ಜುಲೈ 6ರಂದು ಮುತ್ತಾನಲ್ಲೂರು ಗ್ರಾಮಕ್ಕೆ ಆರ್.ಅಶೋಕ್ ಭೇಟಿ: ರೈತರ ಪ್ರತಿಭಟನೆಗೆ ಬಿಜೆಪಿ ಬೆಂಬಲ ಘೋಷಣೆ.
ಜುಲೈ 6ರಂದು ಮುತ್ತಾನಲ್ಲೂರು ಗ್ರಾಮಕ್ಕೆ ಆರ್.ಅಶೋಕ್ ಭೇಟಿ: ರೈತರ ಪ್ರತಿಭಟನೆಗೆ ಬಿಜೆಪಿ ಬೆಂಬಲ ಘೋಷಣೆ. ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಭೂ ಸ್ವಾಧೀನ ವಿರೋಧಿ ಹೋರಾಟದಲ್ಲಿ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ, ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಆದರೂ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಏಳು ರೈತರ ಮೇಲೆಯೇ ಎಫ್ಐಆರ್ ದಾಖಲಿಸಲಾಗಿದೆ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಾಗೂ ಬಿಜೆಪಿ ಪಕ್ಷ ಆರೋಪಿಸಿದೆ. ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಾಗೂ ಬಿಜೆಪಿಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಕೆ.ಸಿ.ಜಯಪ್ರಕಾಶ್, ಜುಲೈ 1ರಂದು ಮಡಿವಾಳ ಚೆಕ್ಪೋಸ್ಟ್ ಬಳಿ ಕೆಐಎಡಿಬಿ ಕಚೇರಿಗೆ ತೆರಳುತ್ತಿದ್ದ ರೈತರನ್ನು ಪೊಲೀಸರು ಏಕಾಏಕಿ ತಡೆದರು. ಇದರಿಂದ ರೈತರೊಂದಿಗೆ ಮಾತಿನ ಚಕಮಕಿ ನಡೆದು, ಪೊಲೀಸರು ರೈತರನ್ನು ಪ್ರಾಣಿಗಳಂತೆ ಎಳೆದಾಡಿದ್ದಾರೆ. ಉನ್ನತ ಮಟ್ಟದ ಅಧಿಕಾರಿಗಳೇ ರೈತರನ್ನು ಹೀನಾಯವಾಗಿ ನಡೆಸಿಕೊಂಡರು. ರೈತ ಮಹಿಳೆಯರನ್ನು ಅಮಾನವೀಯವಾಗಿ ನಡೆಸಿಕೊಂಡರು. ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆಯೂ ನೀಡಲಿಲ್ಲ. ಆಂಬುಲೆನ್ಸ್ ಇಲ್ಲದೇ ಏಟು ತಿಂದ ರೈತರು ಪರದಾಡಿದರು. ಏಟು ತಿಂದ ರೈತರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿರುವುದು ಆತಂಕಕಾರಿ ಎಂದು ಹೇಳಿದರು. ಪೊಲೀಸರ ಲಾಠಿ ಏಟಿನಿಂದ ಗಾಯಗೊಂಡಿರುವ ರೈತರ ಆರೋಗ್ಯ ವಿಚಾರಿಸಲು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಜುಲೈ 6 ನಾಳೆ ಸೋಮವಾರ ಮುತ್ತಾನಲ್ಲೂರು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಆರ್.ಅಶೋಕ್ ಅವರೊಂದಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಡಾ.ಸಿ.ಎನ್.ಮಂಜುನಾಥ್, ಶಾಸಕ ಸತೀಶ್ ರೆಡ್ಡಿ, ಗೋಪಿನಾಥ್ ರೆಡ್ಡಿ ಸೇರಿದಂತೆ ಹಲವು ಬಿಜೆಪಿ ನಾಯಕರುಗಳು ಭೇಟಿ ನೀಡಿ ರೈತರಿಗೆ ಬೆಂಬಲ ಸೂಚಿಸಲಿದ್ದಾರೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಎಸ್.ಆರ್. ಟಿ.ಅಶೋಕ್ ತಿಳಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹುಲ್ಲಹಳ್ಳಿ ಶ್ರೀನಿವಾಸ್ ಮಾತನಾಡಿ ಘಟನೆಯಲ್ಲಿ ರೈತ ದೇವರಾಜು ಅವರಿಗೆ ಹೃದಯದ ಸಮಸ್ಯೆಯಾಗಿದೆ. ಹಲವು ಮಂದಿ ಮಹಿಳೆಯರಿಗೆ ಗಾಯವಾಗಿದೆ. ರಂಗನಾಥ್ ಎಂಬುವವರಿಗೆ ಕಾಲಿನ ಮೂಳೆಗೆ ಪೆಟ್ಟು ಬಿದ್ದಿದೆ' ಎಂದು ತಿಳಿಸಿದರು. ರೈತರ ಮೇಲೆ ಪೋಲಿಸರು ಮಾಡಿರುವ ಹಲ್ಲೆ. ದೌರ್ಜನ್ಯ ಹಾಗೂ ಬಂದನ ಕ್ರಮ ಖಂಡಿಸಿ ಹಾಗೂ ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದ ತಾಲ್ಲೂಕಿನ ಜನತೆ ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರೈತರಿಗೆ ದೈರ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದರು. ಬಿಜೆಪಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿಭಾಗದ ಅಧ್ಯಕ್ಷ ಚಿಕ್ಕನಾಗಮಂಗಲ ವೆಂಕಟೇಶ್ ಗುರು, ಮುಖಂಡರಾದ ದೊಡ್ಡಹಾಗಡೆ ಶಂಕರ್, ಬಿಜೆಪಿ ಆನೇಕಲ್ ತಾಲ್ಲೂಕು ಉಪಾಧ್ಯಕ್ಷ ಪುಣ್ಯಕೋಟಿ ಶ್ರೀನಿವಾಸ್, ಮರಿರೆಡ್ಡಿ, ಜಗದೀಶ್, ವರದರಾಜು, ವೇಣು ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಾಗವಹಿಸಿದ್ದರು.

