ಎಷ್ಟು ಸಾಹಸವಂತ ನೀನೇ ಬಲವಂತ | ಡಾ|| ವಿದ್ಯಾಭೂಷಣ | ಶ್ರೀ ವಾದಿರಾಜರು | @Hanumankannadasongs
ರಾಮಾಯಣದಲ್ಲಿ ಹನುಮಂತನ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ ಕೂಡ. ಶ್ರೀ ವಾದಿರಾಜರು ಹಾಡಿನ ಮೂಲಕ ಹನುಮಂತನ ಸ್ತುತಿ ಮಾಡಿ ಹೊಗಳಿದ್ದಾರೆ. ವಾದಿರಾಜರು ಹಾಡುಗಳು ಬಹಳ ವಿಸ್ತಾರವಾಗಿರುತ್ತವೆ. ಅವರ ಹನುಮಂತನ ಈ ಹಾಡು ಕೂಡ ಬಹಳ ವಿಸ್ತಾರವಾಗಿದೆ. ಈ ಹಾಡಿನಲ್ಲಿ ಪದ್ಯದ ಮೂಲಕ ವಾದಿರಾಜರು ಹನುಮಂತನ ಸಾಹಸಗಾಥೆಯನ್ನು ವಿವರಿಸಿದ್ದಾರೆ. ಹನುಮನು ಸಾಗರ ದಾಟಿದ್ದು, ಜಾನಕಿಗೆ ಮುದ್ರಿಕೆ ನೀಡಿ ತದನಂತರ ಲಂಕೆಯ ಸುಟ್ಟು ಮತ್ತೆ ವಾನರ ಸೇನೆಯ ಮೂಲಕ ರಾವಣನನ್ನು ವಧಿಸಿ, ರಾಮನ ಪಟ್ಟಾಭಿಷೇಕದವರೆಗೂ ಈ ಹಾಡಿನಲ್ಲಿ ವಿವರಣೆ ನೀಡಿದ್ದಾರೆ. ಈ ಹಾಡಿನ ಕೇಂದ್ರ ಬಿಂದು ಹನುಮಂತನೇ ಆಗಿದ್ದಾನೆ. ವಾದಿರಾಜರು ಸರಳ ಭಾಷೆಯಲ್ಲಿ ಹನುಮಂತನ ಗುಣಗಾನ ಮಾಡಿದ್ದಾರೆ. ಸಾಹಿತ್ಯದಷ್ಟೇ ಸೊಗಸಾಗಿ ಶ್ರೀ ವಿದ್ಯಾಭೂಷಣರು ಮಧ್ಯಮಾವತಿ ರಾಗದಲ್ಲಿ ಹಾಡಿದ್ದಾರೆ. ಸಾಹಿತ್ಯಕ್ಕೆ ಅನುಗುಣವಾಗಿ ರಾಗದ ಛಾಯೆಗಳನ್ನು ಅಳವಡಿಸಿಕೊಂಡಿದ್ದಾರೆ. ಸುಮಾರು 17 ನಿಮಿಷದ ಈ ಹಾಡನ್ನು ಕೇಳಿ ಆನಂದಿಸಿ. ನಿಮ್ಮ @Hanumankannadasongs ಭಕ್ತಿ ವಾಹಿನಿಯಲ್ಲಿ ಮಾತ್ರ..!! *************************************** ಎಷ್ಟು ಸಾಹಸವಂತ ನೀನೇ ಬಲವಂತ ದಿಟ್ಟ ಮೂರುತಿ ಭಳಿರೇ ಭಳಿರೇ ಹನುಮಂತ || 2 || ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ -------------------Bgm------------------- ರಾಮರಪ್ಪಣೆಯಿಂದ ಶರಧಿಯ ದಾಟಿ ಆ ಮಹಾ ಲಂಕೆಯ ಕಂಡೆ ಕಿರೀಟಿ || 2 || ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದೆ ಈ ಮಹಿಯೊಳು ನಿನಗಾರೈ ಸಾಟಿ ದೂರದಿಂದಸುರನ ಪುರವನೆ ನೋಡಿ ಭರದಿ ಶ್ರೀರಾಮರ ಸ್ಮರಣೆಯ ಮಾಡಿ || 2 || ಹಾರಿದೆ ಹರುಷದಿ ಹರಿಸಿ ಲಂಕಿಣಿಯನು ವಾರಿಜಮುಖಿಯನು ಕಂಡು ಮಾತಾಡಿ -------------------Bgm------------------- ರಾಮರ ಕ್ಷೇಮವ ರಮಣಿಗೆ ಪೇಳಿ ತಾಮಸ ಮಾಡದೆ ಮುದ್ರಿಕೆ ನೀಡಿ || 2 || ಪ್ರೇಮದಿ ಜಾನಕಿ ಕುರುಹನು ಕೊಡಲಾಗ ಆ ಮಹಾವನದೊಳು ಫಲವನು ಬೇಡಿ ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು ಹಣ್ಣಿನ ನೆವದಲಿ ಅಸುರರ ಹೊಯ್ದು || 2 || ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ ಬಣ್ಣಿಸಿ ಅಸುರರ ಬಲವನು ಮುರಿದು -------------------Bgm------------------- ಶೃಂಗಾರ ವನದೊಳಗೆ ಇದ್ದ ರಕ್ಕಸರ ಅಂಗವನಳಿಸಿದೆ ಅತಿರಣಶೂರ || 2 || ನುಂಗಿ ಅಸ್ತ್ರಗಳ ಅಕ್ಷಯ ಕುವರನ ಭಂಗಿಸಿ ಬಿಸುಟೆಯೋ ಬಂದ ರಕ್ಕಸರ ದೂರು ಪೇಳಿದರೆಲ್ಲಾ ರಾವಣನೊಡನೆ ಚೀರುತ ಕರೆಸಿದ ಇಂದ್ರಜಿತುವನೆ || 2 || ಚೋರಕಪಿಯ ನೀ ಹಿಡಿತಹುದೆನ್ನುತ ಶೂರರ ಕಳುಹಿದ ನಿಜಸುತನೊಡನೆ -------------------Bgm------------------- ಪಿಡಿದನು ಇಂದ್ರಜಿತು ಕಡು ಕೋಪದಿಂದ ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ || 2 || ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ ನಡೆದನು ಲಂಕೆಯ ಒಡೆಯನಿದ್ದೆಡೆಗೆ ಕಂಡನು ರಾವಣನುದ್ದಂಡಕಪಿಯನು ಮಂಡೆಯ ತೂಗುತ ಮಾತಾಡಿಸಿದನು || 2 || ಭಂಡು ಮಾಡದೆ ಬಿಡೆನೋಡು ಕಪಿಯನೆ ಗಂಡುಗಲಿಯು ದುರುದುರಿಸಿ ನೋಡಿದನು -------------------Bgm------------------- ಛಲವ್ಯಾಕೋ ನಿನಗಿಷ್ಟು ಎಲವೋ ಕೊಡಗನೆ ನೆಲೆಯಾವುದು ಹೇಳೋ ನಿನ್ನೊಡೆಯನೆಸರನ್ನ || 2 || ಬಲವಂತ ರಾಮರ ಬಂಟ ಬಂದಿಹೆನೋ ಹಲವು ಮಾತ್ಯಾಕೋ ಹನುಮನು ನಾನೇ ಬಡ ರಾವಣನೆ ನಿನ್ನ ಬಡಿದು ಹಾಕುವೆನೋ ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೋ || 2 ||ಹುಡಿಯೇಳಿಸುವೆನೋ ಖೂಲ್ಲ ರಕ್ಕಸರನೆ ತೊಡೆವೆನೋ ನಿನ್ನ ಪಣೆಯ ಅಕ್ಷರವ -------------------Bgm------------------- ನಿನ್ನಂತ ದೂತರು ರಾಮನ ಬಳಿಯೊಳು ಇನ್ನೆಷ್ಟು ಮಂದಿ ಉಂಟು ಹೇಳೋ ನೀ ತ್ವರಿಯ || 2 || ನನ್ನಂತ ದೂತರು ನಿನ್ನಂತ ಪ್ರೇತರು ಇನ್ನೂರು ಮುನ್ನೂರು ಕೋಟಿ ಕೇಳರಿಯಾ ಕಡುಕೋಪದಿಂದಲಿ ಖೂಳ ರಾವಣನು ಸುಡಿರೆಂದ ಬಾಲವ ಸುತ್ತಿ ವಸನವ || 2 || ಒಡೆಯನ ಮಾತಿಗೆ ತಡೆಬಡೆ ಇಲ್ಲದೆ ಒಡನೆ ಮುಟ್ಟಿದರು ಗಡಿಮನೆಯವರು -------------------Bgm------------------- ತಂದರು ವಸನವ ತಂಡತಂಡದಲಿ ಒಂದೊಂದು ಮೂಟೆ ಎಂಭತ್ತು ಕೋಟಿಯಲ್ಲಿ || 2 || ಚಂದದಿ ಹರಳಿನ ತೈಲದೊಳದ್ದಿಸಿ ನಿಂದ ಹನುಮನು ಬಾಲವ ಬೆಳೆಸುತ ಶಾಲು ಸಕಲಾತಿಯು ಸಾಲದೆಯಿರಲು ಬಾಲೇರ ವಸ್ತ್ರವ ಸೆಳೆದು ತಾರೆನಲು || 2 || ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ ಕಾಲಮೃತ್ಯುವ ಕೆಣಕಿದರಲ್ಲಿ -------------------Bgm------------------- ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ ಇಣುಕಿನೋಡುತ ಅಸುರರನಣಕಿಸುತ || 