ಚಿನ್ನದ ಅಂಗಡಿ ಮುಂದೆ ಸ್ಕೆಚ್ ಹಾಕುತ್ತಿದ್ದಾಗಲೇ ಸಿಕ್ಕಿಬಿದ್ದ ಅಡುಗೆ ಭಟ್ಟ...ಬಿಚ್ಚಿಕೊಂಡಿತು ಕಳ್ಳತನದ ರಹಸ್ಯ...!
ಚಿನ್ನದ ಅಂಗಡಿ ಮುಂದೆ ಸ್ಕೆಚ್ ಹಾಕುತ್ತಿದ್ದಾಗಲೇ ಸಿಕ್ಕಿಬಿದ್ದ ಅಡುಗೆ ಭಟ್ಟ; ಬಿಚ್ಚಿಕೊಂಡಿತು ಕಳ್ಳತನದ ರಹಸ್ಯ! ಕೊನೇಪಲ್ಲಿ,ಅನಪಲ್ಲಿ ಗ್ರಾಮಗಳಲ್ಲಿ ಕಳವು ಮಾಡಿದ್ದ ಖದೀಮ ಅರೆಸ್ಟ್:90 ಗ್ರಾಂ ಚಿನ್ನ ರಿಕವರಿ ಚಿಂತಾಮಣಿ ತಾಲೂಕಿನ ಕೆಂಚನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು,ಹಲವು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಅಂತರ ಜಿಲ್ಲಾ ಮನೆಗಳ್ಳನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು 13.5 ಲಕ್ಷ ರೂ. ಮೌಲ್ಯದ ಒಟ್ಟು 90 ಗ್ರಾಂ ಚಿನ್ನದ ಒಡವೆಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಯನ್ನು ಚೇಳೂರು ತಾಲೂಕಿನ ಕದರೇನಹಳ್ಳಿ ಗ್ರಾಮದ ನಿವಾಸಿ ಪ್ರಶಾಂತ್ ಕೆ.ಆರ್ (26) ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದನು.ಜುಲೈ 9ರಂದು ಸಂಜೆ 7 ಗಂಟೆ ಸುಮಾರಿಗೆ ಚಿಂತಾಮಣಿ ನಗರದ ಬಂಗಾರದ ಅಂಗಡಿಯೊಂದರ ಮುಂಭಾಗದಲ್ಲಿ ಈತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದನು.ಇದನ್ನು ಗಮನಿಸಿದ ಕೆಂಚಾರಹಳ್ಳಿ ಠಾಣೆಯ ಹೆಡ್ ಕಾನ್ಸ್ಟೇಬಲ್ಗಳಾದ ವಿಶ್ವನಾಥ್,ವಿಜಯ್ ಕುಮಾರ್ ಹಾಗೂ ಕಾನ್ಸ್ಟೇಬಲ್ ನಾರಾಯಣ ಕೆ.ಆರ್ ತಕ್ಷಣವೇ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಆರೋಪಿ ತಾನು ಮಾಡಿದ ಕಳ್ಳತನದ ಕೃತ್ಯಗಳನ್ನು ಒಪ್ಪಿಕೊಂಡಿದ್ದಾನೆ. ಸುಮಾರು ಒಂದು ವರ್ಷದ ಹಿಂದೆ ಕೊನೇಪಲ್ಲಿ ಗ್ರಾಮದ ಲಕ್ಷ್ಮೀಪತಿ ಎಂಬುವರ ಮನೆಯಲ್ಲಿ 66 ಗ್ರಾಂ ಚಿನ್ನದ ವಡವೆಗಳನ್ನು ಕದ್ದಿರುವುದಾಗಿ ತಿಳಿಸಿದ್ದಾನೆ. ಸುಮಾರು ಐದು ತಿಂಗಳ ಹಿಂದೆ ಅನಪಲ್ಲಿ ಗ್ರಾಮದ ವಿನೋದಮ್ಮ ಎಂಬುವರ ಮನೆಯಲ್ಲಿ 20 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ. ಪೊಲೀಸರು ಆರೋಪಿಯಿಂದ ಕದ್ದ ಮಾಲನ್ನು ವಶಪಡಿಸಿಕೊಂಡು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿ ಪ್ರಶಾಂತ್ ಕೇವಲ ಚಿಕ್ಕಬಳ್ಳಾಪುರ ಜಿಲ್ಲೆಯಷ್ಟೇ ಅಲ್ಲದೆ,ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಬೆಂಗಳೂರು ನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಅಂತರ ಜಿಲ್ಲಾ ಮನೆಗಳ್ಳನಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಾಲ್ ಚೌಕ್ಸಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗನ್ನಾಥ್ ರೈ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.ಕೆಂಚಾರಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಜಿ.ಸಿ. ನಾರಾಯಣಸ್ವಾಮಿ, ಸಬ್ ಇನ್ಸ್ಪೆಕ್ಟರ್ ಶ್ಯಾಮಲಾ,ಪ್ರೊಫೆಷನರಿ ಪಿಎಸ್ಐ ಶರಣಗೌಡ ಎಸ್. ಮೂಲಿಮನಿ ಮತ್ತು ಸಿಬ್ಬಂದಿ ಒಳಗೊಂಡ ಯಶಸ್ವಿ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ

