ಕಿತ್ತೂರು ಕೋಟೆ | KITTUR FORT | BELAGAVI
ಕಿತ್ತೂರಿನ ಇತಿಹಾಸವು ಕ್ರಿ.ಶ. ೧೫೮೬ರಿಂದಲೇ ಆರಂಭವಾಗುತ್ತದೆ. ಮೂಲತಃ ಮಲೆನಾಡಿನ ಬೇಡ ಮನೆತನದಿಂದ ಬಂದ ಮಲ್ಲ ಹೆಸರಿನ ಸೋದರರಿಬ್ಬರು ವಿಜಾಪುರದ ಆದಿಲಶಾಹಿ ಸೈನ್ಯದಲ್ಲಿ ಸೇರಿಕೊಂಡಿದ್ದರು. ಈ ಸೋದರರಲ್ಲಿ ಹಿರಿಯ ಮಲ್ಲನಿಗೆ “ ಶಮಶೇರ ಜಂಗಬಹಾದ್ದೂರ " ಎನ್ನುವ ಬಿರುದನ್ನು ಹಾಗೂ ಹುಬ್ಬಳ್ಳಿ ವಿಭಾಗದ ಸರದೇಶಮುಖಿಯನ್ನು ನೀಡಲಾಗಿತ್ತು. ವಿಜಾಪುರದ ಪತನದ ನಂತರ ಕಿತ್ತೂರು ದೇಸಾಯಿಗಳು ತಮ್ಮ ರಕ್ಷಣೆಗಾಗಿ ಅನೇಕ ಕಾಳಗಗಳನ್ನು ಎದುರಿಸ ಬೇಕಾಯಿತು. ಬ್ರಿಟಿಷರು ಭಾರತದಲ್ಲಿ ಕಾಲೂರುವ ಸಮಯದಲ್ಲಿ ಇಲ್ಲಿಯ ರಾಜಕೀಯ ಪರಿಸ್ಥಿತಿ ಬಹಳ ವಿಲಕ್ಷಣವಾಗಿತ್ತು. ಉತ್ತರ ಹಿಂದುಸ್ಥಾನದಲ್ಲಿ ಮೊಗಲ ಬಾದಶಾಹಿ ನಿರ್ಬಲವಾಗಿತ್ತು. ದಕ್ಷಿಣದಲ್ಲಿ ಸ್ವರಾಜ್ಯದ ವಿಸ್ತರಣೆಗಾಗಿ ಹೋರಾಡುತ್ತಿದ್ದ ಪೇಶವಾಯಿ, ಆಕ್ರಮಣಕಾರಿ ಧೋರಣೆಯ ಹೈದರಾಬಾದಿನ ನಿಜಾಮಶಾಹಿ ಹಾಗು ಮೈಸೂರಿನ ಹೈದರ್ ಅಲಿ ಇವರೆಲ್ಲರ ನಡುವೆ ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದ ಚಿಕ್ಕ ಪುಟ್ಟ ಪಾಳೆಗಾರರು. ಇಂತಹ ರಾಜಕೀಯ ಪರಿಸ್ಥಿತಿ ಧೂರ್ತ, ಕ್ರೂರ ಧೋರಣೆಯ ಬ್ರಿಟಿಷ ಈಸ್ಟ ಇಂಡಿಯಾ ಕಂಪನಿಗೆ ಸುವರ್ಣಾವಕಾಶವನ್ನು ಒದಗಿಸಿತ್ತು. ಇಂತಹ ಸಮಯದಲ್ಲಿ ಮಲ್ಲಸರ್ಜನ ದೊರೆಯನ್ನು ಟಿಪ್ಪು ಸುಲ್ತಾನನು ಸೆರೆ ಹಿಡಿದು ಕಪಾಲದುರ್ಗದಲ್ಲಿ ಸೆರೆಯಿಟ್ಟಿದ್ದನು. ಉಪಾಯದಿಂದ ತಪ್ಪಿಸಿಕೊಂಡ ದೊರೆ ೧೮೦೩ರಲ್ಲಿ ವೆಲ್ಲೆಸ್ಲಿಗೆ ನೆರವು ನೀಡಿ ಕಿತ್ತೂರನ್ನು ಭದ್ರ ಗೊಳಿಸಿದ್ದನು. ೧೮೦೯ರಲ್ಲಿ ಪೇಶವೆಯವರಿಗೆ ರೂ.೧,೭೫,೦೦೦ ಕೊಟ್ಟು, ಅವರ ಸ್ಥಾನಿಕ ಕಾವಲು ಸೈನ್ಯದ ಖರ್ಚನ್ನು ನೀಡಿ ಅವರಿಂದ ಸನದು ಪಡೆದಿದ್ದನು. ಆದರೆ ಪೇಶ್ವೆಯವರು ವಿಶ್ವಾಸಘಾತ ಮಾಡಿ ಮಲ್ಲಸರ್ಜನನ್ನು ಸೆರೆ ಹಿಡಿದು ೩ ವರ್ಷ ಕಾಲ ಪುಣೆಯಲ್ಲಿಟ್ಟರು. ೧೮೧೬ರಲ್ಲಿ ಬಿಡುಗಡೆ ಹೊಂದಿ ಮರಳುವಾಗ ದಾರಿಯಲ್ಲಿಯೆ ಮಲ್ಲಸರ್ಜನು ಕೊನೆಯುಸಿರನ್ನೆಳೆದ. ಅವನ ಮಗ ಶಿವಲಿಂಗ ರುದ್ರಸರ್ಜನು ಮರಾಠ ಹಾಗು ಟಿಪ್ಪು ಸುಲ್ತಾನ ಇವರ ಕಿರಿಕಿರಿ ತಪ್ಪಿಸಲು ಬ್ರಿಟಿಷರ ಜೊತೆಗೆ ಸ್ನೇಹದಿಂದಿದ್ದ. ಆದರೆ ಅದೆಂತಹ ಸ್ನೇಹವೆಂದರೆ! ಪ್ರತಿ ವರ್ಷ ರೂ. ೧,೭೦,೦೦೦ ಕಾಣಿಕೆ ಕೊಡುವ ಕರಾರಿನ ಮೇಲೆ ಬ್ರಿಟಿಷರು ಈ ದೊರೆಗೆ ಸನ್ನದು ನೀಡಿದರು. ಶಿವಲಿಂಗರುದ್ರ ಸರ್ಜನು ೧೧ ಸೆಪ್ಟೆಂಬರ ೧೮೨೪ ರಂದು ವಾರಸುದಾರರಿಲ್ಲದೆ ತೀರಿಕೊಂಡನು. ಈ ಎಳೆವಯಸ್ಸಿನ ದೊರೆಯ ಹೆಂಡತಿ ವೀರಮ್ಮನಿಗೆ ಆಗ ೧೧ ವರ್ಷ ವಯಸ್ಸು! ಮರಣದ ಪೂರ್ವದಲ್ಲಿ ಶಿವಲಿಂಗರುದ್ರಸರ್ಜ ಮಾಸ್ತಮರಡಿ ಗೌಡರ ಪುತ್ರ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಂಡ. ಈ ದತ್ತಕವನ್ನು ಧಾರವಾಡದ ಕಲೆಕ್ಟರ ಥ್ಯಾಕರೆ ತಿರಸ್ಕರಿಸುತ್ತಾನೆ. ೧೩ ಸೆಪ್ಟೆಂಬರ ೧೮೨೪ ರಂದು ಥ್ಯಾಕರೆ ಸ್ವತಃ ಕಿತ್ತೂರಿಗೆ ಬಂದು ಕಂಪನಿ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೂ ತಾತ್ಕಾಲಿಕವಾಗಿ ಮಲ್ಲಪ್ಪಶೆಟ್ಟಿ ಹಾಗು ಹಾವೇರಿ ವೆಂಕಟರಾವ ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡುತ್ತಾನೆ ಹಾಗು ಕಿತ್ತೂರಿನ ಭಂಡಾರಕ್ಕೆ ಬೀಗ ಮುದ್ರೆ ಹಾಕುತ್ತಾನೆ. ಆದರೆ ಇದನ್ನು ಕೆಚ್ಚೆದೆಯಿಂದ ಎದುರಿಸಿದವಳು ಮೃತ ಶಿವಲಿಂಗರುದ್ರಸರ್ಜನ ತಾಯಿ ಚೆನ್ನಮ್ಮ! #kitturu #kitturfort #ranichannamma #karnataka #kannada #sancharijs #kannadavlogs #kittur #kitturutsav #kings of Karnataka #bailhongal #belagavi #travelvlog #kannadanewvlog #newkannadayoutuber #kitturufort2022 #placesinbelagavi #history #freedomfighter #kalmath #kalamadhyam #forts #bijapurfort #historyofindia #sangollirayanna #sangollirayannaplace #rayannadjsongs #sangolli

