ಶ್ರೀ ಸೂರಿಕುಮೇರಿ ಗೋವಿಂದ ಭಟ್ಟ (Shri Surikumeri Govinda Bhat)

ತೆಂಕುತಿಟ್ಟು ಯಕ್ಷರಂಗದಲ್ಲಿ ದಶಾವತಾರಿ ಎಂದು ಗುರುತಿಸಲ್ಪಟ್ಟ, 7 ದಶಕಗಳಿಂದ ಯಕ್ಷರಂಗದಲ್ಲಿ ಸಕ್ರಿಯರಾಗಿರುವ, ತೆಂಕುತಿಟ್ಟು ಯಕ್ಷಗಾನ ಗುರುಗಳು ಎಂದೇ ಗುರುತಿಸಲ್ಪಡುವ ಶ್ರೀ ಸೂರಿಕುಮೇರಿ ಗೋವಿಂದ ಭಟ್ಟ (ಶ್ರೀ ಕೆ. ಗೋವಿಂದ ಭಟ್ಟ) [Recognized as Dashavatari from Art Lovers, Active artist for 7 decades, Yakshagana Guru Shri Surikumeri Govinda Bhat (Shri K. Govinda Bhat] ಉತ್ತಮವಾದ ಶೈಲಿಯ ನಾಟ್ಯ ಮತ್ತು ಮಾತುಗಾರಿಕೆಯಲ್ಲಿನ ಪ್ರಬುದ್ಧತೆಯ ಕಾರಣ ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಅಗ್ರಮಾನ್ಯ ಕಲಾವಿದರಾಗಿ ಕೀರ್ತಿಯನ್ನು ಗಳಿಸಿರುವ ಶ್ರೀ ಸೂರಿಕುಮೇರಿ ಗೋವಿಂದ ಭಟ್ಟರು ಧರ್ಮಸ್ಥಳ ಮೇಳದ ಹಿರಿಯ ಅನುಭವಿ ಕಲಾವಿದರಾಗಿ ಇವತ್ತಿಗೂ ತಿರುಗಾಟವನ್ನು ನಡೆಸುತ್ತಿದ್ದಾರೆ. ಶ್ರೀ ಕಿನಿಲ ಶಂಕರನಾರಾಯಣ ಭಟ್ಟ ಮತ್ತು ಕುಕ್ಕೆಮನೆ ಲಕ್ಷ್ಮೀ ಅಮ್ಮ ದಂಪತಿಗಳ ಪುತ್ರರಾಗಿ 22 ನೇ ಮಾರ್ಚು 1940 ರಲ್ಲಿ ಜನಿಸಿದ ಇವರು ಮೂಲತಃ ಜೀವನಯಾಪನೆಗಾಗಿಯೇ ಯಕ್ಷಗಾನ ಕ್ಷೇತ್ರಕ್ಕೆ ಬಂದು ತಮ್ಮ 11 ನೆಯ ವಯಸ್ಸಿನಲ್ಲಿ ಯಕ್ಷಗಾನ ರಂಗಪ್ರವೇಶವನ್ನು ಮಾಡಿದವರು. ಕುರಿಯ ವಿಠಲ ಶಾಸ್ತ್ರಿಗಳು ಇವರಿಗೆ ಯಕ್ಷಗಾನದ ಗುರುಗಳಾದರೆ, ಪರಮಶಿವನ್, ಮಾಧವ ಮೆನನ್, ರಾಜನ್ ಅಯ್ಯರ್ ಮೊದಲಾದವರಲ್ಲಿ ಭರತನಾಟ್ಯದ ಅಭ್ಯಾಸವನ್ನೂ ಮಾಡಿಕೊಂಡವರು. ಧರ್ಮಸ್ಥಳದಲ್ಲಿ 50 ವರ್ಷಗಳು, ಮೂಲ್ಕಿಯಲ್ಲಿ 1 ವರ್ಷ, ಕೂಡ್ಲು ಮೇಳದಲ್ಲಿ 2 ವರ್ಷಗಳು, ಸುರತ್ಕಲ್ ಮೇಳದಲ್ಲಿ 1 ವರ್ಷ, ಇರಾ ಶ್ರೀ ಸೋಮನಾಥೇಶ್ವರ ಮೇಳದಲ್ಲಿ 13 ವರ್ಷಗಳು ಒಟ್ಟಾರೆಯಾಗಿ ಬರೋಬ್ಬರಿ 67 ವರ್ಷಗಳ ಮೇಳ ತಿರುಗಾಟ ಸೂರಿಕುಮೇರಿ ಗೋವಿಂದ ಭಟ್ಟರದ್ದು. ಸ್ತ್ರೀವೇಷ, ಪುಂಡು ವೇಷ, ಕಿರೀಟ ವೇಷ ಇತ್ಯಾದಿ ವೇಷಪ್ರಕಾರಗಳಲ್ಲಿ ನೈಪುಣ್ಯತೆಯನ್ನೂ, ಪ್ರೌಢಿಮೆಯನ್ನೂ ಗಳಿಸಿರುವ ಇವರು ಶ್ರೀ ಕೃಷ್ಣ, ಶ್ರೀ ರಾಮ, ಸುಧನ್ವ, ಜಮದಗ್ನಿ, ಶ್ರೀದೇವಿ, ವಿಶ್ವಾಮಿತ್ರ, ಪರಶುರಾಮ, ಮಾಗಧ, ಶಿಶುಪಾಲ, ರಕ್ತಬೀಜ, ದುರ್ಯೋಧನ ಮೊದಲಾದ ಪಾತ್ರಗಳನ್ನು ನಿರ್ವಹಿಸುತ್ತ ಬಂದಿದ್ದಾರೆ. ಉತ್ತಮ ಮಾತು, ಖಚಿತ ಲಯ, ಉತ್ತಮ ನಾಟ್ಯ, ಕರಾರುವಾಕ್ಕಿನ ಧೋರಣೆಗಳನ್ನು ಇವರ ಪಾತ್ರಗಳಲ್ಲಿ ಕಾಣಬಹುದಾಗಿದೆ. ಶ್ರೀಮತಿ ಸಾವಿತ್ರಿ ಎಂಬವರನ್ನು ವರಿಸಿರುವ ಇವರಿಗೆ ಪ್ರಸನ್ನ ಕುಮಾರ್, ಶ್ಯಾಮ ಪ್ರಸಾದ್, ಸೂರ್ಯ ಪಸಾದ್ ಮೂವರು ಮಕ್ಕಳು. ಆಟ-ಕೂಟಗಳೆರಡರಲ್ಲೂ ಖ್ಯಾತಿಯನ್ನು ಗಳಿಸಿರುವ ಇವರು ನಾಟ್ಯಗುರುಗಳಾಗಿ ಸಾವಿರಾರು ಶಿಷ್ಯರುಗಳನ್ನು ಹೊಂದಿದವರಾಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ, ಕಲ್ಲುಗುಂಡಿ ಶೇಣಿ ಪ್ರಸಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮೊದಲಾದವುಗಳಲ್ಲದೆ ಕದ್ರಿ, ಬೆಂಗಳೂರು, ಮುಂಬೈ ಮುಂತಾಗಿ ದೇಶ ಮತ್ತು ಅಬುದಾಭಿ, ದುಬೈ, ಬೆಹರೈನ್ ಮುಂತಾಗಿ ವಿದೇಶಗಳಲ್ಲಿಯೂ ಅಗಣಿತ ಮಾನ ಸಮ್ಮಾನಗಳನ್ನು ಗಳಿಸಿದ್ದಾರೆ. ಯಕ್ಷಗಾನ ಕ್ಷೇತ್ರದ ಸೂರಿಕುಮೇರಿ ಗೋವಿಂದ ಭಟ್ಟರ ಶಿಷ್ಯರು ಮತ್ತು ಅಭಿಮಾನಿಗಳಿಂದ ತೆಂಕುತಿಟ್ಟು ಯಕ್ಷರಂಗದ ದಶಾವತಾರಿ ಎಂದು ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ. 11 ನೆಯ ವಯಸ್ಸಿನಿಂದ ಇವತ್ತಿನವರೆಗೂ ಕಳೆದ 67 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿ ಮುಂದುವರೆಯುತ್ತಿದ್ದಾರೆ. ಸೂರಿಕುಮೇರಿ ಗೋವಿಂದ ಭಟ್ಟರ ಸಂದರ್ಶನವನ್ನು ಶ್ರೀ ಧರ್ಮಸ್ಥಳ ಮೇಳದ ಬಯಲಾಟವಿದ್ದ ಕಡೆ ಹೋಗಿ ಮಾಡಿಕೊಂಡೆ. ಮರುದಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಹೋಗುವವರಿದ್ದರು. ಒಟ್ಟು 2 ಘಂಟೆಗಳ ಸಂದರ್ಶನವನ್ನು ಗೋವಿಂದ ಭಟ್ಟರು ನೀಡಿದ್ದಾರೆ. ಖುದ್ದು ಅವರಲ್ಲಿಯೇ ತಮ್ಮ ಕೆಲ ವಿಚಾರಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದಾಗ ಹಾರ್ದಿಕವಾದ ಮುಗುಳ್ನಗುವಿನೊಂದಿಗೆ ಈ ಪ್ರಪಂಚದಲ್ಲಿ ಎಲ್ಲರನ್ನೂ ನೂರಕ್ಕೆ ನೂರು ಒಪ್ಪಿಕೊಳ್ಳುವುದಕ್ಕೆ ಬರುತ್ತದೆಯೇ? ಎಲ್ಲರಲ್ಲೂ ಒಂದಲ್ಲ ಒಂದು ಕೊರತೆಯಿದ್ದೇ ಇರುತ್ತದೆ. ಯಾರೂ ಪರಿಪೂರ್ಣರಲ್ಲ. ಅನೇಕ ವಿಚಾರಗಳು ಅನೇಕರಿಗೆ ಒಪ್ಪಿತವಾಗುವುದಿಲ್ಲ ಎನ್ನುವ ಸಂತುಲಿತ ಮಾತನ್ನು ಹೇಳಿದರು. _________________________________________________________________ I hereby declare that, the content is in the public domain OR is not eligible for copyright protection. I swear, under penalty of perjury, that I have a good faith belief that the material does not fall under copyright protection. I consent to the jurisdiction of the Federal District Court for the district in which my address is located, or if my address is outside of the United States, the judicial district in which YouTube is located, and will accept service of process from the claimant if any.

