ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur Farmers' Success Story

ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur ರಾಯಚೂರು: ಕೆಲ ಪ್ರಗತಿಪರ ರೈತರ ಹೊಸ ಪ್ರಯೋಗಗಳು ಯಶಸ್ವಿಯಾಗಿದ್ದು ಕೃಷಿಯಲ್ಲಿ ಲಾಭ ಗಳಿಸುತ್ತಿದ್ದಾರೆ. ಬಿಸಿಲನಾಡು ರಾಯಚೂರು ಜಿಲ್ಲೆಯ ರೈತರ ಈ ಹೊಸ ಟೆಕ್ನಿಕ್ ಯಶಸ್ವಿಯಾಗಿದ್ದು, ಬದುಕು ಬಂಗಾರವಾಗುತ್ತಿದೆ. ರಾಯಚೂರು ಜಿಲ್ಲೆ ಒಂದೆಡೆ ಪ್ರವಾಹ, ಇನ್ನೊಂದೆಡೆ ಬರಗಾಲದಿಂದ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲೂ ಜಿಲ್ಲೆಯ ದೇವದುರ್ಗ ತಾಲೂಕಿನ ರೈತರು ಅಡುಗೆ ಎಣ್ಣೆಯನ್ನು ಬಳಸಿ ಲಾಭದಾಯಕ ಕೃಷಿ ಮಾಡಿ ಸುದ್ದಿಯಾಗಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆ ನೀರನ್ನೇ ನಂಬಿ ಕೃಷಿ ಮಾಡುತ್ತಿರುವ ಸಾವಿರಾರು ರೈತರ ಮುಖ್ಯ ಬೆಳೆಗಳೆಂದರೆ ಭತ್ತ, ಹತ್ತಿ ಹಾಗೂ ಮೆಣಸಿನಕಾಯಿ. ಆದರೆ ರಸಗೊಬ್ಬರ, ಕ್ರಿಮಿನಾಶಕ, ಕೂಲಿಯಾಳುಗಳು ಸೇರಿ ಎಕರೆಗೆ 40 ರಿಂದ 50 ಸಾವಿರ ಖರ್ಚುಮಾಡಿ ಬೆಳೆ ಬೆಳೆಯುತ್ತಿದ್ದ ರೈತರು ತುಂಬಾ ನಷ್ಟ ಅನುಭವಿಸುತ್ತಿದ್ದರು. ಇದೀಗ ಕೃಷಿಯಲ್ಲಿ ಅಡುಗೆಎಣ್ಣೆ ಬಳಸುವ ಮೂಲಕ ಎಕರೆಗೆ ಕೇವಲ 5 ರಿಂದ 8 ಸಾವಿರ ರೂ. ಖರ್ಚು ಬರುತ್ತಿದೆ. ಇದರಿಂದಾಗಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಅಡುಗೆ ಎಣ್ಣೆಯನ್ನು ಕ್ರಿಮಿನಾಶಕವಾಗಿ, ಪೋಷಾಕಾಂಶ ನೀಡುವ ಔಷಧಿಯಾಗಿಯೂ ಬಳಕೆ ಮಾಡಬಹುದು ಎಂಬದನ್ನು ಇಲ್ಲಿನ ರೈತರು ಕಂಡುಕೊಂಡಿದ್ದಾರೆ. ದೇವದುರ್ಗಾ ತಾಲೂಕಿನ ಗಬ್ಬೂರು ಸೇರಿದಂತೆ ಸುತ್ತಲಿನ ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿನ ರೈತರು ಈ ಪ್ರಯೋಗದಿಂದ ಯಶಸ್ವಿಯಾಗಿದ್ದಾರೆ. ಅಡುಗೆ ಎಣ್ಣೆಗಳಾದ ಪಾಮ್, ಶೇಂಗಾ, ಕೊಬ್ಬರಿ ಹಾಗೂ ಹತ್ತಿ ಕಾಳು ಎಣ್ಣೆ, ಸೋಯಾಬಿನ್ ಎಣ್ಣೆ ಹೀಗೆ ಹಲವಾರು ಎಣ್ಣೆಗಳಿಗೆ ಕೋಳಿ ಮೊಟ್ಟೆ ಮಿಶ್ರಣ ಮಾಡಿ ವಾರಕ್ಕೊಮ್ಮೆ ಸಿಂಪಡಣೆ ಮಾಡುವುದರಿಂದ ಬೆಳೆಗಳಿಗೆ ಮುಖ್ಯವಾಗಿ ಮುರುಟು ರೋಗ, ಜೀಗಿ ರೋಗ ಸೇರಿದಂತೆ ವಿವಿಧ ರೋಗಗಳನ್ನು ನಿಯಂತ್ರಣ ಮಾಡಬಹುದು. ಅಲ್ಲದೆ ಬೆಳೆಗಳಿಗೆ ಅಧಿಕ ಪೋಷಕಾಂಶ ನೀಡಬಹುದು ಎನ್ನುವುದನ್ನು ರೈತರು ಕಂಡುಕೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಹಾಗೂ ಕೀಟ ನಾಶಕ ಬಳಸಿ ಕೃಷಿ ಮಾಡುವ ಪದ್ಧತಿಯ ಖರ್ಚಿಗಿಂತ ಎಣ್ಣೆ ಬಳಸಿ ಕೃಷಿ ಮಾಡುವುದರಿಂದ ಕೇವಲ ಶೇ.10ರಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ. ಮಿಶ್ರಣ ಹೇಗೆ? ಮೆಣಸಿನಕಾಯಿ, ಹತ್ತಿ ನಾಟಿ ಅಥವಾ ಬಿತ್ತನೆ ಮಾಡಿದ ನಂತರ ಬೆಳೆ ಬೆಳೆಯುತ್ತಿರುವಾಗ ಪ್ರತಿ ವಾರಕ್ಕೊಮ್ಮೆ ಈ ಔಷಧಿಯನ್ನು ಸಿಂಪಡಣೆ ಮಾಡಬೇಕು, ಇಲ್ಲಿ ಮುಖ್ಯವಾಗಿ ಅಡುಗೆ ಎಣ್ಣೆಯೊಂದಿಗೆ ನೀರು ಮಿಶ್ರಣ ಮಾಡಲು ಒಂದು ಮೀಡಿಯೇಟರ್ ಬೇಕು. ಅದಕ್ಕೆ ಅವರು ಕೋಳಿ ಮೊಟ್ಟೆಯನ್ನು ಮಿಶ್ರಣ ಮಾಡುತ್ತಾರೆ. ಈ ಮೊದಲು ಎಂಎಸ್ ಫೈರ್ ಎಂಬ ಔಷಧಿಯನ್ನು ಮಿಶ್ರಣಕ್ಕೆ ಬಳಸುತ್ತಿದ್ದರು. ಇದನ್ನು ಸಹ ಪ್ರತಿ 100 ಎಂ ಎಲ್ ಗೆ 40 ರೂಪಾಯಿ ಕೊಟ್ಟು ಖರೀದಿಸಬೇಕಾಗಿತ್ತು. ಪ್ರತಿ ಎಕರೆಗೆ ಒಂದು ಕೆಜಿ ಅಡುಗೆ ಎಣ್ಣೆ ಹಾಗೂ ಅದಕ್ಕೆ ಆರು ಕೋಳಿ ಮೊಟ್ಟೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ 19 ಲೀಟರ್ ನಂತೆ ನೀರನ್ನ ಬೆರೆಸಿ ಆರು ಟ್ಯಾಂಕ್ ಗಳ ಔಷಧಿಯನ್ನು ಸಿಂಪಡಣೆ ಮಾಡಬೇಕು. ನಿಗಿದಿತ ಸಮಯಕ್ಕೆ ಸರಿಯಾಗಿ ಸಿಂಪಡಣೆ ಮಾಡಿದರೆ ಉತ್ತಮ ಇಳುವರಿ ಬರುತ್ತದೆ. ಪ್ರತಿ ಬಾರಿಯೂ ಔಷಧಿಗಾಗಿ ಅಡುಗೆ ಎಣ್ಣೆ ಪ್ರತಿ ಕೆಜಿಗೆ 60 ರಿಂದ 120 ರೂಪಾಯಿ, ಆರು ಮೊಟ್ಟೆಗಳಿಗೆ 40 ರೂಪಾಯಿ, ಕೂಲಿ 300 ರೂಪಾಯಿ ಹೀಗೆ ಕೇವಲ 450 ರೂಪಾಯಿಯಲ್ಲಿ ಔಷಧಿಯನ್ನು ಸಿಂಪಡಣೆ ಮಾಡಬಹುದು. ಆದೇ ರಸಾಯನಿಕ ಬಳಸಿದರೆ ಪ್ರತಿ ಲೀಟರ್ ಗೆ 1000-1500 ರೂಪಾಯಿ ಹಾಗು ರಸಗೊಬ್ಬರಕ್ಕೆ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ಈ ಹಿಂದೆ ಇಸ್ರೇಲಿನ ಕೃಷಿ ವಿಜ್ಞಾನಿಯೊಬ್ಬರು ಪ್ರಯೋಗ ಮಾಡಿ ಯಶಸ್ವಿಯಾಗಿದ್ದರಂತೆ. ತೆಲಂಗಾಣದಲ್ಲೂ ರೈತರು ಈ ಪ್ರಯೋಗದಿಂದ ಯಶಸ್ಸು ಕಂಡಿದ್ದು ಕಳೆದ ಕೆಲ ವರ್ಷಗಳಿಂದ ಇಲ್ಲಿನ ರೈತರು ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ರೈತರು ಸಹ ಈ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಸಾಲದ ಹೊರೆಯನ್ನು ಇಳಿಸಿಕೊಳ್ಳುತ್ತಿದ್ದಾರೆ. Watch Live Streaming On http://www.publictv.in/live Download Public TV app here: Android: https://play.google.com/store/apps/de... iOS: https://apps.apple.com/in/app/public-... Keep Watching Us On Youtube At:    / publictvnewskannada   Watch More From This Playlist Here:    / publictvnewskannada   Read detailed news at www.publictv.in Subscribe on YouTube: https://www.youtube.com/user/publictv... Follow us on Google+ @ https://plus.google.com/+publictv Like us @   / publictv   Follow us on twitter @   / publictvnews   -------------------------------------------------------------------------------------------------------- Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Office'ಗೆ ಬಂದ ಬಾಸ್'ಗೆ ಪದೇ ಪದೇ ನಮಸ್ಕಾರ ಮಾಡಿ ತಲೆ ಕೆಡಿಸಿದ ಜಗ್ಗೇಶ್ | Bal Nan Maga Kannada Movie Part 01
▶︎

