ವಿಸ್ಮಯಗೊಳಿಸುವ ಹೊಯ್ಸಳ ವಾಸ್ತುಶಿಲ್ಪ||Hoysala Dynasty (ಹೊಯ್ಸಳ ಸಾಮ್ರಾಜ್ಯ)||Classic Education
ವಿಸ್ಮಯಗೊಳಿಸುವ ಹೊಯ್ಸಳ ವಾಸ್ತುಶಿಲ್ಪ||Hoysala Dynasty (ಹೊಯ್ಸಳ ಸಾಮ್ರಾಜ್ಯ)||Classic Education ಹೊಯ್ಸಳ ವಂಶ ಸುಮಾರು ಕ್ರಿ.ಶ. ೧೦೦೦ ದಿಂದ ಕ್ರಿ.ಶ. ೧೩೪೬ ರ ವರೆಗೆ ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ (ಇಂದಿನ ಹಳೇಬೀಡು), ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, ಹೊಯ್ಸಳ ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ವ್ಯುತ್ಪತ್ತಿಯಾದದ್ದು. ಚಾರಿತ್ರಿಕವಾಗಿ ಈ ಸಂಸ್ಥಾಪಕನ ಹೆಸರು ನೃಪಕಾಮ ಎಂದು ಊಹಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯವನ್ನು ವಿಸ್ತರಿಸಿದ ಅರಸರಲ್ಲಿ ಮೊದಲಿಗ ವಿನಯಾದಿತ್ಯ (ಆಡಳಿತ: ೧೦೪೭-೧೦೯೮). ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ, ಈತನ ನಂತರದ ಹೆಸರು ವಿಷ್ಣುವರ್ಧನ (ಆಡಳಿತ: ಸು ೧೧೧೦-೧೧೪೨). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯ ಅತ್ಯುನ್ನತ ಉದಾಹರಣೆಗಳು ಮೂಡಿಬಂದವು. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಲು ೮೬ ವರ್ಷಗಳು ಬೇಕಾದವು! ಹಾಗೆಯೇ ಬೇಲೂರಿನ ಚನ್ನಕೇಶವ ದೇವಸ್ಥಾನ ೧೦೩ ವರ್ಷಗಳ ಪರಿಶ್ರಮದ ಫಲ. ಹೊಯ್ಸಳ ಶಿಲ್ಪಕಲೆ ದ್ರಾವಿಡ ಶೈಲಿ ಮತ್ತು ಆರ್ಯ ಶೈಲಿಗಳೆರಡರ ಗುಣಗಳನ್ನೂ ತನ್ನದಾಗಿಸಿಕೊಂಡಿದೆ. ಹೊಯ್ಸಳ ದೇವಾಲಯಗಳಲ್ಲಿ ಸಹಸ್ರಾರು ಸುಂದರ ಕೆತ್ತನೆಗಳನ್ನು ಕಾಣಬಹುದು. ರಾಮಾಯಣ ಮಹಾಭಾರತಗಳ ದೃಶ್ಯಗಳು, ಸುಂದರ ನರ್ತಿಸುವ ಶಿಲಾಬಾಲಿಕೆಯರಿಂದ ಕೂಡಿದ ಈ ದೇವಾಲಯಗಳು ಹೊಯ್ಸಳ ಸಾಮ್ರಾಜ್ಯ ಬಿಟ್ಟು ಹೋದ ಮುಖ್ಯ ಸಂಪ್ರದಾಯ. ವೀರ ಬಲ್ಲಾಳನ (ಆಡಳಿತ: ೧೧೭೩-೧೨೨೦) ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ದಕ್ಷಿಣ ಭಾರತದಲ್ಲಿ ಅತ್ಯಂತ ಬಲಿಷ್ಠವಾದುದೆಂದು ಹೆಸರಾಯಿತು. ನಂತರದ ದಶಕಗಳಲ್ಲಿ ಹೊಯ್ಸಳ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ ಮತ್ತು ದೆಹಲಿಯ ಸುಲ್ತಾನೇಟ್ಗಳೊಂದಿಗೆ ಪೈಪೋಟಿಗೆ ಸಿಲುಕಿತು. ಅಂತಿಮವಾಗಿ ಹೊಯ್ಸಳ ವಂಶದ ಆಡಳಿತ ಕ್ರಿ.ಶ. ೧೩೪೬ ರಲ್ಲಿ ಕೊನೆಗೊಂಡಿತು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ `ಸ್ವಾಮಿ ವಿವೇಕಾನಂದರ' ಮಹತ್ವ||INSPIRATION TO YOUTH||Classic Education

