Nammamma Sharade | Sharade Bhakthi Songs | Swara prastara | Dasara Padagalu | @MusicInKannada

ನಮ್ಮಮ್ಮ ಶಾರದೆ ಉಮಾಮಹೇಶ್ವರಿ | ನಿಮ್ಮೊಳಗಿಹನಾರಮ್ಮಾ | ಕಮ್ಮಗೋಲನ ವೈರಿಸುತನಾದ ಸೊಂಡಿಲ | ಹೆಮ್ಮೆಯ ಗಣನಾಥನೇ ಕಾಣಮ್ಮ || ನಮ್ಮಮ್ಮ || ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ | ಕೋರೆದಾಡೆಯನಾರಮ್ಮಾ | ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ | ಧೀರ ತಾ ಗಣನಾಥನೇ ಕಾಣಮ್ಮ || ನಮ್ಮಮ್ಮ || ಉಟ್ಟಪಟ್ಟೆಯ ಬಿಗಿದುಟ್ಟ ಚೆಲ್ಲಣದ | ದಿಟ್ಟ ತಾ ನಿವನಾರಮ್ಮ | ಪಟ್ಟದ ರಾಣಿ ಪಾರ್ವತಿಯ ಕುಮಾರನು | ಹೊಟ್ಟೆಯ ಗಣನಾಥನೇ ಕಾಣಮ್ಮ || ನಮ್ಮಮ್ಮ || ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ | ಆ ಭಾಷಿಗನಿವನಾರಮ್ಮ | ಲೇಸಾಗಿ ಜನರ ಸಲಹುವ ಕಾಗಿನೆಲೆಯಾದಿ | ಕೇಶವ ದಾಸ ಕಾಣೆ ಅಮ್ಮಯ್ಯ || ನಮ್ಮಮ್ಮ || ರಚನೆ : ಕನಕದಾಸರು ರಾಗ : ಹಂಸಧ್ವನಿ ತಾಳ : ಆದಿತಾಳ ಆರೋಹಣ : ಸ ರಿ೨ ಗ೩ ಪ ನಿ೩ ಸ ಅವರೋಹಣ : ಸ ನಿ೩ ಪ ಗ೩ ರಿ ಸ ನಮ್ಮಮ್ಮಶಾರದೆ ಉಮಾ ಮಹೇಶ್ವರಿ .... ಕನಕದಾಸ ವಿರಚಿತ ಗಣಪತಿ ವರ್ಣನೆಯ ಜನಪ್ರಿಯ ದಾಸರಪದ. ವಿದ್ಯಾಧಿದೇವತೆ ಸರಸ್ವತಿ ಮತ್ತು ಮಾತೆ ಪಾರ್ವತಿದೇವಿಯ ಅಂಶಗಳನ್ನು ಹೊಂದಿರುವ ಗಣೇಶನ ನಾನಾ ವರ್ಣನೆಗಳನ್ನು ಉಲ್ಲೇಖಿಸುತ್ತಾ ಮುಗ್ಧತೆಯಿಂದ ಪ್ರಶ್ನಿಸುವ ವಿಶಿಷ್ಟ ರೀತಿಯ ಸಾಹಿತ್ಯದ ಈ ದಾಸರಪದ, ಗಣಪತಿ ಕುರಿತ ಮುದ್ದಿನ ಭಕ್ತಿಗೀತೆಯಾಗಿ ಎಲ್ಲರ ಮನ ಪ್ರಫುಲ್ಲಿತಗೊಳಿಸುತ್ತದೆ. ಹಂಸಧ್ವನಿರಾಗ ದಲ್ಲಿ ಸ್ವರ ಸಂಯೋಜನೆಗೊಂಡ ಈ ದಾಸರಪದ, ಅಷ್ಟೇ ವಿಶಿಷ್ಟವಾಗಿ ಸಂಗೀತ ಹಾಗೂ ಭಕ್ತಿಯಲ್ಲಿ ತನ್ಮಯತೆ ತುಂಬುವಂತೆ ಮಾಡುತ್ತದೆ. ವಿಡಿಯೋ ಭಾಗಗಳು: 1. ಸಾಹಿತ್ಯದೊಂದಿಗೆ : 1:50 2.