ಕಲಬುರಗಿ/ಕಾಳಗಿ :ಕೈಕೊಟ್ಟ ಮಳೆ ಕಂಗಾಲಾದ ರೈತ :ಬರಗಾಲ ಘೋಷಣೆ ಮಾಡುವಂತೆ ರೈತ ಸೇನೆ ಮನವಿ.

ಕೈಕೊಟ್ಟ ಮಳೆ ಕಂಗಾಲಾದ ರೈತ :ಬರಗಾಲ ಘೋಷಣೆ ಮಾಡುವಂತೆ ರೈತ ಸೇನೆ ಮನವಿ ಕಾಳಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ, ನಡೆಸಿದ ರೈತರ ಪ್ರತಿಭಟನೆಯಲ್ಲಿ ಸೇರಿದ ಸಾವಿರಾರು ಜನ ರೈತರು ಭಾಗವಹಿಸಿದ್ದರು. ರಣಬಿಸಿಲಿನಲ್ಲಿ ರೋಡಿಗಿಳಿದ ರೈತರು, ಸರ್ಕಾರದ ವಿರುದ್ಧ ಸಿಡಿದೆದ್ದ ಅನ್ನದಾತರು. ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಅಗತ್ಯ ಪರಿಹಾರ ಹಾಗೂ ಬೆಳೆ ನಷ್ಟ ಪರಿಹಾರವನ್ನು ನೀಡುವಂತೆ ಒತ್ತಾಯಿಸಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ರೈತರು, ಈ ವರ್ಷ ಸಮರ್ಪಕ ಮಳೆಯ ಕೊರತೆಯಿಂದ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ಕೂಡಲೇ ಅಧಿಕಾರಿಗಳ ಮೂಲಕ ಬೆಳೆ ಹಾನಿಯ ಸಮೀಕ್ಷೆ ನಡೆಸಿ, ಕಾಳಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು. ಗ್ರೇಡ್-1 ತಹಶೀಲ್ದಾರ ಪೃಥ್ವಿರಾಜ ಪಾಟೀಲ ಅವರ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರಿಗೆ ಮನವಿಪತ್ರ ನೀಡಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ರೈತರ ಕೃಷಿ ಸಾಲ ಮನ್ನಾ, ಬೆಳೆ ವಿಮೆ ಪರಿಹಾರವನ್ನು ಶೀಘ್ರ ಬಿಡುಗಡೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ವ್ಯವಸ್ಥೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ತಾಲೂಕಿನ ಮಠಗಳ ಪೂಜ್ಯರು, ರೈತರು ರೈತ ಮುಖಂಡರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಕಾಳಗಿ ತಾಲೂಕು ಅಧ್ಯಕ್ಷರು ಮಾತನಾಡಿದರು. ಪಟ್ಟಣದ ಬಸವೇಶ್ವರ ವೃತ್ತದಿಂದ ಬಾಬಾಸಾಹೇಬರ ವೃತ್ತದವರೆಗೆ ನೇಗಿಲು, ನೇಗಿಲದಿಂಡು, ಎತ್ತಿನ ಬಂಡಿ, ಟ್ರಾಕ್ಟರ್ ಗಳು ಸೇರಿದಂತೆ ವಿವಿಧ ಕೃಷಿ ಪರಿಕರಗಳ ಜೊತೆಗೆ ಬಾರುಕೋಲುಗಳನ್ನು ಬೀಸುತ್ತಾ ಮೆರವಣಿಗೆಯ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಿದರು. ಮೂರು ತಾಸಿಗೂ ಹೆಚ್ಚು ರಸ್ತೆ ಬಂದ್ : ಅಂಬೇಡ್ಕರ್ ವೃತ್ತದಲ್ಲಿ 77ಹಳ್ಳಿಗಳಿಂದ ಬಂದಿದ್ದ ಸಾವಿರಾರು ರೈತರು, ರಸ್ತೆಯ ಮೇಲೆ ಧರಣಿ ಕುಳಿತರು. ಚಿಂಚೋಳಿ-ಕಲಬುರಗಿ ಸಂಚಾರ ಸ್ಥಗಿತ: ಪ್ರತಿಭಟನೆಯಿಂದ ಚಿಂಚೋಳಿ-ಕಲಬುರಗಿ ಸಂಚಾರ ಸ್ಥಗಿತಗೊಂಡ ಕಾರಣ ಸಾರ್ವಜನಿಕರು ಪರದಾಡುವಂತಾಯಿತು. ಅಂಬುಲೆನ್ಸ್ ಗಳು ಸುಗಮ ಸಂಚಾರಕ್ಕಾಗಿ ತೊಂದರೆ ಅನುಭವಿಸುತ್ತಿರುವುದನ್ನು ಕಂಡ ರೈತರು, ಅಂಬುಲೆನ್ಸ್ ನಲ್ಲಿರುವ ರೋಗಿಯ ಸ್ಥಿತಿ ಮತ್ತು ಪ್ರತಿಭಟನೆಗಿಳಿದ ಇಂದಿನ ರೈತರ ಸ್ಥಿತಿ ಒಂದೇ ಆಗಿದೆ ಎಂದ ರೈತರು, ವಾಹನಕ್ಕೆ ಸುಗಮ ಸಂಚಾರ ಒದಗಿಸಿ ಕೊಟ್ಟು ಮಾನವಿಯತೆ ಮೆರೆದರು. ಸಜ್ಜೆ ರೊಟ್ಟಿ ಫುಂಡಿ ಪಲ್ಯ ಸವಿದು ಪ್ರತಿಭಟನೆಗಿಳಿದ ರೈತರು : ಸುದೀರ್ಘ ಮೂರ್ನಾಲ್ಕು ತಾಸು ರಸ್ತೆ ತಡೆ ನಡೆಸಿದ ರೈತರು, ಹಸಿವೆಯಿಂದ ಬಳಲಿ ತಾವೇ ಕಟ್ಟಿಕೊಂಡು ಬಂದ ಸಜ್ಜೆ ರೊಟ್ಟಿ ಪುಂಡಿ ಪಲ್ಯ ಸವಿದ ರೈತರು, ಮತ್ತೆ ಪ್ರತಿಭಟನೆಗಿಳಿದರು. ಸರ್ಕಾರಿ ಅಧಿಕಾರಿಗಳಿಗೆ ಸುಡುಬಿಸಿಲಿನ ರುಚಿ : ರೈತರ ಸಮಸ್ಯೆ ಆಲಿಸಲು ಬಂದ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳಿಗೆ ಸುಡು ಬಿಸಿಲಿನ ರುಚಿ ತೋರಿಸಿ, ರೈತರ ಸಂಕಷ್ಟಗಳ ಬಗ್ಗೆ ಪ್ರತಿಭಟನಾಕಾರರು ಬಿಡಿ-ಬಿಡಿಯಾಗಿ ತಿಳಿಸಿದರು. ಆರ್. ಎಸ್. ಎಸ್ ಬಿಟ್ಟು ರೈತರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ: ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸುತ್ತಾ ವಿನಾ ಕಾರಣ ಆರ್.ಎಸ್.ಎಸ್ ನ್ನೇ ಬಹು ದೊಡ್ಡ ಸಮಸ್ಯೆ ಎನ್ನುವಂತೆ ಸೃಷ್ಟಿಸಿಕೊಂಡ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರೈತರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ರೈತ ಮಲ್ಲಿಕಾರ್ಜುನ ರುದನೂರ ಆಕ್ರೋಶ ವ್ಯಕ್ತಪಡಿಸಿದರು. ರೈತ ಹೋರಾಟಕ್ಕೆ ಪಂಚ ಪೂಜ್ಯರ ಸಾಥ್ : ಭರತನೂರಿನ ಚಿಕ್ಕಗುರುನಂಜೇಶ್ವರ ಶ್ರೀಗಳು, ಕೋಡ್ಲಿ, ಮಂಗಲಗಿ, ರಟಕಲ್ ಸೇರಿ ಪಂಚ ಮಠಾಧೀಶರು, ರಣಬಿಸಿಲು ಲೆಕ್ಕಿಸದೆ ರೈತರೊಂದಿಗೆ ಸೇರಿ ಮೈಮೇಲೆ ಬೆವರು ಸುರಿತ್ತಿದ್ದರೂ ಸಹ ಕೊನೆವರೆಗೂ ಜೊತೆಗಿದ್ದರು. #karunadakanda#kalaburagi #latestnews #formerprotest #kalaburagilatestnews #kalaburagidailyupdates #kalagi #congress #congresskarnataka #congressparty #congressgovernment

