Karedaru Kelade | Dr Rajkumar | Sanadi Appanna | Swara prastara
ವಿಡಿಯೋ ಭಾಗಗಳು: 1. ಮಾಹಿತಿ 00:10 2 ಸಾಹಿತ್ಯದೊಂದಿಗೆ ಕರೆದರು ಕೇಳದೆ ಹಾಡು 03:55 3. ಸ್ವರ ಪ್ರಸ್ತಾರ ವಿವರಣೆ 07:36 4. ಸ್ವರಗಳೊಂದಿಗೆ ಕರೆದರು ಕೇಳದೆ ಹಾಡು 13:20 #Shilegalusangeethava #Bharatamateyamakkalunaavu #Ashwamedha ಕೃಷ್ಣಮೂರ್ತಿ ಪುರಾಣಿಕರ ಕಿರುಪರಿಚಯ : ಕಾದಂಬರಿ ಸಾಮ್ರಾಟ ಎಂದು ಖ್ಯಾತರಾಗಿದ್ದ ಸಾಹಿತಿ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು (15/09/1911) ಬಿಜಾಪುರ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬೀಳಗಿಯಲ್ಲಿ. ತಾಯಿ ಲಕ್ಷ್ಮೀಬಾಯಿ, ತಂದೆ ತಮ್ಮಣ್ಣಭಟ್ಟರು. ಮೊದಲ ಕಾದಂಬರಿ ‘ಮುಗಿಲಮಲ್ಲಿಗೆ’. ಮುತ್ತೈದೆ, ಮಣ್ಣಿನ ಮಗಳು, ಧರ್ಮದೇವತೆ, ಮಂಗಳಾಕ್ಷತೆ, ಗಂಧದ ಬಳ್ಳಿ, ಕಣ್ಣು ತುಂಬಿದ ಕರುಣೆ, ಹಿಮಗಿರಿಯ ಗೌರಿ , ಹಾಲುಂಡ ತವರು ಮುಂತಾದ ಸ್ತ್ರೀ ಪ್ರಧಾನ ಕಾದಂಬರಿಗಳು ಇವರಿಗೆ ಸಾಕಷ್ಟು ಹೆಸರು ತಂದು ಕೊಟ್ಟವು. 11 ಕಾದಂಬರಿಗಳು ಚಲನಚಿತ್ರವಾಗಿ ಮೂಡಿ ಬಂದವು. ‘ಧರ್ಮದೇವತೆ’ ಕಾದಂಬರಿಯು 'ಕರುಣೆಯೇ ಕುಟುಂಬದ ಕಣ್ಣು' ಹೆಸರಿನಿಂದ ಚಲನಚಿತ್ರವಾದರೆ, ‘ಮುತ್ತೈದೆ’ ತಮಿಳು ಚಲನಚಿತ್ರವಾಯಿತು. ಕುಲವಧು, ಭಾಗೀರಥಿ, ಮಣ್ಣಿನ ಮಗಳು, ಪಾವನ ಗಂಗಾ, ಸನಾದಿ ಅಪ್ಪಣ್ಣ, ದೇವರ ಕೂಸು, ಮೌನಗೌರಿ, ಬೆವರಿನಬೆಲೆ, ಮಂಗಳಾಕ್ಷತೆ, ವಸಂತಲಕ್ಷ್ಮಿ ಮುಂತಾದ ಕಾದಂಬರಿಗಳು ಚಲನಚಿತ್ರವಾದಪಟ್ಟಿಯಲ್ಲಿವೆ. 80 ಕಾದಂಬರಿಗಳ ಹೊರತಾಗಿ 11 ಗೀತನಾಟಕಗಳು, 12 ಸಣ್ಣಕಥಾ ಸಂಕಲನಗಳು, 4 ಕವನ ಸಂಕಲನಗಳು, 8 ಶಿಶು ಸಾಹಿತ್ಯ ಕೃತಿಗಳು ಸೇರಿ ಒಟ್ಟು 115 ಕೃತಿಗಳನ್ನು ರಚಿಸಿದ್ದಾರೆ. ‘ಮಗನ ಗೆಲುವು’, ‘ಸೈರಂಧ್ರಿ’, ‘ರಾಧೇಯ’, ‘ರತಿವಿಲಾಸ’, ‘ಜಯಭೇರಿ’, ‘ವಾಸವದತ್ತ’ ಇವರ ಜನಪ್ರಿಯ ಕೃತಿಗಳು. ಮಣ್ಣಿನ ಮಗಳು ಕಾದಂಬರಿಗೆ ಮೈಸೂರು ರಾಜ್ಯ ಪ್ರಶಸ್ತಿಯ ಜೊತೆಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಕಾದಂಬರಿ ಶ್ರೀ’ ಬಿರುದು ಪಡೆದರು. ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ವಿಜಾಪುರ, ಸೊಲ್ಲಾಪುರ ಸಾಹಿತ್ಯ ಸಮ್ಮೇಳನಗಳಲ್ಲಿ ಸನ್ಮಾನ, ಧಾರವಾಡದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಜರುಗಿದ ‘ಕಾದಂಬರಿ ಮತ್ತು ಚಲನಚಿತ್ರ’ ಗೋಷ್ಠಿಯ ಅಧ್ಯಕ್ಷತೆ, ಶೃಂಗೇರಿ ಜಗದ್ಗುರುಗಳಿಂದ ಶಾರದಾಂಬ ಚಿನ್ನದ ಪದಕ ಹೀಗೆ ಹಲವಾರು ಗೌರವಗಳಿಗೆ ಪಾತ್ರರಾದ ಕೃಷ್ಣಮೂರ್ತಿ ಪುರಾಣಿಕರು 1985ರ ನವಂಬರ್ 13 ರಂದು ವಿಧಿವಶರಾದರು. ಸನಾದಿ ವಾದಕ ಅಪ್ಪಣ್ಣ : ಕೊರವರ ಕುಟುಂಬಕ್ಕೆ ಸೇರಿದ ಸನಾದಿ ಅಥವಾ ಶಹನಾಯಿ ವಾದಕ ಅಪ್ಪಣ್ಣನವರು ಬಾಗಲಕೋಟೆ ಜಿಲ್ಲೆಯ ಬಿಳಗಿಯಲ್ಲಿ 1876ರಲ್ಲಿ ಜನಿಸಿದರು. ತಂದೆ ಸಾಬಣ್ಣ ವಾಲಗದ, ತಾಯಿ ಹನುಮವ್ವ. ಅನುಕೂಲಸ್ಥ ಕುಟುಂಬದಲ್ಲಿ ಜನಿಸಿದರೂ ತಮ್ಮ ಕುಲಕಸುಬು ಸನಾದಿ ವಾದನವನ್ನು ಮುಂದುವರೆಸಿ ಅದರಲ್ಲೇ ದೊಡ್ಡ ಸಾಧನೆ ಮಾಡಿದರು. ವಾಹನ ವ್ಯವಸ್ಥೆ ಇಲ್ಲದ ಆ ಕಾಲದಲ್ಲಿ ಅಪ್ಪಣ್ಣನವರು ