ಎಲ್ಲಾ ಸಮಸ್ಯೆಗೆ ಇಲ್ಲಿದೆ ಪರಿಹಾರ- ಲಕ್ಷಾಂತರ ಜನರು ಈ ದೇವಾಲಯಕ್ಕೆ ಭೇಟಿ ನೀಡಿ ಕೋಟ್ಯಾಧಿಪತಿಯಾಗಿದ್ದಾರೆ
ಬೇಡಿದ್ದನ್ನು ಕರುಣಿಸೋ ಲಕ್ಷ್ಮೀ ನರಸಿಂಹ ಸ್ವಾಮಿ ಕ್ಷೇತ್ರ- ಎಲ್ಲಾ ಸಮಸ್ಯೆಗೆ ಇಲ್ಲಿದೆ ಪರಿಹಾರ. ಎಲ್ಲಾ ಸಮಸ್ಯೆಗೆ ಇಲ್ಲಿದೆ ಪರಿಹಾರ- ಲಕ್ಷಾಂತರ ಜನರು ಈ ದೇವಾಲಯಕ್ಕೆ ಭೇಟಿ ನೀಡಿ ಕೋಟ್ಯಾಧಿಪತಿಯಾಗಿದ್ದಾರೆ Address: Shri Champakadhama Swamy Temple Bannerghatta ಸ್ಥಳ ಪುರಾಣ ಕರ್ನಾಟಕ ರಾಜ್ಯದ ಬೃಹತ್ ಬೆಂಗಳೂರು ಮಹಾನಗರದ ಹೃದಯ ಭಾಗದಲ್ಲಿರುವ ಬಳೇಪೇಟೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವು 250 ವರ್ಷಗಳ ಪುರಾತನ ಪ್ರಸಿದ್ಧಿ ಹೊಂದಿದ ದೇವಾಲಯವಾಗಿರುತ್ತದೆ. ದೇವಾಲಯ ಅಕ್ಕಪಕ್ಕ ಭಾಗದಲ್ಲಿ ಹೂ ಮಾರುವವರು ಹೆಚ್ಚಾಗಿ ವಾಸಿಸುತ್ತಿದ್ದು, ಆ ಜನಾಂಗದವರಿಗೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯು ಮನೆಯ ದೇವರು ಆಗಿರುತ್ತದೆ. ಆ ಜನಾಂಗದ ಮುಖಂಡರಾದ ಶ್ರೀ ಘೋರಿ ನರಸಿಂಹಯ್ಯ ಎಂಬುವವರಿಗೆ ಹಿಂದೆ ಸ್ಪಪ್ನದಲ್ಲಿ ಕಾಣಿಸಿಕೊಂಡು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಮೂರ್ತಿಯು ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವಂತಹ ಬನ್ನೇರುಘಟ್ಟದಲ್ಲಿರುವ ಸುವರ್ಣಮುಖಿ ಕೊಳದಲ್ಲಿ ಇರುವುದಾಗಿ ಗೋಚರಿಸಿತು. ಆಗ ಜನಾಂಗದವರೆಲ್ಲರೂ ಎತ್ತಿನ ಗಾಡಿಯನ್ನು ಕಟ್ಟಿಕೊಂಡು ಹೋಗಿ ನೋಡಿದಾಗ ಅಲ್ಲಿ ಅವರಿಗೆ ಆಶ್ಚರ್ಯವಾಗಿ ಒಂದೇ ರೀತಿಯ ಎರಡು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಅವಳಿ-ಜವಳಿ ವಿಗ್ರಹಗಳು ಕಾಣಿಸಿಕೊಂಡು, ಒಂದು ವಿಗ್ರಹವನ್ನು ಬನ್ನೇರುಘಟ್ಟದ ಬೆಟ್ಟದ ಮೇಲೆ ಪ್ರತಿಷ್ಠಾಪಿಸಿ ಮತ್ತೊಂದು ವಿಗ್ರಹವನ್ನು ತೆಗೆದುಕೊಂಡು ಬಂದು ಬೆಂಗಳೂರಿನ ಬಳೇಪೇಟೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ತುಂಬಾ ಹಳೆಯದಾದ ದೇವಾಲಯವನ್ನು ಕರ್ನಾಟಕ ಸರ್ಕಾರ ಹಾಗೂ ಭಕ್ತಾಧಿಗಳ ಸಹಾಯದಿಂದ 