'ಕಿತ್ತೂರು ಚೆನ್ನಮ್ಮನ ಅರಮನೆ ದರ್ಬಾರ್ ಹಾಲ್, ಅಡುಗೆ ಮನೆ, ಊಟದ ಮನೆ, ಸೀಕ್ರೆಟ್ ರೂಮ್"-Ep13-Kittur Palace Tour

ಲಕ್ಷ್ಮಕ್ಕನ ಹಾವಳಿ..! | ಪ್ರಿಯಾಂಕ್ ಖರ್ಗೆ ಬುಡಕ್ಕೇ ಬಿತ್ತು ಬೆಂಕಿ.!| Priyank Kharge | @birbalkannada

S Janaki Passes Away: ಇಂದು ಮೈಸೂರಿನಲ್ಲಿ ಮಹಾರಾಜ ಕಾಲೇಜ್ ಮೈದಾನದಲ್ಲಿ ಎಸ್.ಜಾನಕಿ ಅಂತ್ಯಸಂಸ್ಕಾರ

ಶಂಕರ್ನಾಗ್ ಆಕ್ಸಿಡೆಂಟ್ ಆದ ದಿನ ಆಗಿದ್ದೇನು..? | Sihi Kahi Chandru | Kirik Keerthi

ಕಿತ್ತೂರು ಹಾಳಾಗಿದ್ದು ಆವತ್ತು ನಡೆದ ಆ ಒಂದು ಘಟನೆ.. ಕಿತ್ತೂರಿನ ಇತಿಹಾಸವನ್ನೇ ಬದಲಾಯಿಸಿತು! Kittur | Chennamma

"1 ಸಾವಿರ ವರ್ಷ ಹಿಂದಿನ ಕೊಪ್ಪಳದ 7 ಸುತ್ತಿನ ಕೋಟೆ ಟೂರ್!"-E01-Koppal Fort-Karnataka History-Kalamadhyama

😮ಮಾದಪ್ಪ ಹಾವು ಚೇಳು 😱ಗಳನ್ನು ಹೂವು ಮಾಡಿದ ಪವಾಡ ಸ್ಥಳ

ಜಾನಕಮ್ಮಗೆ ಕಾಡಿತ್ತು ಮಗನ ಸಾವು! ಮಕ್ಕಳು ಮೊಮ್ಮಕ್ಕಳು ಯಾರು?@MediaHouseKannada90

ಕರ್ನಾಟಕದ 2ನೇ ಮೊಹರಂ ಸವದತ್ತಿ! ⚔️

Dharwad district short film (ಧಾರವಾಡದ ಜಿಲ್ಲೆಯ ಕಿರು ಚಿತ್ರ)

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್| Kranthiveera Sangolli Rayanna Rock Garden

HOME TOUR-ಬೆಂಗಳೂರಿನ 20 ಕೋಟಿ ಬೆಲೆಯ ಮಂತ್ರಿ ಎಂ.ಪಿ ಪ್ರಕಾಶ್ ಮರದ ಬಂಗಲೆ!-E04-MP Prakash-Veena Mahantesh

ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್ | ಶೌರ್ಯಭೂಮಿ | EP 1 | Sangolli Rayanna Rock Garden #belgaum#belgavi

SIRಗೆ ಸೆಡ್ಡು ಹೊಡೆದ DK ಸರ್ಕಾರ ! ಈಜಿಯಾಗಿ ಸಿಗುತ್ತೆ ಶಾಶ್ವತ ನಿವಾಸಿ ಪತ್ರ ! ಎಲ್ಲೂ ಇಲ್ಲದ ಪಾಲಿಸಿ ಇಲ್ಯಾಕೆ ?

🚨 ಗಾನ ಕೋಗಿಲೆ ಎಸ್ ಜಾನಕಿ ಇನ್ನಿಲ್ಲ! ಅವರು ಸದಾ 'ಬಿಳಿ ಸೀರೆ' ಉಡುತ್ತಿದ್ದರ ಹಿಂದಿನ ರಹಸ್ಯವೇನು? ಪದ್ಮಭೂಷಣ ಕತೆ |

ಮಾಸ್ತಮರ್ಡಿ ಗೌಡ್ರು ಮನೆ ವಂಶಸ್ಥರು - ದತ್ತುಮಗ ಮಲ್ಲಸರ್ಜ ಕೊನೆಗೆ ಏನಾದ್ರು?| Mastamardi| Kittur History -78

"ವಜ್ರಮುನಿ ನಾನು ಕುಡೀತಾ ಕೂತಿದ್ದಾಗ ಒಂದು ಫೋನ್ ಕಾಲ್ ಬಂತು!"-E53-Mukhyamantri CHANDRU-Kalamadhyama

BASAVA BHARATHA USTAVA KANNADA

UNSEEN TIBET - The Hidden World Above the Himalayas!!