Thenkuthittu yakshagana bannada veshada kammata - Video Part 20 - Avalokana by K. Govinda bhat
▶︎

Thenkuthittu yakshagana bannada veshada kammata - Video Part 20 - Avalokana by K. Govinda bhat

#ಗೋವಿಂದಭಟ್ಟರ ನಡೆನುಡಿ ಆಚಾರವಿಚಾರ ಜೀವನಶೈಲಿಯನ್ನು ಎಳೆ ಎಳೆಯಾಗಿ ವಿವರಿಸಿದ ಉಜಿರೆ ಅಶೋಕಭಟ್ರು-ಉತ್ತಮಾಭಿನಂದನಾ ಮಾತು
▶︎

#ಗೋವಿಂದಭಟ್ಟರ ನಡೆನುಡಿ ಆಚಾರವಿಚಾರ ಜೀವನಶೈಲಿಯನ್ನು ಎಳೆ ಎಳೆಯಾಗಿ ವಿವರಿಸಿದ ಉಜಿರೆ ಅಶೋಕಭಟ್ರು-ಉತ್ತಮಾಭಿನಂದನಾ ಮಾತು

ನಾವಡರು ಒಂದು ವರುಷ ತಮ್ಮ ಬೈಕ್ ನಲ್ಲೇ ಆಟ ನಡೆಯುವ ಸ್ಥಳಕ್ಕೆ ಬಂದಿದ್ದರು ಅದಕ್ಕೆ ಕಾರಣವೇನು? ಕೊಂಡದಕುಳಿಯವರು ಏನಂದರು?
▶︎

ನಾವಡರು ಒಂದು ವರುಷ ತಮ್ಮ ಬೈಕ್ ನಲ್ಲೇ ಆಟ ನಡೆಯುವ ಸ್ಥಳಕ್ಕೆ ಬಂದಿದ್ದರು ಅದಕ್ಕೆ ಕಾರಣವೇನು? ಕೊಂಡದಕುಳಿಯವರು ಏನಂದರು?

#ಮಲ್ಪೆವಾಸುದೇವಸಾಮಗರು ಮತ್ತು #ಗೋವಿಂದಭಟ್ರ ಮಾತಿನ ಜುಗಲ್ಬಂದಿ-ವಿಶ್ವಾಮಿತ್ರ-ದೇವೇಂದ್ರರ  ಮದ್ಯೆ-#ಲೀಲಮ್ಮನ ಪದ್ಯ
▶︎

#ಮಲ್ಪೆವಾಸುದೇವಸಾಮಗರು ಮತ್ತು #ಗೋವಿಂದಭಟ್ರ ಮಾತಿನ ಜುಗಲ್ಬಂದಿ-ವಿಶ್ವಾಮಿತ್ರ-ದೇವೇಂದ್ರರ ಮದ್ಯೆ-#ಲೀಲಮ್ಮನ ಪದ್ಯ

SHARADA CULTURAL TRUST 33rd Annual Music Festival Day 1 VID. SRI. RAMAKRISHNAN MURTHY Vocal Concert
▶︎

SHARADA CULTURAL TRUST 33rd Annual Music Festival Day 1 VID. SRI. RAMAKRISHNAN MURTHY Vocal Concert

