D. V. Gundappa (DVG) | Noorakke Nooru Karnataka | @AiyyoShraddha | Radio Azim Premji University
On this episode of Noorakke Nooru Karnataka, the focus is on the revered Kannada writer D. V. Gundappa (DVG) and his life, only on Radio Azim Premji Universiy. Bengaluru-based scholar Shashi Kiran B N, a contributing editor of Prekshaa and an award-winning Sanskrit scholar, joins the hosts to discuss DVG’s profound contributions. Born in 1887, DVG was largely self-taught, mastering multiple languages and gaining deep knowledge in Vedic literature and Western philosophy. His celebrated works, particularly Mankuthimmanna Kagga and Marula Muniyana Kagga, distill complex ideas into simple reflections on life. Known for his humility, DVG referred to himself as a publisher rather than the author of these timeless meditations. DVG’s influence remains strong through his writings and ideals, which continue to inspire generations. ಡಿವಿಜಿ - ಕನ್ನಡಿಗರು ಪ್ರೀತಿಸುವ ಕಗ್ಗಗಳ ಹಿಂದಿರುವ ಅಸಾಧಾರಣ ವ್ಯಕ್ತಿ ಸುಧೀಶ್ ವೆಂಕಟೇಶ್ ಅವರೊಂದಿಗೆ ಶ್ರದ್ಧಾ ಜೈನ್ ಪ್ರಸ್ತುತಪಡಿಸಿದಸಂಚಿಕೆ-4 ರ ಈ ವಿಷಯವು ಕನ್ನಡದ ಮೇರು ಸಾಹಿತಿ ಡಿ ವಿಗುಂಡಪ್ಪನವರನ್ನು ಕೇಂದ್ರೀಕರಿಸಿದೆ. ಡಿವಿಜಿ ಎಂದೇಖ್ಯಾತನಾಮರಾಗಿರುವ ಇವರು ಕನ್ನಡ ಸಾಹಿತ್ಯ, ತತ್ವಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಸೇವೆ ಕುರಿತು ಪಾರಂಗತರಾಗಿದ್ದರು.ಕಗ್ಗಗಳ ಮೂಲಕ ಕನ್ನಡ ಕಾವ್ಯಲೋಕವನ್ನು ವಿಶಿಷ್ಟವಾಗಿ ಕಟ್ಟಿಕೊಟ್ಟರು.