Office'ಗೆ ಬಂದ ಬಾಸ್'ಗೆ ಪದೇ ಪದೇ ನಮಸ್ಕಾರ ಮಾಡಿ ತಲೆ ಕೆಡಿಸಿದ ಜಗ್ಗೇಶ್ | Bal Nan Maga Kannada Movie Part 01

ದೇವೇಗೌಡ್ರಿಗೆ ಟಿಕೆಟ್ ಮಿಸ್ - ಜೆಡಿಎಸ್‌ಗೆ ಬಿಜೆಪಿ ಬಿಗ್ ಶಾಕ್ - ಇತ್ತ ಜೆಡಿಎಸ್ ಅಚ್ಚರಿ ನಿರ್ಧಾರ- hd devegowa
▶︎

ದೇವೇಗೌಡ್ರಿಗೆ ಟಿಕೆಟ್ ಮಿಸ್ - ಜೆಡಿಎಸ್‌ಗೆ ಬಿಜೆಪಿ ಬಿಗ್ ಶಾಕ್ - ಇತ್ತ ಜೆಡಿಎಸ್ ಅಚ್ಚರಿ ನಿರ್ಧಾರ- hd devegowa

ಕೊಪ್ಪಳ: ಬ್ಯಾಡಗಿ ಮೆಣಸು ಕೃಷಿ :ಕಡಿಮೆ ಜಗದಲ್ಲಿ ಅಧಿಕ ಲಾಭ | yadagi Chilli Cultivation | High Profit Farming
▶︎

ಕೊಪ್ಪಳ: ಬ್ಯಾಡಗಿ ಮೆಣಸು ಕೃಷಿ :ಕಡಿಮೆ ಜಗದಲ್ಲಿ ಅಧಿಕ ಲಾಭ | yadagi Chilli Cultivation | High Profit Farming

ಬಂಗಾಳದಲ್ಲಿ ಬಿರುಗಾಳಿ | TMC Crisis Deepens | Masth Magaa | Amar Prasad
▶︎

ಬಂಗಾಳದಲ್ಲಿ ಬಿರುಗಾಳಿ | TMC Crisis Deepens | Masth Magaa | Amar Prasad

cooking Oil And Egg, Liquid Fertiligzer, Organic Pesticide, ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ, ಕೀಟನಾಶಕ,
▶︎

cooking Oil And Egg, Liquid Fertiligzer, Organic Pesticide, ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ, ಕೀಟನಾಶಕ,

