ಕಾರಟಗಿ ಯಲ್ಲಿ "ಸಂದಿಮನಿ ಸಂಗವ್ವ" ಎನ್ನುವ ಹೊಸ ಹಾಸ್ಯ ನಾಟಕ ಭಾಗ-1
ಕಾರಟಗಿ : ಸಂದಿ ಮನಿ ಸಂಗವ್ವ ಹಾಸ್ಯ ನಾಟಕ ಪ್ರದರ್ಶನ ಸಂಗಮೇಶ್ವರ ನಾಟ್ಯ ಸಂಘ(ರಿ) ಆಶಾಪುರ : ಉದ್ಘಾಟನಾ ಕಾರ್ಯಕ್ರಮ ಇಂದು ಸಂಜೆ 5ಕ್ಕೆ ಕಾರಟಗಿ : ಶ್ರೀ ಸಂಗಮೇಶ್ವರ ನಾಟ್ಯ ಸಂಘ (ರಿ) ಆಶಾಪುರ ರಂಗಸಜ್ಜಿಕೆಯಲ್ಲಿ ಸಂದಿಮನಿ ಸಂಗವ್ವ ನಾಟಕ ಪ್ರದರ್ಶನವು ಜು.12 ರಂದು ಭಾನುವಾರ ಸಂಜೆ 5 ಗಂಟೆಗೆ ಕಾರಟಗಿಯ ಆರ್.ಜಿ ರಸ್ತೆಯ ಎರ್ರಿತಾತ ಪೆಟ್ರೋಲ್ ಬಂಕ್ ಹತ್ತಿರದ ಪಿ.ಗೋವಿಂದರಾಜ್ ಶ್ರೇಷ್ಠಿ ಇವರ ಜಾಗೆಯಲ್ಲಿ (ನ್ಯಾಶನಲ್ ಸ್ಕೂಲ್ ಹತ್ತಿರ) ಪ್ರದರ್ಶನಗೊಳ್ಳಲಿದೆ ಎಂದು ಕುಂಟ ಕೋಣ ಮೂಕ ಜಾಣ ನಾಟಕದ ಖ್ಯಾತಿಯ ಕಲಾವಿದ ದಯಾನಂದ ಬೀಳಗಿ ಅವರು ತಿಳಿಸಿದ್ದಾರೆ. ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರದಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದಿ. ಶ್ರೀ ಎನ್,ಎಸ್ ಜ್ಯೋತಿ ವಿರಚಿತ "ಸಂದಿಮನಿ ಸಂಗವ್ವ" ಫುಲ್ ಕಾಮಿಡಿ ನಾಟಕಕ್ಕೆ ಶಾಸಕರಾದ ಶಿವರಾಜ ತಂಗಡಗಿಯವರು ಚಾಲನೆ ನೀಡಲಿದ್ದು, ಪುರಸಭೆ ಅಧ್ಯಕ್ಷ ಮಂಜುನಾಥ್ ಮೇಗೂರು, ಮುಖಂಡರಾದ ಶಿವರೆಡ್ಡಿ ನಾಯಕ, ಉದ್ಯಮಿ ಪಿ.ಗೋವಿಂದರಾಜ್ ಶ್ರೇಷ್ಠಿ, ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ಪಿಐ ಸುಧೀರ್ ಬೆಂಕಿ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ನನ್ನ ಅಭಿನಯದ ಕುಂಟಕೋಣ, ಮೂಕ ಜಾಣ ನಾಟಕವು ರಾಜ್ಯಾಧ್ಯಂತ ಅತ್ಯುತ್ತಮ ಪ್ರದರ್ಶನ ಕಂಡು ಅದರ ಅಭೂತಪೂರ್ವ ಯಶಸ್ಸಿನಿಂದ ರಾಜ್ಯದ ತುಂಬೆಲ್ಲ ಲಕ್ಷಾಂತರ ಅಭಿಮಾನಿಗಳನ್ನು ಸೃಷ್ಠಿಸಿದೆ. ಅಷ್ಟೇ ಅಲ್ಲ, ಜೀ ಕನ್ನಡ ಚಾನೆಲ್ನಲ್ಲೂ ಕೂಡಾ ಆ ನಾಟಕದ ತುಣುಕಿನ ಪ್ರದರ್ಶನಗಳು ನನ್ನನ್ನು ಒಬ್ಬ ಕಲಾವಿದನಾಗಿ ರಾಜ್ಯದ ಕಲಾಭಿಮಾನಿಗಳು ಗುರುತಿಸುವಂತೆ ಮಾಡಿತು. ಈಗ ಕಾರಟಗಿಯಲ್ಲೂ "ಸಂದಿಮನಿ ಸಂಗವ್ವ" ಎನ್ನುವ ಹೊಸ ಹಾಸ್ಯ ನಾಟಕದೊಂದಿಗೆ ನಿಮ್ಮನ್ನೆಲ್ಲ ಹೊಟ್ಟೆ ಹುಣ್ಣಾಗುವಂತೆ ನಗಿಸಲು 20 ಕಲಾವಿದರ ತಂಡ ಆಗಮಿಸಿದೆ ಎಂದರು. ಈಗಾಗಲೇ ಕಾರಟಗಿಯ ನೂರಾರು ಕಲಾಭಿಮಾನಿಗಳು, ಪೋಷಕರು ಬಾದಾಮಿ ಜಾತ್ರೆ ಸೇರಿದಂತೆ ಹಲವೆಡೆ ಬಂದು ನೋಡಿ ನನ್ನ ನಾಟಕಗಳನ್ನು ನೋಡಿ ಹರಸಿ ಹಾರೈಸಿದ್ದಾರೆ. ಇನ್ನು ಇಲ್ಲಿ ವೃತ್ತಿಪರ ನಾಟಕಗಳ ಕಂಪನಿಗಳು ಬಂದಾಗ ಇಲ್ಲಿನ ಕಲಾರಸಿಕರು ನಾಟಕ ನೋಡಿ ಪ್ರೋತ್ಸಾಹ ನೀಡಿರುವ ಭವ್ಯ ಇತಿಹಾಸ ಇದ್ದು, "ಸಂದಿಮನಿ ಸಂಗವ್ವ" ನಾಟಕದಲ್ಲಿ ಯಾವುದೇ ಆಶ್ಲೀಲ ಸಂಭಾಷಣೆ, ದೃಶ್ಯಗಳು ಇರುವುದಿಲ್ಲ. ಇದು ಚಿಕ್ಕವಯಸ್ಸಿನ ಮಗುವಿನಿಂದ ವೃದ್ಧರವರೆಗೆ ಯಾವುದೇ ವಯಸ್ಸಿನ ಭೇದವಿಲ್ಲದೇ, ಪೂರ್ಣ ಕುಟುಂಬ ಸಮೇತ ಕುಳಿತುಕೊಂಡು ನೋಡುವಂತಹ ಸದಭಿರುಚಿಯ ಹಾಸ್ಯ ನಾಟಕವಾಗಿದೆ. ಆ ಕಾರಣಕ್ಕೆ ಕಾರಟಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮ, ಕ್ಯಾಂಪ್ಗಳ ಜನತೆ ಕುಟುಂಬ ಸಮೇತರಾಗಿ ಆಗಮಿಸಿ ನಾಟಕ ನೋಡಿ ಯಶಸ್ವಿಗೊಳಿಸಬೇಕು. ನಂತರ ಶ್ರೀ ಸಂಗಮೇಶ್ವರ ನಾಟ್ಯ ಸಂಘದ ಮಾಲಕರಾದ ಪ್ರೇಮಾ ಗುಳೇದಗುಡ್ಡ ಮಾತನಾಡಿ, ಸಂಗಮೇಶ್ವರ ನಾಟ್ಯ ಸಂಘ ಅತ್ಯಂತ ಹಳೆಯ ವೃತ್ತಿಪರ ನಾಟಕ ಕಂಪನಿಯಾಗಿದ್ದು, ಸದಭಿರುಚಿ ನಾಟಕ ಪ್ರದರ್ಶನಕ್ಕೆ ಇಡೀ ಉತ್ತರ ಕನರ್ಾಟಕದಲ್ಲಿಯೇ ಹೆಸರುವಾಸಿ. ಆಶಾಪುರ ಗೌಡರು 26 ವರ್ಷಗಳ ಕಾಲ ಕಂಪನಿ ನಡೆಸಿದ್ದರು, ಅವರ ನಂತರ 24 ವರ್ಷಗಳಿಂದ ನಡೆಸಿಕೊಂಡು ಬಂದಿದ್ದು, ಇದು ಕಾರಟಗಿಯಲ್ಲಿ ನಮ್ಮ 4ನೇ ಕ್ಯಾಂಪ್ ಆಗಿದೆ. ಈ ಬಾರಿ "ಸಂದಿಮನಿ ಸಂಗವ್ವ" ಈ ನಾಟಕವನ್ನು ರಾಜ್ಯದ ಹೆಸರಾಂತ ಹಾಸ್ಯ ಕಲಾವಿದ ದಯಾನಂದ ಬೀಳಗಿ ಸೇರಿ ಹೆಸರಾಂತ ಕಲಾವಿದರು ಈ ನಾಟಕದಲ್ಲಿ ಕಲಾವಿದರಾಗಿ ನಟಿಸಿ, ಯಶಸ್ವಿಯಾಗಿ ಪ್ರದರ್ಶನ ನೀಡುತ್ತಿದ್ದಾರೆ. ಆ ಕಾರಣಕ್ಕೆ ನಮಗೆ ಅನ್ನದಾತರಾಗಿರುವ ವೃತ್ತಿ ರಂಗಭೂಮಿಯನ್ನು ಬೆಳೆಸಿಕೊಂಡು ಬಂದಿರುವ ಕಲಾಭಿಮಾನಿಗಳು, ರಂಗಪ್ರೇಮಿಗಳು, ಕುಟುಂಬಸಮೇತರಾಗಿ ಆಗಮಿಸಿ ನಾಟಕ ನೋಡಿ ಆನಂದಿಸಬೇಕು ಎಂದು ಕರೆ ನೀಡಿದರು. ಕೊನೆಯಲ್ಲಿ ಕಲಾವಿದೆ ಶ್ವೇತಾ ಬೀಳಗಿ ಮಾತನಾಡಿ, ಕಾರಟಗಿ ಪಟ್ಟಣದಲ್ಲಿ ಮೊಟ್ಟಮೊದಲ ಬಾರಿಗೆ ಬಂದ ನಾಟಕ ಪ್ರದರ್ಶನ ಮಾಡುತ್ತಿದ್ದು, ಎಲ್ಲಾ ಕಲಾರಸಿಕರು ನಾಟಕ ನೋಡಿ ಆಶೀರ್ವದಿಸಬೇಕು. ಅದರಲ್ಲೂ ಕುಟುಂಬ ಸಮೇತರಾಗಿ ಯಾವುದೇ ಮುಜುಗರವಿಲ್ಲದ ಕಥಾ ಹಂದರ ಹೊಂದಿರುವ ಈ ಹಾಸ್ಯ ನಾಟಕ ನೋಡಿ ಕಲಾವಿದರಿಗೆ ಪ್ರೋತ್ಸಾಹಿಸಬೇಕು ಎಂದು ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಕಲಾವಿದರಾದ ಸಿದ್ದು ಬೀಳಗಿ, ದಾನೇಶ್ ಪಾಟೀಲ್, ಶಿವು ಮುಧೋಳ, ರುದ್ರೇಶ್, ಪಂಚು ಕೋಡ್ಲಿ, ಗೀತಾ, ಧನುಶ್ರೀ ಪಾಟೀಲ್ ಇನ್ನಿತರರು ಇದ್ದರು.

