ಬಂದಿತು ಬಂದಿತು ಮಾರಣಕಟ್ಟೆಗೆ ಮಕರ ಸಂಕ್ರಾಂತಿ | Bandithu bandithu maranakatteya makara sankranthi |

Maranakatte Bramhlingeshwara ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ವೈವಸ್ವತ ಮನ್ವಂತರಾಂತ್ಯದಲ್ಲಿ ಇಪ್ಪತ್ತೆಂಟನೇ ದ್ವಾಪರಯುಗದ ಅಂತ್ಯದಲ್ಲಿ ಪತ್ನಿಸಹಿತನಾದ ಮೂಕಾಸುರನನ್ನು ಕೊಂದ ಮೂಕಾಂಬಿಕೆಯು ಎಲ್ಲಿ ವಾಸ ಮಾಡಿದಳೋ, ಅಂಥಾ ಪ್ರಸಿದ್ಧವಾದ ಕೋಲಪುರ ಕ್ಷೇತ್ರದಲ್ಲಿ ದೇವಿಯಿಂದ ಮೂಕಾಸುರನನ್ನು ಎಲ್ಲಿ ನಾಶಮಾಡ್ಲ್ಪಟ್ಟಿತ್ತೋ ಆ ಸ್ಥಳವೇ ಮಾರಣಕಟ್ಟೆ ಎಂದು ಪ್ರಸಿದ್ಧಿಯಾಗಲ್ಪಟ್ಟಿತು. ಮಾರನಕಟ್ಟೆ ಸ್ಥಳದಲ್ಲಿ ಮಣ್ಣಿನ ಪೀಠದಲ್ಲಿ ಬ್ರಹ್ಮಲಿಂಗವೆಂಬ ಹೆಸರಿನಿಂದ ಆ ಮೂಕಾಸುರ ನೆಂಬ ದೈತ್ಯನು ಬಲಿಷ್ಠನಾದ ಭೂತಾದಿಪತಿತ್ವವನ್ನು ಹೊಂದಿದವನಾದನು. ಯಾವಾಗ ಮೂಕಾಸುರನು ಶ್ರೀದೇವಿಯಿಂದ ಯುದ್ಧದಲ್ಲಿ ಕೊಲ್ಲಲ್ಪಟ್ಟನೋ ಆ ಪ್ರಾಣೋತ್ಕ್ರ್ಮಣದ ಸಮಯದಲ್ಲಿ ಹಿಂದಿನ ಜನ್ಮದ ಪುಣ್ಯಾಂಶದ ಸುಕೃತದಿಂದ ಸದ್ಭುದ್ಧಿಯುಂಟಾಗತಕ್ಕಂಥಾದ್ದಾಯಿತು. ಅಚಲವಾದ ಸದ್ಭಕ್ತಿಯಿಂದ ಜಗಜ್ಜನನಿಯಾದ ಶ್ರೀದೇವಿಯನ್ನು ಸ್ತುತಿಸುವವನಾಗಿ ದೇವಿಯನ್ನು ಕುರಿತು ಉದ್ಧಂಡ ನಮಸ್ಕಾರವನ್ನು ಮಾಡುವವನಾದನು. ಮೂಕಾಸುರನ ಸದ್ಭಕ್ತಿಗೆ ಮೆಚ್ಚಿದವಳಾದ ಶ್ರೀದೇವಿಯು "ಎಲೈ ಅಸುರನೇ ನಿನಗೆ ಕಲ್ಯಾಣವಾಗಲಿ ನಿನ್ನ ಮನಸ್ಸಿನಲ್ಲಿ ಏನನ್ನು ಕೇಳಬೇಕೊ ಆ ವರವನ್ನು ಕೇಳುವವನಾಗು" ಎಂದು ಕೇಳಿದಳು ಅದಕ್ಕೆ ಮೂಕಾಸುರನು ಈ ಪ್ರಕಾರ ಕೇಳುವವನಾದನು "ಎಲೈ ಅಂಬಿಕೆಯೇ ನೀನು ನನ್ನ ಮೇಲೆ ಸಂತುಷ್ಟಳಾಗಿ ವರವನ್ನು ಕೊಡುವವಳಾದರೆ ನಿನ್ನ ಸಮೂಪದಲ್ಲೆಯೇ ನಮ್ಮವರಿಂದ ಕೂಡಿದವರಾಗಿ ನಿನ್ನ ಸೇವೆಯನ್ನು ಮಾಡುವಂತೆ ಅನುಗ್ರಹಿಸುವಳಾಗು. ಎಲೈ ಮಹಾದೇವಿಯೇ ನೀನು ವರ ಕೊಡುವವಳಾದರೆ ನನ್ನ ಮನಸ್ಸಿನ ಅಪೇಕ್ಷೆಯಂತೆ ನಿನ್ನ ಚರಣ ಕಮಲ ಸೇವೆ ಮಾಡುವಂತೆಯೂ ನಿನ್ನಲ್ಲಿ ಅಚಂಚಲವಾದ ಭಕ್ತಿಯನ್ನು ಅನುಗ್ರಹಿಸುವವಾಳಾಗು" ಎಂದನು. ಶ್ರೀ ದೇವಿಯು ಮೂಕಾಸುರನ ಈ ಪ್ರಕಾರವಾದ ವಾಕ್ಯವನ್ನು ಕೇಳಿದವಳಾಗಿ ಅವನ ಭಕ್ತಿಗೆ ಮಚ್ಚಿದವಳಾಗಿ ಈ ಪ್ರಕಾರ ಹೇಳುವವಳಾದಳು "ದಾನವೇಂದ್ರನಾದ ಎಲೈ ಮೂಕನೇ ನೀನು ತಪೋಗುಣದಿಂದ ಕೂಡಿದವನಾದ್ದತರಿಂದ ಈ ಹೊತ್ತಿನಿಂದ ನನ್ನ ಸಮೂಪದಲ್ಲಿಯೇ ಭೂತಗಳಿಗೆಲ್ಲಾ ಒಡೆಯನಾಗಿ ವಾಸ ಮಾಡುವವನಾಗು. ನೀನು ಇಲ್ಲಿಯೇ ಮಾರಣಪಟ್ಟವನಾದ್ದರಿಂದ ಭೂತಗಣಗಳಿಗೆಲ್ಲಾ ಮೂಖ್ಯವಾಗಿ ಮಾರನಕಟ್ಟೆ ಬ್ರಹ್ಮನೆಂದು ಪ್ರಸಿದ್ದಿಯುಳ್ಳವನಾಗು ಮತ್ತು ನಿನ್ನ ಪರಿವಾರದವರೂ ಕೂಡ ಮಾರನಕಟ್ಟೆ ಗಣಗಳು ಎಂದು ಪ್ರಸಿದ್ಧರಾಗಲಿ. ಮತ್ತು ನಿನ್ನ ಮರಣವಾದ ಸ್ಥಳವು ಎತ್ತರವಾಗಿ ಕಟ್ಟೆಯಂತೆ ಇರುವುದರಿಂದಲು 'ಮಾರಣಕಟ್ಟೆ' ಎಂದು ಈ ಕಲಿಯಗದಲ್ಲಿ ಪ್ರಸಿದ್ದಿಯಾಗಲ್ಪಡಲಿ. ನನ್ನ ಶತ್ರುವಾದ ನೀನು ಯಾವ ಜಾಗದಲ್ಲಿ ಕಟ್ಟೆಯಂತೆ ಇರುವಲ್ಲಿ ಮರಣವನ್ನು ಹೊಂದಿದೆಯೋ ಆ ಸ್ಥಳವು ನಿನ್ನ ಪ್ರಾರ್ಥನೆ ಮೇರೆಗೆ ಕಲಿಯುಗದಲ್ಲಿ ಮಾರನಕಟ್ಟ್ಟೆ ಎಂದು ಪ್ರಸಿದ್ದಿ ಹೊಂದಲಿ. ಮತ್ತು ನಿನ್ನ ಸಹಾಯಕ್ಕಾಗಿ ಯಕ್ಷೇಶ್ವರಿಯನ್ನು ಚೌಂಡೇಶ್ವರಿಯನ್ನು ಕೊಡುವವಳಾಗುತ್ತೇನೆ. ಇವರಿಬ್ಬರ ಶಕ್ತಿಯಿಂದ ಕೂಡಿದವನಾಗಿಯೂ (ಸ್ವ) ನಿನ್ನವರಾದ ಗಣಗಳಿಂದ ಕೂಡಿದವನಾಗಿ ಸದರಿಸ್ಥಳದಲ್ಲಿ ವಾಸವನ್ನು ಮಾಡುವವನಾಗು. ಇಂದಿನಿಂದ ನೀನು ನನ್ನ ಸೇವಕನಾಗಿ ಈ ಕೋಲಾಪುರ ಸಮೀಪದಲ್ಲಿಯೇ ವಾಸ ಮಾಡುವವನಾಗಿ ನನ್ನ ಸಂತೋಷಕ್ಕಾಗಿ ಧರ್ಮಕರ್ಮಾದಿಗಳನ್ನು ಸದಾಕಾಲ ಮಾಡುವವನಾಗು. ಯಾರು ಸಜ್ಜನರ ವಸ್ತುಗಳನ್ನು ಅಪಹರಿಸುತ್ತಾರೋ ಅಂಥಾ ದುಷ್ಟರನ್ನು ಪೀಡಿಸಿ, ಸಜ್ಜನರ ಬೇಡಿಕೆಯನ್ನು ನೆರವೇರಿಸುವವನಾಗು. ಸಜ್ಜನರಿಗೆ ಅವರ ವಸ್ತುವನ್ನು ಸಿಕ್ಕುವಂತ ಮಾಡಿ, ಸಿಕ್ಕಿದ ಸೊತ್ತಿನ ಹತ್ತನೇ ಒಂದು ಪಾಲಿನಂತೆ ಸ್ವೀಕಾರ ಮಾಡಿದವನಾಗಿ ಅದರಿಂದ ಅನೇಕ ಸ್ತ್ಕಾರ್ಯಾದಿಗಳನ್ನು ಮಾಡುವವನಾಗು. ಸತ್ಯಾಸತ್ಯದ ಬಗ್ಗೆ ಯಾರು ಪ್ರಮಾಣ ಮಾಡುತ್ತಾರೋ ನನ್ನನ್ನು ನನ್ನ ಭಕ್ತರನ್ನು ಮತ್ತು ನಿನ್ನನ್ನೂ ಸಹ ಯಾರು ನಿಂದನೆಯನ್ನು ಮಾಡುತ್ತಾರೋ, ಅಂಥವರನ್ನು ಶಿಕ್ಷಿಸಿ ಅವರವರ ಅಪರಾದಕ್ಕೆ ತಕ್ಕಂತೆ ದಂಡವನ್ನು ಧನದ ರೋಪವಾಗಿ ವಸೂಲು ಮಾಡಿ ಆ ಹಣವನ್ನು ಸತ್ಕಾರ್ಯಾದಿಗಳಿಗೆ ವಿನಿಯೋಗಿಸುವವನಾಗು. ಯಾರು ಭೂತಾದಿಗಳಿಗೆ ಆವೇಶರಾದರು ಮತ್ತು ಯಾರು ಭಯಾದಿಗಳಿಂದ ಕೂಡಿದವರಾಗಿ ಯಾರು ನನ್ನನ್ನು ಪ್ರಾರ್ಥಿಸುತ್ತಾರೋ ಅವರನ್ನು ನೇನು ಸಂರಕ್ಷಿಸಿ ಶಕ್ತ್ಯಾನುಸಾರ ಅವರಿಂದ ಧನವನ್ನು ಸಂಗ್ರಹಿಸಿ ಧರ್ಮಾದಿ ಸತ್ಕಾರ್ಯವನ್ನು ಮಾಡುವವನಾಗು ಮತ್ತು ವಿವಾಹ ಕಾಲದಲ್ಲಿ ಪುತ್ರೋತ್ಸವ ಕಾಲದಲ್ಲಿ ಚಿನ್ನವನ್ನಾಗಲಿ, ಭೂಮಿಯನ್ನಾಗಲಿ, ಧನವನ್ನಾಗಲಿ ವ್ಯಾಪಾರ ಇತ್ಯಾದಿಗಳಲ್ಲಿ ಅವರಿಗೆ ವಿಘ್ನಾದಿ ತೊಂದರೆಗಳನ್ನು ನಿವಾರಣೆ ಮಾಡಿ ಅವರಿಂದ ಧನಾಧಿಗಳನ್ನು ತೆಗೆದುಕೊಂಡು ದೋಷಹರಿತ ಸತ್ಕಾರ್ಯಾದಿಗಳನ್ನು ನಡೆಸು. ಜನರಿಗೆಲ್ಲಾ ಸದ್ಭುದ್ದಿಯನ್ನುಂಟುಮಾಡಿ ನನ್ನ ಉತ್ಸವಾದಿ ಕಾರ್ಯಕಲಾಪಗಳಲ್ಲಿ ಬಂದು ಸೇವಾ ಕಾರ್ಯಾದಿಗಳನ್ನು ಮಾಡಿಸಿ ಮತ್ತು ನಿನ್ನ ಶಕ್ತಿಗಳಿಂದಲೂ ನರವೇರಿಸಿ ಅನನ್ಯವಾದ ಭಕ್ತಿಯಿಂದ ಸತ್ಕಾರ್ಯವನ್ನು ಮಾಡುವವನಾಗು. ಕಲಿಯುಗದ ಒಂದು ಪಾಲು ಕಳೆಯುವ ನಾಲ್ಕು ಸಾವಿರ ವರ್ಷಗಳ ಕಾಲದಲ್ಲಿ ನನ್ನ ದರ್ಷನಾಕಾಂಕ್ಷೆಯಾಗಿ ತೌಳವ ದೇಶದ ವೈಷ್ಣವ್ಯಾಗ್ರಣಿಯಾದ ಯತೀನ್ವಠನೊಬ್ಬನು ಈ ಕ್ಷೇತ್ರಕ್ಕೆ ಬರುವವನಾಗುತ್ತಾನೆ. ಕಲಿಯ ಪ್ರಾಬಲ್ಯದಿಂದ ಇನ್ನೂರ ಅರವತ್ತಾರು ವರ್ಷ ಕಾಲದಲ್ಲಿ ಸದ್ರಿ ಗ್ರಾಮದಲ್ಲಿ ಕ್ಷೇಮ ಡಾಮರಾ ದ್ಯೋತ ದ್ರವ್ಯಗಳಿಂದ ದರಿದ್ರತ್ವ ಉಂಟಾಗಿ ಕುಗ್ರಾಮವಾಗಿ ಗಣಗಳಿಂದ ಕೂಡಿದ ನೀನು ಸತ್ವಹೀನನಾಗತಕ್ಕಂಥವನಾಗುವಿ. ನೀನು ನಿತ್ಯವೂ ನನ್ನ ಆರಾಧನೆಯಿಂದ ಸಂತುಷ್ಟ ಮನಸ್ಸುಳ್ಳವನಾಗಿ ನನ್ನ ಸನ್ನಿಧಾನದಲ್ಲಿಯೇ ಇದ್ದಂತೆ ಭಾವನೆಯನ್ನು ಮಾಡೀಕೊಳ್ಳುವವನಾಗು ಹೀಗೆ ಕೆಲವು ಕಾಲಕ್ರಮೇಣ ನೀನು ಮೂಲಸ್ಥಳವಾದ ಮಾರಣಕಟ್ಟೆಯೆಂಬಲ್ಲಿ ಪೂರ್ವದಂತೆ ವಾಸ ಮಾಡಿದವನಾಗಿದ್ದು ನಿನ್ನ ಶಕ್ತಿಯಿಂದಲೂ ಮತ್ತು ನನ್ನ ಅನುಗೃಹ ಶಕ್ತಿಯಿಂದಲೂ ಮುಂಚಿನಂತೆಯೇ ಧರ್ಮ ಆಮೆಶ ವಚನಾದಿ ನಿಯಮವನ್ನು ಮಾಡುವವನಾಗು." ಶ್ರೀದೇವಿಯು ಮೂಕದೈತ್ಯನನ್ನು ಕುರಿತು ಈ ಪ್ರಕಾರ ಆಜ್ಞೆ ಮಾಡಿ ನಿಸರ್ಗವಾದ ಮೂಕಾಸುರ ಇತ್ಯಾದಿ ವರ್ಗದ ಮುಂಬಾಗದಲ್ಲಿಯೇ ಶಿವನಿಂದ ಕೂಡಿದವಳಾಗಿ ಕೋಲಾಪುರದ ಸರ್ವಾತ್ಮ ಸ್ವರೂಪವಾದ ದಿವ್ಯ ಲಿಂಗದಲ್ಲಿ ಐಕ್ಯಳಾದಳು. ಆ ಲಿಂಗದಲ್ಲಿ ಐಕ್ಯ ಹೊಂದಿದ ದಿನದಿಂದ ತ್ರಿಗುಣಾತ್ಮಕ ಶಕ್ತಿಯುಳ್ಳ ಮಹಾಲಕ್ಷ್ಮಿಯು ಶಕ್ತಿಯಿಂದಲೂ ಶಿವನಿಂದಲೂ ಕೂಡಿದವಳಾಗಿ ಮೂಕಾಸುರನನ್ನು ಕೊಂದವಳಾದ್ದರಿಂದ "ಮೂಕಾಂಬಿಕೆ" ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದವಳಾಗಿಯೂ ಭಕ್ತಾಧಿಗಳ ಇಷ್ಟಾರ್ಥವನ್ನು ಅನುಗ್ರಹಿಸುವುದಕ್ಕೆ ಕಾಮದೇನುವಿನಂತೆ ಇರತಕ್ಕವಳಾಗಿ ಪ್ರಸಿದ್ಧಿಯನ್ನು ಹೊಂದಿದಳು. ಮೂಕಾಸುರನು ಕೂಡಲೆ ತನ್ನ ಅಸುರೀ ಶರೀರ ಸ್ವಭಾವವನ್ನು ಬಿಟ್ಟವನಾಗಿ ಭೂತಪತಿಯಾದ "ಬ್ರಹ್ಮಲಿಂಗತ್ವ"ವನ್ನು ಪಡೆದು ದೇವಿಯ ಸಮೂಪದಲ್ಲಿಯೇ ರಾರಾಜಿಸುತ್ತ ತನ್ನ ಶಕ್ತಿಯಿಂದಲೂ ಶ್ರೀ ದೇವಿಯ ಅನುಗ್ರಹಶಕ್ತಿಯಿಂದಲೂ ನಾನಾ ಕರ್ಯಾತತ್ವರನಾಗುವವನಾದನು. ಹೀಗೆ ಮೂಕಾಸುರನು ಅಸುರನಾದರೂ ಸಹ ಶ್ರೀ ದೇವಿಯಿಂದ ವರವನ್ನು ಪಡೆದು "ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿ" ಎಂದು ಹೆಸರು ಪಡೆದುಕೊಂಡನು. ಮಾಹಿತಿ : ವಿಕಿಪೀಡಿಯಾ