ಮಮತಾ ಬ್ಯಾನರ್ಜಿ ಸ್ವಂತ ಪಕ್ಷವನ್ನೇ ಕಳೆದುಕೊಳ್ಳುತ್ತಾರಾ? | West Bengal Politics | Suvarna Party Rounds
▶︎

ಮಮತಾ ಬ್ಯಾನರ್ಜಿ ಸ್ವಂತ ಪಕ್ಷವನ್ನೇ ಕಳೆದುಕೊಳ್ಳುತ್ತಾರಾ? | West Bengal Politics | Suvarna Party Rounds

ರಾಜ್ಯಸಭೆ, ಪರಿಷತ್‌ಗೆ ಬಿಜೆಪಿ ಅಭ್ಯರ್ಥಿ ಘೋಷಣೆ | Rajya Sabha | BJP Ticket
▶︎

ರಾಜ್ಯಸಭೆ, ಪರಿಷತ್‌ಗೆ ಬಿಜೆಪಿ ಅಭ್ಯರ್ಥಿ ಘೋಷಣೆ | Rajya Sabha | BJP Ticket

Green chilli cultivation | ಹಸಿ ಮೆಣಸಿನಕಾಯಿ ನಾಟಿ ಮಾಡುವ ವಿಧಾನ ಭಾಗ-1 | A-Z ಸಂಪೂರ್ಣ ಮಾಹಿತಿ |kannada vlog
▶︎

Green chilli cultivation | ಹಸಿ ಮೆಣಸಿನಕಾಯಿ ನಾಟಿ ಮಾಡುವ ವಿಧಾನ ಭಾಗ-1 | A-Z ಸಂಪೂರ್ಣ ಮಾಹಿತಿ |kannada vlog

Trump vs Netanyahu | ಟ್ರಂಪ್‌ 'ಪವರ್' ಗೇಮ್ ಶುರು.. ಇರಾನ್ ನಾಯಕ ಮೊಜ್ತಬಾ ಬಗ್ಗೆ ಸ್ಫೋಟಕ ರಹಸ್ಯ ಬಯಲು..!
▶︎

Trump vs Netanyahu | ಟ್ರಂಪ್‌ 'ಪವರ್' ಗೇಮ್ ಶುರು.. ಇರಾನ್ ನಾಯಕ ಮೊಜ್ತಬಾ ಬಗ್ಗೆ ಸ್ಫೋಟಕ ರಹಸ್ಯ ಬಯಲು..!

ಕಾಂಗ್ರೆಸ್‌ಗೆ ಗೌಡರ ಮೇಲೆ ದಿಢೀರ್‌ ಪ್ರೀತಿ ಏಕೆ? | Why This Sudden Love for Deve Gowda?
▶︎

ಕಾಂಗ್ರೆಸ್‌ಗೆ ಗೌಡರ ಮೇಲೆ ದಿಢೀರ್‌ ಪ್ರೀತಿ ಏಕೆ? | Why This Sudden Love for Deve Gowda?

ಬೆಂಗಳೂರಿನಲ್ಲೊಬ್ಬ ಮಾಡರ್ನ್ ರೈತ: ಒಂದೂವರೆ ಎಕರೆಯಲ್ಲಿ ₹20 ಲಕ್ಷ ಆದಾಯ! Modern Farmer | Bengaluru | 20 Lakh
▶︎

ಬೆಂಗಳೂರಿನಲ್ಲೊಬ್ಬ ಮಾಡರ್ನ್ ರೈತ: ಒಂದೂವರೆ ಎಕರೆಯಲ್ಲಿ ₹20 ಲಕ್ಷ ಆದಾಯ! Modern Farmer | Bengaluru | 20 Lakh

ಮೆಲೋಡಿ ಕಲ್ಲಂಗಡಿಯಿಂದ ಲಾಭ ಪಡೆದ ರೈತ.. | 9845629864
▶︎

ಮೆಲೋಡಿ ಕಲ್ಲಂಗಡಿಯಿಂದ ಲಾಭ ಪಡೆದ ರೈತ.. | 9845629864

ನಿಮ್ಮ ಜಮೀನಿನ ಮಣ್ಣನ್ನು ಸ್ಥಳದಲ್ಲೇ ಸುಲಭವಾಗಿ ಪರೀಕ್ಷಿಸಿ | Simple techniques to test your soil on spot
▶︎

