ಪರಿಸರ ದಿನದ ಹಸಿರು ವಂದನೆ 🌿 | ಕನ್ನಡ ಕವನ | ಪರಿಸರ ದಿನ ವಿಶೇಷ | Sridevi Kallambella
🌿 ಪರಿಸರ ದಿನದ ಹಸಿರು ವಂದನೆ 🌿 ✍️ ರಚನೆ: ಶ್ರೀದೇವಿ ಕಳ್ಳಂಬೆಳ್ಳ ವಿಶ್ವ ಪರಿಸರ ದಿನದ ಅಂಗವಾಗಿ ರಚಿಸಲಾದ ಈ ಮನಮುಟ್ಟುವ ಕನ್ನಡ ಕವನವು, ತುಮಕೂರಿನ ಆದರ್ಶನಗರದ ಹಿರಿಯರು, ಪರಿಸರ ಪ್ರೇಮಿಗಳು ಹಾಗೂ ಹಿತರಕ್ಷಣಾ ಸಮಿತಿಯ ಹಸಿರು ಸೇವೆಗೆ ಅರ್ಪಿತವಾದ ನಮನವಾಗಿದೆ. ಬರಿದಾದ ನೆಲವನ್ನು ನಂದನವನವನ್ನಾಗಿ ರೂಪಿಸಿದ ಮಹನೀಯರ ಪರಿಶ್ರಮ, ಸಂಕಲ್ಪ ಮತ್ತು ಪರಿಸರ ಪ್ರೀತಿಯನ್ನು ಈ ಕವನವು ಸುಂದರವಾಗಿ ವರ್ಣಿಸುತ್ತದೆ. 🌱 ಪರಿಸರ ಉಳಿಸಿ 🌳 ಹಸಿರು ಬೆಳೆಸಿ 💚 ಪ್ರಕೃತಿಯನ್ನು ಪ್ರೀತಿಸಿ ಈ ಕವನವು ವಿಶ್ವಮಾನವೀಯ ಮೌಲ್ಯಗಳು, ಪರಿಸರ ಸಂರಕ್ಷಣೆ, ಹಿರಿಯರ ಸೇವಾಭಾವ ಮತ್ತು ಸಮೂಹದ ಶ್ರಮದ ಮಹತ್ವವನ್ನು ಸಾರುತ್ತದೆ. 📍 ವಿಶೇಷವಾಗಿ ತುಮಕೂರಿನ ಆದರ್ಶನಗರದ ಹಸಿರು ಸಾಧಕರಿಗೆ ಈ ಕಾವ್ಯ ನಮನ. 👉 ವಿಡಿಯೋ ಇಷ್ಟವಾದರೆ Like, Share & Subscribe ಮಾಡಿ 🔔 ಇನ್ನಷ್ಟು ಕನ್ನಡ ಕವನಗಳು, ಪರಿಸರ ಗೀತೆಗಳು ಮತ್ತು ಸಾಹಿತ್ಯಿಕ ವಿಡಿಯೋಗಳಿಗಾಗಿ ನಮ್ಮ ಚಾನೆಲ್ಗೆ ಬೆಂಬಲ ನೀಡಿ. #ಪರಿಸರದಿನ #WorldEnvironmentDay #KannadaPoem #ಪರಿಸರ_ಕವನ #KannadaKavana #GreenIndia #SaveEnvironment #ತುಮಕೂರು #KannadaLiterature #EnvironmentalPoem #ಹಸಿರು_ವಂದನೆ #SrideviKallambella #KannadaPoetry #NaturePoem #EcoFriendly ಪರಿಸರ ದಿನದ ಹಸಿರು ವಂದನೆ ರಚನೆ: ಶ್ರೀದೇವಿ ಕಳ್ಳಂಬೆಳ್ಳ ನಿವೃತ್ತಿಯ ಬದುಕಿಗೆ ನವಚೇತನದ ಸ್ಪರ್ಶ ಹಿರಿಯರ ಶ್ರಮದಲಿ ಅರಳಿದೆ ಹಸಿರಿನ ಹರ್ಷ ವಿಶ್ವ ಮಾನವ ಉದ್ಯಾನ ಎಂಬ ಈ ಪವಿತ್ರಧಾಮವೇ ಹರ್ಷ ಮಾನವೀಯ ಮೌಲ್ಯಗಳಿಗಿದು ಸುಂದರ ನಿಲ್ದಾಣದ ಸ್ಪರ್ಶ //೧// ಹಣ್ಣಾದ ಹರೆಯದಲಿ ಚಿಗುರೊಡೆದ ಸಂಕಲ್ಪ ಅನುಭವದ ಸಾರವನು ಗಿಡಗಳಿಗೆ ಹರಿಸುವ ಸಂಕಲ್ಪ ಒಬ್ಬೊಬ್ಬರಾಗಿ ಸೇರಿ ಒಂದೇ ಕುಟುಂಬದಂತೆ ತೊಟ್ಟರು ಸಂಕಲ್ಪ ಬರಿದಾದ ನೆಲವನ್ನು ಬದಲಿಸಿದರು ಸ್ವರ್ಗದಂತೆ //೨// ಕುವೆಂಪುರವರ ವಾಣಿಯಂತೆ ವಿಶ್ವಮಾನವ ಉದ್ಯಾನವನದಲಿ ಬೆಳಗುತಿದೆ ಇಲ್ಲಿ ಮನುಜ ಮತದ ಚೇತನ ಹಿರಿಯರೆಲ್ಲರೂ ಸೇರಿ ಕಟ್ಟಿದ ಈ ಹಸಿರಿನ ಚೇತನ ತುಮಕೂರಿನ ನಮ್ಮ ಆದರ್ಶನಗರದ ಪ್ರೀತಿಯ ಹೆಮ್ಮೆಯ ಚೇತನ//೩// ತುಮಕೂರಿನ ಸ್ಮಾರ್ಟ್ ಸಿಟಿಯ ಕನಸಿನ ಹಾದಿಯಲಿ ಆದರ್ಶ ನಗರವು ಅರಳಿದೆ ಹೊಸ ಪರ್ವದಲಿ ಹಿರಿಯರ ಅನುಭವ ,ಪೌರಕಾರ್ಮಿಕ ಶ್ರಮದಲಿ ಮೈದಳೆದಿದೆ ಈ ಹಸಿರು ಸಿರಿವಂತಿಕೆಯಲಿ//೪// ಹಿತರಕ್ಷಣಾ ಸಮಿತಿಯ ಸಂಕಲ್ಪ ಶಕ್ತಿಯಲಿ ಹಿರಿಯರ ಬೆವರಿನ ಹನಿಗಳ ಜೊತೆಯಲಿ ವಿಶ್ರಾಂತ ಜೀವನದ ಸಂಗ್ರಹಿಕೆಯ ಹಣದಲಿ ಸುಂದರ ಉಧ್ಯಾನವನವಾಯಿತು ಗಿಡ ಮರಗಳ ರೂಪದಲಿ//೫// ಪ್ರೀತಿಯ ತುಂಬಿ ಆರ್ಥಿಕ ನೆರವನು ನೀಡಿ ಬೆವರಿನ ಹನಿಗಳ ನೀರನು ಉಣಿಸಿ ಬರಿದಾದ ಮಣ್ಣನು ನಂದನವನವನ್ನಾಗಿಸಿದ ಮಹನೀಯ ಸಾಧಕರಿಗಿದೋ ನಮ್ಮ ನಮನ //೬// ಪರಿಸರ ದಿನದ ಈ ಗಳಿಗೆಯಲಿ ನಿಮ್ಮ ಶ್ರಮಕ್ಕೆ ಸಲ್ಲಲಿ ಗೌರವದ ಹೂಮಳೆ ನೂರಾರು ಸಸ್ಯಗಳ,ಹಕ್ಕಿಗಳ ಗಾನದದಲಿ ಬೆಳಗಲಿ ಸದಾ ನಿಮ್ಮ ಯಶೋಗಾಥೆಯ ಕಹಳೆ//೭// ಸದ್ದು ಗದ್ದಲವಿಲ್ಲದೆ ಪರಿಸರ ಸೇವೆಯಪೂಜೆಯ ಗೈದ ನಿಮಗಿದೋ ನಮ್ಮ ಅನಂತನಮನಗಳು ಹಸಿರನ್ನು ಉಳಿಸಿ ಹಸಿರನ್ನು ಬೆಳೆಸಿದ ನಮ್ಮೂರ ಸಾಧಕರಿಗೆ ಪರಿಸರ ದಿನದ ಶುಭಾಶಯಗಳು//೮//

ವಿಶ್ವ ಪರಿಸರ ದಿನ ಗೀತೆ 2026 | Kannada Song| World Environment Day Song | Sreedevi Kallambella

ತುಮಕೂರಿನ ದಸರಾ 2025 | ಶ್ರೀ ಶಾರದಾಂಬ ಪಿಯು ಕಾಲೇಜು ವಿದ್ಯಾರ್ಥಿಗಳ ಅಮೋಘ ನೃತ್ಯ ಪ್ರದರ್ಶನ | Tumkur Dusshera

My Baby Graduated in China 🇨🇳| ಚೀನಾದಲ್ಲಿ ನಮ್ಮ ಪುಟ್ಟ ಮಗುವಿನ Kindergarten Graduation ಸಮಾರಂಭ! 🎉 🇮🇳in🇨🇳

S.S.R.H.S. 2007-08, S.S.L.C. Batch ಗುರುವಂದನಾ ಸಮಾರಂಭ ಮತ್ತು ಗುರು-ಶಿಷ್ಯರ ಸಮಾಗಮ ಕಾರ್ಯಕ್ರಮದ ನೆನಪುಗಳು..🤗💐🙏

ವಿಶ್ವ ಯೋಗ ದಿನ ಗೀತೆ 2026 | International Yoga Day Song | World Yoga Day Song | Sreedevi Kallambella

Hasire Nammusiru | Kannada Nature Song | Parisarageethe | Kannada Nature song | MaheShruthi

ಬಡವ ಮಂದಿ | BADAV MANDI | Karyaa | Comedy | 4k video

"ಡಿವಿಜಿ ಕುಟುಂಬ ಈಗ ಹೇಗಿದೆ? ಮನೆ ಎಲ್ಲಿದೆ? ಮೊಮ್ಮಗ ನಟರಾಜನ್ ಸಂದರ್ಶನ!-DV Gundappa Grand Son Natarajan

Big Bulletin With HR Ranganath | ವೈ.ಮಂಜುನಾಥ್ಗೆ ಎದುರಾಯ್ತಾ ಬಂಧನ ಭೀತಿ..? | June 25, 2026

A German village in the middle of Georgia

27 June 2026 Rashi Bhavishya || Shri Shri Ravishanker Guru Ji ||

ಅಡ್ಡ ಮತದಾನದ ಆಟ– ವಿಜಯೇಂದ್ರ, ಅಶೋಕ ಸ್ಥಾನಕ್ಕೆ ಕುತ್ತು?I Cross-Voting Raises Questions Over Alliance Unity

"ವಿಶ್ವ ಪರಿಸರ ದಿನಾಚರಣೆ" 05/06/2026 ಸ.ಹಿ.ಪ್ರಾ ಶಾಲೆ ವಜ್ರಳ್ಳಿ..😊

'ಅಜಯ್ ಸಿನಿಮಾ ಹೀರೋಯಿನ್ ಊಟ ಏನೇನ್ ಬೇಕಿತ್ತು? ಎಲ್ಲಿಂದ ಬರುತಿತ್ತು?'-E15-KV Manjaiah-Kalamadhyama-#param

ಶಂಕಪುಷ್ಟಿಯ ವೈಜ್ಞಾನಿಕತೆ - ಪ್ರೊ ಎಸ್.ಎಸ್. ಮಾಲಿನಿ. ತಳಿಶಾಸ್ತ್ರ ಮತ್ತು ಜೀನೋಮಿಕ್ಸ್ ವಿಭಾಗ ಮೈಸೂರು ವಿವಿ

ಶಕ್ತಿ ಸ್ವರೂಪಿಣಿ ಮಹಿಳೆ | ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ ಕವಿತೆ | Sreedevi Kallambella

ಆಸೆ...! | ಮನುಷ್ಯನ ಬದುಕಿನ ನಿಜ ಮುಖ ಬಿಚ್ಚಿಡುವ ಅದ್ಭುತ ಗೀತೆ | Indira Bhat| ಅಕ್ಷರವೇಣಿ

Love ಮಾಡೋದೇ ತಪ್ಪಾ?💔🙆♂️ || ಹೀಗೆಲ್ಲಾ ಯಾಕೆ ಬೈತಿದ್ದಾರೆ😡🥶 || 1 Joint Kannada

Pour Cement into Pallets and see what most people don't even imagine happens! Creation Daily

