ಶ್ರೀ ವಾದಿರಾಜ ವಿರಚಿತ ಸುಂದರಕಾಂಡ...... Sundarakaanda......
ಶ್ರೀ ವಾದಿರಾಜ ವಿರಚಿತ ಸುಂದರಕಾಂಡ ಎಷ್ಟು ಸಾಹಸವಂತ ನೀನೇ ಬಲವಂತ | ದಿಟ್ಟ ಮೂರುತಿ ಭಳಿ ಭಳಿರೇ ಹನುಮಂತ || ಅಟ್ಟುವ ಖಳರೆ ದೆ ಮೆಟ್ಟಿ ತುಳಿದುತಲೆ | ಕುಟ್ಟಿ ಚಂಡಾಡಿದ ದಿಟ್ಟ ನೀನಹುದೋ ||ಪ|| ರಾಮರಪ್ಪಣೆಯಿಂದ ಶರಧಿಯ ದಾ೦ಟಿ | ಆ ಮಹಾ ಲಂಕೆಯ ಕಂಡೆ ಕಿರೀಟಿ | ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದಿ | ಈ ಮಹಿಯೊಳಗೆ ನಿನಗಾರೈ ಸಾಟಿ || ೧ || ದೂರದಿಂದಸುರನ ಪುರವನೆ ನೋಡಿ | ಭರದಿ ಶ್ರೀ ರಾಮರ ಸ್ಮರಣೆಯ ಮಾಡಿ | ಹಾರಿದೆ ಹರುಷದಿ ಹರಿಸಿ ಲಂಕಿಣಿಯನು | ವಾರಿಜ ಮುಖಿಯನು ಕಂಡು ಮಾತಾಡಿ || ೨ || ರಾಮರ ಕ್ಷೇಮವ ರಮಣಿಗೆ ಪೇಳಿ | ತಾಮಸ ಮಾಡದೆ ಮುದ್ರಿಕೆ ನೀಡಿ | ಪ್ರೇಮದಿ ಜಾನಕಿ ಕುರುಹನು ಕೊಡಲಾಗ | ಆ ಮಹಾವನದೊಳು ಫಲವನು ಬೇಡಿ|| ೩ || ಕಣ್ಣಿಗೆ ಪ್ರಿಯವಾದ ದ ಹಣ್ಣನು ಕೊಯ್ದು | ಹಣ್ಣಿನ ನೆವದಲಿ ಅಸುರರ ಹೊಯ್ದು | ಪಣ್ಣ ಪಣ್ಣನೆ ಹಾರಿ ನೆಗೆ ನೆಗೆದಾಡುತ | ಬಣ್ಣಿಸಿ ಅಸುರರ ಬಲವನು ಮುರಿದು || ೪ || ಶ್ರುಂಗಾರ ವನದೊಳಗೆ ಇದ್ದ ರಾಕ್ಷಸರ | ಅಂಗವನಳಿಸಿದೆ ಅತಿರಣಶೂರಾ | ನುಂಗಿ ಅಸ್ತ್ರಗಳ ಅಕ್ಷಯ ಕುವರನ | ಭಂಗಿಸಿ ಬಿಸುಟಿದ್ಯೋ ಬಂದ ರಕ್ಕಸರಾ|| ೫ || ದೂರು ಪೇಳಿದರೆಲ್ಲ ರಾವಣನೊಡನೆ | ಚೀರುತ್ತ ಕರೆಸಿದ ಇಂದ್ರಜಿತ್ತುವನೆ | ಚೋರ ಕಪಿಯನು ಹಿಡಿತಾಹುದೆನ್ನುತ | ಶೂರರ ಕಳುಹಿದ ನಿಜಸುತನೊಡನೆ || ೬ || ಪಿಡಿದನು ಇಂದ್ರಜಿತು ಕಡುಕೊಪದಿಂದ | ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ | ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ | ನಡೆದನು ಲಂಕೆಯ ಒಡೆಯನಿದ್ದೆಡೆಗೆ || ೭ || ಕಂಡನು ರಾವಣನು ಉದ್ದಂಡ ಕಪಿಯನು | ಮಂಡೆಯ ತೂಗುತ ಮಾತಾಡಿಸಿದನು | ಭಂಡು ಮಾಡದೆ ಬಿಡೆನೋಡು ಕಪಿಯನೆ | ಗಂಡುಗಲಿಯನು ದುರುದುರಿಸಿ ನೋಡಿದನು || ೮ || ಛಲವ್ಯಾಕೋ ನಿನಗಿಷ್ಟು ಎಲವೋಕೊಡಗನೆ | ನೆಲೆಯಾವುದ್ಹೇಳೋ ನಿನ್ನೂಡೆಯನೆಸರನ್ನೆ | ಬಲವಂತ ರಾಮರ ಬಂಟ ಬಂದಿಹೆನೋ | ಹಲವು ಮಾತ್ಯಾಕೋ ಹನುಮನು ನಾನೇ || ೯ || ಬಡ ರಾವಣನೆ ನಿನ್ನ ಬಡಿದು ಹಾಕುವೆನೋ | ಒಡೆಯನಪ್ಪನಣೆಯಿಲ್ಲ ಎಂದು ತಾಳಿದೆನೋ | ಪುಡಿಏಳಿಸುವೆನು ಪುಲ್ಲ ರಕ್ಕಸನೆ | ತೊಡೆವೆನೊ ನಿನ್ನ ಪಣೆಯ ಅಕ್ಷರವ || ೧೦ || ನಿನ್ನಂತ ದೂತರು ರಾಮರ ಬಳಿಯೊಳು | ಇನ್ನೆಷ್ಟು ಮಂದಿ ವುಂಟು ಹೇಳೋ ನೀ ತ್ವರಿಯಾ | ನನ್ನಂತ ದೂತರು ನಿನ್ನಂತ ಪ್ರೇತರು | ಇನ್ನೂರು ಮುನ್ನೂರು ಕೋಟಿ ಕೇಳರಿಯಾ || ೧೧ || ಕಡುಕೋಪದಿಂದಲಿ ಖೂಳ ರಾವಣನು | ಸುಡಿರೆಂದ ಬಾಲವ ಸುತ್ತಿ ವಸನವ | ಒಡೆಯನ ಮಾತಿಗೆ ತಡೆಬಡೆಯಿಲ್ಲದೆ | ಒಡನೆ ಮುತ್ತಿದ್ದರು ಗಡಿಮನೆಯವರು || ೧೨ || ತಂದರು ವಸನವ ತoಡ ತಂಡದಲಿ | ಒಂದೊಂದು ಮೂಟೆ ಎಂಭತ್ತು ಕೋಟಿಯಲಿ | ಛಂದದಿ ಹರಳಿನ ತೈಲದೊಳದ್ದಿಸಿ | ನಿಂದ ಹನುಮನು ಬಾಲವ ಬೆಳೆಸುತ || ೧೩ || ಶಾಲುಶಕಲಾತಿಯು ಸಾಲದೆಯಿರಲು | ಬಾಲೆರ ವಸ್ತ್ರವ ಸೆಳೆದು ತಾರೆನಲು | ಬಾಲವ ನಿಲ್ಲಿಸಿ ಬೆಂಕೆಯನಿಡುತಲಿ | ಕಾಲ ಮೃತ್ಯುವ ಕೆಣಕಿದರಲ್ಲಿ || ೧೪ || ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ | ಇಣುಕಿ ನೋಡುತ ಅಸುರರನಣಕಿಸುತ | ಝಣಝಣ ಝಣರೆನೆ ಬಾಲದ ಗಂಟೆಯು | ಮನದಿ ಶ್ರೀರಾಮರ ಪಾದವ ನೆನೆಯುತ || ೧೫ || ಮಂಗಳ೦ ಶ್ರೀರಮಚಂದ್ರ ಮೂರುತಿಗೆ | ಮಂಗಳಂ ಸೀತಾದೇವಿ ಚರಣoಗಳಿಗೆ | ಮಂಗಳವೆನುತ ಲಂಕೆಯ ಸುಟ್ಟು | ಲಂಘಿಸಿ ಅಸುರನ ಗಡ್ದಕೆ ಹಿಡಿದ || ೧೬ || ಹೊತ್ತಿತು ಅಸುರನ ಗಡ್ಡಮೀಸೆಗಳು | ಸುತ್ತಿತು ಹೊಗೆ ಬ್ರಹ್ಮಾಂಡ ಕೊಟಿಯೋಳು | ಚಿತ್ತದಿರಾಮರು ಕೋಪಿಸುವರು | ಎಂದು ಚಿತ್ರದಿ ನಡೆದನು ಅರಸನಿದ್ದೆಡೆಗೆ|| ೧೭ || ಸೀತೆಯ ಕ್ಷೇಮವ ರಾಮರಿಗೆ ಹೇಳಿ | ಪ್ರೀತಿಯಿಂಕೊಟ್ಟ ಕುರುಹ ಕರದಲ್ಲಿ | ಸೇತುವೆ ಕಟ್ಟಿ ಚದುರಂಗ ಬಲಸಹ | ಮುತ್ತಿತು ಲಂಕೆಯ ಸೂರೆಗೈಯುತಲಿ || ೧೮ || ಹೆಗ್ಗಳವಾಯಿತು ರಾಮರ ದಂಡು | ಮುತ್ತಿತು ಲಂಕೆಯ ಕೋಟೆಯ ಕಂಡು | ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ | ಝಗ್ಗನೆ ಪೇಳ್ವರು ರಾವಣಗಂದು || ೧೯ || ರಾವಣ ಮೊದಲಾದ ರಾಕ್ಷಸರ ಕೊಂದು | ಭಾವಶುದ್ಧದಲಿ ವಿಭೀಷಣಬಾಳೆಂದು | ದೇವಿ ಸೀತೆಯ ನೋಡಗೊಂಡು ಅಯೋಧ್ಯದಿ | ದೇವ ಶ್ರೀರಾಮರು ರಾಜ್ಯವಾಳಿದರು || ೨೦ || ಶಂಖದೈತ್ಯನ ಕೊಂದೆ ಶರಣು ಶರಣಯ್ಯ | ಶಂಖಗಿರಿಯಲಿ ನಿಂದ ಹನುಮಂತರಾಯ | ಪಂಕಜಾಕ್ಷ ಹಯವದನ ಕಟಾಕ್ಷದಿ | ಬಿಂಕದಿ ಪಡೆದೆಯೋ ಅಜನಪದವಿಯ || ೨೧ ||