1992 ರ ವೈಶಾಖ ಮಾಸದಲ್ಲಿ ಜೀರ್ಣೋದ್ಧಾರ ಮಾಡಿ ನೂತನವಾಗಿ ಶ್ರೀ ಕೋದಂಡರಾಮ ಸ್ವಾಮಿ ಸನ್ನಿಧಿ, ಶ್ರೀ ಮಹಾಲಕ್ಷ್ಮಿ ಸನ್ನಿಧಿ, ನೂತನ ಧ್ವಜ ಸ್ಥಂಭ, ವಿಮಾನ ಗೋಪುರಗಳು, ಮುಖ ಮಂಟಪಗಳು, ರಾಜಗೋಪುರ ಮಾಡಲಾಯಿತು. ಅನಂತರ 2015 ರಲ್ಲಿ ಶ್ರೀ ಪಿಳ್ಳಾಂಜನೇಯ ಸ್ವಾಮಿ ದೇವಾಲಯದ ವಿಮಾನ ಗೋಪುರ ಮುಖ ಮಂಟಪ ಜೀರ್ಣೋದ್ಧಾರಗೊಂಡಿರುತ್ತದೆ. ಈ ದೇವಾಲಯದಲ್ಲಿ ವೈಶಾಖ ಮಾಸ ಶುದ್ಧ ತ್ರಯೋದಶಿ, ಚಥುರ್ದಶಿ, ಪೌರ್ಣಮಿ, ಸ್ವಾತಿ ನಕ್ಷತ್ರ ಮಿಲನದಲ್ಲಿ ಶ್ರೀಯವರ ಬ್ರಹ್ಮರಥೋತ್ಸವ, ತಿರುಪ್ಪಾವಡಿ, ಲಕ್ಷಾರ್ಚನೆ ಸೇವೆಗಳು ಸುಮಾರು ಒಂದು ತಿಂಗಳ ವಿಶೇಷ ಪೂಜೆಗಳು ನಡೆಯುತ್ತದೆ. ಈ ದೇವಾಲಯದಲ್ಲಿ ಭಾದ್ರಪದ ಮಾಸದ ಶ್ರವಣ ನಕ್ಷತ್ರದಲ್ಲಿ ಪವಿತ್ರೋತ್ಸವ ಕಾರ್ಯಕ್ರಮಗಳು ಶ್ರೀ ವೈಖಾನಸಾಗಮೋಕ್ತ ಪ್ರಕಾರವಾಗಿ ಎಲ್ಲಾ ಪೂಜೆ ಪುರಸ್ಕಾರಗಳು ನಡೆಯುತ್ತದೆ. 1994ರಲ್ಲಿ ಈ ದೇವಾಲಯದ ಉತ್ಸವ ಮೂರ್ತಿ ಸನ್ನಿಧಿ (ಆಯನ್ ಮಹಲ್) ಕನ್ನಡಿ ಮಂಟಪ ಜೀರ್ಣೋದ್ಧಾರಗೊಂಡು “ನಿತ್ಯ ಕಲ್ಯಾಣಂ ಪಚ್ಚತೋರಣಂ” ಎಂಬಂತೆ ನಿತ್ಯ ಕಲ್ಯಾಣೋತ್ಸವ, ಪ್ರಾಕಾರೋತ್ಸವ ಸೇವೆಗಳು ನಡೆಯುತ್ತವೆ. ಇಲ್ಲಿ ಭಕ್ತಾಧಿಗಳಿಗೆ ವಿವಾಹದಲ್ಲಿ ವಿಳಂಬವಾಗುತ್ತಿದ್ದರೆ ಅಂತಹವರಿಗೆ ಇಲ್ಲಿ ಕಲ್ಯಾಣ ದಾರ (ಕಂಕಣ) ಕಟ್ಟಿಸಿಕೊಂಡರೆ ವಿವಾಹ ಪ್ರಕ್ರಿಯೆ ಸುಲಭವಾಗಿ ಆಗುತ್ತಿರುವುದಾಗಿ ಭಕ್ತರ ನಂಬಿಕೆ ಹಾಗೂ ಕುಜ ದೋಷ, ಚರ್ಮ ದೋಷ ಇರುವವರಿಗೆ ಸಹ ಈ ದೇವರ ಸೇವೆ ಮಾಡಿದರೆ ಪರಿಹಾರವಾಗುತ್ತದೆ ಎಂಬ ಪ್ರತೀತಿ ಇದೆ. ಈ ದೇವಾಲಯದಲ್ಲಿ ಪ್ರತಿ ನಿತ್ಯ ಪಂಚಾಮೃತ ಅಭಿಷೇಕ, ನಿತ್ಯ ಪ್ರಸಾದ ಸೇವೆಗಳು ನಡೆಯುತ್ತದೆ. ಚಂದ್ರಮಾನ ಯುಗಾದಿ, ಶ್ರೀರಾಮನವಮಿ, ರಥ ಸಪ್ತಮಿ, ಶ್ರಾವಣ ಮಾಸ, ನವರಾತ್ರಿ, ಕಾರ್ತೀಕ ಮಾಸ ವಿಷ್ಣು ದೀಪ, ಹನುಮಂತ ಜಯಂತಿ, ಧನುರ್ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ಪ್ರತೀ ತಿಂಗಳು ಸ್ವಾತಿ ನಕ್ಷತ್ರದಂದು ಶ್ರೀ ಸ್ವಾಮಿಯವರಿಗೆ ವಿಶೇಷ ಅಲಂಕಾರ, ಪ್ರಾಕಾರೋತ್ಸವ ಸೇವೆಗಳು ನಡೆಯುತ್ತದೆ

