನ I ಶ್ರೀ ಶುಚಿ ಶ್ರವ ದಾಸ I SB 1.18.29 | 14.6.2026 | ISKCON Bangalore Kannada

PVR Narsimha Rao | मोदी शाह लाएंगे ट्रंप का सबसे बुरे दौर! बदलेगा दुनिया का नक्शा!
▶︎

PVR Narsimha Rao | मोदी शाह लाएंगे ट्रंप का सबसे बुरे दौर! बदलेगा दुनिया का नक्शा!

ಪರಮ ಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಆಶೀರ್ವಚನ|ಶ್ರೀ ಬ್ರಹ್ಮೋತ್ಸವ 2023|ಇಸ್ಕಾನ್ ಹರೇ ಕೃಷ್ಣ ಗಿರಿ
▶︎

ಪರಮ ಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಆಶೀರ್ವಚನ|ಶ್ರೀ ಬ್ರಹ್ಮೋತ್ಸವ 2023|ಇಸ್ಕಾನ್ ಹರೇ ಕೃಷ್ಣ ಗಿರಿ

What Comes To Us When We Reach Enlightenment - Swami Sarvapriyananda
▶︎

What Comes To Us When We Reach Enlightenment - Swami Sarvapriyananda

Trump GOES SILENT as CEASEFIRE COLLAPSES!!!
▶︎

Trump GOES SILENT as CEASEFIRE COLLAPSES!!!

LIVE Japji Sahib Live | Bhai Sukhdev Singh Ji  | Gurbani Kirtan
▶︎

LIVE Japji Sahib Live | Bhai Sukhdev Singh Ji | Gurbani Kirtan

ಧರ್ಮಸ್ಥಳ ವಿರೋಧಿ ಸಂಚಿನಲ್ಲಿ ಇದ್ರಾ ಪ್ರಕಾಶ್ ರಾಜ್? | News Hour | Prakash Raj | Dharmasthala Case
▶︎

ಧರ್ಮಸ್ಥಳ ವಿರೋಧಿ ಸಂಚಿನಲ್ಲಿ ಇದ್ರಾ ಪ್ರಕಾಶ್ ರಾಜ್? | News Hour | Prakash Raj | Dharmasthala Case

1 ಕೋಟಿ   ಶ್ರೀ ಲಕ್ಷ್ಮಿ ನರಸಿಂಹ ಮಂತ್ರ ಜಪ ಸಮರ್ಪಣೇ ಸಮರ್ಪಣೆ
▶︎

1 ಕೋಟಿ ಶ್ರೀ ಲಕ್ಷ್ಮಿ ನರಸಿಂಹ ಮಂತ್ರ ಜಪ ಸಮರ್ಪಣೇ ಸಮರ್ಪಣೆ

O PODER DA ORAÇÃO | Escola de Sabedoria com Tiago Brunet
▶︎

O PODER DA ORAÇÃO | Escola de Sabedoria com Tiago Brunet

ಶ್ರೀಮದ್ಭಾಗವತ ಪ್ರವಚನ I ಶ್ರೀ ಪ್ರದೀಪ್ತ ನರಸಿಂಹ ದಾಸ I SB 1.18.23 | 17.5.2026 | ISKCON Bangalore Kannada
▶︎

ಶ್ರೀಮದ್ಭಾಗವತ ಪ್ರವಚನ I ಶ್ರೀ ಪ್ರದೀಪ್ತ ನರಸಿಂಹ ದಾಸ I SB 1.18.23 | 17.5.2026 | ISKCON Bangalore Kannada

🔥 GOD UNLEASHES the Truth | Psalms 23, 35, 91 and 112 To Break Curses and Activate Abundance
▶︎

🔥 GOD UNLEASHES the Truth | Psalms 23, 35, 91 and 112 To Break Curses and Activate Abundance

WAITING UPON THE LORD | HOW TO BE RENEWED & REFRESHED IN GOD'S PRESENCE | WAIT ON GOD
▶︎

WAITING UPON THE LORD | HOW TO BE RENEWED & REFRESHED IN GOD'S PRESENCE | WAIT ON GOD

🔴LIVE - ಬಿಡದಿ Township Cheque ವಿತರಣೆ ಶುರು - ಬಾಲಕೃಷ್ಣ  | Bidadi Township
▶︎

🔴LIVE - ಬಿಡದಿ Township Cheque ವಿತರಣೆ ಶುರು - ಬಾಲಕೃಷ್ಣ | Bidadi Township

Ananda Valli - 1 of 4 | Swami Sarvapriyananda
▶︎

Ananda Valli - 1 of 4 | Swami Sarvapriyananda

Moments of prayer | Father Martín Ávalos | We are praying for your intentions
▶︎

Moments of prayer | Father Martín Ávalos | We are praying for your intentions

Best ISKCON Kirtan 2026 | Hare Krishna Hare Rama | Deep Meditation & Inner Peace
▶︎

Best ISKCON Kirtan 2026 | Hare Krishna Hare Rama | Deep Meditation & Inner Peace

🚨 سرّ عجيب في القضاء والقدر! سيغيّر نظرتك للحياة ويمنحك راحة عجيبة 😱 | الشيخ طاهر ضروي
▶︎

🚨 سرّ عجيب في القضاء والقدر! سيغيّر نظرتك للحياة ويمنحك راحة عجيبة 😱 | الشيخ طاهر ضروي

Disguised As Maid To Flee Arranged Marriage Over Wall! Yet She Meets Loving CEO And Finds True Love!
▶︎

Disguised As Maid To Flee Arranged Marriage Over Wall! Yet She Meets Loving CEO And Finds True Love!

ಕಪಿಲ ಭಗವಂತನ ಉಪದೇಶಗಳು (ಭಾಗ-1) | Kapila Upadesha (Part-1) - Vid. Ananthakrishna Acharya
▶︎

ಕಪಿಲ ಭಗವಂತನ ಉಪದೇಶಗಳು (ಭಾಗ-1) | Kapila Upadesha (Part-1) - Vid. Ananthakrishna Acharya

ಸಿಎಂ ಡಿಕೆಶಿ ಚಳಿ ಬಿಡಿಸಿದ ಮಹಿಳೆ-  "2 ಕೋಟಿ ಆಮಿಷಕ್ಕೆ ನಾವ್ ಬಗ್ಗಲ್ಲ" - Bidadi township ground report - 07
▶︎

ಸಿಎಂ ಡಿಕೆಶಿ ಚಳಿ ಬಿಡಿಸಿದ ಮಹಿಳೆ- "2 ಕೋಟಿ ಆಮಿಷಕ್ಕೆ ನಾವ್ ಬಗ್ಗಲ್ಲ" - Bidadi township ground report - 07