ನಮ್ಮ ಬೇರುಗಳು ಸಭೆ ೨೩೨: ಶ್ರೀಮದ್ವಾಲ್ಮೀಕಿರಾಮಾಯಣ ಕಥಾಸರಣಿ, ಅರಣ್ಯಕಾಂಡ, ಸಂಚಿಕೆ -೧೪| ಶ್ರೀ ಬಿ. ಎಂ. ಸುರೇಶ
ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ | ತಾವದ್ರಾಮಾಯಣಕಥಾ ಲೋಕೇಷು ಪ್ರಚರಿಷ್ಯತಿ || ಎಲ್ಲಿಯವರೆಗೂ ಗಿರಿಗಳು ಇರುತ್ತವೆಯೋ, ಎಲ್ಲಿಯವರೆಗೂ ನದಿಗಳು ಹರಿಯುತ್ತವೆಯೋ, ಅಲ್ಲಿಯವರೆಗೂ ಈ ಲೋಕದಲ್ಲಿ ರಾಮಾಯಣದ ಕಥೆಯು ಜೀವಂತವಾಗಿರುತ್ತದೆ. ಶ್ರೀಮದ್ವಾಲ್ಮೀಕಿಮಹರ್ಷಿ ಗಳಿಂದ ವಿರಚಿತವಾದ ಆದಿಕಾವ್ಯವಾದ "ರಾಮಾಯಣ”ವು ಸಾಕ್ಷಾತ್ ವಿಷ್ಣುವಿನ ಪರಮಾವತಾರವಾದ ಶ್ರೀರಾಮಚಂದ್ರನ ಚರಿತ್ರೆಯನ್ನು ಹೊಂದಿದೆ. ೨೪ ಸಾವಿರ ಶ್ಲೋಕ ಗಳನ್ನು ಹೊಂದಿರುವ ಸಂಸ್ಕೃತದ ಈ ಗ್ರಂಥವನ್ನು, ಎಲ್ಲರಿಗೂ ಹೃದ್ಯವಾಗುವಂತೆ ಕನ್ನಡಕ್ಕೆ ಅನುವಾದಿಸಿ ಉಪಕರಿಸಿದ್ದಾರೆ, ನಾಡಿನ ಹಿರಿಯ ವಿದ್ವಾಂಸರಾದ ಶ್ರೀ ಎನ್ ರಂಗನಾಥಶರ್ಮರು. ಅವರ ಅನುವಾದದ ಸಹಾಯದಿಂದ, ಶ್ರೀಮದ್ವಾಲ್ಮೀಕಿರಾಮಾಯಣದ ಸಂಪೂರ್ಣಕಥೆಯನ್ನು ತಿಳಿದು-ತಿಳಿಸುವ ಉದ್ದೇಶದಿಂದ ನಮ್ಮ ಬೇರುಗಳು ಕನ್ನಡ ಬಳಗವು ಶ್ರೀಮದ್ವಾಲ್ಮೀಕಿರಾಮಾಯಣ ಕಥಾಸರಣಿಯ ಸಭೆಗಳನ್ನು ಪ್ರತಿತಿಂಗಳೂ ನಡೆಸಿಕೊಂಡು ಬರುತ್ತಿದೆ. ಇಂದು, ರಾಮಾಯಣದ ಮೂರನೇ ಕಾಂಡವಾದ "ಅರಣ್ಯಕಾಂಡ"ದ ೧೪ನೇ ಸಂಚಿಕೆ ಯು ನಡೆಯಿತು. ಅಯೋಧ್ಯಾಕಾಂಡವು ರಾಮಾಯಣದ ಹೃದಯಭಾಗವಾದರೆ, ಅರಣ್ಯಕಾಂಡವು ರಾಮಾಯಣಹೃದಯದ ಅಂತರಂಗ. ರಾಮಾಯಣದ ಮುಖ್ಯವಿಷಯವೆಂದರೆ ಧರ್ಮವಿರೋಧಿಯಾದ ರಾವಣನಿಗೆ ದಂಡನೆಯಷ್ಟೇ!? ಅದಕ್ಕೆ ಕಾರಣವಾದ ಸೀತಾಪಹರಣವು ನಡೆಯುವುದು ಅರಣ್ಯಕಾಂಡದಲ್ಲಿ. ಹಾಗಾಗಿ ರಾಮಾಯಣಕಥೆಯ ಬೀಜಾಂಕುರವಾಗುವುದು ಅರಣ್ಯಕಾಂಡದಲ್ಲಿ. ಚಂದದ ಚಿನ್ನದ ಜಿಂಕೆಯನ್ನು ಕಂಡು ಮೋಹಿತಳಾದ ಸೀತೆಯು, ಅದು ರಾಕ್ಷಸನ ಮಾಯೆಯಾಗಿರಬಹುದೆಂಬ ಲಕ್ಷ್ಮಣನ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಅದು ತನಗೆ ಬೇಕೆಂದು ಹಠ ಹಿಡಿಯುತ್ತಾಳೆ. ಸೀತೆಯ ಆಸೆಯನ್ನು ಪೂರೈಸಲು ರಾಮನು ಜಿಂಕೆಯನ್ನು ಹಿಡಿಯಲು ಕಾಡಿನೊಳಗೆ ಹೋಗುತ್ತಾನೆ. ಮಾಯಾಮೃಗವಾಗಿದ್ದ ಮಾರೀಚನು ರಾಮನನ್ನು ಆಶ್ರಮದಿಂದ ಬಹಳ ದೂರ ಸೆಳೆದುಕೊಂಡು ಹೋಗುತ್ತಾನೆ. ಮೋಸವನ್ನು ಅರಿತ ರಾಮನು ದಿವ್ಯಾಸ್ತ್ರದಿಂದ ಮಾರೀಚನನ್ನು ಹೊಡೆದುರುಳಿಸಿದಾಗ, ಅವನು ಸಾಯುವ ಮುನ್ನ ರಾಮನ ಧ್ವನಿಯಲ್ಲೇ "ಹಾ ಸೀತಾ! ಹಾ ಲಕ್ಷ್ಮಣ!" ಎಂದು ಗಟ್ಟಿಯಾಗಿ ಕೂಗುತ್ತಾನೆ. ಈ ಕೂಗನ್ನು ಕೇಳಿ ಗಾಬರಿಗೊಂಡ ಸೀತೆಯು ರಾಮನಿಗೆ ಆಪತ್ತು ಬಂದಿದೆಯೆಂದು ಭಾವಿಸಿ, ಅಲ್ಲಿಗೆ ಹೋಗಲು ನಿರಾಕರಿಸಿದ ಲಕ್ಷ್ಮಣನಿಗೆ ಕಠೋರವಾದ ಮಾತುಗಳಿಂದ ನಿಂದಿಸಿ ಆಶ್ರಮದಿಂದ ಹೊರಡುವಂತೆ ಮಾಡುತ್ತಾಳೆ. ಕೊನೆಗೆ ಸೀತೆಯು ಆಶ್ರಮದಲ್ಲಿ ಒಬ್ಬಳೇ ಇರುವುದನ್ನು ಹೊಂಚು ಹಾಕುತ್ತಿದ್ದ ರಾವಣನು ಸನ್ಯಾಸಿಯ ವೇಷದಲ್ಲಿ ಬಂದು, ತನ್ನ ನಿಜರೂಪವನ್ನು ಪ್ರಕಟಿಸಿ ಅವಳನ್ನು ಅಪಹರಿಸಲು ಮುಂದಾಗುತ್ತಾನೆ. ಅನಂತರ ನಡೆದ ಅರಣ್ಯಕಾಂಡದ ಕೌತುಕಪೂರ್ಣ ವೃತ್ತಾಂತಗಳನ್ನು ವರ್ಣಿಸಿದ್ದಾರೆ ಶ್ರೀ ಬಿ ಎಂ ಸುರೇಶ್ ಅವರು. ಶ್ರೀ ಬಿ ಎಂ ಸುರೇಶ್ ಅವರು, ಮೂಲತಃ ತುಮಕೂರಿನ ಶಿರಾ ತಾಲೂಕಿನ ಬಾಲೇನಹಳ್ಳಿಯವರು. ಎಂ ಎಸ್ ಸಿ, ಬಿ ಎಡ್ ಪದವೀಧರರು. ಸರ್ಕಾರಿ ಪದವಿ ಪೂರ್ವ ಕಾಲೇಜು ಕಾಡುಗೋಡಿ ಇವರ ಸೇವಾಸ್ಥಳ. ಗಣಿತ ಪ್ರಾಧ್ಯಾಪಕರಾಗಿ ಮೂವತ್ತೈದು ವರ್ಷಗಳಿಗಿಂತ ಹೆಚ್ಚಿನ ತಮ್ಮ ಸೇವಾವಧಿಯಲ್ಲಿ ಹತ್ತಾರು ಸಾವಿರ ವಿದ್ಯಾರ್ಥಿಗಳ ಸಂಪತ್ತು ಹೊಂದಿದ್ದಾರೆ. ಶಿಕ್ಷಕರ ತರಬೇತುದಾರರಾಗಿಯೂ ಕೆಲಸ ಮಾಡಿದ್ದಾರೆ. ಪ್ರಸ್ತುತ ಕಾಡುಗೋಡಿಯಲ್ಲಿ ನೆಲೆಸಿದ್ದಾರೆ. ನಿವೃತ್ತಿಯ ಅನಂತರ ಕಾಡುಗೋಡಿಯ ಆಡಮ್ಸ್ ಅಕಾಡೆಮಿಯಲ್ಲಿ ಅತಿಥಿ ಶಿಕ್ಷಕರಾಗಿ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನೆಯಲ್ಲಿಯೂ ಕೂಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಪ್ರವಚನಗಳನ್ನು ನಡೆಸುತ್ತಾರೆ. ಇವರದ್ದು ಇಬ್ಬರು ಗಂಡುಮಕ್ಕಳು, ಮೂವರು ಮೊಮ್ಮಕ್ಕಳ ತುಂಬು ಕುಟುಂಬ. ಬಹಳ ಶ್ರದ್ಧಾಳುಗಳು, ದೈವೀಭಕ್ತರು, ಅಧ್ಯಯನಶೀಲರು. ಇಂತಹ ಹಿರಿಯ ಜ್ಞಾನೋಪಾಸಕರು ಈ ಬಾರಿ ರಾಮಾಯಣ ಕಥೆಗಳನ್ನು ವಾಚಿಸಿದ್ದಾರೆ. ಈ ಸಭೆಯ ಪೂರ್ಣ ವಿಡಿಯೋ ಇಲ್ಲಿದೆ, ನೋಡಿ ಅಭಿಪ್ರಾಯ ತಿಳಿಸಿ. 🌺🙏 #nammaberugalu #kannadaclub #shreemadvalmikiramayana #shreeranganathasharma #aranyakanda

