ಗಿರಣಿ ವಿಸ್ತಾರ ನೋಡಮ್ಮ- ಶಿಶುನಾಳ ಶರೀಫ್ ॥ GIRANI VISTHARA NODAMMA - SANTHA SHISHUNALA SHARIFA
ಕನ್ನಡ ಅಸ್ಮಿತೆ-೧, ಬಿ.ಕಾಂ/ಬಿ.ಬಿ.ಎ, ಕವಿತೆಯ ಆಶಯ:- ಶಿಶುನಾಳ ಶರೀಫರು ಮೊದಲ ಮಹಮದೀಯ ಕವಿ. ಹರಿ-ಹರ-ಹಜರತ್ ತತ್ವಗಳ ತ್ರಿವೇಣಿ ಸಂಗಮವಾಗಿದ್ದಾರೆ. ಜಾತಿ,ಮತ, ಪಂಥ, ಪಂಗಡಗಳ ಗಡಿಯನ್ನು ದಾಟಿ ನಿಂತ ಅನುಭಾವಿ ಹಾಗೂ ಅವಧೂತ. ಗಿರಣಿ ವಿಸ್ತಾರ ನೋಡಮ್ಮ’ ಪದ್ಯವು ಶಿಶುನಾಳ ಶರೀಫರ ಮಹತ್ವದ ರಚನೆಗಳಲ್ಲೊಂದು. ಆಧುನಿಕ ಕಾಲದ ಕೈಗಾರೀಕರಣದ ಕೊಡುಗೆಯಾದ ಗಿರಣಿಯ ರೂಪಕದ ಮೂಲಕ ಮಾನವನ ದೇಹವನ್ನು ಗಿರಣಿಯೊಂದಿಗೆ ಸಮೀಕರಿಸಿ ಅಧ್ಯಾತ್ಮಿಕ ಸ್ತರಗಳಲ್ಲಿ ಆಧುನಿಕ ಬದುಕಿನ ವಿದ್ಯಮಾನಗಳ ಅರ್ಥವನ್ನು ವ್ಯಂಜಿಸಿದ್ದಾರೆ. .ದೇಹವನ್ನು ಯಂತ್ರದೊಂದಿಗೆ ಸಮೀಕರಿಸಿರುವುದರ ಹಿನ್ನೆಲೆಯಲ್ಲಿ ವಸಾಹತುಶಾಹಿಯ ಕೈಗಾರೀಕರಣದ ರಾಜಕಾರಣವನ್ನು ಪರಿಶೀಲಿಸಬೇಕಾಗುತ್ತದೆ. ಶರೀಫರದು ವಿಮರ್ಶಾತ್ಮಕವಾದ ಹರಿತ ದೃಷ್ಟಿ. ಈ ಪದ್ಯಭಾಗವನ್ನು ಶಿಶುನಾಳ ಶರೀಫರ ಗೀತೆಗಳು ఎంబ ಸಂಪಾದಿತ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಆಗ ತಾನೆ ಹುಬ್ಬಳ್ಳಿಯಲ್ಲಿ ಹತ್ತಿಯನ್ನು ಹಿಂಜುವ ಗಿರಣಿ ಮಿಲ್ ಪ್ರಾರಂಭವಾಗಿತ್ತು. ಇಂತಹ ಯಾಂತ್ರಿಕ ಗಿರಣಿ ನಮ್ಮವರಿಗೆ ಸೋಜಿಗದ ವಸ್ತುವಾಗಿತ್ತು. ಶರೀಫರೂ ಸಹ ಈ ಗಿರಣಿಯನ್ನು ಕಂಡು, ಬೆರಗಾಗಿ ತನ್ನ ಸಖಿಗೆ ವರ್ಣಿಸುವ ಪದ್ಯವಾಗಿದೆ. ಬ್ರಿಟೀಶರ ಆಳ್ವಿಕೆಯ ಕಾಲದಲ್ಲಿ ಭಾರತದಾದ್ಯಂತ ಪ್ರಾರಂಭವಾದ ಯಾಂತ್ರಿಕ ಗಿರಣಿಗಳು ಸ್ಥಾಪನೆಯ ಹಿನ್ನೆಲೆಯಲ್ಲಿ ಶರೀಫರು ತಮ್ಮ ಹಾಡಿನ ಮೂಲಕ ವ್ಯಕ್ತಪಡಿಸಿದ್ದಾರೆ. ಶರೀಫರು