ಇಂಥ ಮಹಾನುಭಾವರ ಬಗ್ಗೆ ತಮ್ಮ ಒಳನೋಟಗಳನ್ನು ಈ ಸರಣಿಯಲ್ಲಿಹಂಚಿಕೊಂಡಿದ್ದಾರೆ ವೃತ್ತಿಯಲ್ಲಿ ಮೆಕ್ಯಾನಿಕಲ್ ಎಜಿನಿಯರ್ ಆಗಿರುವಮತ್ತು ಪ್ರವೃತ್ತಿಯಲ್ಲಿ ಅನುವಾದಕರಾಗಿರುವ ಬೆಂಗಳೂರು ಮೂಲದವಿದ್ವಾಂಸ ಶಶಿ ಕಿರಣ್ ಬಿ. ಎನ್. ಇವರು ಸಂಸ್ಕೃತದಲ್ಲಿಸೌಂದರ್ಯಶಾಸ್ತ್ರದ ಕುರಿತು ಪದವಿ ಪಡೆದ್ದಾರೆ. ಭಾರತೀಯ ಸಂಸ್ಕೃತಿಮತ್ತು ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಆನ್ಲೈನ್ ಜರ್ನಲ್ “ಪ್ರೇಕ್ಷಾ”ದಸಂಪಾದಕರೂ ಆಗಿದ್ದಾರೆ. ಸಂಸ್ಕೃತ ಅನುವಾದಕ್ಕಾಗಿ ಇವರಿಗೆ ಸಾಹಿತ್ಯಅಕಾಡೆಮಿ ಅನುವಾದ ಪ್ರಶಸ್ತಿ (2021) ಮತ್ತು ಬನ್ನಂಜೆಗೋವಿಂದಾಚಾರ್ಯ ಪ್ರಶಸ್ತಿ (2023)ಗಳು ಲಭಿಸಿವೆ. ಅಲ್ಲದೇ, ಡಿವಿಜಿಸಾರ-ಸಂಗ್ರಹ ಮತ್ತು ಡಿ ವಿ ಗುಂಡಪ್ಪ ಅವರ ಆಯ್ದ ಬರಹಗಳುಸೇರಿದಂತೆ ಅವರ ಕೆಲ ಕೃತಿಗಳನ್ನು ಸಂಪಾದಿಸಿದ್ದಾರೆ. 1887ರ ಮಾರ್ಚ್ 17 ರಂದು ಜನಿಸಿದ ಡಿವಿಜಿ ಅವರು ವೈದಿಕ ಸಾಹಿತ್ಯ, ಪಾಶ್ಚಿಮಾತ್ಯ ತತ್ವಶಾಸ್ತ್ರ ಮತ್ತು ರಾಜ್ಯಶಾಸ್ತ್ರದಲ್ಲಿ ಆಳವಾದ ಜ್ಞಾನವನ್ನುಗಳಿಸುತ್ತಲೇ ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಅನ್ನು ಕರಗತಮಾಡಿಕೊಂಡರು. ಒಟ್ಟು 60 ಪುಸ್ತಕಗಳನ್ನು ರಚಿಸಿದರು. ಉತ್ಕೃಷ್ಟವಿಚಾರಧಾರೆಗಳನ್ನು ಹೊಂದಿರುವ ಸುಮಾರು ೨೦೦ಕ್ಕೂ ಹೆಚ್ಚುಲೇಖನಗಳು ಇಂದಿಗೂಕನ್ನಡ ಸಾಹಿತ್ಯ ಮತ್ತು ಬೌದ್ಧಿಕವಲಯಗಳಲ್ಲಿ ವಿಶೇಷ ಸ್ಥಾನವನ್ನು ಕಾಯ್ದುಕೊಂಡಿವೆ. ಡಿವಿಜಿ ರಚಿಸಿದ ನಾಲ್ಕೇ ನಾಲ್ಕು ಸಾಲಿನ ಕಗ್ಗಗಳು ಇಂದಿನವರೆಗೂಪ್ರಸ್ತುತತೆ ಪಡೆದುಕೊಳ್ಳಲು ಕಾರಣ ಅದರಲ್ಲಿ ಅಡಗಿರುವ ಸಂಕೀರ್ಣತೆ, ತಾತ್ವಿಕತೆ ಮತ್ತು ವೈಚಾರಿಕ ಹೊಳಹು.ಇವೆಲ್ಲವನ್ನು ಮಾರ್ಮಿಕವಾಗಿಕಟ್ಟಿಕೊಟ್ಟ ಬಗೆ ನಿಜಕ್ಕೂ ಗಮನಾರ್ಹ. ಇವರ ಶ್ರೇಷ್ಠ ಕೃತಿ ಮಂಕುತಿಮ್ಮನಕಗ್ಗ900 ಕ್ಕೂ ಹೆಚ್ಚು ಕಗ್ಗಗಳನ್ನು ಒಳಗೊಂಡಿದೆ. ನಿಷ್ಕಪಟ ಮತ್ತು ಸರಳವ್ಯಕ್ತಿತ್ವದ ಡಿವಿಜಿ, “ಮಂಕುತಿಮ್ಮ”ನ ಮೂಲಕ ಪ್ರಕೃತಿ ಮತ್ತು ಬದುಕಿನಒಳಪದರಗಳನ್ನು ಅತ್ಯಂತ ಚುರುಕಾಗಿ, ಸೂಕ್ಷ್ಮವಾಗಿ,ವಿನಯದಿಂದ, ಹಾಸ್ಯದ ಲೇಪದೊಂದಿಗೆ ಕಟ್ಟಿಕೊಟ್ಟಿದ್ದಾರೆ. ಇದೇ ಇವರಬರೆವಣಿಗೆಯ ಶಕ್ತಿ ಮತ್ತು ವೈಶಿಷ್ಟ್ಯ. ಅವರ ಇನ್ನೊಂದು ಮೇರುಕೃತಿ, ಮರುಳ ಮುನಿಯನ ಕಗ್ಗದಲ್ಲಿ ಇವರ ಕಾವ್ಯದ ತೇಜಸ್ಸನ್ನುಆಳನೋಟವನ್ನು ಕಾಣಬಹುದಾಗಿದೆ. ಡಿವಿಜಿ ಪ್ರತೀದಿನನಿದ್ದೆಗೆ ಜಾರುವ ಮೊದಲು ಕಾಗದದ ಚೂರುಗಳ ಮೇಲೆಈ ಕಗ್ಗಗಳನ್ನು ಬರೆಯುತ್ತಿದ್ದರು. ಇವರು ಕವಿ, ಲೇಖಕ, ಅನುವಾದಕ, ವಿದ್ವಾಂಸರಷ್ಟೇ ಅಲ್ಲ ಪ್ರಕಾಶಕರೂ ಆಗಿದ್ದರು. ಸಾಹಿತ್ಯದ ಹೊರತಾಗಿ ಸಮಾಜ ಸುಧಾರಣೆಯ ಪ್ರತಿಪಾದಕರೂಆಗಿದ್ದರು. ನೈತಿಕತೆ ಮತ್ತು ಆಡಳಿತದ ಕುರಿತು ಸಾರ್ವಜನಿಕರಲ್ಲಿ ಅರಿವುಮೂಡಿಸಲು ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್ ಎಂಬಸಂಸ್ಥೆಯನ್ನು ಸ್ಥಾಪಿಸಿದರು. ಈ ಮೂಲಕ ಸಾಕಷ್ಟು ಕಾರ್ಯಕ್ರಮಗಳನ್ನುಹಮ್ಮಿಕೊಂಡು ಜನರಲ್ಲಿ ಜಾಗೃತಿ ಕೂಡ ಮೂಡಿಸಿದರು. ಈ ಕಾರಣಕ್ಕಾಗಿಮತ್ತು ಅವರ ಸಾಹಿತ್ತ್ಯಿಕ ಕೊಡುಗೆಗಳಿಗಾಗಿ 1974 ರಲ್ಲಿ ಕೇಂದ್ರ ಸರ್ಕಾರಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಡಿವಿಜಿ 1975ರ ಅಕ್ಟೋಬರ್ 7 ರಂದು ನಿಧನರಾದರು, ಅವರುಭೌತಿಕವಾಗಿ ಇಲ್ಲವಾದರೂ ಅವರ ಕಗ್ಗಗಳು ಕಾವ್ಯಪ್ರಿಯರ ಮೂಲಕಇಂದಿಗೂ ತಮ್ಮ ಸೌಂದರ್ಯವನ್ನು ಕಾಯ್ದುಕೊಂಡಿವೆ. ಜನಮಾನಸದಮೇಲೆ ಪ್ರಭಾವವನ್ನು ಬೀರುವಲ್ಲಿ ಯಶಸ್ವಿಯಾಗಿವೆ. ಇಂದಿನ ಪೀಳಿಗೆಗೆದಾರಿದೀಪದಂತೆ ಗೋಚರಿಸುತ್ತಿವೆ. Acknowledgements: Kaggas, Kannada translations, and book extracts researched and recited by Shridevi Kalasad. Credits Akshay Ramuhalli, Bijoy Venugopal, Bruce Lee Mani, Narayan Krishnaswamy, Prashant Vasudevan, Sananda Dasgupta, Seema Seth, Shraddha Gautam, Supriya Joshi, and Velu Shankar. @AiyyoShraddha Visit our website for more information: https://bit.ly/DVG100

