ಮುಕ್ತಕ ಮಾಲೆ- 10, ಸಾಹಿತ್ಯ ಶಾರದಾ ಮೊಳೆಯಾರ್, ಗಾಯನ: ಸುನೋ
♒ಮುಕ್ತಕ ಮಾಲೆ- 10♒ ಚಿನ್ನಕ್ಕೆ ಬೆಲೆಯು ತಾ ಗಗನಕ್ಕೆ ಏರಿಹುದು ಬಣ್ಣವೋ ಮಾಸದಿಹ ಲೋಹವಿದು ಸದಾ ಹಣ್ಣುಹೂ ಕಾಯಿಗಳು ಬೆಳೆದಲ್ಲಿ ತೋಟದಲಿ ಹೊನ್ನಹುದು ನಿಜದಲ್ಲಿ - ಶರಧಿಶಯನೆ ಕತ್ತಿನಲಿ ಹೊನ್ನಿನಾ ಕರಿಮಣಿಯ ಸರವೊಂದು ಕಿತ್ತೆಸವ ಬಡತನವು ಇದ್ದರೂ ಕಟ್ಟಿ ಹತ್ತು ಮಂದಿಯೆದುರಲಿ ಕಾಣಿಸಲು ಹಂಬಲವು ಹತ್ತಿಕ್ಕಲಾಗದ್ದು ಶರಧಿ ಶಯನೆ ರಕ್ಕಸರು ಸುಮ್ಮನೇ ಗುಂಡಿಟ್ಟು ಪ್ರಾಣವನು ಗಕ್ಕೆಂದು ತೆಗೆಯುತ್ತ ಭಯವನ್ನು ತಂದು ಸೊಕ್ಕಿನಲಿ ಹಗೆತನವ ಕ್ರೂರತೆಯ ಕಾಣಿಪುದು ತಕ್ಕುದೇ ಜನರಿಂಗೆ - ಶರಧಿ ಶಯನೆ ಕಾನನದಿ ಕಾಣುವೆವು ಹಲವಾರು ಸಸಿಗಳನು ಕೊನೆಯಿರದ ಸಸ್ಯಗಳು ನಾಡ ಸಂಪತ್ತು ವನದಲಿಹ ಮರಗಳೋ ಲೆಕ್ಕಕ್ಕೆ ಸಿಗದಷ್ಟು ಮನಸೂರೆ ಗೈಯುವುದು -ಶರಧಿ ಶಯನೆ ಇರುಳೆಂದು ಹಗಲನ್ನು ಹೇಳಿದರೆ ಒಪ್ಪುವರು ನರರಿಹರು ಜಗದಲ್ಲಿ ಇಂತವರು ಏಕೆ? ಇರುಳು ತಾ ಹಗಲೆಂದು ತಿಳಿದವರೆ ವಾದಿಪರು ಬರಿಯ ದ್ವೇಷ ಕಾರಣ - ಶರಧಿ ಶಯನೆ ಕುಗ್ಗದಿರು ನಡೆವಾಗ ಜೀವನದ ಪಥದಲ್ಲಿ ಬಗ್ಗದಿರು ಎಲ್ಲದಕೆ ಹಾಕುವರು ಗುದ್ದು ಮೊಗ್ಗನ್ನು ಚಿವುಟುವುದು ತರವಲ್ಲ ಜಗದಲ್ಲಿ ಜಗ್ಗಿದವ ಗುಂಡಿಯಲಿ ಶರಧಿ ಶಯನೆ ಪರಮಶಿವ ಸಕಲದಲಿ ಇಹನೆಂದು ಹೇಳುವರು ಅರಿತಿಹರು ಜನರೆಲ್ಲ ವಿಷಯವನು ಚಂದ ಹಿರಿಯ ಜನ ಕಿರಿಯ ಜನ ಶಿವನನ್ನು ನಮಿಸುವರು ಹರಹರಾ ಕಾಪಾಡು - ಶರಧಿ ಶಯನೆ ನಿದ್ದೆಯಲಿ ಬಡಬಡಿಸೊ ಭಾಷೆಯದು ಕನ್ನಡವು ಎದ್ದಾಗ ಶ್ಲೋಕವನು ಪಠಿಸುವಾ ಭಾಷೆಯದು ಬಿದ್ದಾಗ ಅಮ್ಮ ಎನ್ನದವರಾರಿಹರಿಲ್ಲಿ ಖುದ್ದು ತಾ ಬರವಣಿಗೆ ಬರೆಯುತಲಿ ಕನ್ನಡದಿ ಸುದ್ದಿಗಳ ಓದುತಿರು