ವಿಶೇಷ ಮಾಹಿತಿ : 6:12 3. ಸಾಹಿತ್ಯ - ಸ್ವರ ವಿವರಣೆ : 7:53 4. ಸ್ವರಗಳೊಂದಿಗೆ : 15:27 ರಚನಾಕಾರರ ಸಂಕ್ಷಿಪ್ತಮಾಹಿತಿ : ಶ್ರೀ ಕನಕದಾಸರು ೧೫-೧೬ ನೆಯ ಶತಮಾನದ ಕರ್ನಾಟಕದ ಪ್ರಮುಖ ಹರಿದಾಸರಲ್ಲಿ ಒಬ್ಬರು. ಸಂಗೀತ ಪಿತಾಮಹ ಶ್ರೀ ಪುರಂದರದಾಸರಂತೆ ಭಕ್ತಿ- ತತ್ವ -ಕೀರ್ತನ ಸಾಹಿತ್ಯದ ಮೂಲಕ ಕರ್ನಾಟಕದಲ್ಲಿ ಸಂಗೀತ ಪಸರಿಸುವಂತೆ, ಬೆಳೆಯುವಂತೆ ಮಾಡಿದ ಹರಿದಾಸ ಶ್ರೇಷ್ಠರು. ಕಾಗಿನೆಲೆ ಆದಿಕೇಶವ ಅಂಕಿತ ನಾಮದಿಂದ ಗುರುತಿಸಲ್ಪಡುವ ಇವರು ಶ್ರೀ ವ್ಯಾಸರಾಯರ ಶಿಷ್ಯರಾಗಿ ಮಧ್ವ ತತ್ವಶಾಸ್ತ್ರವನ್ನುಕಲಿತರು. ಮುಂದೆ ಕನ್ನಡ ಭಾಷೆಯ ಸುಪ್ರಸಿದ್ಧ ಕೀರ್ತನಕಾರರು ಎಂಬ ಹೆಗ್ಗಳಿಕೆ ಪಡೆದರು.ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು, ಪುರಂದರದಾಸರಂತೆ ಶ್ರೀ ಕೃಷ್ಣನ ಭಕ್ತರು. ಆದ್ದರಿಂದ ಈ ದಾಸದ್ವಯರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಎಂದು ಕರೆಯುತ್ತಾರೆ. ತಿಮ್ಮಪ್ಪನಾಯಕ ಎಂಬ ಮೂಲ ಹೆಸರಿನ ಇವರು ೧೫೦೮ ರಲ್ಲಿ ಜನಿಸಿದ್ದು ಹಾವೇರಿ ಜಿಲ್ಲೆಯ, ಶಿಗ್ಗಾಂವಿ ತಾಲೂಕಿನ, ಕಾಗಿನೆಲೆಯ ಬಾಡ ಗ್ರಾಮದಲ್ಲಿ. ತಂದೆ ಬೀರಪ್ಪ ನಾಯಕ ಮತ್ತು ತಾಯಿ ಬಚ್ಚಮ್ಮ. ಕನಕದಾಸರು ಮೊದಲು ದಂಡನಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಯುದ್ದವೊಂದರ ಪರಿಣಾಮದಿಂದ ವೈರಾಗ್ಯ ಹೊಂದಿ, ಹರಿದಾಸರಾದರಂತೆ. ಕನ್ನಡ ವ್ಯಾಕರಣ ತಜ್ಞರಾದ ಕನಕದಾಸರು 300ಕ್ಕೂ ಹೆಚ್ಚು ಕೀರ್ತನೆಗಳು ಅಲ್ಲದೇ ಅನೇಕ ಸುಳಾದಿಗಳು, ಉಗಾಭೋಗಗಳನ್ನು ರಚಿಸಿದ್ದಾರೆ. ಅವರ ಇತರ ಕಾವ್ಯಗಳು: 1. ಮೋಹನತರಂಗಿಣಿ 2. ನಳಚರಿತ್ರೆ 3. ರಾಮಧಾನ್ಯ ಚರಿತೆ 4. ಹರಿಭಕ್ತಿಸಾರ 5. ನೃಸಿಂಹಸ್ತವ ಕುರುಬ ಕುಲಕ್ಕೆ ಸೇರಿದ ಕನಕದಾಸರನ್ನು ಉಡುಪಿಯ ಶ್ರೀಕೃಷ್ಣ ದೇವಸ್ಥಾನ ಪ್ರವೇಶ ನಿಷೇಧಿಸಿದಾಗ, ದೇವಸ್ಥಾನದ ಹಿಂಭಾಗದಲ್ಲಿ ನಿಂತು ಭಕ್ತಿಯಿಂದ ಹಾಡಿದರಂತೆ. ಶ್ರೀಕೃಷ್ಣನ ಮೂರ್ತಿ ಇವರತ್ತ ತಿರುಗಿ ಶ್ರೀಕೃಷ್ಣ ದರ್ಶನ ವಾಯಿತಂತೆ. ಈಗಲೂ ಉಡುಪಿಯ ಶ್ರೀಕೃಷ್ಣ ದೇವಸ್ಥಾನದಲ್ಲಿ ಕನಕದಾಸರು ದರ್ಶನ ಪಡೆದರು ಎನ್ನಲಾದ, ಹಿಂಭಾಗದ ಗೋಡೆಯಲ್ಲಿ ಸಣ್ಣ ಕಿಟಕಿಯಂತಿರುವ, 'ಕನಕನ ಕಿಂಡಿ' ಎಂದೇ ಕರೆಯಲ್ಪಡುವ ರಂಧ್ರವನ್ನು ಕಾಣಬಹುದು. @musicinkannada playlist links : ಸಂಗೀತ ಪಾಠಗಳು    • Introduction to Carnatic music | Sapta swa...   ಗೀತೆಗಳು (ಸಂಗೀತ ಪಾಠಗಳು)    • Lambodara Lakumikara | Purandaradasa | Pil...   ಸ್ವರಪ್ರಸ್ತಾರ    • ಗಜಮುಖನೆ ಗಣಪತಿಯೇ ನಿನಗೆ ವಂದನೆ | Gajamukhane ...   ವಚನಗಳು    • Vachanadalli Naamaamrutha tumbi | Basavann...   ದಾಸರಪದಗಳು    • Aladeleya mele malagida | Dasara  Padagalu...   ಭಕ್ತಿಗೀತೆಗಳು    • Shankara gurudeva | Kannada Devotional son...   ದೇಶಭಕ್ತಿಗೀತೆಗಳು /ನಾಡಭಕ್ತಿಗೀತೆಗಳು    • Jaya Bharati | ಜಯ ಭಾರತಿ | Patriotic song |...   #Sharadedayetoride #Ammabaramma #ivaleveenapaani #bhagyadaLakshmibaramma #munisutarave #ಪಾಲಿಸೆಮ್ಮಮುದ್ದುಶಾರದೆ #Aartisong #ದೇವಿಹಾಡುಗಳು #musicinkannadaswara #devisongsinkannada #navratridevisongskannada #ದೇವಿಆರತಿಹಾಡು #Swaraprastara #Musicinkannadaswara #nammammasharade #jagadambe #ಜಯಅಂಬಾಜಗದಂಬಾ #ಜಗದಂಬೆದೇವೀಭವಾನಿ #Swaraprastara #@MusicInKannada #Navaratridevisong #ಆರತಿಹಾಡು #Ammabaramma #illayarajasong #ದೇವಿಹಾಡುಗಳು