ವೇ ಪ್ರೋಟೀನ್ ದೇಹಕ್ಕೆ ಒಳ್ಳೆಯದಾ| Bangalore Gastro Centre - Dr Harish Kulkarni | Masth Magaa | Amar

DK Shivakumar On Govt Employees (OPS) Pension Demand | ಡಿಕೆಶಿ ಭಾಷಣದ ವೇಳೆ ಸರ್ಕಾರಿ ನೌಕರರ OPS ಕೂಗು!

R L Jalappa | ಮಾಜಿ ಸಚಿವರ ಸೊಸೆಗೆ 'ಐದು ವರ್ಷ ಜೈಲು..! ಏನಿದು ಕೇಸ್..? ಯಾರು ಆ ಸಚಿವರು..! | SNK

“You’ll Never Be Like Us.” Until 500KG Happened 🔥

Connect With Ajit Hanamakkanavar: ಮ್ಯಾನಿಫೆಸ್ಟೇಷನ್ ಬಗ್ಗೆ ಅಜಿತ್ ಹನಮಕ್ಕನವರ್ ಮಾತು! | EP-3 | Suvarna News

LIVE🔴 Siddaramaiah Speech Vijayanagara | MP Prakash Statue Unveiling: ವಿಜಯನಗರದಲ್ಲಿ ಸಿದ್ದರಾಮಯ್ಯ ಅಬ್ಬರ

Kentucky governor again seeks answers on Mitch McConnell's health

See How a 453kg Giant Bluefin Tuna Is Flawlessly Carved in Seconds

Congress passes housing bill without Trump's signature

Most Incredible Cruise Ship Videos Ever Captured

BREAKING: U.S. launches new strikes against Iran

South Bay Congressman Ro Khanna says he was detained by Israeli settlers

Flash flooding from Southern Missouri to West Virgina

ಗಾನಕೋಗಿಲೆ ಎಸ್.ಜಾನಕಿ ಇನ್ನಿಲ್ಲ - ಸಾರ್ವಜನಿಕ ಬದುಕಿಂದ ದೂರವಾಗಿದ್ರು- Singer S.janaki No more

Parents of Nolan Wells call for investigation

🔴 LIVE | Legendary Singer S. Janaki Passes Away: ಹೃದಯಾಘಾತದಿಂದ ನಿಧನರಾದ ಗಾನಗಂಧರ್ವಿ

Open ANY Lock without a key in a flash!Smart DIY Tips

Typical Family Apartment Tour (How Russians REALLY Live) 🏠