ನಿಮ್ಮ ಜಮೀನಿನ ಮಣ್ಣನ್ನು ಸ್ಥಳದಲ್ಲೇ ಸುಲಭವಾಗಿ ಪರೀಕ್ಷಿಸಿ | Simple techniques to test your soil on spot

TMC: ಕೊನೆಗೂ NDA ಸೇರ್ಪಡೆಯಾದ ಟಿಎಂಸಿ! ಮೋದಿ ಸರ್ಕಾರಕ್ಕೆ ಸೂಪರ್ ಮೆಜಾರಿಟಿ ಫಿಕ್ಸ್! TMC joins NDA
▶︎

TMC: ಕೊನೆಗೂ NDA ಸೇರ್ಪಡೆಯಾದ ಟಿಎಂಸಿ! ಮೋದಿ ಸರ್ಕಾರಕ್ಕೆ ಸೂಪರ್ ಮೆಜಾರಿಟಿ ಫಿಕ್ಸ್! TMC joins NDA

10 ಲಕ್ಷ ಸಂಬಳ ಬಿಟ್ಟು ಬಂದೆ ಈಗ ದನ ಕಾಯ್ತಾ ಇದೀನಿ | success story
▶︎

10 ಲಕ್ಷ ಸಂಬಳ ಬಿಟ್ಟು ಬಂದೆ ಈಗ ದನ ಕಾಯ್ತಾ ಇದೀನಿ | success story

ಜೇವರ್ಗಿ ರೈತನ ಅಧ್ಬುತ ಔಷಧಿಗಳ ಭಂಡಾರ | organic fertilizer in kannada | bio pesticides & bio insecticides
▶︎

ಜೇವರ್ಗಿ ರೈತನ ಅಧ್ಬುತ ಔಷಧಿಗಳ ಭಂಡಾರ | organic fertilizer in kannada | bio pesticides & bio insecticides

ಬೆಲ್ಲ ಹಾಗು ಕಡಲೆ ಹಿಟ್ಟಿನ ಪ್ರಯೋಗದಿಂದ ಮೆಣಸಿನಕಾಯಿಯಲ್ಲಿ ಉತ್ತಮ ಫಲಿತಾಂಶ | black thrips | beauveria bassiana
▶︎

ಬೆಲ್ಲ ಹಾಗು ಕಡಲೆ ಹಿಟ್ಟಿನ ಪ್ರಯೋಗದಿಂದ ಮೆಣಸಿನಕಾಯಿಯಲ್ಲಿ ಉತ್ತಮ ಫಲಿತಾಂಶ | black thrips | beauveria bassiana

ಪೀಶ್ ಟಾನಿಕ್ | FISH TONIC |  ಮೂಲಕ ಯೂರಿಯಾ ಗೊಬ್ಬರ | ಲಘು ಪೋಷಕಾಂಶಗಳ ತಯಾರಿಸುವ ವಿಧಾನ
▶︎

ಪೀಶ್ ಟಾನಿಕ್ | FISH TONIC | ಮೂಲಕ ಯೂರಿಯಾ ಗೊಬ್ಬರ | ಲಘು ಪೋಷಕಾಂಶಗಳ ತಯಾರಿಸುವ ವಿಧಾನ

Karnataka News | ರಾಜ್ಯದ ಇಂದಿನ ಪ್ರಮುಖ ಸುದ್ದಿಗಳು (08-06-26) | CM DK Shivakumar | Zameer | HDK | HDD
▶︎

Karnataka News | ರಾಜ್ಯದ ಇಂದಿನ ಪ್ರಮುಖ ಸುದ್ದಿಗಳು (08-06-26) | CM DK Shivakumar | Zameer | HDK | HDD

ಅರ್ಧ ಎಕರೆಲ್ಲಿ 4 ಲಕ್ಷ ಲಾಭ I ಮೆಣಸಿನಕಾಯಿ ಕೃಷಿ  I  GREEN CHILLI FARMING IN KANNADA I GREEN CHILLI CROP
▶︎

ಅರ್ಧ ಎಕರೆಲ್ಲಿ 4 ಲಕ್ಷ ಲಾಭ I ಮೆಣಸಿನಕಾಯಿ ಕೃಷಿ I GREEN CHILLI FARMING IN KANNADA I GREEN CHILLI CROP