ಏಳಯ್ಯಾ ಶ್ರೀ ಬ್ರಹ್ಮಲಿಂಗೇಶ್ವರ| ಶ್ರೀ ಬ್ರಹ್ಮಲಿಂಗೇಶ್ವರ ಭಕ್ತಿಗೀತೆ| ಸುಪ್ರಭಾತ | Maranakatte Bramhlingeshwara
▶︎

ಏಳಯ್ಯಾ ಶ್ರೀ ಬ್ರಹ್ಮಲಿಂಗೇಶ್ವರ| ಶ್ರೀ ಬ್ರಹ್ಮಲಿಂಗೇಶ್ವರ ಭಕ್ತಿಗೀತೆ| ಸುಪ್ರಭಾತ | Maranakatte Bramhlingeshwara

Appa Appa Maranakatte bhakti song
▶︎

Appa Appa Maranakatte bhakti song

ಹರಿವರಾಸನಂ🙏 | Harivarasanam In Kannada | Wendesday Special Ayyappa Swamy Kannada Bhakti Songs
▶︎

ಹರಿವರಾಸನಂ🙏 | Harivarasanam In Kannada | Wendesday Special Ayyappa Swamy Kannada Bhakti Songs

ನಂಬಿದೆ ನಿನ್ನ ಪಾದ | ಆಂಜನೇಯನ ಜನಪ್ರಿಯ ಭಕ್ತಿಗೀತೆಗಳು | Hanuman Kannada Devotional Songs | Bhakti Sagara
▶︎

ನಂಬಿದೆ ನಿನ್ನ ಪಾದ | ಆಂಜನೇಯನ ಜನಪ್ರಿಯ ಭಕ್ತಿಗೀತೆಗಳು | Hanuman Kannada Devotional Songs | Bhakti Sagara

BARE SAKHI POGUVA I KOLALANOODUVA KRISHNA  JAGADISH PUTTUR DASARAPADA JANYA SAMANVIRAI ASHWINI TANVI
▶︎

BARE SAKHI POGUVA I KOLALANOODUVA KRISHNA JAGADISH PUTTUR DASARAPADA JANYA SAMANVIRAI ASHWINI TANVI

Makara Sankranti Festival Special Songs | ಶಬರಿಗಿರಿಯಲಿ ಕರ್ಪೂರ ಜ್ಯೋತಿ |Ayyappa Swamy Devotional Songs
▶︎

Makara Sankranti Festival Special Songs | ಶಬರಿಗಿರಿಯಲಿ ಕರ್ಪೂರ ಜ್ಯೋತಿ |Ayyappa Swamy Devotional Songs

ಎಷ್ಟು ಸಾಹಸವಂತ ನೀನೇ ಬಲವಂತ | ಡಾ|| ವಿದ್ಯಾಭೂಷಣ | ಶ್ರೀ ವಾದಿರಾಜರು | @Hanumankannadasongs
▶︎

ಎಷ್ಟು ಸಾಹಸವಂತ ನೀನೇ ಬಲವಂತ | ಡಾ|| ವಿದ್ಯಾಭೂಷಣ | ಶ್ರೀ ವಾದಿರಾಜರು | @Hanumankannadasongs

ಮಾರಣಕಟ್ಟೆಯ ಬ್ರಹ್ಮಲಿಂಗೇಶನ ಕಥೆಯನು ಆಲಿಸಿರಿ | Maranakatteya bramhalingeshana katheyanu alisiri
▶︎

ಮಾರಣಕಟ್ಟೆಯ ಬ್ರಹ್ಮಲಿಂಗೇಶನ ಕಥೆಯನು ಆಲಿಸಿರಿ | Maranakatteya bramhalingeshana katheyanu alisiri

ಎಷ್ಟು ಸಾಹಸವಂತ ನೀನೇ ಬಲವಂತ | Eshtu Sahasavantha Neene Balavantha | Lord Hanuman Kannada Song
▶︎

