Jedara Dasimayya Vachanagalu॥SEP॥ ಜೇಡರ ದಾಸಿಮಯ್ಯರ ಆಯ್ದ ವಚನಗಳು
ಕನ್ನಡ ಪ್ರಜ್ಞೆ-೧, ವಚನಗಳ ಸಾರಾಂಶ:- ೧. ವಚನಕಾರರಲ್ಲಿ 'ಬಯಲಿ'ನ ಜಿಜ್ಞಾಸೆ ಇದೆ. ಬಯಲು ಸೃಷ್ಟಿಯಷ್ಟೇ ನಿಗೂಢ. ಈ ಕುರಿತಾದ ಅರಿವು ಲೋಕದ ಸುಖಗಳಿಗೇ ಹಾತೊರೆಯುವ ಮಿತಿಯುಳ್ಳವರಿಗೆ ಸಾಧ್ಯವಾಗದು. ಮಾತಿಗೆ ಮೀರಿದ, ಕಣ್ಣನೋಟದ ಮಿತಿಗೆ ದಕ್ಕದ, ಯಾವ ಆಕ್ರಮಣಕ್ಕೂ ಎಟುಕದ ಬಯಲು ಆದಿ, ಅಂತ್ಯದ ಕಲ್ಪನೆಯಿಲ್ಲದ್ದು. ಈ ಅಗಾಧ ಬಯಲಿನ ನಿಗೂಢತೆಯ ಭಾಗವೇ ಆದ ನಮ್ಮೊಳಗು ನಮಗೂ ಅರಿವಿಗೆ ಬರಲಾರದ ಮಿತಿಯಲ್ಲಿ ಬಳಲುತ್ತೇವೆ. ಈ ಆಲೋಚನೆ, ಅವಲೋಕನವೂ ಸಾಧ್ಯವಾಗದ ಜಡಮನಸ್ಸಿನ ಬಗ್ಗೆ ದಾಸಿಮಯ್ಯರ ವಿಚಾರವಿದೆ. ೨. ನಾವು ವಾಸಿಸುವ ಭೂಮಿ, ಅಲ್ಲಿ ಬಿತ್ತು ಬೆಳೆದು ಉಣ್ಣುವ ಫಲ, ಉಸಿರಾಡುವ ಗಾಳಿ ಈ ಎಲ್ಲಕ್ಕೂ ಕಾರಣೀಭೂತವಾದ ಪರಮಶಕ್ತಿಯೊಂದಿದೆ. ಅದನ್ನು ನೆನೆಯದವರು, ಆ ಅಗಾಧ ಶಕ್ತಿಗೆ ಕೃತಜ್ಞರಾಗಿ ಬದುಕದೇ ಕುನ್ನಿಗಳಂತೆ ಪರಾವಲಂಬನೆಯ ಹಂಗಿನಲ್ಲಿ (ಹಸಿದ ಸಂದರ್ಭದಲ್ಲಿ ಆಹಾರ ನೀಡಿದವರಿಗೆ ನಾಯಿ ಬಾಲ ಅಲುಗಿಸಿ ಪ್ರೀತಿ, ಕೃತಜ್ಞತೆ ತೋರುತ್ತದೆ. ಆದರೆ ಈ ಯಾವ ಗುಣಧಣಿಗಳ ಅಸ್ಥಿತ್ವಕ್ಕೂ ಸೃಷ್ಟಿಶಕ್ತಿಯೇ ನಿಜಕಾರಣ) ಯಾವ ಸಂಗತಿಗಳನ್ನೋ ನೆಚ್ಚಿಕೊಂಡು, ಹೊಗಳುತ್ತಾ ಕಾಲ ಕಳೆಯುವರು. ಇಂತಹ ಮನುಷ್ಯವಿಪರೀತಗಳ ಬಗ್ಗೆ ದಾಸಿಮಯ್ಯನ ನಿಲುವು ನಿಷ್ಟುರವಾಗಿದೆ. ೩. ನಿಜ ಭಕ್ತಿ ಎಂತಹುದೇ ಸಂದರ್ಭದಲ್ಲೂ ಅಚಲವಾಗಿ ನಿಲ್ಲುತ್ತದೆ. ಅದು ಅಂತರಂಗ, ಬಹಿರಂಗದಲ್ಲಿ ಒಂದೇ ಆಗಿರುತ್ತದೆ. ಸುಳ್ಳು ಭಕ್ತನ ವೇಷ, ವಿಚಾರಗಳನ್ನು ನಿಜವೆಂದು ನಂಬಬಾರದು ಎಂಬುದಕ್ಕೆ ದಾಸಿಮಯ್ಯ ಮಠದೊಳಗಿನ ಬೆಕ್ಕಿನ ನಿದರ್ಶನವನ್ನು ನೀಡಿದ್ದಾರೆ. ಬೆಕ್ಕು ಮಠದಂತಹ ಪವಿತ್ರ ಜಾಗದಲ್ಲಿದ್ದ ಮಾತ್ರಕ್ಕೆ ಇಲಿಯ ಕಂಡರೆ ಬೇಟೆಯಾಡುವ ಅದರ ಅಂತರ್ಗತ ಸ್ವಭಾವವನ್ನು ಬಿಡುವುದಿಲ್ಲ. ಹಾಗೆಯೇ ಡಾಂಭಿಕ ಭಕ್ತರ ತೋರಿಕೆಯ ಭಕ್ತಿಯೂ ದೃಢವಲ್ಲ, ದಿಟವಲ್ಲ ಎಂದಿದ್ದಾರೆ.