2 || ಝಣಝಣಝಣರೆನೆ ಬಾಲದ ಗಂಟೆಯು ಮನದಿ ಶ್ರೀ ರಾಮರ ಪಾದವ ನೆನೆಯುತ ಮಂಗಳಂ ಶ್ರೀ ರಾಮಚಂದ್ರ ಮೂರುತಿಗೆ ಮಂಗಳಂ ಸೀತಾದೇವಿ ಚರಣಂಗಳಿಗೆ || 2 || ಮಂಗಳವೆನುತ ಲಂಕೆಯಸುಟ್ಟು ಲಂಘಿಸಿ ಅಸುರನ ಗಡ್ದಕೆ ಹಿಡಿದ -------------------Bgm------------------- ಹೊತ್ತಿತು ಅಸುರನ ಗಡ್ಡ ಮೀಸೆಗಳು ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು || 2 || ಚಿತ್ತದಿ ರಾಮರು ಕೋಪಿಸುವರು ಎಂದು ಚಿತ್ರದಿ ನಡೆದನು ಅರಸನಿದ್ದೆಡೆಗೆ ಸೀತೆಯ ಕ್ಷೇಮವ ರಾಮರಿಗ್ಹೇಳಿ ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ || 2 || ಸೇತುವೆ ಕಟ್ಟಿ ಚತುರಂಗ ಬಲಸಹ ಮುತ್ತಿತು ಲಂಕೆಯ ಸೂರೆಗೈಯ್ಯುತಲಿ -------------------Bgm------------------- ಹೆಗ್ಗಳವಾಯಿತು ರಾಮರ ದಂಡು ಮುತ್ತಿತು ಲಂಕೆಯ ಕೋಟೆಯ ಕಂಡು || 2 || ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ ಜಗ್ಗನೆ ಪೇಳ್ದರು ರಾವಣಗಂದು ರಾವಣ ಮೊದಲಾದ ರಾಕ್ಷಸರ ಕೊಂದು ಭಾವಶುದ್ಧದಲಿ ವಿಭೀಷಣ ಬಾಳೆಂದು || 2 || ದೇವಿ ಸೀತೆಯನೊಡಗೊಂಡು ಅಯೋಧ್ಯದಿ ದೇವ ಶ್ರೀ ರಾಮರು ರಾಜ್ಯವಾಳಿದರು -------------------Bgm------------------- ಶಂಖದೈತ್ಯನ ಕೊಂದೆ ಶರಣು ಶರಣಯ್ಯ ಶಂಖಗಿರಿಯಲಿ ನಿಂದ ಹನುಮಂತರಾಯ || 2 || ಪಂಕಜಾಕ್ಷ ಹಯವದನನ ಕಟಾಕ್ಷದಿ ಬಿಂಕದಿ ಪಡೆದೆಯೋ ಅಜನಪದವಿಯ ಶಂಖದೈತ್ಯನ ಕೊಂದೆ ಶರಣು ಶರಣಯ್ಯ ಶಂಖಗಿರಿಯಲಿ ನಿಂದ ಹನುಮಂತರಾಯ || 2 || ಪಂಕಜಾಕ್ಷ ಹಯವದನನ ಕಟಾಕ್ಷದಿ ಬಿಂಕದಿ ಪಡೆದೆಯೋ ಅಜನಪದವಿಯ -------------------Bgm------------------- ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ ಎಷ್ಟು ಸಾಹಸವಂತ ನೀನೇ ಬಲವಂತ ದಿಟ್ಟ ಮೂರುತಿ ಭಳಿರೇ ಭಳಿರೇ ಹನುಮಂತ ಭಳಿರೇ ಭಳಿರೇ ಹನುಮಂತ || 5 || ****************************** VISIT OUR OTHER OFFICIAL CHANNELS:- 👉Lord Hanuman Kannada Channel: https://tinyurl.com/y5m4famp 👉Lord Shiva Kannada Channel: https://tinyurl.com/4dbce2bu 👉Lord Raghavendra Kannada Channel : https://tinyurl.com/2jjaxkub 👉Lord Lakshmi Kannada Channel : https://tinyurl.com/yjyjwu6p 👉Lord Ayyappa Kannada Channel : https://tinyurl.com/4h9a9ccn