ಕಾಶ್ಮೀರದಲ್ಲಿ 2500 ಜನ ಅರೆಸ್ಟ್ | CJP Protest | NEET | PM Modi | Kashmir | Full News | Masth Magaa Amar
▶︎

ಕಾಶ್ಮೀರದಲ್ಲಿ 2500 ಜನ ಅರೆಸ್ಟ್ | CJP Protest | NEET | PM Modi | Kashmir | Full News | Masth Magaa Amar

"ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ?!"-E37-Mukhyamantri Chandru-Kalamadhyama
▶︎

"ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ?!"-E37-Mukhyamantri Chandru-Kalamadhyama

Happy old age of an elderly couple far from civilization. Apricot season
▶︎

Happy old age of an elderly couple far from civilization. Apricot season

Lok Sabha LIVE: ಲೋಕಸಭಾ ಅಧಿವೇಶನ ನೇರಪ್ರಸಾರ | Parliament Monsoon Session Day-3 | Suvarna News
▶︎

Lok Sabha LIVE: ಲೋಕಸಭಾ ಅಧಿವೇಶನ ನೇರಪ್ರಸಾರ | Parliament Monsoon Session Day-3 | Suvarna News

ಮರ್ಯಾದೆ ಹೋಯ್ತು!ಲಾಠಿ ಚಾರ್ಜ್ ವಿರುದ್ಧ ಖರ್ಗೆ!ಜನ್ಮ ಜಾಲಾಡಿದ ಸುಪ್ರೀಂ ಕೋರ್ಟ್ | Modi | Mallikarjuna Kharge
▶︎

ಮರ್ಯಾದೆ ಹೋಯ್ತು!ಲಾಠಿ ಚಾರ್ಜ್ ವಿರುದ್ಧ ಖರ್ಗೆ!ಜನ್ಮ ಜಾಲಾಡಿದ ಸುಪ್ರೀಂ ಕೋರ್ಟ್ | Modi | Mallikarjuna Kharge

ಚಿತ್ರದುರ್ಗ ಜಾನುವಾರು ಸಂತೆಯಲ್ಲಿ ಈಗ ಖರೀದಿದಾರರೇ ಇಲ್ಲ, | Chitradurga | Amrit Mahal | SANMARGA NEWS
▶︎

ಚಿತ್ರದುರ್ಗ ಜಾನುವಾರು ಸಂತೆಯಲ್ಲಿ ಈಗ ಖರೀದಿದಾರರೇ ಇಲ್ಲ, | Chitradurga | Amrit Mahal | SANMARGA NEWS

ಕರ್ನಾಟಕದಲ್ಲಿ ಮತ್ತೆ ಬರ ಘೋಷಣೆ? | Karnataka Drought News 2026 | ₹22,500 Crop Compensation
▶︎

ಕರ್ನಾಟಕದಲ್ಲಿ ಮತ್ತೆ ಬರ ಘೋಷಣೆ? | Karnataka Drought News 2026 | ₹22,500 Crop Compensation

ಮಳಿ ವಟ್ಟ ಬರವಲ್ದ ಹನಿ | ಮನಮುಟ್ಟುವ ರೈತ ಗೀತೆ | Kannada Farmer Song | New Kannada Folk Song 2026
▶︎

ಮಳಿ ವಟ್ಟ ಬರವಲ್ದ ಹನಿ | ಮನಮುಟ್ಟುವ ರೈತ ಗೀತೆ | Kannada Farmer Song | New Kannada Folk Song 2026

ಗುದ್ದಪ್ಪ ಗೌಡ||Gudppa Gowda
▶︎

ಗುದ್ದಪ್ಪ ಗೌಡ||Gudppa Gowda

ಮಹಾಜ್ಞಾನಿ ಅಮ್ಮ ಅಜ್ಜಿಯ ಜ್ಞಾನ ಕೇಳಿ ಅದ್ಭುತ ಹೊಟ್ಟೆ ಬುತ್ತಿ ಗಿಂತ ನೆತ್ತಿ ಬುತ್ತಿಯ ಶ್ರೇಷ್ಠ #viral #village
▶︎

ಮಹಾಜ್ಞಾನಿ ಅಮ್ಮ ಅಜ್ಜಿಯ ಜ್ಞಾನ ಕೇಳಿ ಅದ್ಭುತ ಹೊಟ್ಟೆ ಬುತ್ತಿ ಗಿಂತ ನೆತ್ತಿ ಬುತ್ತಿಯ ಶ್ರೇಷ್ಠ #viral #village

Mukhyamantri Chandru Interview | Bannada Hejje |ಬೇಗ ಶೂಟಿಂಗ್‌ ಬಂದ್ರೆ  ಒದಾಕ್ಬಿಡ್ತೀನಿ ಅಂತ ಬೈತಿದ್ದ ನಂಗೆ
▶︎

Mukhyamantri Chandru Interview | Bannada Hejje |ಬೇಗ ಶೂಟಿಂಗ್‌ ಬಂದ್ರೆ ಒದಾಕ್ಬಿಡ್ತೀನಿ ಅಂತ ಬೈತಿದ್ದ ನಂಗೆ

ವಿಪಕ್ಷಗಳ ದಿಕ್ಕು ತಪ್ಪಿಸಿದ ಮೋದಿ ಶಾ ತಂತ್ರಗಾರಿಕೆ ! ವಿಪಕ್ಷಗಳಿಗೆ ಕಾದಿದೆ ದೊಡ್ಡ ಶಾಕ್ ! ಬರ್ತಿದೆ ಬಿಗ್ ಬಿಲ್ !
▶︎

ವಿಪಕ್ಷಗಳ ದಿಕ್ಕು ತಪ್ಪಿಸಿದ ಮೋದಿ ಶಾ ತಂತ್ರಗಾರಿಕೆ ! ವಿಪಕ್ಷಗಳಿಗೆ ಕಾದಿದೆ ದೊಡ್ಡ ಶಾಕ್ ! ಬರ್ತಿದೆ ಬಿಗ್ ಬಿಲ್ !

