ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನ ಪ್ರವಾಸ | ವಿವಿಧ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ

ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದಲ್ಲಿಂದು ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಪ್ರಧಾನಿಯವರು ಜೋಧ್ ಪುರ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ಉದ್ಘಾಟಿಸಿ ಮಾರ್ಪಾಡುಗೊಳಿಸಿದ ಉಡಾನ್ ಯೋಜನೆಗೆ ಚಾಲನೆ ನೀಡಿದರು. ಈ ವೇಳೆ ರಾಜ್ಯಸ್ಥಾನ ರಾಜ್ಯಪಾಲ ಹರಿಬಾವ್ ಕಿಶನ್ ರಾವ್ ಬಾಗ್ಡೆ, ಕೇಂದ್ರ ಸಚಿವರಾದ ರಾಮ್ ಮೋಹನ್ ನಾಯ್ಡು, ಗಜೇಂದ್ರ ಸಿಂಗ್ ಶೇಖಾವತ್, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸುಮಾರು 480 ಕೋಟಿ ರೂಪಾಯಿ ವೆಚ್ಚದ ಹೊಸ ಟರ್ಮಿನಲ್, ವಾರ್ಷಿಕ 20 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ವೈಮಾನಿಕ ಆಧಾರಿತ ಅಭಿವೃದ್ಧಿಯ ಮುಂದಿನ ಹಂತಕ್ಕೆ ವೇಗ ನೀಡುವ ಗುರಿ ಹೊಂದಿದ್ದು, ಈ ಟರ್ಮಿನಲ್ ಕಟ್ಟಡ ಆಧುನಿಕ ಪ್ರಯಾಣಿಕ ಸೌಲಭ್ಯಗಳನ್ನು ಹೊಂದಿದ್ದು, ಆರಾಮದಾಯಕ ಪ್ರಯಾಣ ಅನುಭವ ಒದಗಿಸಲಿದೆ. ರಾಜಸ್ಥಾನದ ರಾಜ ಪರಂಪರೆ ಬಿಂಬಿಸುವ ವಿನ್ಯಾಸವನ್ನು ಕಟ್ಟಡ ಹೊಂದಿದೆ. ಈ ಯೋಜನೆಯಿಂದ ಆ ಪ್ರಾಂತ್ಯದಲ್ಲಿ ಪ್ರವಾಸೋದ್ಯಮ, ವಾಣಿಜ್ಯ ವಹಿವಾಟು ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ದೊರೆಯಲಿದೆ. ಮಾರ್ಪಾಡುಗೊಳಿಸಿದ ಉಡಾನ್ ಯೋಜನೆಯು ದೇಶದ ವಿಮಾನಯಾನ ನಕ್ಷೆಯಲ್ಲಿ ಪ್ರಮುಖ ಹೆಜ್ಜೆಯಾಗಿದ್ದು, ‘ ಉಡೇ ದೇಶ್ ಕಾ ಆಮ್ ನಾಗರಿಕ್ ‘ ದೃಷ್ಟಿಕೋನಕ್ಕೆ ಉತ್ತೇಜನ ನೀಡಲಿದೆ. ಮುಂದಿನ ಹತ್ತು ವರ್ಷಗಳಲ್ಲಿ 28 ಸಾವಿರದ 840 ಕೋಟಿ ರೂಪಾಯಿ ಅನ್ನು ಈ ಯೋಜನೆಗೆ ವೆಚ್ಚ ಮಾಡಲಾಗುತ್ತಿದ್ದು, ವೈಮಾನಿಕ ಆಧರಿತ ಅಭಿವೃದ್ಧಿಯ ಮುಂದಿನ ಹಂತಕ್ಕೆ ವೇಗ ನೀಡುವ ಉದ್ದೇಶವನ್ನು ಯೋಜನೆ ಹೊಂದಿದೆ. ಬಳಿಕ ಪ್ರಧಾನಿ ನರೇಂದ್ರ ಮೋದಿ, ಪಚ್ ಪದ್ರಾದಲ್ಲಿ ದೇಶದ ಪ್ರಪ್ರಥಮ ಹಸಿರು ವಲಯದ ಸಂಯೋಜಿತ ಸಂಸ್ಕರಣಾಗಾರ ಹಾಗೂ ಪೆಟ್ರೋಕೆಮಿಕಲ್ಸ್ ಸಂಕೀರ್ಣದ ಉದ್ಘಾಟನೆ ನೆರವೇರಿಸಿದರು. ನವೀಕರಿಸಬಹುದಾದ ಇಂಧನ ವಲಯದಲ್ಲಿ ಇದು ಪ್ರಮುಖ ಯೋಜನೆಯಾಗಿದೆ. ಈ ಸಂಸ್ಕರಣಾಗಾರ ಯೋಜನೆಯಿಂದಾಗಿ ಎಂಎಸ್ಎಂಇ , ಬಿಡಿ ಭಾಗಗಳ ಉತ್ಪಾದನೆ, ಪ್ಯಾಕೇಜಿಂಗ್ ಹಾಗೂ ಜವಳಿ ವಲಯದಲ್ಲಿ ಮಹತ್ತರ ಸುಧಾರಣೆಯಾಗಲಿದ್ದು, ರಾಜ್ಯದ ಅರ್ಥವ್ಯವಸ್ಥೆ ಬೆಳವಣಿಗೆಗೂ ಪೂರಕವಾಗಲಿದೆ. ಈ ವೇಳೆ ಪ್ರಧಾನಿ ಅವರು ತಮ್ಮ ತಾಯಿ ಹೆಸರಿನಲ್ಲಿ ಗಿಡ ನೆಡುವ ಅಭಿಯಾನದಲ್ಲಿ ಭಾಗಿಯಾಗಿ ಸಸಿ ನೆಟ್ಟರು. ನಂತರ ಪ್ರಧಾನಿ, ಬಲೋತ್ರಾದಲ್ಲಿ ಅಂದಾಜು 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಇದರಲ್ಲಿ ಪೆಟ್ರೋ ಕೆಮಿಕಲ್ಸ್, ನಗರ ಸಾರಿಗೆ, ರೈಲ್ವೆ, ರಸ್ತೆಗಳು, ನವೀಕರಿಸಬಹುದಾದ ಇಂಧನ ಮತ್ತು ವಿದ್ಯುತ್ ಪ್ರಸರಣ ವಲಯದ ಯೋಜನೆಗಳು ಸೇರಿವೆ. ಇದೇ ವೇಳೆ ಪ್ರಧಾನಿಯವರು ರಾಜಸ್ಥಾನ ಸರ್ಕಾರದ ವತಿಯಿಂದ ವಿವಿಧ ಇಲಾಖೆಗಳಿಗೆ ನೇಮಕಗೊಂಡ 54 ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. (12.45) ರಾಜ್ಯಸ್ಥಾನ ರಾಜ್ಯಪಾಲ ಹರಿಬಾವ್ ಕಿಶನ್ ರಾವ್ ಬಾಗ್ಡೆ, ಕೇಂದ್ರ ಸಚಿವರಾದ ಹರ್ ದೀಪ್ ಸಿಂಗ್ ಪುರಿ, ಗಜೇಂದ್ರ ಸಿಂಗ್ ಶೇಖಾವತ್, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿ, ಇಂದು ಉದ್ಘಾಟನೆಗೊಂಡ ಹಸಿರು ವಲಯ ತೈಲ ಶುದ್ಧೀಕರಣ ಮತ್ತು ಪೆಟ್ರೋ ಕೆಮಿಕಲ್ ಸಂಕೀರ್ಣವು ರಾಜಸ್ಥಾನ ಸ್ವಾವಲಂಬಿಯಾಗಲು ಸಹಕಾರಿಯಾಗಲಿದೆ. ಸ್ವಾವಲಂಬಿಯಾದರೆ ಮಾತ್ರ ಆತ್ಮಗೌರವ ಸಾಧ್ಯವಾಗುತ್ತದೆ. ಅದರಂತೆ ರಾಜಸ್ಥಾನವು ಸ್ವಾವಲಂಬನೆಯತ್ತ ಪ್ರಮುಖ ಹೆಜ್ಜೆ ಇಡುತ್ತಿದೆ. ಅಲ್ಲದೆ ಈ ಯೋಜನೆ ಉದ್ಯೋಗಗಳನ್ನು ಸೃಷ್ಠಿಸಲಿದ್ದು, ದೇಶದ ಇಂಧನ ಭದ್ರತೆಯನ್ನು ಬಲಪಡಿಸಲಿದೆ. ಜೋದ್ ಪುರ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನಿಂದ ಪ್ರವಾಸೋದ್ಯಮ, ವಾಣಿಜ್ಯ ಚಟುವಟಿಕೆ ಮತ್ತು ಉದ್ಯೋಗ ಸೃಷ್ಠಿಗೆ ಉತ್ತೇಜನ ದೊರೆಯಲಿದೆ ಎಂದರು. ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳು ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳನ್ನು ಅಲ್ಲಿಗೇ ಬಿಡದೆ ಪೂರ್ಣಗೊಳಿಸುತ್ತಿವೆ. ಯೋಜನೆಗಳು ಪೂರ್ಣಗೊಳ್ಳಲು ಹಗಲು- ರಾತ್ರಿ ಶ್ರಮಿಸುತ್ತಿವೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ 21ನೇ ಶತಮಾನದ ಅತಿ ದೊಡ್ಡ ಬಿಕ್ಕಟ್ಟು ಎದುರಾಗಿ ಅನೇಕ ದೇಶಗಳು ಇಂಧನ ಕೊರತೆ ಎದುರಿಸುತ್ತಿವೆ. ಇದರ ಮಧ್ಯೆ ಭಾರತ ಸಕಾಲಿಕ ನಿರ್ಧಾರಗಳನ್ನು ತೆಗೆದುಕೊಂಡು ಸೂಕ್ತ ಕಾರ್ಯತಂತ್ರವನ್ನು ರೂಪಿಸಿದೆ. ಭಾರತದ ರಾಜತಾಂತ್ರಿಕ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದ್ದು, ಇವೆಲ್ಲದರ ಮೂಲಕ ದೇಶ ಬಿಕ್ಕಟ್ಟಿನಿಂದ ಹೊರ ಬಂದಿದೆ ಎಂದರು. ಹರ್ ದೀಪ್ ಸಿಂಗ್ ಪುರಿ, ದೇಶದ ತೈಲ ಶುದ್ದೀಕರಣ ಸಾಮರ್ಥ್ಯ 2030 ವೇಳೆಗೆ ವಾರ್ಷಿಕ 320 ದಶಲಕ್ಷ ಮೆಟ್ರಿಕ್ ಟನ್ ಗೆ ಏರಿಕೆಯಾಗುವ ನಿರೀಕ್ಷೆ ಇದೆ. ತೈಲ ಶುದ್ಧೀಕರಣ ಯೋಜನೆಗಳ ವಿಸ್ತರಣೆಯಿಂದ ದೇಶದ ಇಂಧನ ಸ್ವಾವಲಂಭನೆ ಬಲ-ಗೊಳ್ಳಲಿದೆ. ಜಾಗತಿಕ ಇಂಧನ ಪೂರೈಕೆಯ ಸರಪಳಿ ಅಡಚಣೆಗಳ ಹೊರತಾಗಿಯೂ ಭಾರತಕ್ಕೆ ಯಾವುದೇ ತೊಂದರೆಯಾಗಿಲ್ಲ. ಯಾವುದೇ ಒಂದು ಪೆಟ್ರೋಲ್ ಪಂಪ್ ಮುಚ್ಚಿಲ್ಲ ಎಂದರು. #LiveDDChandanaNews #DDChandanaNews #DDChandana #DDKannada