'ರಾಯರ ಮೃತ್ತಿಕೆ ಪವಾಡ' - ಸತ್ಯ ಘಟನೆ ಬಿಚ್ಚಿಟ್ರು💥| Raghavendra Swami Story Epi-56 | Heggadde Studio

Maddur Hole Anjaneya Temple | 1.25ರೂ. ಹರೆಕೆ ಕಟ್ಟಿದರೆ ಸಾಕು, ನಿಮ್ಮ ಕೆಲಸಗಳು ಸಕ್ಸಸ್...!

ತಿರುಪತಿಗೆ ಹೋಗಲು ಆಗದವರು ಇಲ್ಲಿಗೆ ಹೋದರೆ ಸಾಕು

Ahobilam Navanarasimha Temple

ನರಸಿಂಹ ಜಯಂತಿ 2023 | ಕರ್ನಾಟಕದ ಪ್ರಮುಖ 10 ನರಸಿಂಹ ಕ್ಷೇತ್ರಗಳು | Narasimha Jayanti 2023

ಕೊಡಚಾದ್ರಿ ಬೆಟ್ಟಗಳ ರಹಸ್ಯ? ವಿಜ್ಞಾನಿಗಳು ಹೇಳಿದ್ದು ನಿಜಕ್ಕೂ ಅಚ್ಚರಿ| NAMMA NAMBIKE |

ಕೈಲಾಸಗಿರಿ ⛰️😲 || Man made cave Temple 🛕🔥..

ತೊರವಿ ಲಕ್ಷ್ಮೀ ನರಸಿಂಹನ ರಹಸ್ಯ! ಆದಿಲ್ ಶಾಹಿ ದೊರೆಗೆ ಕಾಡಿದ್ದು ಅದೆಂಥ ಪರಿ| NAMMA NAMBIKE |

ಇಲ್ಲಿ 5 ಹೆಡೆಯ ನಾಗದೇವರ ಸಂಚಾರ ಇದೆ

ಇದೊಂದು ಪರಿಹಾರ ಮಾಡಿಕೊಳ್ಳಿ! ದಾರಿದ್ರ್ಯ ದೂರವಾಗಿ ಸಿರಿವಂತರಾಗುತ್ತೀರಿ⁉️ AcharyaArunPrakash

'ಅಘೋರಿ'ಯೊಬ್ರು ಈ ಶಿವ ದೇವಾಲಯಕ್ಕೆ ಬಂದು '13ನೇ ಜ್ಯೋತಿರ್ಲಿಂಗ' ಆಗುತ್ತೆ ಅಂದ್ರು!? ಎಲ್ಲಿದೆ? ಹೇಗಿದೆ? | Heggadde

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಕದಿರಿ LakshmiNarasimhaSwamy temple #Kadiri @daivadarshanavlogs

Gavi Gangadhareshwarನನ್ನು ಸ್ಪರ್ಶಿಸದ ಸೂರ್ಯರಶ್ಮಿ.. ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದೇನು?| #TV9D

ನಿಮ್ಮನ್ನ ಬೆಚ್ಚಿ ಬೀಳಿಸುತ್ತೆ ಈ ದೇವಾಲಯದ ರಹಸ್ಯ/ ಈ ದಿನ ದೇವರ ದರ್ಶನ ಮಾಡಿದ್ರೆ ಕೋಟ್ಯಾಧಿಪತಿ ಆಗೋದು ಗ್ಯಾರಂಟಿ.

ಮದುವೆ ಆಗದವರು ಇಲ್ಲಿಗೆ ಬಂದರೆ ಐದೇ ವಾರದೊಳಗೆ ಮದುವೆ ನಿಶ್ಚಯವಾಗುವುದಂತೆ..!

ಬೆಂಗಳೂರಲ್ಲಿ ಇರೋ ಈ Hidden Place ನ ನೀವೇನಾದ್ರು ನೋಡಿದಿರಾ 🫶 |Most Visited Place n Bengaluru |

2 ವರ್ಷದಿಂದ ಮದುವೆ ಆಗಿರ್ಲಿಲ್ಲ ಈ ದೇವಸ್ಥಾನಕ್ಕೆ ಬಂದ್ಮೇಲೆ ಮದುವೆ ಆಯ್ತು kashi vishwanath temple yelahanka

Secret temple at Channapatna

ನವರಾತ್ರಿ ವಿಶೇಷ | ಕರ್ನಾಟಕದ 9 ಪ್ರಸಿದ್ಧ ದೇವಿ ಆಲಯಗಳು | Top 9 Devi temples of Karnataka

