HAZRAT NOORANI SUBHANI CHILLA AND ITS HISTORY | a tree here said to be planted by Tipu Sultan
ಈ ಮಂಜಾಬಾದ್ ದರ್ಗಾ ಮೈಸೂರು ಹುಲಿ ದಝತ್ ಟಿಪ್ಪು ಸುಲ್ತಾನ್ ಕಾಲದ ಇತಿಹಾಸವನ್ನು ಹೇಳುತ್ತದೆ. ಇತರೆ ಭಾಗದಿಂದ ಬರುವ ಜನರಿಗೆ ಈ ಪ್ರದೇಶದ ಗುರುತಿಗಾಗಿ ಅಂದು ನಿರ್ಮಿಸಿದ್ದ 'ಊರ ಹೆಬ್ಬಾಗಿಲು' ಇಂದಿಗೂ ಸುರಕ್ಷಿತವಾಗಿದೆ. ಗತಕಾಲದಲ್ಲಿ ಪ್ರಯಾಣಿಕರು ತಂಗಲು ಮರದ ಕೆಳಗೆ ಸ್ಥಳವಿತ್ತು, ಸೈನಿಕರ ಕ್ಯಾಂಪ್ ಸಹ ಇಲ್ಲಿತ್ತು. ನೀರಿನ ಸೌಕರ್ಯಕ್ಕೆ ವಿಶಾಲವಾದ ಕೆರೆ, ಕುಡಿಯುವ ನೀರಿಗಾಗಿ ತೆರೆದ ಬಾವಿಗಳು ಇದ್ದವು. ಹಲವು ಮೂಲಭೂತ ವ್ಯವಸ್ಥೆಯಿಂದ ವಿಶ್ರಾಂತಿ ಪಡೆಯಲು ಈ ಸ್ಥಳ ಉತ್ತಮ ವಾಗಿತ್ತು. ಆದರೆ ಇವುಗಳು ನಶಿಸಿಹೋಗಿವೆ. ತಾತ್ಕಾಲಿಕ ಮನೆಗಳಲ್ಲಿ ಸಾಕಷ್ಟು ಸೈನಿಕರು ವಾಸಿಸುತ್ತಿದ್ದರು. ಪ್ರಯಾಣಿಕರಿಗೆ ಆಹಾರ, ವಿಶ್ರಾಂತಿ, ಭದ್ರತೆಗೆ ಅಲ್ಲಿ ಆದ್ಯತೆ ಇತ್ತು. ಟಿಪ್ಪು ಸುಲ್ತಾನ್ ಹುತಾತ್ಮರಾದ ನಂತರ ಈ ಸ್ಥಳದಲ್ಲಿ ಸೈನಿಕರು ಮಂಜ್ರಾಬಾದ್ ಕೋಟೆಯ ಕಾಮಗಾರಿ ಸ್ಥಗಿತಗೊಳಿಸಿದ ಕಾರಣ ಈ ಸ್ಥಳ ಪಾಳು ಬಿದ್ದಿತ್ತು ಎಂದು ಹೇಳಲಾಗುತ್ತದೆ. ಇಲ್ಲಿ ಎರಡು ಖಬರಸ್ಥಾನ್ ಕಂಡು ಬರುವುದರಿಂದ ಜನ ಹೆಚ್ಚಾಗಿ ವಾಸಿಸುತ್ತಿದ್ದರು ಎಂದು ತಿಳಿದು ಬರುತ್ತದೆ. ಈ ಸ್ಥಳವನ್ನು ಗುರುತಿಸಿ ಒತ್ತು ಕೊಟ್ಟವರು ದಿವಂಗತ ಶಾ ಸಾಹೇಬ್ ರವರು ಪಾಳು ಬಿದ್ದಿದ್ದ ಈ ಸ್ಥಳಕ್ಕೆ ಧಾರ್ಮಿಕ ಸ್ಪರ್ಶ ನೀಡಿದರು, ಹಜರತ್ ಮಹಬೂಬ್ ಸುಭಾನಿ ನೂರಾನಿ ಚಿಲ್ಲಾ ಎಂದು ಹೆಸರಿಸಿದರು ಮತ್ತು ಇಲ್ಲಿ ಅನಾಥ ಮತ್ತು ನಿರ್ಗತಿಕ ಮಕ್ಕಳ ಕೇಂದ್ರವನ್ನು ಪ್ರಾರಂಭಿಸಿದರು. ಬಾಗ್ದಾದ್ ದೇಶದಿಂದ ಹಜರತ್ ಮಹಬೂಬ್ ಸುಭಾನಿ (ರ) ಭಾರತಕ್ಕೆ ಬಂದ ಸಾಕ್ಷಿ ಇಲ್ಲ ಆದರೆ ಹಜರತ್ ಮಹಬೂಬ್ ಸುಭಾನಿ (ರ) ಹೆಸರಿನಲ್ಲಿ ಈ ಸ್ಥಳದಲ್ಲಿ ಪವಾಡ ನಡೆಯುತ್ತದೆ ಎಂದು ವಿಶ್ವಾಸ ಇರಿಸಲಾಗುತ್ತದೆ. ಸಮೀಪದಲ್ಲಿ ಮತ್ತೊಂದು ಪ್ರಸಿದ್ಧವಾದ ಅತಿಷಾವಲಿ ದರ್ಗಾ ಇದೆ ಅದಕ್ಕೆ ಹೊಂದಿಕೊಂಡು ಪುರಾತನ ಖಬರಸ್ಥಾನ್ ಇದೆ. ಉರುಸ್ ಸಂದರ್ಭದಲ್ಲಿ ಈ ಸ್ಥಳಕ್ಕೆ ಹೊಂದಿಕೊಳ್ಳುವ ಹೆದ್ದಾರಿಯ ಪಕ್ಕದಲ್ಲಿರುವ ಮತ್ತೊಂದು ಪುರಾತನ ಖಬರಸ್ಥಾನ್ಗೆ ಹಲವಾರು ದಶಕಗಳಿಂದ ಉರುಸ್ ಸಂದರ್ಭ ದಲ್ಲಿ ಸಂದಲ್ ಯಾತ್ರೆ ನಡೆಯುತ್ತದೆ. ಈ ಸ್ಥಳ ಗತಕಾಲದಲ್ಲಿ ಜನ ವಸತಿಯ ಕೇಂದ್ರವಾಗಿತ್ತು ಎಂದು ಹವ್ಯಾಸಿ ಇತಿಹಾಸ ಸಂಶೋದಕ ಲೇಖಕ ದಿವಂಗತ ಚಂದ್ರಶೇಖರ್ ದೊಳೇಕರ್ ಹೇಳುತ್ತಿದ್ದರು. ದರ್ಗಾದ ಒಳಗಿರುವ ಲಿಪಿಗಳು ಪರ್ಷಿಯನ್ ಭಾಷೆಯಲ್ಲಿವೆ. ಇಲ್ಲಿ ಉತ್ಪನ ನಡೆಸುವಾಗ ಟಿಪ್ಪು ಸುಲ್ತಾನ್ ಆಡಳಿತ ಸಂದರ್ಭದ ನಾಣ್ಯಗಳು ದೊರತ್ತಿದ್ದವು ಎಂದು ದೋಳೆಕ ಹೇಳುತ್ತಿದ್ದರು. ಪುರಾತನ ಮರ. ಇಲ್ಲೊಂದು ಬಾರಿಗಾತ್ರದ ಮರವಿದ್ದು ಮೂಲ ಮಾವಿನ ಮರವಾಗಿದೆ. ನೂರಾರು ವರ್ಷಗಳ ವಯಸ್ಸಿನ ಮರದಲ್ಲಿ 50 ಕ್ಕೂ ಹೆಚ್ಚು ಪರಾವಲಂಬಿ ಸಸ್ಯಗಳಿವೆ ಎಂದು ಇತಿಹಾಸಕಾರ ಚಂದ್ರಶೇಕರ್ ದೋಳೆಕರ್ ತನ್ನ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಸ್ಥಳಿಯರು ಸಹ ಇದನ್ನು ಪುಷ್ಟಿಕರಿಸುತ್ತಾರೆ. ಶಾದಿಮಹಲ್ ನಿರ್ಮಾಣದ ವೇಳೆ ಪುರಾತನ ಮರದ ಬಾರಿ ಗಾತ್ರದ ಕೊಂಬೆಯನ್ನು ಕಡಿಯಲಾಗಿದೆ. ಸಮತೋಲನ ಕಳೆದುಕೊಂಡಿರುವ ಮರದ ಒಂದು ಕೊಂಬೆ ಗಾಳಿ ಮಳೆಗೆ ಬಿದ್ದು ಹೋಗಿದೆ. Follow me on instagram / thetigerofmysore follow me on facebook / thetigerofmysore