ಶರಧಿ ಶಯನೆ|| ಕುಳಿತಿರ್ಪ ಜನರಿಹರು ಮೌನದಲಿ ಸಭೆಯಲ್ಲಿ ಬಲಿತವರು ಅನುಭವದಿ ಆಲಿಸುತ ಎಲ್ಲವನು ತಿಳಿದಿಹರು ಹಲ ವಿಷಯ ಮೇರುವಿಹ ಪಂಡಿತರು ಉಲಿಯುವರು ಮಾತನ್ನು ಸಮಯವದು ಬಂದಾಗ ಬೆಲೆಯಿರುವ ಮುತ್ತುಗಳು ಶರದಿ ಶಯನೆ|| ಸಲಹೆಯನು ಕೊಡಲಿಹರು ಹಲವಾರು ಜನರಿಂದು ಸುಲಭವದು ಜಗದಲ್ಲಿ ಬೋಧನೆಯ ನೀಡುವುದು ನಿಲಬೇಕು ದೃಢವಾಗಿ ಮರದಂತೆ ನೀನಿರುತ ಕೆಲವಿಹುದು ಕಾಯಕವು ಸ್ವಯಂ ಮಾಡಲು ಕಷ್ಟ ಸಲಹು ನೀ ಕೇಶವನೆ ಶರಧಿ ಶಯನೆ|| ಕವುಚಿ ತಾ ಬಿದ್ದರೂ ಮೂಗು ಮೇಲಿಹುದೆನಲು ಕವಿಯೊಬ್ಬ ಹೇಳಿದನು ಜನರಿಂದು ಮೊದಲು ಅವರವರ ನಡೆಯನ್ನು ಸರಿಪಡಿಸಿ ನಡಿಬೇಕು ಸವಿಮಾತ ಪೇಳುವೆನು ಶರಧಿ ಶಯನೆ ತಪ್ಪೆಂದು ಬರಹದಲಿ ಕಾಣಲದ ಹೇಳಿಬಿಡು ತಪ್ಪೊಪ್ಪು ನಡೆಯುತಲೆ ಬರಹಕ್ಕೆ ಶೋಭೆ ಕಪ್ಪೆಂದು ಜನರನ್ನು ಹೀನಾಯ ಮಾಡದಿರು ಕಪ್ಪು ಹಸು ಹಾಲು ಬಿಳಿ ಶರಧಿ ಶಯನೆ ಕರೆಯನ್ನು ಮಾಡದಿರು ಜನರಿಂಗೆ ಸುಮ್ಮನೇ ಕಿರಿ ಕಿರಿಯು ಆಗುವುದು ಅದರಿಂದ ನಿಜವು ನರರಿಂಗೆ ಪೂರ್ವದಲಿ ಸಂದೇಶ ನೀಡುತಲಿ ಕರೆಯನ್ನು ಮಾಡೆಂದ ಶರಧಿ ಶಯನೆ ಸಂಚಾರ ಮಾಡುವುವು ಮೋಡಗಳು ನಭದಲ್ಲಿ ಸಿಂಚನವು ಮಳೆಯಿಂದ ಇಳೆಯೆಲ್ಲ ತಂಪು ಕುಂಚವನು ಹಿಡಿಯುತ್ತ ಚಿತ್ರವನು ಬಿಡಿಸಿಡಲು ಮುಂಚೂಣಿ ಮಳೆರಾಯ - ಶರಧಿ ಶಯನೆ ಮೂಡಣವು ಕೆಂಪೇರಿ ಬಂದಿಹನು ಆದಿತ್ಯ ಕಾಡುತಲಿ ಜನರನ್ನು ಬಡಿದೆಬ್ಬಿಸುತಲಿ ಗಾಢ ನಿದಿರೆಯಲಿಪ್ಪ ಜನರೆದ್ದು ವೇಗದಲಿ ಮಾಡಿದರು ರವಿ ನಮನ - ಶರಧಿ ಶಯನೆ ಹಿಡಿಯುತ್ತ ಬಂಧನದ ಬಾಂಧವ್ಯ ಕುಟುಂಬವು ನಡೆಯುವುದು ಲೋಕದಲಿ ತಿಳಿಯಿದನು ಕಂದ ಕಡೆಗಾಲ ಬರುವಾಗ ಹೆತ್ತವರ ನೋಡಿದರೆ ಹಡೆದವ್ವ ಹರಸುವಳು ಶರಧಿಶಯನೆ| . ♒ಶಾರದಾ ಮೊಳೆಯಾರ್♒