ಧರಣಿ ಪತಿಯಾದ, ಭೂಮಂಡಲದ ರಾಣಿಯಾದ, ಕರುಣಾ ಪೂರ್ಣಳಾದ ವಿಕ್ಟೋರಿಯಾ ರಾಣಿ ತನ್ನ ಅಧೀನದಲ್ಲಿರುವ ಈ ರಾಜ್ಯಕ್ಕೆ ತರಿಸಿದ ಘನ ಚೋದ್ಯವಿದು ಎಂದು ಗಿರಣಿಯನ್ನ ಬಣ್ಣಿಸುತ್ತಾರೆ. ಇವರ ಹಾಡುಗಳ ಪದ್ಧತಿಯೇ ತತ್ವಪದಗಳ ಪದಗುಂಚಗಳಲ್ಲಿ ಹರಳುಕೊಳ್ಳುತ್ತವೆ. ಅವರ ಅನೇಕ ಹಾಡುಗಳು ಪ್ರಾರಂಭವಾಗುವುದು ಒಬ್ಬ ಹೆಣ್ಣು ಮಗಳು ತನ್ನ ಗೆಳತಿಗೆ ವಿಷಯವೊಂದನ್ನು ಬಣ್ಣಿಸುವ ರೀತಿಯಲ್ಲಿ ಆರಂಭಗೊಂಡು ಹಾಡಿನ ಮೊದಲಲ್ಲಿ ಶರೀಫರು ತಮ್ಮ ಗೆಳತಿಗೆ 'ಶರಣಿ' ಎಂದು ಕರೆಯುತ್ತಾರೆ. ಅಂದರೆ ಆ ವ್ಯಕ್ತಿಯೂ ಸಹ ದೇವಭಕ್ತಳೇ ಆಗಿರಬೇಕಾಯಿತು. ಆಧುನಿಕ ಕಾಲದ ಯಂತ್ರಗಳ ಕಾರ್ಯ ವೈಖರವು ನಾಜೂಕು ತನದಿಂದ ಕೂಡಿದ್ದು, ತಂತ್ರಜ್ಞಾನ ಅಭಿವೃದ್ಧಿಗೆ ನಾಂದಿ ಹಾಡಿದವು. ಗಿರಣಿಯು ಚಲಿಸುವ ರೀತಿ, ಚೈತನ್ಯ ಚಮತ್ಕಾರಗಳನ್ನ ಸಖಿಯೊಂದಿಗೆ ಹಂಚಿಕೊಂಡ ಭಾವನೆಗಳು ಬೆರಗನ್ನು ಮೂಡಿಸಿತು. ಜಲ, ಅಗ್ನಿ ಹಾಗೂ ವಾಯುಗಳು ಒಂದಾಗಿ ನೆಲದಿಂದ ಗಗನಕ್ಕೆ ಮುಟ್ಟುತ್ತವೆ. ಅಂದರೆ ಪಂಚಭೂತಗಳು ಒಂದಾಗಿ ಜೀವಿಗೆ ರೂಪಕೊಟ್ಟಿವೆ ಎನ್ನುವುದು ಶರೀಫರ ಒಡಪಿನ ಮಾತು. ಹಿಂಜಿದ ಅರಳಿಯನ್ನು ದಾರದ ಎಳೆ ಮಾಡಲು ಎರಡು ಗಾಲಿಗಳು ನಿರ್ಗುಣ ಬ್ರಹ್ಮನಿಗೆ ಹೋಲಿಸಲಾಗಿದೆ. ಪರಮಾತ್ಮನ ಅಣತಿಗಳನ್ನು ಪಾಲಿಸುವ ಭಕ್ತ ಜನರ ಅವನ ಕೃಪೆಯೆನ್ನುವ ಈ ಹಚ್ಚಡವನ್ನು ಹೊಚಿಕೊಂಡು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕೆಂಬ ಇಂಗಿತ ಈ ರೀತಿಯಾಗಿ ಗಿರಣಿಯ ಭೌತಿಕ ವರ್ಣನೆಯಿಂದ ಪ್ರಾರಂಭವಾದ ರಚನೆ, ಗಿರಣಿಯನ್ನು ಮಾನವನಿಗೆ ಹೋಲಿಸಿ, ಅವನ ಒಳಿತನ್ನು ಅವನಿಗೆ ನೆನಪಿಸುವುದರೊಂದಿಗೆ ಮುಕ್ತಾಯವಾಗುತ್ತದೆ.