ಎಷ್ಟು ಸಾಹಸವಂತ ನೀನೇ ಬಲವಂತ | Eshtu Sahasavantha Neene Balavantha | Lord Hanuman Kannada Song

appa appa maranakatte
▶︎

appa appa maranakatte

ನಂಬಿ ಬಂದೇನು ನನ್ನೊಡೆಯ ಮಾರಣಕಟ್ಟೆಯ ಬ್ರಹ್ಮಲಿಂಗ ಬ್ರಹ್ಮ ಸೌಖ್ಯ ಮೆಲೋಡಿ ಕುಂದಾಪುರ
▶︎

ನಂಬಿ ಬಂದೇನು ನನ್ನೊಡೆಯ ಮಾರಣಕಟ್ಟೆಯ ಬ್ರಹ್ಮಲಿಂಗ ಬ್ರಹ್ಮ ಸೌಖ್ಯ ಮೆಲೋಡಿ ಕುಂದಾಪುರ

ಅಪ್ಪಾ ಅಪ್ಪಾ ಮಾರಣಕಟ್ಟೆಯ ಕ್ಷೇತ್ರವೆಲ್ಲಿದೆ | ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಭಕ್ತಿಗೀತೆ|Appa appa Maranakatteya
▶︎

ಅಪ್ಪಾ ಅಪ್ಪಾ ಮಾರಣಕಟ್ಟೆಯ ಕ್ಷೇತ್ರವೆಲ್ಲಿದೆ | ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಭಕ್ತಿಗೀತೆ|Appa appa Maranakatteya

ಲಿಂಗಾಷ್ಟಕಂ | Lingashtaka Stotra In Kannada | Shiva Bhakti Songs | Powerful Shiva Stotram
▶︎

ಲಿಂಗಾಷ್ಟಕಂ | Lingashtaka Stotra In Kannada | Shiva Bhakti Songs | Powerful Shiva Stotram

ಮಾರಣಕಟ್ಟೆ ಕಾರ್ಣಿಕ|| MARANAKATTE KARNIKA|| BRAMHALINGESWARA NEW SONG|| TEAM MANASU MEDIA
▶︎

ಮಾರಣಕಟ್ಟೆ ಕಾರ್ಣಿಕ|| MARANAKATTE KARNIKA|| BRAMHALINGESWARA NEW SONG|| TEAM MANASU MEDIA

Pallikattu Kannada Ayyapa Superhit Devotional Songs
▶︎

Pallikattu Kannada Ayyapa Superhit Devotional Songs

ಶರಣೆಂಬೆ ಭೂತೇಶ ಶರಣೆನಲು ಸಂತೋಷ | ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಭಕ್ತಿಗೀತೆ | Maranakatte
▶︎

ಶರಣೆಂಬೆ ಭೂತೇಶ ಶರಣೆನಲು ಸಂತೋಷ | ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಭಕ್ತಿಗೀತೆ | Maranakatte

Sukhlam Bharadaram Vishnum | ಶುಕ್ಲಾಂ ಭರದರಂ ವಿಷ್ಣುಂ | Sri Ganesha Kannada Devotional Songs
▶︎

Sukhlam Bharadaram Vishnum | ಶುಕ್ಲಾಂ ಭರದರಂ ವಿಷ್ಣುಂ | Sri Ganesha Kannada Devotional Songs

Brahmalingeshwara| Appa Appa Maranakatteya | kundapura | maranakatte #kundapura #maranakatte
▶︎

Brahmalingeshwara| Appa Appa Maranakatteya | kundapura | maranakatte #kundapura #maranakatte

Mandarthi Shree Durgambike
▶︎

Mandarthi Shree Durgambike

ಮಕರ ಸಂಕ್ರಾಂತಿ ವಿಶೇಷ ಗೀತೆಗಳು |Makara Sankranti Special Songs| Sankranti Songs|Ayyappa |Audio Jukebox
▶︎

ಮಕರ ಸಂಕ್ರಾಂತಿ ವಿಶೇಷ ಗೀತೆಗಳು |Makara Sankranti Special Songs| Sankranti Songs|Ayyappa |Audio Jukebox