ಎಲ್ಲಾ ಸಮಸ್ಯೆಗೆ ಇಲ್ಲಿದೆ ಪರಿಹಾರ- ಲಕ್ಷಾಂತರ ಜನರು ಈ ದೇವಾಲಯಕ್ಕೆ ಭೇಟಿ ನೀಡಿ ಕೋಟ್ಯಾಧಿಪತಿಯಾಗಿದ್ದಾರೆ
ಬೇಡಿದ್ದನ್ನು ಕರುಣಿಸೋ ಲಕ್ಷ್ಮೀ ನರಸಿಂಹ ಸ್ವಾಮಿ ಕ್ಷೇತ್ರ- ಎಲ್ಲಾ ಸಮಸ್ಯೆಗೆ ಇಲ್ಲಿದೆ ಪರಿಹಾರ. ಎಲ್ಲಾ ಸಮಸ್ಯೆಗೆ ಇಲ್ಲಿದೆ ಪರಿಹಾರ- ಲಕ್ಷಾಂತರ ಜನರು ಈ ದೇವಾಲಯಕ್ಕೆ ಭೇಟಿ ನೀಡಿ ಕೋಟ್ಯಾಧಿಪತಿಯಾಗಿದ್ದಾರೆ Address: Shri Champakadhama Swamy Temple Bannerghatta ಸ್ಥಳ ಪುರಾಣ ಕರ್ನಾಟಕ ರಾಜ್ಯದ ಬೃಹತ್ ಬೆಂಗಳೂರು ಮಹಾನಗರದ ಹೃದಯ ಭಾಗದಲ್ಲಿರುವ ಬಳೇಪೇಟೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವು 250 ವರ್ಷಗಳ ಪುರಾತನ ಪ್ರಸಿದ್ಧಿ ಹೊಂದಿದ ದೇವಾಲಯವಾಗಿರುತ್ತದೆ. ದೇವಾಲಯ ಅಕ್ಕಪಕ್ಕ ಭಾಗದಲ್ಲಿ ಹೂ ಮಾರುವವರು ಹೆಚ್ಚಾಗಿ ವಾಸಿಸುತ್ತಿದ್ದು, ಆ ಜನಾಂಗದವರಿಗೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯು ಮನೆಯ ದೇವರು ಆಗಿರುತ್ತದೆ. ಆ ಜನಾಂಗದ ಮುಖಂಡರಾದ ಶ್ರೀ ಘೋರಿ ನರಸಿಂಹಯ್ಯ ಎಂಬುವವರಿಗೆ ಹಿಂದೆ ಸ್ಪಪ್ನದಲ್ಲಿ ಕಾಣಿಸಿಕೊಂಡು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಮೂರ್ತಿಯು ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವಂತಹ ಬನ್ನೇರುಘಟ್ಟದಲ್ಲಿರುವ ಸುವರ್ಣಮುಖಿ ಕೊಳದಲ್ಲಿ ಇರುವುದಾಗಿ ಗೋಚರಿಸಿತು. ಆಗ ಜನಾಂಗದವರೆಲ್ಲರೂ ಎತ್ತಿನ ಗಾಡಿಯನ್ನು ಕಟ್ಟಿಕೊಂಡು ಹೋಗಿ ನೋಡಿದಾಗ ಅಲ್ಲಿ ಅವರಿಗೆ ಆಶ್ಚರ್ಯವಾಗಿ ಒಂದೇ ರೀತಿಯ ಎರಡು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಅವಳಿ-ಜವಳಿ ವಿಗ್ರಹಗಳು ಕಾಣಿಸಿಕೊಂಡು, ಒಂದು ವಿಗ್ರಹವನ್ನು ಬನ್ನೇರುಘಟ್ಟದ ಬೆಟ್ಟದ ಮೇಲೆ ಪ್ರತಿಷ್ಠಾಪಿಸಿ ಮತ್ತೊಂದು ವಿಗ್ರಹವನ್ನು ತೆಗೆದುಕೊಂಡು ಬಂದು ಬೆಂಗಳೂರಿನ ಬಳೇಪೇಟೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ತುಂಬಾ ಹಳೆಯದಾದ ದೇವಾಲಯವನ್ನು ಕರ್ನಾಟಕ ಸರ್ಕಾರ ಹಾಗೂ ಭಕ್ತಾಧಿಗಳ ಸಹಾಯದಿಂದ 1992 ರ ವೈಶಾಖ ಮಾಸದಲ್ಲಿ ಜೀರ್ಣೋದ್ಧಾರ ಮಾಡಿ ನೂತನವಾಗಿ ಶ್ರೀ ಕೋದಂಡರಾಮ ಸ್ವಾಮಿ ಸನ್ನಿಧಿ, ಶ್ರೀ ಮಹಾಲಕ್ಷ್ಮಿ ಸನ್ನಿಧಿ, ನೂತನ ಧ್ವಜ ಸ್ಥಂಭ, ವಿಮಾನ ಗೋಪುರಗಳು, ಮುಖ ಮಂಟಪಗಳು, ರಾಜಗೋಪುರ ಮಾಡಲಾಯಿತು. ಅನಂತರ 2015 ರಲ್ಲಿ ಶ್ರೀ ಪಿಳ್ಳಾಂಜನೇಯ ಸ್ವಾಮಿ ದೇವಾಲಯದ ವಿಮಾನ ಗೋಪುರ ಮುಖ ಮಂಟಪ ಜೀರ್ಣೋದ್ಧಾರಗೊಂಡಿರುತ್ತದೆ. ಈ ದೇವಾಲಯದಲ್ಲಿ ವೈಶಾಖ ಮಾಸ ಶುದ್ಧ ತ್ರಯೋದಶಿ, ಚಥುರ್ದಶಿ, ಪೌರ್ಣಮಿ, ಸ್ವಾತಿ ನಕ್ಷತ್ರ ಮಿಲನದಲ್ಲಿ ಶ್ರೀಯವರ ಬ್ರಹ್ಮರಥೋತ್ಸವ, ತಿರುಪ್ಪಾವಡಿ, ಲಕ್ಷಾರ್ಚನೆ ಸೇವೆಗಳು ಸುಮಾರು ಒಂದು ತಿಂಗಳ ವಿಶೇಷ ಪೂಜೆಗಳು ನಡೆಯುತ್ತದೆ. ಈ ದೇವಾಲಯದಲ್ಲಿ ಭಾದ್ರಪದ ಮಾಸದ ಶ್ರವಣ ನಕ್ಷತ್ರದಲ್ಲಿ ಪವಿತ್ರೋತ್ಸವ ಕಾರ್ಯಕ್ರಮಗಳು ಶ್ರೀ ವೈಖಾನಸಾಗಮೋಕ್ತ ಪ್ರಕಾರವಾಗಿ ಎಲ್ಲಾ ಪೂಜೆ ಪುರಸ್ಕಾರಗಳು ನಡೆಯುತ್ತದೆ. 1994ರಲ್ಲಿ ಈ ದೇವಾಲಯದ ಉತ್ಸವ ಮೂರ್ತಿ ಸನ್ನಿಧಿ (ಆಯನ್ ಮಹಲ್) ಕನ್ನಡಿ ಮಂಟಪ ಜೀರ್ಣೋದ್ಧಾರಗೊಂಡು “ನಿತ್ಯ ಕಲ್ಯಾಣಂ ಪಚ್ಚತೋರಣಂ” ಎಂಬಂತೆ ನಿತ್ಯ ಕಲ್ಯಾಣೋತ್ಸವ, ಪ್ರಾಕಾರೋತ್ಸವ ಸೇವೆಗಳು ನಡೆಯುತ್ತವೆ. ಇಲ್ಲಿ ಭಕ್ತಾಧಿಗಳಿಗೆ ವಿವಾಹದಲ್ಲಿ ವಿಳಂಬವಾಗುತ್ತಿದ್ದರೆ ಅಂತಹವರಿಗೆ ಇಲ್ಲಿ ಕಲ್ಯಾಣ ದಾರ (ಕಂಕಣ) ಕಟ್ಟಿಸಿಕೊಂಡರೆ ವಿವಾಹ ಪ್ರಕ್ರಿಯೆ ಸುಲಭವಾಗಿ ಆಗುತ್ತಿರುವುದಾಗಿ ಭಕ್ತರ ನಂಬಿಕೆ ಹಾಗೂ ಕುಜ ದೋಷ, ಚರ್ಮ ದೋಷ ಇರುವವರಿಗೆ ಸಹ ಈ ದೇವರ ಸೇವೆ ಮಾಡಿದರೆ ಪರಿಹಾರವಾಗುತ್ತದೆ ಎಂಬ ಪ್ರತೀತಿ ಇದೆ. ಈ ದೇವಾಲಯದಲ್ಲಿ ಪ್ರತಿ ನಿತ್ಯ ಪಂಚಾಮೃತ ಅಭಿಷೇಕ, ನಿತ್ಯ ಪ್ರಸಾದ ಸೇವೆಗಳು ನಡೆಯುತ್ತದೆ. ಚಂದ್ರಮಾನ ಯುಗಾದಿ, ಶ್ರೀರಾಮನವಮಿ, ರಥ ಸಪ್ತಮಿ, ಶ್ರಾವಣ ಮಾಸ, ನವರಾತ್ರಿ, ಕಾರ್ತೀಕ ಮಾಸ ವಿಷ್ಣು ದೀಪ, ಹನುಮಂತ ಜಯಂತಿ, ಧನುರ್ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ಪ್ರತೀ ತಿಂಗಳು ಸ್ವಾತಿ ನಕ್ಷತ್ರದಂದು ಶ್ರೀ ಸ್ವಾಮಿಯವರಿಗೆ ವಿಶೇಷ ಅಲಂಕಾರ, ಪ್ರಾಕಾರೋತ್ಸವ ಸೇವೆಗಳು ನಡೆಯುತ್ತದೆ