ಕರ್ನಾಟಕದ ಹೆಮ್ಮೆ | Poornachandra Tejaswi | Noorakke Nooru Karnataka | Radio Azim Premji University

ಭೀಮಸೇನ್ ಜೋಶಿ - ನಾಡಿನ ನಾದಪುತ್ರ | Pt Bhimsen Joshi: Naadina Naadaputra Noorakke Nooru Karnataka

ಡಿವಿಜಿ ಮೊಮ್ಮಗ ಕೆ ನಟರಾಜನ್ ವಿಶೇಷ ಸಂದರ್ಶನ | DVG | Oneindia Kannada

D V Gundappa

Sahitya Sahavasa - UR Ananthamurthy on Da Ra Bendre

ತೇಜಸ್ವಿ ಮತ್ತು ಕುವಿಂಪು ಕಥೆಗಳಿಂದ ಬಂದ ಚಿತ್ರಗಳು | ಕೆ.ಎಂ. ಚೈತನ್ಯ | Noorakke Nooru Karnataka

Is Kodava Culture Under Threat? | Coorg’s Untold Legacy | Noorakke Nooru Karnataka

ಶತಾವಧಾನಿ ಡಾ. ಆರ್. ಗಣೇಶ್-ಡಿ.ವಿ.ಜಿ. ಯವರ ಜ್ಞಾಪಕ ಚಿತ್ರಶಾಲೆ ಈ ಕೃತಿಯ ಕುರಿತು ಮಾತು | #kannada

Patience - Inner Peace - Jeevanadharma Yoga of DVG

Sir M Visvesvaraya | ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ

Dr. K. Shivaram Karanth Interview

Sri. D. V. Gundappa

DVG | ಡಿ.ವಿ.ಜಿ.ಯವರ ಜೀವನದ ಅದ್ಭುತ ಚಿತ್ರಣ । ಡಾ.ಗುರುರಾಜ್ ಕರಜಗಿ

DVG Documentary-ಡಿ.ವಿ ಗುಂಡಪ್ಪ (ಡಿವಿಜಿ) ವ್ಯಕ್ತಿಚಿತ್ರ - ಕಲಾಮಾಧ್ಯಮ ವ್ಯಕ್ತಿಚಿತ್ರ ಸರಣಿ-ಚಿತ್ರ4

ಕನ್ನಡದಲ್ಲಿ ಸಾವಿರ ವರ್ಷಗಳ ಸಾಮರಸ್ಯ ವಿವೇಕವಿದೆ: ರಾಜಪ್ಪ ದಳವಾಯಿ

ಪೂರ್ಣಚಂದ್ರ ತೇಜಸ್ವಿ ಸಂದರ್ಶನ- ಅಬ್ದುಲ್ ರಶೀದ್ ಮತ್ತು ರಾಜೇಂದ್ರ ಚೆನ್ನಿ

Mankutimmana Kagga | ಡಿವಿಜಿ ಯವರ ಮಂಕುತಿಮ್ಮನ ಕಗ್ಗ

Amara - 02 ಸಿದ್ಧಿಯ ಮದದಲ್ಲಿ ಸಾಧಕರ ತಪ್ಪು ನಡೆ | ಪರಬ್ರಹ್ಮ | ಶಕ್ತಿ ಮತ್ತು ತ್ರಿಮೂರ್ತಿಗಳ ಉಗಮ | Manovati

ಕನ್ನಡ ಅಂದು ಇಂದು | ರಾಜ್ಯೋತ್ಸವ ವಿಶೇಷ ಸಂವಾದ with ಟಿ ಎನ್ ಸೀತಾರಾಮ್ | Kannada Now & Then