LIVE : DD CHANDANA NEWS 04.07.2026 4.30 PM
▶︎

LIVE : DD CHANDANA NEWS 04.07.2026 4.30 PM

PM Modi Rajasthan Visit: "अभी पश्चिमी एशिया संकट...", पचपदरा से बोले पीएम मोदी
▶︎

PM Modi Rajasthan Visit: "अभी पश्चिमी एशिया संकट...", पचपदरा से बोले पीएम मोदी

LIVE: PM Modi launches multiple development projects in Balotra, Rajasthan
▶︎

LIVE: PM Modi launches multiple development projects in Balotra, Rajasthan

30 ದಿನ ಜೈಲು.. ಸಿಎಂ ಔಟ್! ಮೋದಿ -ಶಾ ಮಾಸ್ಟರ್ ಸ್ಟ್ರೋಕ್! ವಿಪಕ್ಷ ಅಲ್ಲೋಲ ಕಲ್ಲೋಲ | Amit shah | Narendra Modi
▶︎

30 ದಿನ ಜೈಲು.. ಸಿಎಂ ಔಟ್! ಮೋದಿ -ಶಾ ಮಾಸ್ಟರ್ ಸ್ಟ್ರೋಕ್! ವಿಪಕ್ಷ ಅಲ್ಲೋಲ ಕಲ್ಲೋಲ | Amit shah | Narendra Modi

Krishna Byre Gowda: 1 ಗಿಡ ನಡೋದಕ್ಕೆ 2300 ರೂಪಾಯಿ ಖರ್ಚಾಗುತ್ತೆ ಅನ್ನೋದು ಇವರ ಲೆಕ್ಕ | Suvarna News
▶︎

Krishna Byre Gowda: 1 ಗಿಡ ನಡೋದಕ್ಕೆ 2300 ರೂಪಾಯಿ ಖರ್ಚಾಗುತ್ತೆ ಅನ್ನೋದು ಇವರ ಲೆಕ್ಕ | Suvarna News

LIVE: Modi welcomes Japan's Prime Minister Sanae Takaichi to India
▶︎

LIVE: Modi welcomes Japan's Prime Minister Sanae Takaichi to India

2028ರ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆ? | Party Rounds | Cabinet Expansion |DK Shivakumar
▶︎

2028ರ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆ? | Party Rounds | Cabinet Expansion |DK Shivakumar

PM Modi’s address at the launch of development projects in Balotra, Rajasthan
▶︎

PM Modi’s address at the launch of development projects in Balotra, Rajasthan

Big Bulletin | ಬಾಂಗ್ಲಾ ವಲಸಿಗರನ್ನ SIRನಲ್ಲಿ ಸೇರಿಸಲಾಗ್ತಿದ್ಯಾ..? | HR Ranganath | July 02, 2026
▶︎

Big Bulletin | ಬಾಂಗ್ಲಾ ವಲಸಿಗರನ್ನ SIRನಲ್ಲಿ ಸೇರಿಸಲಾಗ್ತಿದ್ಯಾ..? | HR Ranganath | July 02, 2026

Voter List Scam | ಮಸೀದಿ, ಶಾದಿಮಹಲ್​ನಲ್ಲಿ ಎಸ್ಐಆರ್ ಮಮತದಾರ ಪಟ್ಟಿಗೆ ಅಕ್ರಮ ವಲಸಿಗರು?
▶︎

Voter List Scam | ಮಸೀದಿ, ಶಾದಿಮಹಲ್​ನಲ್ಲಿ ಎಸ್ಐಆರ್ ಮಮತದಾರ ಪಟ್ಟಿಗೆ ಅಕ್ರಮ ವಲಸಿಗರು?

