ಯಾರ ಮತವೂ ರದ್ದಾಗಲ್ಲ!ಚಿಂತಾಮಣಿಯಲ್ಲಿ ಎಸ್ ಐ ಆರ್ ಅಪಪ್ರಚಾರದ ವಿರುದ್ಧ ಗುಡುಗಿದ ಬಿಜೆಪಿ ವೇಣುಗೋಪಾಲ್...!
ಯಾರ ಮತವೂ ರದ್ದಾಗಲ್ಲ!ಚಿಂತಾಮಣಿಯಲ್ಲಿ ಎಸ್ ಐ ಆರ್ ಅಪಪ್ರಚಾರದ ವಿರುದ್ಧ ಗುಡುಗಿದ ಬಿಜೆಪಿ ವೇಣುಗೋಪಾಲ್! ಎಸ್ಐಆರ್ ಕುರಿತ ಅಪಪ್ರಚಾರಕ್ಕೆ ಕಿವಿಗೊಡದಂತೆ ಬಿಜೆಪಿ ಮುಖಂಡ ದೇವನಹಳ್ಳಿ ವೇಣುಗೋಪಾಲ್ ಕರೆ.. ಚಿಂತಾಮಣಿ:ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಮತ್ತು ಬೂತ್ ಸಶಕ್ತಿಕರಣ ಪ್ರಕ್ರಿಯೆಗಳ ಕುರಿತು ಸಾರ್ವಜನಿಕರಲ್ಲಿ ಹರಡಲಾಗುತ್ತಿರುವ ತಪ್ಪು ಮಾಹಿತಿ ಹಾಗೂ ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದು ಬಿಜೆಪಿ ಮುಖಂಡ ದೇವನಹಳ್ಳಿ ವೇಣುಗೋಪಾಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಚಿಂತಾಮಣಿ ನಗರದ ವಾರ್ಡ್ ಸಂಖ್ಯೆ 22 ಮತ್ತು 24ರಲ್ಲಿ ನಗರ ಮಂಡಲ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ 'ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಹಾಗೂ ಬೂತ್ ಸಶಕ್ತಿಕರಣ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು ಮತದಾರರ ಪಟ್ಟಿ ಪರಿಷ್ಕರಣೆಯ ಮುಖ್ಯ ಉದ್ದೇಶ ಯಾರದ್ದೇ ಮತದಾನದ ಹಕ್ಕನ್ನು ಕಸಿದುಕೊಳ್ಳುವುದಲ್ಲ. ಬದಲಾಗಿ,ಮೃತಪಟ್ಟವರು,ಬೇರೆಡೆಗೆ ವಲಸೆ ಹೋದವರು ಮತ್ತು ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಹೆಸರು ಹೊಂದಿರುವವರನ್ನು ಗುರುತಿಸಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದು ಮತ್ತು ಶುದ್ಧೀಕರಿಸುವುದಾಗಿದೆ. ಕೆಲವು ರಾಜಕೀಯ ಪಕ್ಷಗಳು,ವಿಶೇಷವಾಗಿ ಕಾಂಗ್ರೆಸ್, ಮತದಾರರಲ್ಲಿ ತಪ್ಪು ಮಾಹಿತಿ ಹರಡಿ ಗೊಂದಲ ಸೃಷ್ಟಿಸುತ್ತಿವೆ.ನಿರ್ದಿಷ್ಟ ಸಮುದಾಯಗಳ ಮತಗಳನ್ನು ತೆಗೆದುಹಾಕಲಾಗುತ್ತಿದೆ ಎಂಬುದು ಸಂಪೂರ್ಣ ನಿರಾಧಾರ ಆರೋಪ.ಭಾರತೀಯ ನಾಗರಿಕರ ಪ್ರತಿಯೊಬ್ಬರ ಮತದಾನದ ಹಕ್ಕು ಸುರಕ್ಷಿತವಾಗಿರುತ್ತದೆ. ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಮತ್ತು ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿಕೊಳ್ಳಬೇಕು.ಅಗತ್ಯವಿದ್ದಲ್ಲಿ ಅಗತ್ಯ ಫಾರಂಗಳನ್ನು ಭರ್ತಿ ಮಾಡಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಗೋವಿಂದರಾಜ್, ನಿಕಟಪೂರ್ವ ಅಧ್ಯಕ್ಷ ಮಹೇಶ್ ಬೈ,ಪ್ರಧಾನ ಕಾರ್ಯದರ್ಶಿ ಮನೋಹರ್,ಆಗ್ನೇಯ ಪದವೀಧರ ಕ್ಷೇತ್ರದ ಸಂಚಾಲಕ ನಾಗರಾಜ್,ಸಹ ಸಂಚಾಲಕ ದೇವರಾಜ್,ನಗರ ಘಟಕದ ಪ್ರಧಾನ ಕಾರ್ಯದರ್ಶಿ ಗಾಜಲ್ ಶಿವ,ಯುವ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Chennamma Devegowda Daughter Shylaja | ಅಮ್ಮನಿಗೆ ಆ ಒಂದು ಕೊರಗಿತ್ತು, ತಾಯಿ ನೆನೆದು ಮಗಳು ಭಾವುಕ..| N18V

Trump HALTS strikes on Iran

ಎಲ್ಲಾ ಇನ್ಮೇಲೆ ಈಸಿ | CKYC 2.0 | Cetral Goverment | RBI | Masth Magaa | Amar Prasad

War of Words Between Education Minister Dharmendra Pradhan And Sayani Ghosh in Lok Sabha | PM Modi

ಅಭಿಜಿತ್ ದೀಪ್ಕೆ ಬಂಧನ!?10 ವರ್ಷ ಜೈಲು! ₹1 ಕೋಟಿ ದಂಡ! ಮೋದಿ ಮಹತ್ವದ ಘೋಷಣೆ | Narendra Modi | Abhijit Deepke

‼️🔥 MANA CHARITRAAA... EXPLAINED BY AN ARCHAEOLOGIST | Ft. Dr. Emani Sivanagi Reddy garu | Raw Talks

ஒரு நாள் பணக்கார வாழ்க்கை வாழப்போறேன்😍 | Luxury Life Ep-1 | Uppuveli, Trincomalee | Pavaneesan Vlogs

Why Gujarat Is Literally Damming The Sea | Kalpasar Dam Project Gujarat

US pauses Iran strikes but conflict spreads to Red Sea and Caspian

Trump Stuck in Quagmire With No End in Sight to War in Iran

Troy Jackson starts Maine Senate race at ‘TREMENDOUS disadvantage’: Democrat strategist

Trump mail voting order: What the latest court ruling actually means

Nearly 100 Million Face Heat Alerts As Dangerous Temperatures Grip The Central And Western US

ಹಳ್ಳಿಕಾರ್ ವರ್ತೂರ್ ಸಂತೋಷ್ ರವರು ಎಷ್ಟು ಕೋಟಿ ಒಡೆಯ ಗೊತ್ತ ? Varthur Santosh Net Worth Revealed I hallikar

„Das ist unzulässig“ – Verfassungs-Ikone Rupert Scholz im Gespräch

Heat Advisory Monday and Tuesday afternoons

Midterm battle heats up as new poll shows Democrats leading

I CHEAT with HACKER CARS in the GTA 5 water experiment! 😂

Democrats select Troy Jackson as nominee to challenge Sen. Susan Collins