CT Ravi in News Hour Special | ಕ್ರಾಸ್ ವೋಟಿಂಗ್ ಬಗ್ಗೆ ಸಿಟಿ ರವಿ ಆಣೆ ಪ್ರಮಾಣದ ಬಗ್ಗೆ ಹೇಳಿದ್ದೇನು ಗೊತ್ತಾ?

ಆಪರೇಷನ್ ತ್ರಿಶೂಲ್..! ಅಲ್ಲಿ ಅದೇನು ಮಾಡಿಬಿಡ್ತು ಭಾರತದ RAW..? ಇದು ರೋಚಕ ಕಾರ್ಯಾಚರಣೆಯ ರಹಸ್ಯ..!

Top Brilliant Recycling and Manufacturing Mass Production Factory Process Videos

Krishna Byre Gowda | ಫುಟ್ಪಾತ್ಗಳನ್ನ ಆಕ್ರಮಿಸಿಕೊಂಡವ್ರೆ, ಅಲ್ಲೇ ಪಾರ್ಕಿಂಗ್ ಮಾಡ್ತಾರೆ.. | N18V

በቀን 17 አስክሬን ወደ ኢትዮጵያ ተልኳል.... የመጤ ጠል ችግር በደቡብ አፍሪካ መጨረሻዉ ምንድነዉ ከፓስተር ዶ/ር ሳሙኤል ጌታቸዉ| Seifu on EBS

🔴2028: ಗೋಕಾಕ್ನಲ್ಲಿ ಗೆಲ್ಲೋದ್ಯಾರು ? BJP ಸಾವ್ಕಾರನಿಗೆ DK ಖೆಡ್ಡಾ | | Gokak Election 2028

Mahabharata:ಬೆಂಗಳೂರು ಸುಂದರೀಕರಣ.ಬೀದಿ ವ್ಯಾಪಾರಕ್ಕೆ ಬ್ರೇಕ್. ಪರ್ಯಾಯ ಏನು? Footpath Encroachment Clearance

🔴LIVE: Chandan Sharma With H.C. Balakrishna | ರಾಜ್ ಸ್ಟುಡಿಯೋದಲ್ಲಿ ಬಿಡದಿ ಸೀಕ್ರೆಟ್ ಬಿಚ್ಚಿಟ್ಟ ಬಾಲಣ್ಣ

LIVE: SIR ವಿಷಯದಲ್ಲಿ ಅಧಿಕಾರಿಗಳು ಮಾಡಿದ್ದು ಸರೀನಾ? | Discussion | SIR Irregularities In Karnataka

How the US blunder in Iran accelerates its decline and dooms Israel | Andreas Krieg | UNAPOLOGETIC

Big Bulletin With HR Ranganath | ದೇಣಿಗೆಯಾಗಿ ಕೊಟ್ಟಿದ್ದ ಬೆಳ್ಳಿ, ಬಂಗಾರ ಸುರಕ್ಷಿತವಾಗಿದ್ಯಾ.?|July 06, 2026

Kannada News | ಇಂದಿನ ಪ್ರಮುಖ ಸುದ್ದಿಗಳು (08-07-26) | DK Shivakumar | HD Kumaraswamy | Karnataka TV

ಪಾಕಿಸ್ತಾನದ ಕೈ ತಪ್ಪಿದ POK- POKಯಲ್ಲಿ ಅತಿ ದೊಡ್ಡ ದಂಗೆ- ಸೇನೆ ನುಗ್ಗಿಸುತ್ತಾ ಭಾರತ?- POK latest news

LIVE : ಸಚಿವ ಕೃಷ್ಣಬೈರೇಗೌಡ ಮಹತ್ವದ ಸುದ್ದಿಗೋಷ್ಠಿ | Krishna Byre Gowda | Press Meet | @newsfirstkannada

Operation Sindhoor Row | 60 Politicians' Letter To PM Modi Sparks Nationwide Debate | News18

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಸುದ್ದಿಗೋಷ್ಠಿಯ ನೇರಪ್ರಸಾರ

MS NOW EXCLUSIVE: Jack Smith breaks silence on Trump I FULL INTERVIEW

🔴LIVE :ಕೇಂದ್ರ ಸಚಿವ HD ಕುಮಾರಸ್ವಾಮಿ ಸುದ್ದಿಗೋಷ್ಠಿ HD Kumaraswamy Press Meet | JDS

LIVE: ರಾಮಮಂದಿರ ಮೂರು ಟ್ರಸ್ಟಿಗಳ ವಿರುದ್ದವೇ ದೂರು! | Suvarna News Hour | Ayodhya Ram Temple Donation