PM Modi at ceremonial reception of Japanese PM Sanae Takaichi
▶︎

PM Modi at ceremonial reception of Japanese PM Sanae Takaichi

Big Bulletin | ಬೆಂಗಳೂರಿನಲ್ಲಿ ದಾರಿ ತಪ್ಪುತ್ತಿದ್ಯಾ SIR..!? | HR Ranganath | July 03, 2026
▶︎

Big Bulletin | ಬೆಂಗಳೂರಿನಲ್ಲಿ ದಾರಿ ತಪ್ಪುತ್ತಿದ್ಯಾ SIR..!? | HR Ranganath | July 03, 2026

HD Kumaraswamy Against Pradeep Eshwar | ವಾಚ್ ಬಗ್ಗೆ ಮಾತಾಡಿದ ಪ್ರದೀಪ್​​ಗೆ ಕುಮಾರಣ್ಣ ಕೌಂಟರ್!
▶︎

HD Kumaraswamy Against Pradeep Eshwar | ವಾಚ್ ಬಗ್ಗೆ ಮಾತಾಡಿದ ಪ್ರದೀಪ್​​ಗೆ ಕುಮಾರಣ್ಣ ಕೌಂಟರ್!

Amitabh Bachchan, Rahul Gandhi, Gautam Adani & Many Attends  Supriya Sule Daughter marriage Ceremony
▶︎

Amitabh Bachchan, Rahul Gandhi, Gautam Adani & Many Attends Supriya Sule Daughter marriage Ceremony

ಅಯೋಧ್ಯೆಯಲ್ಲಿ ದೇಗುಲವನ್ನೇ ಕಬ್ಜಾ ಮಾಡಿದ್ರಾ ಚಂಪತ್ ರಾಯ್? | News Hour | Ayodhya Ram Mandir Scam
▶︎

ಅಯೋಧ್ಯೆಯಲ್ಲಿ ದೇಗುಲವನ್ನೇ ಕಬ್ಜಾ ಮಾಡಿದ್ರಾ ಚಂಪತ್ ರಾಯ್? | News Hour | Ayodhya Ram Mandir Scam

Big Bulletin | ಶಿವಲಿಂಗೇಗೌಡ v/s ಹೆಚ್‌.ಕೆ ಸುರೇಶ್‌ ಫೈಟ್‌  | HR Ranganath | July 02, 2026
▶︎

Big Bulletin | ಶಿವಲಿಂಗೇಗೌಡ v/s ಹೆಚ್‌.ಕೆ ಸುರೇಶ್‌ ಫೈಟ್‌ | HR Ranganath | July 02, 2026

PM Modi speech in Rajasthan: पीएम मोदी बोले- दुनिया में संकट आया, भारत में नहीं। War in West Asia
▶︎

PM Modi speech in Rajasthan: पीएम मोदी बोले- दुनिया में संकट आया, भारत में नहीं। War in West Asia

ಭಾರತ ಪಾಕ್ ಮಧ್ಯೆ ಶಾಂತಿ ಮಾತುಕತೆಗೆ ಶುರುವಾಯ್ತು ಲಾಬಿ | News Hour | India Pakistan Peace Talks | PM Modi
▶︎

ಭಾರತ ಪಾಕ್ ಮಧ್ಯೆ ಶಾಂತಿ ಮಾತುಕತೆಗೆ ಶುರುವಾಯ್ತು ಲಾಬಿ | News Hour | India Pakistan Peace Talks | PM Modi

ಜಪಾನ್‌ನ Ninja Tech ಭಾರತಕ್ಕೆ; UNICORN ಮ್ಯಾಜಿಕ್! ಚೀನಾಗೆ ಬಿಗ್ ಶಾಕ್ ಕೊಟ್ಟ ಹೊಸ ಅಸ್ತ್ರ! ಅಮೆರಿಕಕ್ಕೂ ಗುನ್ನ!
▶︎

ಜಪಾನ್‌ನ Ninja Tech ಭಾರತಕ್ಕೆ; UNICORN ಮ್ಯಾಜಿಕ್! ಚೀನಾಗೆ ಬಿಗ್ ಶಾಕ್ ಕೊಟ್ಟ ಹೊಸ ಅಸ್ತ್ರ! ಅಮೆರಿಕಕ್ಕೂ ಗುನ್ನ!

When Animals Surprise Photographers in the Sweetest Way! 😍
▶︎

When Animals Surprise Photographers in the Sweetest Way! 😍