ಶ್ರೀ ಅರುಣ್ ಯೋಗಿರಾಜ್ ರವರ ಶಿಲ್ಪಶಾಸ್ತ್ರ ಗುರುಗಳಾದ ಡಾ| ಜ್ಞಾನಾನಂದ ಗುರುಗಳ ಮುತ್ತಿನಂಥ ಮಾತು @muttinanthamathu
ಶಿಲ್ಪಕಲಾ ಪರಂಪರೆಯ ಮೂಲವಾಗಿದ್ದ ಕರ್ನಾಟಕದಲ್ಲಿ ಅದು ಕ್ಷೀಣಿಸುತ್ತಿದ್ದ ಸಮಯದಲ್ಲಿ ಶಿಲ್ಪ ಗ್ರಂಥಗಳ ಅನುವಾದ ಸಂಕಲನ ಅಧ್ಯಾಯನ ಅಧ್ಯಾಪನ ಮೂಲಕ ಶಾಸ್ತ್ರೀಯ ಶಿಲ್ಪ ಕಲೆಯು ಮತ್ತೆ ಚಿಗುರೊಡೆಯುವುದಕ್ಕೆ ಡಾಕ್ಟರ್ ಜಿ. ಜ್ಞಾನಾನಂದ ಅವರ ಕೊಡುಗೆ ಅಪಾರವಾಗಿದೆ. ಇವರು ಬ್ರಹ್ಮರ್ಷಿ ಶಿಲ್ಪ ಗುರುಕುಲಂ ನಂದಿ ಗ್ರಾಮ ಮತ್ತು ಸಾಂಪ್ರದಾಯಿಕ ಶಿಲ್ಪ ಗುರುಕುಲಗಳ ಕೇಂದ್ರ ಬೆಂಗಳೂರು ಇವುಗಳ ಮೂಲಕ ಸುಮಾರು 15 ವರ್ಷಗಳಿಂದ ಹಲವಾರು ಯುವ ಶಿಲ್ಪಿ ಸ್ಥಪತಿ ಗಳನ್ನು ಶಿಲ್ಪಕಲಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಮೈಸೂರು ಸಂಸ್ಥಾನದ ರಾಜಗುರು ಶಿಲ್ಪ ಸಿದ್ದಾಂತಿ ಶ್ರೀ ಸಿದ್ದಲಿಂಗ ಸ್ವಾಮಿಗಳ ಶಿಷ್ಯರಾದ ಶ್ರೀ ಜಿ ಶಂಕರ್ ಅವರ ಪುತ್ರರಾಗಿ 1940ರಲ್ಲಿ ಜನಿಸಿದ ಇವರು ಸಣ್ಣವರಿಂದಲೇ ಬರವಣಿಗೆ ಲೇಖನಗಳನ್ನು ರೂಢಿಸಿಕೊಂಡಿದ್ದರು. ತಮ್ಮ ಮಧ್ಯವಯಸ್ಸಿನಲ್ಲಿ ಶಿಲ್ಪ ಶಾಸ್ತ್ರಗಳ ವಿಷಯವಾಗಿ ಬರೆಯಲು ಪ್ರಾರಂಭಿಸಿದ ಇವರು ಕಶ್ಯಪ ಶಿಲ್ಪ ಶಾಸ್ತ್ರ ಬ್ರಾಹ್ಮಿಯ ಚಿತ್ರಕರ್ಮಶಾಸ್ತ್ರ ಪ್ರಸಾದ ಮಂಡನ ಅರ್ಧನಾರೀಶ್ವರ ಶಿಲ್ಪ ಮತ್ತು ಶಿಲ್ಪಿ ವಿಶ್ವಕರ್ಮದ ಹಲವು ಭಾಗಗಳು ಮುಂತಾದ ಹಲವಾರು ಬೃಹತ್ ಶಿಲ್ಪ ಗ್ರಂಥಗಳನ್ನು ಸಂಕಲಿಸಿ ಕನ್ನಡಕ್ಕೆ ಅನುವಾದಿಸಿದ್ದಾರೆ. ವಾಸ್ತುಪುರುಷ ನೆಲೆ ಹಿನ್ನೆಲೆ ಸ್ವರ್ಣ ಶಿಲ್ಪಶಾಸ್ತ್ರ ಆಲಯ ದರ್ಶನ ಶಕಪುರುಷ ಸಿದ್ದಲಿಂಗ ಸ್ವಾಮಿ ಮುಂತಾದ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಮಹಾಭಾರತದಲ್ಲಿ ಶಿಲ್ಪ ಮತ್ತು ಶಿಲ್ಪಿ ಎಂಬ ಗ್ರಂಥಕ್ಕೆ ಡಿಲೀಟ್ ಪದವಿಯನ್ನು ಪಡೆದಿದ್ದಾರೆ. ಐಜಿಎನ್ ಸಿ ಎ ಬೆಂಗಳೂರು ಇಲ್ಲಿ ಮಾರ್ಗದರ್ಶಕರಾಗಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಲ್ಲಿ ಸದಸ್ಯರಾಗಿ ಅಧ್ಯಕ್ಷರಾಗಿ ಬ್ರಹ್ಮರ್ಷಿ ಶಿಲ್ಪ ಗುರುಕುಲ ದಲ್ಲಿ ಪ್ರಾಂಶುಪಾಲರಾಗಿ ಸಾಂಪ್ರದಾಯಿಕ ಶಿಲ್ಪ ಗುರುಕುಲಗಳ ಕೇಂದ್ರ ದಲ್ಲಿ ಪ್ರಧಾನ ಗುರುಗಳಾಗಿ ಇವರು ತಮ್ಮ ಸೇವೆ ಸಲ್ಲಿಸಿದ್ದು ಶಿಲ್ಪ ಶಾಸ್ತ್ರ ಗಳಲ್ಲಿ ವಿವರಿಸಿರುವ ಕ್ರಮ ವನ್ನು ಅನುಸರಿಸಿ ಶಿಲ್ಪಗಳನ್ನು ನಿರ್ಮಿಸಬಹುದು ಎಂಬುದನ್ನು ಕರ್ನಾಟಕಕ್ಕೆ ತೋರಿಸಿಕೊಟ್ಟಿದ್ದಾರೆ. ತಮ್ಮ 81ನೇ ವಯಸ್ಸಿನಲ್ಲಿ ಇಂದಿಗೂ ಸಾಂಪ್ರದಾಯಿಕ ಶಿಲ್ಪ ಗುರುಕುಲಗಳ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ಮಾಡುತ್ತಿರುವ ಇವರು ಗುರು ಎಂಬ ಪದಕ್ಕೆ ಅನ್ವರ್ಥ ದಂತಿದ್ದಾರೆ ಶಿಲ್ಪ ತಪಸ್ವಿ , ಶಾಸ್ತ್ರಜ್ಞ ಡಾ. ಜಿ ಜ್ಞಾನಾನಂದ ಗುರುಗಳು. ಇವರ ಆಶೀರ್ವಾದ ನಮಗೆಲ್ಲರಿಗೂ ಸದಾ ಹೀಗೆ ಇರಲಿ. ಇವರೊಂದಿಗೆ ಕಳೆದ ಪ್ರತಿ ಕ್ಷಣವೂ ನನ್ನ ಜೀವನದ ಒಂದು ಅಮೂಲ್ಯ ಸಮಯವಾಗಿದೆ. ನನಗೆ ಸಮಯವನ್ನು ಕೊಟ್ಟು ನನ್ನನ್ನು ಆಶೀರ್ವದಿಸಿ ದಕ್ಕೆ ತುಂಬು ಹೃದಯದ ಧನ್ಯವಾದಗಳು ಗುರುಗಳೆ🙏. • ಮುತ್ತಿನಂಥ ಮಾತಲ್ಲಿ ಶ್ರೀ ಅರುಣ್ ಯೋಗಿರಾಜ್ 🙏 @m...