Day - 5 | Shrimad Bhagwat Katha live With - Pujya Shri Indresh Ji Maharaj - Vrindavan - UP

LIVE: ಚಿನ್ನದ ಅಂಬಾರಿ ವಿಜಯನಗರದಿಂದ ಮೈಸೂರಿಗೆ ಬಂದಿದ್ದು ಹೇಗೆ?| Dharmendra Kumar with Bhavana Nagaiah

CT Ravi in News Hour Special | ಕ್ರಾಸ್ ವೋಟಿಂಗ್ ಬಗ್ಗೆ ಸಿಟಿ ರವಿ ಆಣೆ ಪ್ರಮಾಣದ ಬಗ್ಗೆ ಹೇಳಿದ್ದೇನು ಗೊತ್ತಾ?
![[12시에 만나요] 외국인 언제 돌아오나 반도체 다음 주도주는?🤔ㅣ강은호 전 방위산업청장ㅣ2026년 4월 24일 금요일](https://i.ytimg.com/vi/Nl4iqwomcPc/hqdefault.jpg?sqp=-oaymwEjCNACELwBSFryq4qpAxUIARUAAAAAGAElAADIQj0AgKJDeAE=&rs=AOn4CLDVp5JUUXl2m1kPyowYmQLkknKevg)
[12시에 만나요] 외국인 언제 돌아오나 반도체 다음 주도주는?🤔ㅣ강은호 전 방위산업청장ㅣ2026년 4월 24일 금요일

The Untold History of Moodubidire | Dr. Pundikai Ganapayya Bhat | Namma Moodubidire Podcast Ep. 1

PLO Lumumba: Why Iran Is Winning the War Against Israel & the USA | Oil, China & Dollar Explained

The Partition Of India : ಅಂಬೇಡ್ಕರ್ vs ಗಾಂಧಿ || Agni Sreedhar ||

ನಮ್ಮ ಬೇರುಗಳು ಸಭೆ ೨೨೦: ಶ್ರೀಮದ್ವಾಲ್ಮೀಕಿರಾಮಾಯಣ ಕಥಾಸರಣಿ, ಅರಣ್ಯಕಾಂಡ, ಸಂಚಿಕೆ -೯| ಚಿನ್ಮಯಿ ವಿಸ್ಮಯಿಶ್ರೀ

Bilahari Kausikan: On Keeping Perspective in Volatile Geopolitical Times

ಬ್ರಾಹ್ಮಣರಿಗೆ ಎಚ್ಚರಿಕೆಯ ಸಂದೇಶ - ವಿದ್ವಾನ್ ಗಣಪತಿ ಭಟ್ ಕಿಬ್ಬಳ್ಳಿ Shreeprabha Studio

"ಡಿವಿಜಿ ಕುಟುಂಬ ಈಗ ಹೇಗಿದೆ? ಮನೆ ಎಲ್ಲಿದೆ? ಮೊಮ್ಮಗ ನಟರಾಜನ್ ಸಂದರ್ಶನ!-DV Gundappa Grand Son Natarajan

Mass Layoffs in India Due to AI Artificial Intelligence | Bengaluru IT companies | Masth Magaa Amar

India vs Pakistan Over Indus Waters Treaty: 'Water War' Coming Soon? | Tilak & Uttam | EP429

ಆರ್ಯವರ್ಧನ್ ಗುರೂಜಿ ಪ್ರಧಾನಮಂತ್ರಿ ಆದ್ರೆ? ಡಿ ಬಾಸ್ ರಿಲೀಸ್ ಆಗೋದು ಯಾವಾಗ?| Aryavardan Guruji | Kirik Keerthi

Can a Bribe-Based Economy Ever Deliver Viksit Bharat? • Prof RV

PM Modi Highlights India’s Economic Resilience Amid Global Challenges, Growth At 7.7% |#thehardfacts

432Hz • Fall Into Deep Healing Sleep • Anxiety Relief, Melatonin Release • Stop Overthinking

ನಮ್ಮ ಬೇರುಗಳು ಸಭೆ: ೨೧೯: ಕಥೆ ಕೇಳುವಿರಾ..? -೨ - ಪೂಚಂತೇ ಅವರ ತಬರನ ಕಥೆ(ಅಬಚೂರಿನ ಪೋಸ್ಟಾಫೀಸು ಕಥಾಸಂಕಲನ)

Coffee Par Kurukshetra | Saurav Sharma: राहुल-कांग्रेस छलनी, राजा Vs चन्नी? | Punjab Congress Crisis