ಸಾಲಿಗ್ರಾಮ ಮೇಳ ಬೇಡ ಅಂತ ಅರ್ಧದಲ್ಲೇ ಬಿಡಲು ಕಾರಣವೇನು ? ಯಕ್ಷ ಸುಧನ್ವ ಖ್ಯಾತಿಯ ಕೋಟ ಸುರೇಶ್ ಅವರು ತಿಳಿಸಿದ್ದಾರೆ !
▶︎

ಸಾಲಿಗ್ರಾಮ ಮೇಳ ಬೇಡ ಅಂತ ಅರ್ಧದಲ್ಲೇ ಬಿಡಲು ಕಾರಣವೇನು ? ಯಕ್ಷ ಸುಧನ್ವ ಖ್ಯಾತಿಯ ಕೋಟ ಸುರೇಶ್ ಅವರು ತಿಳಿಸಿದ್ದಾರೆ !

HANUMAGIRI MELA LIVE | ಹನುಮಗಿರಿ ಮೇಳ | ಬೆಂಗಳೂರು ಯಕ್ಷೋತ್ಸವ -2026 "ವರ್ಣ ಪಲ್ಲಟ" ಯಕ್ಷಗಾನ ಬಯಲಾಟ ನೇರಪ್ರಸಾರ
▶︎

HANUMAGIRI MELA LIVE | ಹನುಮಗಿರಿ ಮೇಳ | ಬೆಂಗಳೂರು ಯಕ್ಷೋತ್ಸವ -2026 "ವರ್ಣ ಪಲ್ಲಟ" ಯಕ್ಷಗಾನ ಬಯಲಾಟ ನೇರಪ್ರಸಾರ

ಶಾಲೆಗೆ ಚಕ್ಕರ್ ಆಟಕ್ಕೆ ಹಾಜರ್ !! ಯಕ್ಷಗಾನದವರ ಬಸ್ ಹಿಂದೆ ಓಡುತ್ತಿದ್ದೆ! ಪೇತ್ರಿ ರಾಘು ಅವರು ಹಾಗೆ ಯಾಕೆ ಹೇಳಿದರು ?
▶︎

ಶಾಲೆಗೆ ಚಕ್ಕರ್ ಆಟಕ್ಕೆ ಹಾಜರ್ !! ಯಕ್ಷಗಾನದವರ ಬಸ್ ಹಿಂದೆ ಓಡುತ್ತಿದ್ದೆ! ಪೇತ್ರಿ ರಾಘು ಅವರು ಹಾಗೆ ಯಾಕೆ ಹೇಳಿದರು ?

ಮಹೇಶ್ ಶೆಟ್ಟಿ:ವೈರಲ್ ಆಡಿಯೋ ಹಿಂದೆ ದೊಡ್ಡ ಪುಂಡತಂತ್ರ! ಪ್ರಜ್ವಲ್ ಅಸಲಿ ಆಟ ಬಯಲು!?
▶︎

ಮಹೇಶ್ ಶೆಟ್ಟಿ:ವೈರಲ್ ಆಡಿಯೋ ಹಿಂದೆ ದೊಡ್ಡ ಪುಂಡತಂತ್ರ! ಪ್ರಜ್ವಲ್ ಅಸಲಿ ಆಟ ಬಯಲು!?

YAKSHAGANA I Shri Surikumeri Govinda Bhat - ಚೌಕಿ TO ರಂಗಸ್ಥಳ-Jambava-INDRAJITU KALAGA Ragurama holla🎶
▶︎

YAKSHAGANA I Shri Surikumeri Govinda Bhat - ಚೌಕಿ TO ರಂಗಸ್ಥಳ-Jambava-INDRAJITU KALAGA Ragurama holla🎶

ಶ್ರೀಗೋವಿಂದಭಟ್ಟರು ಮತ್ತು ಬಂಟ್ವಾಳರು-ಕಳ್ಳುಕುಡಿವ ದೇವೇಂದ್ರನ ಪ್ರಚಂಡ ಪಾತ್ರದಲ್ಲಿ-ಹೊಳ್ಳರ ಪದ್ಯ
▶︎

ಶ್ರೀಗೋವಿಂದಭಟ್ಟರು ಮತ್ತು ಬಂಟ್ವಾಳರು-ಕಳ್ಳುಕುಡಿವ ದೇವೇಂದ್ರನ ಪ್ರಚಂಡ ಪಾತ್ರದಲ್ಲಿ-ಹೊಳ್ಳರ ಪದ್ಯ