ನಿಜ ಜೇಷ್ಠ ಶುದ್ಧ ಏಕಾದಶಿ ನಿರ್ಜಲ ಏಕಾದಶಿ ಮಹತ್ವ..Nija jeshta shuddha ekadashi nirjala ekadashi mahatwa..

ಕಷ್ಟಗಳ ಪರಿಹಾರಕ್ಕೆ ಶ್ರೀ ಲಕ್ಷ್ಮೀ ಸ್ತವರಾಜ..... Lakshmi stavaraja....

ಸುಂದರಕಾಂಡದ ಈ ಕಥೆ ಕೇಳಿದರೆ ನಿಂತು ಹೋದ ಕೆಲಸಗಳು ಪೂರ್ಣವಾಗುತ್ತವೆ. ಮತ್ತು ಕೆಲಸ ಸಿಗುತ್ತದೆ. sundara kanda

ದಶಾವತಾರ ರಂಗೋಲಿ ಹಾಗೂ ಸ್ತೋತ್ರ..... Dashaavatara rangoli and stotra.....

ಸಕಲ ಕಷ್ಟಗಳು ಕಳೆಯುತ್ತೆ ಸುಂದರಕಾಂಡ ಕೇಳಿದರೆ !| Rajesh Reveals Ft.Dr. B.V. Arati | Sundarakanda | Rajesh

All Mantrasadhakas Must See this Video #sringerijagadguru #sankarachaarya

ರಾಜಸ್ವಲಾ ದೋಷ ಪರಿಹಾರಕ್ಕೆ 9 ಪದ್ಮಗಳ ರಂಗೋಲಿ ಸೇವೆ.... Rajaswalaa dosha parihara seve...

Sitar for Dopamine Reset | Indian Classical Music for Mindfulness

SUVYA VS RANGANNA

ಶ್ರೀ ದಕ್ಷಿಣಾ ಲಕ್ಷ್ಮೀ ಸ್ತೋತ್ರಂ..... Shri dakshinaa lakshmi stotram....

ದತ್ತಾತ್ರೇಯ ಸ್ತೋತ್ರಂ...... Dattatreya stotram....

ನಾಳೆ ಮನುಷ್ಯನ 10 ಪಾಪ ಕಲಿಯುವಂತ ದಶಹರ ಗಂಗಾವ್ರತ ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರಕ ತಿಳಿಸಿಕೊಟ್ಟಿದ್ದೇನೆ ನೋಡಿ

“ನಾನು ಈಗ ಏನು ಮಾಡಬೇಕು?” ಇದು ದೇವರ ಪ್ರಶ್ನೆ. | Vidwan Brahmanyacharya @Kundantvbhaktiprerane

ಸುಂದರಕಾಂಡ ಎಂದರೇನು? ಸುಂದರಕಾಂಡ ಪಾರಾಯಣದ ಪ್ರಯೋಜನಗಳೇನು? | Sundara kanda | Hanuman | Anjaneya

ಕಾರ್ಯಸಿದ್ಧಿ ಹನುಮಂತನ ಬೆಟ್ಟದ ರಂಗೋಲಿ ವ್ರತ...... Kaaryasiddhi hanumantana bettada rangoli vrata....

Soundarya ಮನೆ ನೋಡಿ Shock ಆಯ್ತು! | Rajesh Reveals Special

ಶ್ರೀ ವಾದಿರಾಜರ ರಚನೆಯ ಶ್ರೀ ರಾಮ ಪಂಚಕಮ್ /Shri raama panchakam.....

Enna binnapa kelu...ಎನ್ನ ಬಿನ್ನಪ ಕೇಳು# ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲ.....

ನಾರಾಯಣ ಹೃದಯ ರಂಗೋಲಿ ಹಾಗೂ ನಾರಾಯಣ ವರ್ಮ ಮತ್ತು ಲಕ್ಷ್ಮೀ ಹೃದಯ.... Narayana varma and lakshmi hrudaya....