India's Debt Crosses ₹75 Lakh Crore? RBI Data Sparks Big Debate | Modi Government Explained
▶︎

India's Debt Crosses ₹75 Lakh Crore? RBI Data Sparks Big Debate | Modi Government Explained

ಕಲಬುರಗಿ : ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಶಾಸಕ ಬಸವರಾಜ್‌ ಮತ್ತಿಮಡು ಆಕ್ರೋಶ
▶︎

ಕಲಬುರಗಿ : ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಶಾಸಕ ಬಸವರಾಜ್‌ ಮತ್ತಿಮಡು ಆಕ್ರೋಶ

ಇನ್ನೆರಡು ದಿನದಲ್ಲಿ ರೈತರಿಗೆ ಬರ ಪರಿಹಾರ ಬಿಡುಗಡೆ ; ಕೃಷ್ಣ ಬೈರೇಗೌಡ | Vijay Karnataka
▶︎

ಇನ್ನೆರಡು ದಿನದಲ್ಲಿ ರೈತರಿಗೆ ಬರ ಪರಿಹಾರ ಬಿಡುಗಡೆ ; ಕೃಷ್ಣ ಬೈರೇಗೌಡ | Vijay Karnataka

"ಸರ್ಕಾರ ಬೆಳೆ ವಿಮೆ ಕೊಡ್ಬೇಕು, ಬರಗಾಲ ಘೋಷಣೆ ಮಾಡಬೇಕು" | Hubballi
▶︎

"ಸರ್ಕಾರ ಬೆಳೆ ವಿಮೆ ಕೊಡ್ಬೇಕು, ಬರಗಾಲ ಘೋಷಣೆ ಮಾಡಬೇಕು" | Hubballi

ಮೋಸಗಾರ್ತಿ ಕನ್ನಡ ಕಿರುಚಿತ್ರ ದುರ್ಗಪ್ಪ ಕಂಬಳಿ ಯೂಟ್ಯೂಬ್ ಚಾನೆಲ್
▶︎

ಮೋಸಗಾರ್ತಿ ಕನ್ನಡ ಕಿರುಚಿತ್ರ ದುರ್ಗಪ್ಪ ಕಂಬಳಿ ಯೂಟ್ಯೂಬ್ ಚಾನೆಲ್

ಕಲಬುರಗಿ : ಜಿಲ್ಲೆಯನ್ನ ಬರಗಾಲ ಘೋಷಣೆ ಮಾಡಿ.ರೈತರ ಸಂಪೂರ್ಣ ಸಾಲಮನ್ನ ಮಾಡಿ ಎಂದು ಆಗ್ರಹಿಸಿ ಪ್ರತಿಭಟನೆ
▶︎

ಕಲಬುರಗಿ : ಜಿಲ್ಲೆಯನ್ನ ಬರಗಾಲ ಘೋಷಣೆ ಮಾಡಿ.ರೈತರ ಸಂಪೂರ್ಣ ಸಾಲಮನ್ನ ಮಾಡಿ ಎಂದು ಆಗ್ರಹಿಸಿ ಪ್ರತಿಭಟನೆ

ಕರ್ನಾಟಕ ರೈತರ ಕೃಷಿ ಸಾಲ ಮನ್ನಾ, ಬರ ಘೋಷಣೆ? | DK Shivakumar BIG Update | Karnataka Drought News
▶︎

ಕರ್ನಾಟಕ ರೈತರ ಕೃಷಿ ಸಾಲ ಮನ್ನಾ, ಬರ ಘೋಷಣೆ? | DK Shivakumar BIG Update | Karnataka Drought News

Mumbai Lata Bai - ಅವಳು ಚಿಕ್ಕಮ್ಮ, ಅವನು ಅಳಿಯ | ಕಬ್ಬಿನ ಗದ್ದೆಯಲ್ಲಿ ಶ.ವ | ಚಿರತೆ ಕೊ0ದ ಕಥೆ ಕಟ್ಟಿದ ಪಾಪಿ
▶︎

Mumbai Lata Bai - ಅವಳು ಚಿಕ್ಕಮ್ಮ, ಅವನು ಅಳಿಯ | ಕಬ್ಬಿನ ಗದ್ದೆಯಲ್ಲಿ ಶ.ವ | ಚಿರತೆ ಕೊ0ದ ಕಥೆ ಕಟ್ಟಿದ ಪಾಪಿ