Yakshagana: In conversation with Surikumeru Govinda Bhat
▶︎

Yakshagana: In conversation with Surikumeru Govinda Bhat

ಸೂರಿಕುಮೇರಿ ಗೋವಿಂದ ಭಟ್ - ಶ್ರೀರಂಗ ತುಲಾಭಾರ ಪ್ರಸಂಗದ ಬಲರಾಮನಾಗಿ | Soorikumari Govinda Bhat
▶︎

ಸೂರಿಕುಮೇರಿ ಗೋವಿಂದ ಭಟ್ - ಶ್ರೀರಂಗ ತುಲಾಭಾರ ಪ್ರಸಂಗದ ಬಲರಾಮನಾಗಿ | Soorikumari Govinda Bhat

Puthige Raghurama Holla Bhagavathike | VIHARA PLUS
▶︎

Puthige Raghurama Holla Bhagavathike | VIHARA PLUS

ಅಗಸ್ತ್ಯ ಮಹರ್ಷಿ - ಜ್ಞಾನ, ತಪಸ್ಸು, ಧರ್ಮದ ಪ್ರತೀಕ| Agastya Maharshi Life Story in Kannada| Patra Chitrana
▶︎

ಅಗಸ್ತ್ಯ ಮಹರ್ಷಿ - ಜ್ಞಾನ, ತಪಸ್ಸು, ಧರ್ಮದ ಪ್ರತೀಕ| Agastya Maharshi Life Story in Kannada| Patra Chitrana

ಬಣ್ಣದ ದೈತ್ಯ ದಿ| ಗೇರುಕಟ್ಟೆ ಗಂಗಯ್ಯ ಶೆಟ್ಟಿ (Yakshagana Artist Late. Sri Gerukatte Gangayya Shetty)
▶︎

ಬಣ್ಣದ ದೈತ್ಯ ದಿ| ಗೇರುಕಟ್ಟೆ ಗಂಗಯ್ಯ ಶೆಟ್ಟಿ (Yakshagana Artist Late. Sri Gerukatte Gangayya Shetty)

SURIKUMERU GOVINDA BHAT |ಇಂದು ನಮ್ಮನ್ನಗಲಿದ ಯಕ್ಷಗಾನ ದಶಾವತಾರಿ ಸೂರಿಕುಮೇರು ಕೆ ಗೋವಿಂದ ಭಟ್ಟರ ಗದಾಯುದ್ಧದ ಕೌರವ
▶︎

SURIKUMERU GOVINDA BHAT |ಇಂದು ನಮ್ಮನ್ನಗಲಿದ ಯಕ್ಷಗಾನ ದಶಾವತಾರಿ ಸೂರಿಕುಮೇರು ಕೆ ಗೋವಿಂದ ಭಟ್ಟರ ಗದಾಯುದ್ಧದ ಕೌರವ

🔴Premiere🔴 ಶಲ್ಯ ಸಾರಥ್ಯ ತಾಳಮದ್ದಳೆ | Shalya Sarathya Talamaddale Full | Pavan Kirankere | Sankadagundi
▶︎

🔴Premiere🔴 ಶಲ್ಯ ಸಾರಥ್ಯ ತಾಳಮದ್ದಳೆ | Shalya Sarathya Talamaddale Full | Pavan Kirankere | Sankadagundi

ಸೌಕೂರು ಮೇಳದಿಂದ ಕೋಟ ಶ್ರೀ ಅಮೃತೇಶ್ವರಿ ಮೇಳಕ್ಕೆ ಕೋಟ ಸುರೇಶ್ ಅವರನ್ನ ಕರೆದು ತಂದವರು !! ಯಾರು ??
▶︎

ಸೌಕೂರು ಮೇಳದಿಂದ ಕೋಟ ಶ್ರೀ ಅಮೃತೇಶ್ವರಿ ಮೇಳಕ್ಕೆ ಕೋಟ ಸುರೇಶ್ ಅವರನ್ನ ಕರೆದು ತಂದವರು !! ಯಾರು ??

ಯಕ್ಷಗಾನ ಕಾಲಮಿತಿಯ ಬಗ್ಗೆ ರಂಗ ಭಟ್ಟರ ಅರ್ಥ ಪೂರ್ಣ ಮಾತುಗಳು | Yakshagana artist Vasudeva Ranga bhat talking
▶︎

ಯಕ್ಷಗಾನ ಕಾಲಮಿತಿಯ ಬಗ್ಗೆ ರಂಗ ಭಟ್ಟರ ಅರ್ಥ ಪೂರ್ಣ ಮಾತುಗಳು | Yakshagana artist Vasudeva Ranga bhat talking