Akka Mahadeviya Vachanagalu॥ ಅಕ್ಕಮಹಾದೇವಿಯ ಆಯ್ದ ವಚನಗಳು

ಜನಕ್ಕಿಂತ ಹೆಚ್ಚು ನಮ್ಮ ಮನಕ್ಕೆ ಅಂಜಿ ಬದುಕಬೇಕು ಏಕೆ?

ಅಧ್ಯಾಯ 01 | ಸಿದ್ಧರು ಬಹಿರಂಗಪಡಿಸಿದ ಆಧ್ಯಾತ್ಮಿಕ ರಹಸ್ಯಗಳು | ಸಿದ್ಧರ್ ಅರಿವು ಬ್ರಹ್ಮಾಂಡ

ಮೊಬೈಲ್ ಫೋಬಿಯ - ಈರಪ್ಪ ಎಂ ಕಂಬಳಿ॥ಕನ್ನಡ ಪ್ರಜ್ಞೆ॥Mobile Phobia - Irappa M Kambali

ರಾಮಧಾನ್ಯ ಚರಿತೆ/ಕನಕದಾಸರು/8ನೇ ತರಗತಿ/Ramadhanya Charite/8 standard poem with animation.

ದೇವರ ದಾಸಿಮಯ್ಯರ ಜೀವನ ಚರಿತ್ರೆ | devara dasimayya life story|devara dasimayya history| devara dasimayya

ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ - ಆದಿಕವಿ ಪಂಪ॥ಪಂಪಭಾರತ॥Adikavi Pama - Vikramarjuna Vijaya

ತುಂಗಭುಜನ ಕಥೆ - ದುರ್ಗಸಿಂಹ ॥ಕರ್ಣಾಟಕ ಪಂಚತಂತ್ರ ಕಥೆಗಳು॥Panchatantra - Durgasimha

ಈ ವ್ಯಕ್ತಿತ್ವ ರಹಸ್ಯ ಕೇಳಿದ್ರೆ ಜೀವನ ಬದಲಾಗುತ್ತೆ! | Dr. Gururaj Karajagi | #story #motivation #speech

ವಚನಗಳ ಭಾವಸಂಗಮ:4 ಸತ್ಯಕ್ಕನ ವಚನ ಹಾಗೂ ವಚನದ ಭಾವಾರ್ಥ.styakka and her vachana

ಬಿದಿರು ನಾನಾರಿಗಲ್ಲದವಳು - ಶಿಶುನಾಳ ಶರೀಫ॥Bidiru Naanyaarigalladavalu - Shishunala Sharif

ಜೀವನದಲ್ಲಿ ತಣ್ಣಗಿರೋದು ಹೇಗೆ?

ವಚನಗಳು - ಜೇಡರ ದಾಸಿಮಯ್ಯ

ಸೂಳೆಮನೆಗೆ ಪುಟ್ಟಣ್ಣ ನನ್ನ ಕಾರು ತಗೊಂಡೋಗೋನು, ಬೈದು ಸಿನಿಮಾನೇ ನಿಲ್ಲಿಸಿದ್ದೆ| Nanjaraja Arasu Life Story|P-17

ತಾಪಮಾನಕ್ಕೆ ಕಾರಣವಾದುದು ಏನಿದು ಹಸಿರುಮನೆ ಪರಿಣಾಮ - ಎಚ್.ಎಸ್.ನಿರಂಜನಾರಾಧ್ಯ #Greenhouse effect

B.Com 2nd sem _ಅಕ್ಕಮಹಾದೇವಿಯ ವಚನಗಳು

ಇವತ್ತು ದಯವಿಟ್ಟು ಈ ಸೂರ್ಯದೇವನ ಮಂತ್ರವನ್ನು ತಪ್ಪಿಸಬೇಡಿ! Bhanu Saptami Most Powerful Health Mantra Kannada

ಗರಳ ರಕ್ಷೆ - ಪು.ತಿ.ನ |Garala Rakse - Pu.Ti.Na

