Dragon Fruiets, ಡ್ರಾಗನ್ ಫ್ರೂಟ್ಸ್ ಸಾಧನೆಯ ಜೈ ಜವಾನ್ ಜೈ ಕಿಸಾನ್ ಡಾ. ಕಾಂಚೋಡು ಗೋಪಾಲಕೃಷ್ಣ ಭಟ್...
ಭಾರತೀಯ ಭೂ ಸೇನೆಯಲ್ಲಿ 18 ವರ್ಷ ಯೋಧರಾಗಿ ಗೋಪಾಲಕೃಷ್ಣ ಕಾಂಚೋಡು ಅವರು ಭಾರತೀಯ ಭೂ ಸೇನೆಯಲ್ಲಿ ಜಮ್ಮು ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತರಾದವರು. ಗೋಪಾಲಕೃಷ್ಣ ಭಟ್ ಕಾಂಚೋಡು ಜೈ ಜವಾನ್ ಆದವರು, ಇದೀಗ ಅವರು ಜೈ ಕಿಸಾನ್ ಮಾತಿನಂತೆ ವಿಶಿಷ್ಟ ಮಾದರಿಯಲ್ಲಿ ಕೃಷಿ ಕ್ಷೇತ್ರದಲ್ಲಿ ತೊಡಗಲು ಡಿ.ಸಿ ಮನ್ನಾ 5 ಎಕರೆಗಳಷ್ಟು ಭೂಮಿಯನ್ನು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಪಡೆದು ಅಡಿಕೆ, ಕಾಳು ಮೆಣಸು, ಪೇರಳೆ, ಮಾವೂ, ಬಾಳೆ ಕೃಷಿ ಮಾಡುತ್ತಿದ್ದರು. ಇತ್ತೀಚೆಗೆ ಪರಿಚಯವಾದ ಡ್ರಾಗನ್ ಫ್ರೂಟ್ಸ ಬಗ್ಗೆ ಆಸಕ್ತಿ ತಳೆದು ಯುಟ್ಯೂಬ್ ಮೂಲಕ ಮಾಹಿತಿ ಕಲೆ ಹಾಕಿದರು. ಮತ್ತೆ ಕೃಷಿ ಮಾಡಲು ಒಂದು ಎಕರೆ ಭೂಮಿಯನ್ನು ಸಿದ್ಧಪಡಿಸಿ 9 ಅಡಿ ಅಂತರದಲ್ಲಿ ಸಾಲು ಮಡಿ ಮಾಡಿ ಬಳ್ಳಾರೀ ಭಾಗಗಳಿಂದ ಸಸಿಗಳನ್ನು ತಂದು ಗಿಡದಿಂದ ಗಿಡಕ್ಕೆ 8 ಅಡಿ ಅಂತರದಲ್ಲಿ ಸುಮಾರು 540 ಗಿಡ ನಾಟಿ ಮಾಡಿದರು. 7 ಅಡಿ ಉದ್ದದ ಕಲ್ಲಿನ ಕಂಬ ಹೂತು ಹಾಕಿ, ಮೇಲೇ ಚೌಕಾಕಾರದ ಸಿಮೆಂಟ್ ಪಟ್ಟಿಗಳನ್ನು ಇರಿಸಿ. ಕಂಬದ ನಾಲ್ಕು ಬದಿಗಳಿಗೆ ಗಿಡ ನಾಟಿ ಮಾಡಿದರು. ಗಿಡಗಳಿಗೆ ವರ್ಷಕ್ಕೆ ನಾಲ್ಕು ಬಾರಿ ಸೆಗಣಿ, ಹರಳಿನ ಹಿಂಡಿ, ಕಹಿ ಬೇವಿನ ಹಿಂಡಿ ಸಾವಯವ ಗೊಬ್ಬರ ನೀಡುತ್ತಾ ಬಂದದ್ದು ಬೇಸಿಗೆಯಲ್ಲಿ ಹದಿನೈದು ದಿನಗಳಿಗೆ 2 ಲೀಟರ್ ನೀರು ನೀಡುವರು. ನಾಟಿ ಮಾಡಿದ ಆರಂಭದ ವರ್ಷ ದಿಂದಲೆ ಹೂ ಬಿಡಲಾರಂಭಿಸುತ್ತದೆ. ಸಾಮಾನ್ಯವಾಗಿ ವರ್ಷದ ಮಾರ್ಚ್ ನಿಂದ ನವೆಂಬರ್ ತನಕ ಆರು ತಿಂಗಳ ಕಾಲ ಕಾಯಿ ಬಿಡುತ್ತಿರುತ್ತದೆ. ಇದೀಗ 2ನೇ ವರ್ಷದಲ್ಲಿ ಸುಮಾರು ಮೂರು ಟನ್ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಇವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಜೈ ಜವಾನ್ ಜೈ ಕಿಸಾನ್ "ಕೃಷಿಕ ರತ್ನ” ಪ್ರಶಸ್ತಿಗೆ ಆಯ್ಕೆ ಯಾಗಿ, ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಅವರಿಂದ ಪುರಸ್ಕೃತ ಗೊಂಡಿದ್ದರು. ಮಾಡಿದ ಸಾಧನೆ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಗುರುತಿಸಿ, ಏಷ್ಯಾ ವೇದಿಕ್ ಕಲ್ಬರಲ್ ಅಕಾಡೆಮಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಏಷ್ಯಾ ವೇದಿಕ್ ಕಲ್ಚರ್ ಪೌಂಡೇಶನ್ ವತಿಯಿಂದ ಏಷ್ಯಾ ವೇದಿಕ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಪ್ರತಿ ವರ್ಷ ನಡೆಯುವ ಈ ಗೌರವ ಪ್ರಶಸ್ತಿಗೆ ಈ ವರ್ಷ ಗೋಪಾಲಕೃಷ್ಣ ಕಾಂಚೋಡು ಅವರು ಪಾತ್ರರಾಗಿದ್ದಾರೆ. ಸೇನಾ ನಿವೃತ್ತಿಯ ನಂತರ ತನ್ನೂರಿಗೆ ಬಂದು ಬೆಳ್ತಂಗಡಿ ತಾಲೂಕು ಉಜಿರೆ ಯಲ್ಲಿ ನೆಲೆಸಿ, "ರವಿ ಟ್ರೇಡರ್ಸ್" ಎಂಬ ಉದ್ದಿಮೆ ಸ್ಥಾಪಿಸಿ ಹತ್ತಾರು ಯುವಕರಿಗೆ ಜೀವನೋಪಾಯದ ಹಾದಿಯನ್ನು ಸೃಷ್ಟಿಸುತ್ತಾ ಸೇನೆಗೆ ಸೇರಲು ಬಯಸುವ ಯುವಕರಿಗೆ ಉಚಿತ ಮಾಹಿತಿ ನೀಡುತ್ತಾ ಬರುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಕೃಷಿ ಕ್ಷೇತ್ರ ದಲ್ಲಿ ವೈಜ್ಞಾನಿಕವಾಗಿ, ಉತ್ತಮ ಆದಾಯ ಪಡೆಯುವ ಆಧುನಿಕ ತಂತ್ರಜ್ಞಾನ ಗಳೊಂದಿಗೆ ಪ್ರಕೃತಿಗೆ ತೊಂದರೆ ಯಾಗದಂತೆ (ಜಲ, ನೆಲ ಉಳಿಸಿ ) ಸಾವಯವ ಕೃಷಿಯನ್ನು ಮಾಡುತ್ತಾ, ಕಂಗು, ತೆಂಗು, ಬಾಳೆ ಕೃಷಿಗಳೊಂದಿಗೆ ಎಲ್ಲೋಟಿಕ್ (exotic) ಹಣ್ಣುಗಳನ್ನು ಬೆಳೆಯುತ್ತಾ, ಪ್ರಾಕೃತಿಕವಾಗಿ ಪ್ರಕೃತಿ ಸಹಜಕ್ರಿಯೆ, ಪರಾಗ ಸ್ಪರ್ಶಕ್ಕೆ ಪೂರಕ ಜೇನುಸಾಕಣೆ ಮಾಡುತ್ತಾ ಹತ್ತು ಹಲವು ಆಸಕ್ತ ಕೃಷಿಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜೊತೆಗೆ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇವರ ಸಹಧರ್ಮಿಣಿ ಶ್ರೀ ಮತಿ ಸುಲೋಚನಾ ಕಾಂಚೋಡು, ಇವರೊಂದಿಗೆ ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸಿ ಜತೆಯಾದವರು. ಸಾಧನೆಯಲ್ಲಿ ಇವರು ಬೆಂಗಳೂರಿನ ಎಸ್ಎಸ್ಬಿ ತರಬೇತಿ ಅಕಾಡೆಮಿಯಲ್ಲಿ ನಡೆಯುವ ವಿಶ್ವ ತಾಯಂದಿರ ದಿನದಂದು ನಾರಿ ಶಕ್ತಿ ಕಾರ್ಯಕ್ರಮಲ್ಲಿ ದಕ್ಷಿಣ ಭಾರತದ ಸೇನಾಪಡೆಯ ಪ್ರಧಾನ ಕಮಾಂಡರ್ಗಳ ಸಮಕ್ಷಮ ಸುಲೋಚನಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ತನ್ನ ಪತಿ ಜಮ್ಮು ಕಾಶ್ಮೀರ ಸೇರಿದಂತೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಯಾವುದೇ ಚಿಂತೆಗೆ ಒಳಗಾಗದೆ ಪತಿಯನ್ನು ಪ್ರೋತ್ಸಾಹಿಸುತ್ತಾ ಒಬ್ಬ ಮಹಿಳೆಯಾಗಿ ವೀರ ನಾರಿಯಾಗಿ,ಮಕ್ಕಳಿಗೆ ವೀರ ಮಾತೆಯಾಗಿ, ಉತ್ತಮ ಸಂಸ್ಕಾರಗಳನ್ನು ನೀಡಿ ಒಳ್ಳೆಯ ವಿದ್ಯಾವಂತ ಸಂಸ್ಕಾರಯುತ ಪ್ರಜೆಗಳನ್ನಾಗಿಸುವಲ್ಲಿ ಒಬ್ಬ ಮಹಿಳೆಯಾಗಿ ಸಮಾಜಕ್ಕೆ ಆದರ್ಶಪ್ರಾಯರಾಗಿ ಬಾಳಿರುವುದನ್ನು ಗುರುತಿಸಿ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೇ 8ರಂದು ಬೆಂಗಳೂರು SSB ತರಬೇತಿ ಅಕಾಡೆಮಿಯಲ್ಲಿದ, ಭಾರತದ ಸೇನಾಪಡೆಯ ಪ್ರಧಾನ ಕಮಾಂಡರ್ ಗಳ ಸಮಕ್ಷಮ ಗೌರವಿಸಲ್ಪಟ್ಟರು. ಒರ್ವ ಪುತ್ರ ಹಾಗೂ ಪುತ್ರಿಯನ್ನು ಪಡೆದ ಸುಖೀ ಸಂಸಾರ ಇವರದು. ಗುರಿ ಇಟ್ಟು ಸಾಧಿಸುವ ಇವರು ಯುವಕರಿಗೆ ಮಾದರೀ ನಿಜವಾದ ಅರ್ಥದಲ್ಲಿ ಜೈ ಜವಾನ್ ಜೈ ಕಿಸಾನ್.. Mangalore Samachar.. / @mangaloresamachar9338

Politics Chat, June 25, 2026

ರಂಗಭೂಮಿ ನಟನೆಗೂ, ಸಿನಿಮಾ ನಟನೆಗೂ ವ್ಯತ್ಯಾಸವೇನು? | Anant Nag Interview In Suvarna News | Kannada News

Visit to Bilal Nursery Farm 🌵 Cactus & Succulents Paradise in Pakistan!

LIVE: ರಾಮಮಂದಿರದ ಹುಂಡಿ ಹಣ ಯಾರ ಪಾಲಾಯ್ತು? | Ayodhya Ram Donation Scam | LRC Full | Suvarna News

HUGE Garlic Harvest & How to Cure for LONG-TERM Storage

Why Your Mango Grafting Always Fails (Big Mistakes You’re Making!)

Pranesh Latest Comedy 2022 Full Episose | GANGAVATHI PRANESH in Ashoka Hotel | SANDALWOOD TALKIES

Growing Sunflowers in Small Containers 🌱🌻 From Seeds to Harvest – Step by Step

How To Germinate Cherry Seeds That Works every Time - Growing Cherry Trees From Seeds

She Turned Barren Desert Into A Thriving Forest in Rajasthan

Why Your Mango Grafting Fails Again And Again ( Rules You Did't Follow )

They Are Building A Greenhouse On An Empty Field For Growing Delicious Strawberries!

The process of a Korean scientist growing fresh vegetables and delivering them to your home.

ಅಯೋಧ್ಯಾ ಶ್ರೀರಾಮ ಮಂದಿರ:ಕಳ್ಳರು ಸಿಕ್ಕಿಬಿದ್ದರು

Unique method of growing watermelon at home - The yield surprised me

How to Pick a Sweet Watermelon... The Old AMISH Way

Master Hiranayya Comedy Speech | ಹಿರಣಯ್ಯ ರವರ ಮದು ಪ್ರಸಂಗ | Gangavathi Pranesh | SANDALWOOD TALKIES

ALMOST NO ONE BELIEVED IN THIS SWEET POTATO… UNTIL WE SAW THESE RESULTS! 🇲🇿🍠

ಲಾಯರ್ ಓದುವ ಹುಡುಗ ಮಾಡಿದ ಕೃಷಿ ಪ್ರಯೋಗ! | Half Acre Avocado & Dragon Fruit Farming Success Story

