#ದಲಿತ ಮಹಿಳೆ ಶಾಸಕಿಯಾಗಿದ್ದು ತಪ್ಪಾ?: ಶಾಸಕಿ ನಯನ ಮೋಟಮ್ಮಮೂಡಿಗೆರೆ ಕಾಂಗ್ರೆಸ್ ನಯನ ನಿಯೋಗದಿಂದ ವರಿಷ್ಠರ ಬೇಟಿ.
#ದಲಿತ ಮಹಿಳೆ ಶಾಸಕಿಯಾಗಿದ್ದು ತಪ್ಪಾ?: ಶಾಸಕಿ ನಯನ ಮೋಟಮ್ಮ ಮೂಡಿಗೆರೆ ಕಾಂಗ್ರೆಸ್ ನಲ್ಲಿ ಅಂತರಿಕ ಕಲಹ; ನಯನ ನಿಯೋಗದಿಂದ ವರಿಷ್ಠರ ಬೇಟಿ. ಬೆಂಗಳೂರು: ಮಹಿಳೆಯಾಗಿ, ದಲಿತ ಶಾಸಕಿಯಾಗಿ ಆಯ್ಕೆಯಾಗಿರುವುದು ತಪ್ಪು ಎನ್ನುವಂತೆ ಕೆಲ ಸ್ವಕ್ಷೇತ್ರದ, ಸ್ವಪಕ್ಷೀಯ ಮುಖಂಡರು ನನ್ನ ವಿರುದ್ಧ ಇಲ್ಲ ಸಲ್ಲದ ಹೇಳಿಕೆಗಳನ್ನು, ಆರೋಪಗಳನ್ನು ಮಾಡುತ್ತಿದ್ದಾರೆ. ಇದನ್ನು ವರಿಷ್ಠರ ಗಮನಕ್ಕೆ ತರಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಸ್ಪಷ್ಟಪಡಿಸಿದರು. ಶುಕ್ರವಾರ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಮತ್ತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆಯಿಂದಲೂ ನನ್ನ ವಿರುದ್ಧ ಸ್ವಪಕ್ಷೀಯ ಮುಖಂಡರು ಕುತಂತ್ರ ನಡೆಸುತ್ತಿದ್ದು, ಕೆಲ ಬಾರಿ ವರಿಷ್ಠರಿಗೆ ದೂರನ್ನು ಸಹ ನೀಡಿದ್ದಾರೆ. 2018ರ ಚುನಾವಣೆ ಮತ್ತು ಅದರ ಹಿಂದಿನ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಕಡಿಮೆಯಾಗಿತ್ತು. ಆದರೆ ನಾನು ನಿರಂತರ ಹೋರಾಟ ನಡೆಸಿ ಬೂತ್ ಮಟ್ಟದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತಗೆದುಕೊಂಡು ಜಯಭೇರಿ ಬಾರಿಸುವಂತೆ ಮಾಡಿದ್ದೇನೆ ಎಂದರು. ಯಾರೋ ಒಬ್ಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನನ್ನು ಹೊರತುಪಡಿಸಿದರೆ. ಬೇರೆಲ್ಲ ಬ್ಲಾಕ್ ಅಧ್ಯಕ್ಷರುಗಳು ನನ್ನ ಜೊತೆ ಇದ್ದಾರೆ. ನಮ್ಮ ಕಾರ್ಯಕರ್ತರು ಹಾಗೂ ಬೆಂಬಲಿಗರು ಆರ್ ಎಸ್ ಎಸ್ ಮತ್ತು ಬಜರಂಗದಳದ ಜೊತೆಗೆ ಗುರುತಿಸಿಕೊಂಡಿದ್ದಾರೆ ಎಂದು ಆರೋಪಿಸುವವರು ಸುಮಾರು 30 ವರ್ಷದಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಏಕೆ ಸಾಧ್ಯವಾಗಲಿಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಕುತಂತ್ರಿಗಳನ್ನು ಜೊತೆಯಲ್ಲಿ ಇಟ್ಟುಕೊಂಡು ಕೆಲಸ ಮಾಡಲು ಹೇಗೆ ಸಾಧ್ಯ. ಈ ಎಲ್ಲಾ ವಿಚಾರಗಳನ್ನು ವರಿಷ್ಠರ ಗಮನಕ್ಕೆ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು. ಹಿರಿಯರು ಕಿರಿಯರು ಎಂಬ ಭೇದಭಾವವಿಲ್ಲ: ಪಕ್ಷದಲ್ಲಿ ಹಿರಿಯರು ಕಿರಿಯರು ಎಂಬ ಭೇದಭಾವವಿಲ್ಲ. ಯಾರು ಪಕ್ಷಕ್ಕಾಗಿ ದುಡಿಯುತ್ತಾರೋ ಅಂತವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಮ್ಮ ತಾಯಿಯ ಕಾಲದಲ್ಲಿ ಇದ್ದ ಕೆಲ ಸಮಕಾಲಿನ ಮುಖಂಡರು ಕೇವಲ ಒಂದು ಹೋಬಳಿಗೆ ಮಾತ್ರ ಸೀಮಿತರಾಗಿದ್ದು, ಅವರ ಮಾತನ್ನೇ ಅನುಸರಿಸಬೇಕು ಎನ್ನುವ ಧೋರಣೆ ಸರಿಯಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವವರ ಮಾತನ್ನು ಸಹ ಕೇಳಬೇಕು ಎನ್ನುವುದು ನನ್ನ ಅಭಿಪ್ರಾಯವಾಗಿದೆ. ನನ್ನ ವಿರುದ್ಧ ಕೆಲ ದಿನಗಳ ಹಿಂದೆ ದೂರನ್ನು ನೀಡಿರುವವರು ಕೆಲವೇ ಕೆಲವು ಜನರಷ್ಟೇ ಎಂದು ಮಾಹಿತಿ ನೀಡಿದರು.