Ivale veena paani | ಇವಳೇ ವೀಣಾಪಾಣಿ | Swara prastara | @MusicInKannada
▶︎

Ivale veena paani | ಇವಳೇ ವೀಣಾಪಾಣಿ | Swara prastara | @MusicInKannada

ನಮ್ಮಮ್ಮ ಶಾರದೆ | ಹಾರ್ಮೋನಿಯಂ ಸ್ವರ | ಭಕ್ತಿ ಗೀತೆ | Nammamma Sharade | Harmonium Swara | Devotional Songs
▶︎

ನಮ್ಮಮ್ಮ ಶಾರದೆ | ಹಾರ್ಮೋನಿಯಂ ಸ್ವರ | ಭಕ್ತಿ ಗೀತೆ | Nammamma Sharade | Harmonium Swara | Devotional Songs

ಅಧಿಕ ಮಾಸದ ಭಜನೆ ಹಾಡುಗಳ ಸಮರ್ಪಣೆ
▶︎

ಅಧಿಕ ಮಾಸದ ಭಜನೆ ಹಾಡುಗಳ ಸಮರ್ಪಣೆ

ಕೋವಿಡ್‌ಗೆ ಅಮೆರಿಕ ಕಾರಣ: ವರದಿ | Isreal-Lebanon | Trump | Iran-US | Suttu Jagattu | Masth Magaa | Amar
▶︎

ಕೋವಿಡ್‌ಗೆ ಅಮೆರಿಕ ಕಾರಣ: ವರದಿ | Isreal-Lebanon | Trump | Iran-US | Suttu Jagattu | Masth Magaa | Amar

২০টি ভুলে যাওয়া বাঙালি খাবার, যেগুলো দাদা-দাদীরা ওষুধ হিসেবে খেতেন | Part 1
▶︎

২০টি ভুলে যাওয়া বাঙালি খাবার, যেগুলো দাদা-দাদীরা ওষুধ হিসেবে খেতেন | Part 1

ಗಮಕ ವಾಚನ / ಸಂಗೀತ ಶಿಕ್ಷಣದ ರೀತಿಯಲ್ಲಿ ಸ್ವರ ಪ್ರಸ್ತಾರದೊಡನೆ ಕಲಿಯುವ ವಿಧಾನ - ಡಾ॥ಮಂಜುನಾಥ್‌.ಎಂಎನ್‌ಮೃೆಸೂರು.
▶︎

ಗಮಕ ವಾಚನ / ಸಂಗೀತ ಶಿಕ್ಷಣದ ರೀತಿಯಲ್ಲಿ ಸ್ವರ ಪ್ರಸ್ತಾರದೊಡನೆ ಕಲಿಯುವ ವಿಧಾನ - ಡಾ॥ಮಂಜುನಾಥ್‌.ಎಂಎನ್‌ಮೃೆಸೂರು.

ಕೋಡಪದವು ಹಾಸ್ಯ 😂 YAKSHAGANA COMEDY 😂 DINESH KODAPADAVU 😂 BAPPANADU MELA | D MANOHAR KUMAR
▶︎

ಕೋಡಪದವು ಹಾಸ್ಯ 😂 YAKSHAGANA COMEDY 😂 DINESH KODAPADAVU 😂 BAPPANADU MELA | D MANOHAR KUMAR

Story of Pareekshita - ಪರೀಕ್ಷಿತನ ಕಥೆ | Vid. Ananthakrishna Acharya | Mahabharata
▶︎

Story of Pareekshita - ಪರೀಕ್ಷಿತನ ಕಥೆ | Vid. Ananthakrishna Acharya | Mahabharata

Haalalladaru Haaku | Dr.Rajkumar | Devatha Manushya | Swara prastara
▶︎

Haalalladaru Haaku | Dr.Rajkumar | Devatha Manushya | Swara prastara

ಪ್ರಿಯಾಂಕ ಖರ್ಗೆ ಅವರೇ, ಆರ್‌ಎಸ್‌ಎಸ್‌ ನೋಂದಣಿ ಬೇಕೇ?
▶︎

ಪ್ರಿಯಾಂಕ ಖರ್ಗೆ ಅವರೇ, ಆರ್‌ಎಸ್‌ಎಸ್‌ ನೋಂದಣಿ ಬೇಕೇ?