ಹುಡುಕಾಟ - ಬಿ.ಟಿ.ಜಾಹ್ನವಿ ॥ಕಥೆ॥ Hudukata - B.T. Jaahnavi

DAY 18 | KANNADA | I SEM | B.COM | GIRANI VISTHARA NODAMMA | L1

ಕಮಲಪುರದ ಹೋಟ್ಲಿನಲ್ಲಿ || Kamalapurada Hotlinalli || Part 1

Bhageerathi | ಕೆರೆಗೆ ಹಾರ | ಜನಪದ ಕಥನ ಗೀತೆ | ಬಿ.ಕಾಂ. ನಾಲ್ಕನೆ ಸೆಮ್ | Kannada | Dr. Jnana Deevige

ಈ ಒಂದು ಮಾತು ನಿಮ್ಮ ಬದುಕೇ ಬದಲಿಸಬಹುದು | Gavisiddeshwara Swamiji Pravachana

ಚಂಡಿಯ ಕಥೆ

ನಿರಂಜನ ರವರ "ಕೊನೆಯ ಗಿರಾಕಿ"

ಕನ್ನಡ ಚಿತ್ರರಂಗದ ಬೃಹತ್ ಕಾಮಜಾಲವನ್ನು ತೆರೆದಿಟ್ಟ ರಮಣ ಕಣಗಾಲ್.. Beyond Limits | Ganesh Kasaragod |

ಬಿದಿರು ನಾನಾರಿಗಲ್ಲದವಳು - ಶಿಶುನಾಳ ಶರೀಫ॥Bidiru Naanyaarigalladavalu - Shishunala Sharif
![ದುರ್ಯೋಧನ ವಿಲಾಪ - ರನ್ನ [ಗದಾಯುದ್ಧ ಆಯ್ದ ಭಾಗ-೧]# Rannana Gadayuddha Part-1](https://i.ytimg.com/vi/ujrctvAigZU/hqdefault.jpg?sqp=-oaymwE9CNACELwBSFryq4qpAy8IARUAAAAAGAElAADIQj0AgKJDeAHwAQH4Af4JgALQBYoCDAgAEAEYZSBWKEUwDw==&rs=AOn4CLAk4-98pSrT8pSQ7Donu-plJGqZ8A)
ದುರ್ಯೋಧನ ವಿಲಾಪ - ರನ್ನ [ಗದಾಯುದ್ಧ ಆಯ್ದ ಭಾಗ-೧]# Rannana Gadayuddha Part-1

CM Dkshivakumar:ಸಿಕ್ಕಾಕ್ಕೊಂಡ CM DK! ರಾಷ್ಟ್ರ ಮಟ್ಟದಲ್ಲಿ ವೀಡಿಯೋ ವೈರಲ್! ಇದೆಲ್ಲ ಬೇಕಿತ್ತಾ CM ಸಾಹೆಬ್ರೇ?

ಶಿಶುನಾಳ ಶರೀಫರ "ಗಿರಣಿ ವಿಸ್ತಾರ ನೋಡಮ್ಮ"ಕವನ

ಕತೆಯ ಜೊತೆ : ಕಮಲಪುರದ ಹೋಟ್ಲಿನಲ್ಲಿ | Katheya Jothe : Kamalapurada Hotlinalli

ಆರು ಹಿತವರು ನಿನಗೆ - ಪುರಂದರದಾಸರು।ಕೀರ್ತನೆ। Aaru Hithavaru Ninage - Purandara Dasa

Kathegara Episode 42 | Nanu Konda Hudugi | Kannada Short Stories | Life Pages

"ಡಿವಿಜಿ ಕುಟುಂಬ ಈಗ ಹೇಗಿದೆ? ಮನೆ ಎಲ್ಲಿದೆ? ಮೊಮ್ಮಗ ನಟರಾಜನ್ ಸಂದರ್ಶನ!-DV Gundappa Grand Son Natarajan

ಮೋಚಿ ಕಥೆ - ಭಾರತೀಪ್ರಿಯ॥ Mochi - Bharatheepriya॥ ಕನ್ನಡ ಚೈತ್ರ ೪॥

ಗೌರ್ಮೆಂಟ್ ಬ್ರಾಹ್ಮಣ | ಪ್ರೊ. ಅರವಿಂದ ಮಾಲಗತ್ತಿ| ಭವಿಷ್ಯತ್ತಿನೊಂದಿಗೆ ಚೆಲ್ಲಾಟವಾಡುವ ಹುಡುಗಿಯರು"