Chichvarkin Saves Putin | Vitaly Portnikov

ನರಸಿಂಹ ಜಯಂತಿ 2023 | ಕರ್ನಾಟಕದ ಪ್ರಮುಖ 10 ನರಸಿಂಹ ಕ್ಷೇತ್ರಗಳು | Narasimha Jayanti 2023

Fall asleep while I build a town into a city (from nothing)

ನಿಮ್ಮನ್ನ ಬೆಚ್ಚಿ ಬೀಳಿಸುತ್ತೆ ಈ ದೇವಾಲಯದ ರಹಸ್ಯ/ ಈ ದಿನ ದೇವರ ದರ್ಶನ ಮಾಡಿದ್ರೆ ಕೋಟ್ಯಾಧಿಪತಿ ಆಗೋದು ಗ್ಯಾರಂಟಿ.

Bengaluruसेसिर्फ 1घंटे दूर ये चमत्कारी मंदिर!😍 ChampakadhamaTempleBannerghatta #ChampakadhamaTemple

🦁 ಸಿಂಹಗಳ ಜೊತೆ ನಡೆದ್ವಿ! | Lion Hunting in South Africa?🇿🇦

ಜೀವನದಲ್ಲಿ ತುಂಬಾ ಕಷ್ಟ ಇದ್ದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ Sri Varadarajeshwara Shivalaya || By Lion TV

48 ದಿನಗಳಲ್ಲಿ ಕಷ್ಟಗಳನ್ನು ದೂರ ಮಾಡುವ ತ್ರಿಮೂರ್ತಿಗಳು ನೆಲೆಸಿರುವಂತಹ ಪುಣ್ಯಕ್ಷೇತ್ರದ ಪರಿಚಯ

ಈ ಸ್ವಾಮಿಯ ಮುಂದೆ ಇರುವ ಯಂತ್ರಕ್ಕೆ ರೋಮಾಂಚಕ ಶಕ್ತಿ ಇದೆ!

Sri Lakshmi Narasimha Swamy Temple Attiguppe | ಬೆಂಗಳೂರಲ್ಲಿ ಸತ್ಯ ಹೇಳುವ ಏಕೈಕ ಗುಡಿ | SSS Dharma Vahini

ಈ ದೇವಿಗೆ ಬಳೆ ಹರಕೆ ಮಾಡಿಕೊಂಡರೆ 100% ನೆರವೇರುತ್ತೆ | Vadanbailu Sri Padmavathi Temple | Mr and Mrs Kamath

'ಅಘೋರಿ'ಯೊಬ್ರು ಈ ಶಿವ ದೇವಾಲಯಕ್ಕೆ ಬಂದು '13ನೇ ಜ್ಯೋತಿರ್ಲಿಂಗ' ಆಗುತ್ತೆ ಅಂದ್ರು!? ಎಲ್ಲಿದೆ? ಹೇಗಿದೆ? | Heggadde

Yadagiri Gutta | Five Powerful Narasimha Temple | Temple Meals | Hyderabad Sightseeing

देवशयनी एकादशी व्रत कथा | devsayni Ekadashi vrat ktha #vrat #एकादशी #ekadshi एकादशी व्रत स्पेशल

ಮದುವೆ, ಮಕ್ಕಳ ಭಾಗ್ಯ ಇಲ್ಲಿ ಬಂದರೆ ನಿಶ್ಚಿತ..!

2 ವರ್ಷದಿಂದ ಮದುವೆ ಆಗಿರ್ಲಿಲ್ಲ ಈ ದೇವಸ್ಥಾನಕ್ಕೆ ಬಂದ್ಮೇಲೆ ಮದುವೆ ಆಯ್ತು kashi vishwanath temple yelahanka

ರಾಯರ ಕೃಪೆ ಇರುವ ಬೆಂಗಳೂರು ಮಂತ್ರಾಲಯ | ಖಚಿತ ಫಲ ನೀಡುವ ಪವಿತ್ರ ಸ್ಥಳ

EP-1 ನಿಮ್ಮ ಕೋರಿಕೆಗಳನ್ನು ಖಂಡಿತ ಅನುಗ್ರಹಿಸುತ್ತಾರೆ ! ಈ ತ್ರಿಕೋನ ಕ್ಷೇತ್ರ ಇರೋದಾದ್ರೂ ಎಲ್ಲಿ?

ಇದೊಂದು ಪರಿಹಾರ ಮಾಡಿಕೊಳ್ಳಿ! ದಾರಿದ್ರ್ಯ ದೂರವಾಗಿ ಸಿರಿವಂತರಾಗುತ್ತೀರಿ⁉️ AcharyaArunPrakash