Ep-579| ಎಷ್ಟೋ ವರ್ಷಗಳ ಬಳಿಕ ಕುಂತಿ-ಪಾಂಡವರ ಭೇಟಿ|  The Secrets of  Mahabharata
▶︎

Ep-579| ಎಷ್ಟೋ ವರ್ಷಗಳ ಬಳಿಕ ಕುಂತಿ-ಪಾಂಡವರ ಭೇಟಿ| The Secrets of Mahabharata

ಧರ್ಮಸ್ಥಳ ವಿರೋಧಿ ಸಂಚಿನಲ್ಲಿ ಇದ್ರಾ ಪ್ರಕಾಶ್ ರಾಜ್? | News Hour | Prakash Raj | Dharmasthala Case
▶︎

ಧರ್ಮಸ್ಥಳ ವಿರೋಧಿ ಸಂಚಿನಲ್ಲಿ ಇದ್ರಾ ಪ್ರಕಾಶ್ ರಾಜ್? | News Hour | Prakash Raj | Dharmasthala Case

Kaanadanthe Maayavadanu | ಕಾಣದಂತೆ ಮಾಯವಾದನು | Puneeth Rajkumar | Swara prastara | Music in kannada
▶︎

Kaanadanthe Maayavadanu | ಕಾಣದಂತೆ ಮಾಯವಾದನು | Puneeth Rajkumar | Swara prastara | Music in kannada

15 ವರ್ಷಗಳ ಬಳಿಕ ಮರಳಿ ಬಂದ ಭೂಮಿ! ಒಣಗಿದ ಕೆರೆಯ ಕೆಳಗೆ ಹೂತಿದ್ದ ರಕ್ತದ ರಹಸ್ಯ ಬಯಲು..! 😱 | Temple Mystery Story
▶︎

15 ವರ್ಷಗಳ ಬಳಿಕ ಮರಳಿ ಬಂದ ಭೂಮಿ! ಒಣಗಿದ ಕೆರೆಯ ಕೆಳಗೆ ಹೂತಿದ್ದ ರಕ್ತದ ರಹಸ್ಯ ಬಯಲು..! 😱 | Temple Mystery Story

Daily Singing exercises for An Awesome Voice|ಮಂದ್ರಸಪ್ತಕ ಅಭ್ಯಾಸ Kharaj Practice in KannadaTutorial 11
▶︎

Daily Singing exercises for An Awesome Voice|ಮಂದ್ರಸಪ್ತಕ ಅಭ್ಯಾಸ Kharaj Practice in KannadaTutorial 11

ಭಾಗ್ಯದಾ ಲಕ್ಷ್ಮೀ ಬಾರಮ್ಮ | ಶುಕ್ರದೆಸೆ ತರುವ ಭಕ್ತಿ ಸಂಭ್ರಮ | ಬಡತನಕ್ಕೆ ಗುಡ್ ಬೈ ಹೇಳಿ ಸಿರಿತನಕ್ಕಾಗಿ ಇಂದೇ ಕೇಳಿ
▶︎

ಭಾಗ್ಯದಾ ಲಕ್ಷ್ಮೀ ಬಾರಮ್ಮ | ಶುಕ್ರದೆಸೆ ತರುವ ಭಕ್ತಿ ಸಂಭ್ರಮ | ಬಡತನಕ್ಕೆ ಗುಡ್ ಬೈ ಹೇಳಿ ಸಿರಿತನಕ್ಕಾಗಿ ಇಂದೇ ಕೇಳಿ

Endaro Mahanubhavulu | Ranjani-Gayatri | Tyagaraja's Path to Liberation Through Music
▶︎

Endaro Mahanubhavulu | Ranjani-Gayatri | Tyagaraja's Path to Liberation Through Music

Toredu Jeevisabahude | Kanakadasaru | ತೊರೆದು ಜೀವಿಸಬಹುದೇ ಹರಿ | swara prastara | @musicinkannada
▶︎

Toredu Jeevisabahude | Kanakadasaru | ತೊರೆದು ಜೀವಿಸಬಹುದೇ ಹರಿ | swara prastara | @musicinkannada

Abhang Mela | Sivasri Skandaprasad | Pandari Kshetra Abhangs | Mayuram Radhakalyanam |Abhang Medley
▶︎

Abhang Mela | Sivasri Skandaprasad | Pandari Kshetra Abhangs | Mayuram Radhakalyanam |Abhang Medley

Sitar for Dopamine Reset | Indian Classical Music for Mindfulness
▶︎

Sitar for Dopamine Reset | Indian Classical Music for Mindfulness