ದೇವಸ್ಥಾನದ ಕುರಿತು ಕೆಲವು ಸತ್ಯಗಳು - ಮನೆಯ ವಾಸ್ತುವೇ ದೇವರು - ನಾಗೇಂದ್ರ ಭಟ್ ಹಿತ್ಲಳ್ಳಿ - Shreeprabha Studio

ကံကြမ္မာရဲ့ ရက်စက်မှုကြောင့် အရင်လိုသီချင်း မဆိုနိုင်တော့တဲ့ ကိုမောင်

Dr Rajkumar Eating Breakfast At Gayathri House - Ade kannu kannada movie part-2

ಮದುವೆಯಾಗಿ ವರ್ಷವಾದರೂ ಸಹ ತನ್ನ ಜೊತೆ ಮಾತನಾಡದ ಗಂಡನ ಮುಂದೆ ಗೋಳಾಡಿದ ಕಲ್ಪನಾ । Eradu Kanasu Movie Part 03

Momentos de oración | Padre Martín Ávalos | Estamos orando por tus intenciones

Chikkamagaluru Food Tour | Covered 5 Famous Eateries | MonkVlogs

Best ISKCON Kirtan 2026 | Hare Krishna Hare Rama | Deep Meditation & Inner Peace

Pad Man (2018) 4K Full Hindi Movie | Akshay Kumar's Most Inspiring Film ❤️Radhika Apte, Sonam Kapoor

Mufti Police 2026 Latest Telugu Crime Thriller Full Movie |Arjun, Aishwarya Rajesh| New South Movies

Factory Secrets Revealed: The Amazing Manufacturing Processes Everyone is Watching in 2025!

ಅತ್ತಿಗೆಯ ಮೇಲೆ ಕೈ ಎತ್ತಲು ನೋಡಿದ ತಮ್ಮನನ್ನು ನೋಡಿ ಬೇಜಾರಾದ ರಾಮಣ್ಣ | Oda Huttidavaru Kannada Movie Part 04

🔴LIVE: Singappen Special Force | சிங்கப்பெண் சிறப்பு அதிரடிப்படை தொடக்க விழா -CM Vijay Speech

Momentos de oración | Padre Martín Ávalos | Estamos orando por tus intenciones

India Economy OK…But Danger Ahead? 5-State Polls में NDA 2-0 Lead? • Sriram Seshadri

Momentos de oración | Padre Martín Ávalos | Estamos orando por tus intenciones

Upanyasa by Sri Suvidyendra Teerthara

Frequency Of God 963 Hz ✨ Attract Miracles, Divine Blessings & Deep Inner Peace In Your Life

The Healing Sound Of Tibetan Zen • Eliminates All Negative Energy • Calm Mind And Body

Mother Leaves Her Son & Suffers Deeply | Ramesh Balsekar's Astonishing Answer