ಮುಕ್ತಕ ಮಾಲೆ- 7, ಸಾಹಿತ್ಯ :ಶಾರದಾ ಮೊಳೆಯಾರ್, ಗಾಯನ: ಸುನೋ

ಮುಕ್ತಕ ಮಾಲೆ- 3, ಸಾಹಿತ್ಯ: ಶಾರದಾ ಮೊಳೆಯಾರ್, ಗಾಯನ: ಸುನೋ

ಶಿವ ಭಕ್ತಿಗೀತೆಗಳು | ಲಿಂಗಾಷ್ಟಕಂ | ಬಿಲ್ವಾಷ್ಟಕಂ Kannada | Shiva Bhakti Geethegalu |Shiva Bhakti Songs

ಬಂದೇಬಿಟ್ಟ ಹುಲಿಕಲ್ ನಟರಾಜ್ ಮಗ ಶರತ್| ಮಹಾಕಾಳಿಯ ಮಾತಿನಂತೆ ಕಣ್ಣು ಬರುತ್ತಾ? | Part 3

Ayyappa swamy songs | Swamy ayyappa | K J Yesudas | kannada devotional songs

26.07.2026 Kannada Murli / Muruli Kannada Murali / ಕನ್ನಡ ಮುರಳಿ / ಇಂದಿನ ಮುರುಳಿ / Today Kannada

ಎಷ್ಟು ಸಾಹಸವಂತ ನೀನೇ ಬಲವಂತ | ಡಾ|| ವಿದ್ಯಾಭೂಷಣ | ಶ್ರೀ ವಾದಿರಾಜರು | @Hanumankannadasongs

سورة البقرة كاملة, رقية للبيت, وعلاج للسحر | القارئ علاء عقل - Surah Al Baqarah

ಮುಕ್ತಕ ಮಾಲೆ- 5, ಸಾಹಿತ್ಯ: ಶಾರದಾ ಮೊಳೆಯಾರ್, ಗಾಯನ: ಸುನೋ

Baagi Bediro Yati Raghavendrara || Shri Khadri deva || Shri Anantraj Mistry || 2024

Unbelievable Smart Worker & Hilarious Fails | Construction Compilation 🚧👷#EP2 #fail #construction

ಮುಕ್ತಕ ಮಾಲೆ--4, ಸಾಹಿತ್ಯ :ಶಾರದಾ ಮೊಳೆಯಾರ್, ಗಾಯನ: ಸುನೋ

ಲಿಂಗಾಷ್ಟಕಂ ಕೇಳುವುದರಿಂದ ಶುಭವಾಗುತ್ತದೆ🙏| Lingashtakam In Kannada | Monday Lord Shiva Songs Kannada

ಮೂರು ಕಣ್ಣಿನ ಮುದ್ದು ಮಾದಪ್ಪ - ಜಾನಪದ ಗೀತೆ Mooru Kannina Muddu Maadappa Janapada Folk Songs Jukebox

ತೊರೆದು ಜೀವಿಸಬಹುದೆ | Dasara Padagalu | Kannada Devotional Songs | Bhakthi Tunes

ಕುಂಭ ರಾಶಿ, ಜುಲೈ 27, 2026 ಈಗ ನೀನು ಹುಚ್ಚನಂತೆ ಅಲೆದಾಡಬೇಕಾಗುತ್ತದೆ, ದೊಡ್ಡ ಗಲಾಟೆ ಆಗುತ್ತದೆ. Kumbh Rashi

ಕವನ: ನೀರನೆಳೆವ ಲಲನೆಯರು, ಸಾಹಿತ್ಯ: ಶಾರದಾ ಮೊಳೆಯಾರ್, ಗಾಯನ :ಸುನೋ

ಎಷ್ಟು ಸಾಹಸವಂತ ನೀನೇ ಬಲವಂತ | Eshtu Sahasavantha Neene Balavantha | Lord Hanuman Kannada Song

ಈ ದರಿಯ ಭೋಗವ ಬಿಟ್ಟು | E Dhariya Bhogava Bittu | Tatva Padagalu | Kannada Folk & Philosophical Song