ಕಾರಟಗಿ ಯಲ್ಲಿ "ಸಂದಿಮನಿ ಸಂಗವ್ವ" ಎನ್ನುವ ಹೊಸ ಹಾಸ್ಯ ನಾಟಕ ಭಾಗ-2

ದಯಾನಂದ್ ಬೀಳಗಿ ಹಾಗೂ ಅವರ ಧರ್ಮಪತ್ನಿ ಹಾಸ್ಯ ಕಾಮಿಡಿ ನಾಟಕ

ಕುಂಟ ಕೋಣ ಮೂಕ ಜಾಣ ಕಾಮಿಡಿ ಭಾಗ -2

ಹೊಟ್ಟೆಗ ಗಂಟ ಆದರ ಕುದುರಿಕಾಯಿ ತಿನ್ನು ಕಡಿಮೆ ಆಗ್ತದ ಸಿದ್ದು ನಾಲತವಾಡ ರೇಣುಕಾ ಬಾದಾಮಿ ಡಬಲ್ ಮೀನಿಂಗ್ ಕಾಮಿಡಿ 😁🤣👌💥

ಶ್ರೀ ಹೊಳೆ ಹುಚ್ಚೇಶ್ವರ ನಾಟ್ಯ ಸಂಘ.ಕಮತಗಿ ದಾವಣಗೆರೆಯಲ್ಲಿ ದಾಖಲೆ "ಗಂಡನಿಗೆ ತಕ್ಕ ಹೆಂಡತಿ" ನಾಟಕ! 50 ದಿನಗಳ ಸಂಭ್ರಮ