ಆಷಾಢ ಮಾಸ ಸೋಮವಾರ ದಿನ ಈ ಹಾಡು ಕೇಳಿದರೆ ದಾರಿದ್ರ್ಯ ತೊಲಗಿ ಸಕಲ ಸಂಪತ್ತುಪ್ರಾಪ್ತಿಯಾಗುವದು - Shivane Shankarane

ಎಷ್ಟು ಸಾಹಸವಂತ ನೀನೇ ಬಲವಂತ | Eshtu Sahasavantha Neene Balavantha | Lord Hanuman Kannada Song

Hanuman Devotional Songs |Raamabhakthana Raagaarchane |Dr. Rajkumar & M. Balamuralikrishna |Kannada

ಕಾಂಚನ ಕಾಯನೇ ಹನುಮಂತ ಭಕ್ತರ ಪಾಲಿಸು ಹನುಮಂತ @Hanumankannadasongs ರಮೇಶ್ಚಂದ್ರ Ramesh Chandra | ಶ್ರೀಚಂದ್ರು

ಲಕ್ಷ್ಮೀ ನಾರಾಯಣ ಮಹಾಮಂಗಳ ಮಂತ್ರ 🌸🙏 | Powerful Lakshmi Narayana Mantra | Kannada Devotional Music

Live 🔴 ಆಷಾಢ ಮಾಸದ ಸೋಮವಾರದಂದು ತಪ್ಪದೆ ಕೇಳಬೇಕಾದ ಶಿವ ಸುಪ್ರಭಾತ #svdpushpam

LIVE: ಸೋಮವಾರ ಈ ಶಿವಭಕ್ತಿ ಹಾಡು ಕೇಳಿ ಎಲ್ಲಾ ಕಷ್ಟಗಳು ದೂರವಾಗುತ್ತವೆ | Lord Shiva Devotional Songs Kannada

Hanuman chalisa powerful mantra | ಹನುಮಾನ್ ಚಾಲೀಸ devotional songs #bhakti #music

ಲಿಂಗಾಷ್ಟಕಂ | ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ | Lord Shiva Songs | Kannada Bhakthi Songs

ಎಷ್ಟು ಸಾಹಸವಂತ ನೀನೆ - Estu Sahasavanta - Kannada Devotional Song Lyrical Video - Dr Vidyabhushan

Yesu kayangala kaledu

ಸೋಮವಾರ ವಿಶೇಷ ಶಿವ ಸ್ತುತಿ | ಲಿಂಗಾಷ್ಟಕಂ - ಬಿಲ್ವಾಷ್ಟಕಂ - Lord Shiva Bhakthi Songs

ಇಷ್ಟು ದಿನ ಈ ವೈಕುಂಠ | Ishtu Dina Ee Vaikuntha | Kanakadasa Kannada Dasarapadagalu Jukebox

LIVE : ಈ ಹಾಡುಗಳನ್ನು ಕೇಳುವುದರಿಂದ ದೋಷಗಳು ನಿವಾರಣೆಯಾಗುತ್ತವೆ | Monday Lord Shiva Devotional Songs

Gajendra Moksha (Lyrical video) | ಗಜೇಂದ್ರ ಮೋಕ್ಷ (ಸಾಹಿತ್ಯದೊಂದಿಗೆ)

🔴LIVE ಸೋಮವಾರ ದಿನ ಶಿವಅಷ್ಟಕಂ ಈ ಹಾಡನ್ನು ಕೇಳಿದರೆ ನಿಮ್ಮ ದಾರಿದ್ರತೆ ದೂರವಾಗಿ ಧನವಂತರಾಗುತ್ತೀ

ಹನುಮನ ನೋಡಿದಿರಾ | Hanumana Nodidira – Animated Sri Hanuman Kannada Devotional Songs

S. Janaki X S.P. Balasubrahmanyam - Audio Playlist | Naguva Nayana | Sweety Nanna | Hosa Baalige

ದೇವಕೀ ನಂದನ ಯಾದವ ಕೃಷ್ಣನ...|Poojyaya Raghavendraya #devakinandan #raghavendraswamy @Pkumarvibes2026