टीपू के खोए हुए करोड़ों का रहस्यमय ठिकाना

अंग्रेजों को हराने वाले टीपू सुल्तान को अंग्रेजों ने कैसे फँसाया? | The Last Battle of Tipu Sultan!

What Made Hampi One of the Greatest Cities of Its Time?

Hampi: The Forgotten Kingdom of Karnataka

Why Keeladi Is Shaking Up India’s History and Politics | LME 80

टीपू सुल्तान के बेटे मैसूर छोड़कर कहां गए? | What Happened to the Sons of Tipu Sultan? #tipusultan

Who Was Mir Sadiq | traitor of Tipu Sultan

this temple could REWRITE history - Hoysaleswara

ದೇವೇಗೌಡ್ರಿಗೆ ಟಿಕೆಟ್ ಮಿಸ್ - ಜೆಡಿಎಸ್ಗೆ ಬಿಜೆಪಿ ಬಿಗ್ ಶಾಕ್ - ಇತ್ತ ಜೆಡಿಎಸ್ ಅಚ್ಚರಿ ನಿರ್ಧಾರ- hd devegowa

सदर-ए-मजलिस ने टीपू सुल्तान की तारीख़ बताई। | Asaduddin Owaisi

Kurukshetra: Season 1 | Full Episodes 1 & 2 | WATCH NOW | Netflix India

Second HIGHEST Fort of Maharashtra "DHODAP FORT" | Dhodap Fort complete Information | किल्ले धोडप

Hitler in Colour

History and Miracles of Hazrat Tipu Mastan Auliya | Arcot | With His blessings Tipu Sultan was born

Who Really Are the Turks?

KRS Dam Connection with Tipu Sultan

Hazrat Tipu Sultan Podcast | Sher-e-Mysore Ki Real History | Aamir Qadri Podcast @TheTigerofMysore

Trump Attends NBA Finals, Cries Election Fraud in California & Storms Out of Interview

Tipu Sultan was Martyred Here | Water Gate Srirangapatna