When Animals Surprise Photographers in the Sweetest Way! 😍

BBMP Operation Footpath: ಬಡವರಿಗೆ ಒಂದು ನ್ಯಾಯ, ಪ್ರಭಾವಿಗಳಿಗೆ ಒಂದು ನ್ಯಾಯವೇ? | LRC | Suvarna News

Big Bulletin | RSSಗೆ ಪ್ರಿಯಾಂಕ್ ಖರ್ಗೆ ವಾರ್ನಿಂಗ್ ಏನು..? | HR Ranganath | July 06, 2026

How Japan Built the Impossible 400 km Great Wall that You've Never Heard Of

Krishna Byre Gowda | ಫುಟ್ಪಾತ್ಗಳನ್ನ ಆಕ್ರಮಿಸಿಕೊಂಡವ್ರೆ, ಅಲ್ಲೇ ಪಾರ್ಕಿಂಗ್ ಮಾಡ್ತಾರೆ.. | N18V

Amazing Toilet Bowl Manufacturing Process | How Toilet Bowls Are Made in Factory

LIVE : ಸಚಿವ ಕೃಷ್ಣಬೈರೇಗೌಡ ಮಹತ್ವದ ಸುದ್ದಿಗೋಷ್ಠಿ | Krishna Byre Gowda | Press Meet | @newsfirstkannada

Voter ID Scam: ಚೌಟ್ರಿಯಲ್ಲಿ ಕುಳಿತು ವೋಟರ್ ಲಿಸ್ಟ್ ಮಾಡೋದು ಯಾವ ನ್ಯಾಯ? | Kannada Discussion | Suvarna News

ಎಲೆಕ್ಷನ್ಗೆ ನಿಲ್ಲೋಕೆ ರೆಡಿಯಾದ್ರಾ ಉಪೇಂದ್ರ..? | Upendra | Prajakeeya | Kirik Keerthi

Special Interview : SSLC, PUC ಫೇಲು.. ಬುಲೆಟ್ ಬೈಕು.. ಸ್ವಾರಸ್ಯಕರ ಪುಟಗಳು! | LR Shivarame Gowda

ಬಿಜೆಪಿಯಲ್ಲಿ ಎಲ್ಲವೂ ಸರಿ ಇದ್ಯಾ? ಪ್ರಿಯಾಂಕ್ ಖರ್ಗೆ ಬಗ್ಗೆ ಏನಂತೀರಿ..? | CT Ravi | kirik Keerthi

LIVE | Rain Fury: Fatalities in Mumbai, Highway Closed! | ಮಹಾಮಳೆಗೆ ತತ್ತರಿಸಿದ ಮುಂಬೈ! | Rain Alert

“You’ll Never Be Like Us.” Until 500KG Happened 🔥

Big Bulletin With HR Ranganath | ದೇಣಿಗೆಯಾಗಿ ಕೊಟ್ಟಿದ್ದ ಬೆಳ್ಳಿ, ಬಂಗಾರ ಸುರಕ್ಷಿತವಾಗಿದ್ಯಾ.?|July 06, 2026

"ದರ್ಶನ್ ಒಬ್ಬ ಕಾಮನ್ ಸೆನ್ಸ್ ಇಲ್ಲದೇ ಇರೋ ದುರಹಂಕಾರಿ!"-E15-Mukhyamantri Chandru-Kalamadhyama-Darshan Case

Rahul Gandhi Conversation with Haryana Farmers | Congress vs BJP Party | News Buzz

ಶಿವಯೋಗ ಸಮಾಧಿ ಬಗ್ಗೆ ಭಕ್ತರು ಬಿಚ್ಚಿಟ್ಟ ನಿಗೂಢ ರಹಸ್ಯ!| Dr Sri Rachoteshwar Swamiji| Gadag |Suvarna News

Once Upon a Time in the West Best Scenes 🌀 4K

Dr. Devarakonda Reddy - 12 | Krishnadevaraya from Tuluva Family? | History Explained | Lofty Land