"ಕಾಮಿಡಿ ಕಿಲಾಡಿ ವಿನ್ನರ್ ಹರೀಶ್ ಮತ್ತು ಹೆಂಡತಿ ನಾಟಕ ಕಂಪನಿಯಲ್ಲಿ!"-E8-Banashankari Jaatre-Harish Hiriyur

P-2 ಅಕ್ಕ ಅಂಗಾರ ತಂಗಿ ಬಂಗಾರ. ಕಾಮಿಡಿ ಮಾತ್ರ, ಸುಜಾತಾ, ನೀಲಾ, ಮಾರುತಿ, ಸಿದ್ದು ಬೀಳಗಿ #jevargirajannadrama

"ಅನ್ನಭಾಗ್ಯ ಸ್ಕೀಮ್ ಅಮೆರಿಕಾದಲ್ಲೂ ಇದೆ! ಕನ್ನಡಿಗ ಹೇಳಿದ ಸತ್ಯಗಳು!"-E8-Dr.Krishna Venkataswamy-Kalamadhyama

ಸಂಜು ಬಸಯ್ಯ ಪಲ್ಲವಿ ಮುರುಗೋಡ ಕಾಮಿಡಿ

ಕ್ವಾಲಿಟಿ ಮೇಂಟೆನ ಮಾಡು ಹುಡಗಿ ನಾ!!ಲಕ್ಷ್ಮೀ & ವಿಠ್ಠಲ ಬದಾಮಿ ಕಾಮಿಡಿ ನಾಟಕ #laxmisirola #vittalchikkalagundi

ಖಾನಾವಳಿ ಚೆನ್ನಿ ನಾಟಕ-1 | Khanavali Chenni Nataka Part-1 | Harish Hiriyur | Nayana Comedy Khiladi |

ಮಹಾಂತೇಶ ತಾಳಿಕೋಟಿ. ಮಂಜುಳಾ. ನಟರಾಜ್ ಕಾಮಿಡಿ ವಿಡಿಯೋ #entertainment #kannadacomedy

"ನಾಟಕದವರಿಗೆ ಎರಡೆರಡು ಹೆಂಡತಿ!-ಪರದೆ ಹಿಂದೆ ನಟ-ನಟಿಯರ ಲವ್!"-E04-Banashankari Jaatre-Avinash Akkalkot

ಅಥಣಿ ಸಂತ್ಯಾಗ ಕೊತಂಬ್ರಿ ಮಾರಾವ ಆಗ್ಯಾನ | ಕೈಲಾಗದ ಗಂಡ ಕೈಲಾಸ ಕಂಡ | ಹರೀಶ ಹಿರಿಯೂರ & ಕಟಪ್ಪ ಮುಧೋಳ |#shortfilm

50ರೊಪಾಯಿ ಚಿಕ್ಕನ್ ತಿನಸ್ತನ ಲವ್ ಮಾಡು!!ಲಕ್ಷ್ಮೀ ಶಿರೋಳ ವಿಠ್ಠಲ ಸೂಪರ್ ಕಾಮಿಡಿ#laxmisirola#vittalchikkalagundi

ತನ್ನ ಜಮೀನು ಬಿಟ್ಟು ಕೊಡಲ್ಲ ಎಂದ ಗೌಡ್ರು ಮೇಲೆ ಕೋಪಗೊಂಡ ಅಣ್ಣಾವ್ರು | Kamana Billu Kannada Movie Part 02

ಗಂಗಿ ಮನ್ಯಾಗ ಗೌರಿ ಹೊಲದಾಗ, ಹರೀಶ್, ಸುಜಾತಾ, ಮಾರುತಿ ಮುಖ್ಯ ಹಾಸ್ಯ ಪಾತ್ರದಲ್ಲಿ P2-#jevargirajannadrama

ನಂದ ಶಕ್ತಿ ತೋರಸ್ತೆನ್ 🤣ನಿಂದ ಗಡಗಿ ವಡಿತೇನ ❤️🩹ಸುವರ್ಣ ಬಾದಾಮಿ🤣 ಕಾಮಿಡಿ ನಾಟಕ 🔥ರಾವಳಗುಂಡೆವಾಡಿ ನಾಟಕ 💥🤣ವೀಡಿಯೊ

ಸಿದ್ದು ನಾಲತವಾಡv/s ಲಕ್ಷ್ಮೀ ಡ್ಯಾನ್ಸರ್ siddu nalatwad comedy video#vittalchikkalagundi |siddu nalatwad|