ಕರ್ನಾಟಕ ಇತಿಹಾಸ |ಕೆ. ಶೇಷಾದ್ರಿ ಅಯ್ಯರ್ & ಸರ್.ಎಂ.ವಿಶ್ವೇಶ್ವರಯ್ಯ |ಪ್ರಸಿದ್ಧ ದಿವಾನರು|Sharanayya Bhandarimath

Cholas: The Force Behind India's First Naval Fleet | Flashback with Palki Sharma

ದ್ವಾರ ಸಮುದ್ರದ ಹೊಯ್ಸಳರು | Part 1 | Shivarajkumar Palled | Unacademy Kannada

ನೆಲದಾಳದಲ್ಲಿ ಅದೆಷ್ಟು ವಿಗ್ರಹಗಳು..? ಆ ಹೊಯ್ಸಳ ಮಂದಿರಗಳು ನಾಶವಾಗಿದ್ದು ಹೇಗೆ..? Excavation near Halebidu

ಹೊಯ್ಸಳರು | Karnataka History | Siddanna Dalawayi | Spardha Genius Dharwad

Indian Art and Culture | Nagara Style Architecture | Shobha K @SadhanaAcademy

ಭಾರತ ಸಂವಿಧಾನದ ಅನುಸೂಚಿಗಳ ಬಗ್ಗೆ ನಿಮಗೆಷ್ಟು ಗೊತ್ತು..?Indian Constitution In Kannada||Classic Education

ಕಲ್ಯಾಣಿ ಚಾಲುಕ್ಯರು | Karnataka History | Shivarajkumar Palled | Unacademy Kannada

2ನೇ ವೀರ ಬಲ್ಲಾಳ..! ಈ ಹೊಯ್ಸಳ ಸಾಮ್ರಾಟನ ಬಗ್ಗೆ ನಿಮಗೆಷ್ಟು ಗೊತ್ತು..? best emperor of south india

Karnataka History | Hoysala kingdom | Useful To All Exams | Shankar Prakruthi @VijayiBhava

ಹೊಯ್ಸಳ ಸಾಮ್ರಾಜ್ಯ | ನಮ್ಮ ಕರುನಾಡಿನ ರಾಜವಂಶ ಅದೆಷ್ಟು ಅದ್ಬುತ| NAMMA NAMBIKE |

ಆಧುನಿಕ ಕರ್ನಾಟಕದ ಸಂಪೂರ್ಣ ಇತಿಹಾಸ || ಮೈಸೂರು ಒಡೆಯರ ಸಾಮ್ರಾಜ್ಯದ ಇತಿಹಾಸ ಭಾಗ - 1 || Vidyakashi Dharwad

ಹೊಯ್ಸಳರ ಕಲೆ ಮತ್ತು ವಾಸ್ತುಶಿಲ್ಪ/ART AND ARCHITECTURE OF HOYSALAS PART -1

Indian History | Modern Indian History | Swamy Vivekananda | Ramesh G | Sadhana Academy| Shikaripura

How to prepare HISTORY Subject for UPSC and KPSC Exams | S V Patil | Manjunatha B @SadhanaAcademy

ಬಕ್ರೀದ್ಗೆ ಕರೆದು ಕೊಂದವನ ಗತಿ ಏನಾಯ್ತು..? | Uttar Pradesh's Most Discussed Case Explained | Yogi |

ಸಖರಾಯಪಟ್ಟಣ... ಮಲೆನಾಡಿನ ಮಡಿಲಿನೊಳಗೆ ಹುದುಗಿಹ ಪುಟ್ಟದೊಂದು ಸ್ವರ್ಗದ ತುಣುಕು...

ಪ್ರಾಚೀನ ಭಾರತದ ಇತಿಹಾಸ | ಚೋಳರು | ಭಾಗ 1| KAS/FDA/SDA/PSI/KPSC | Sharanayya B

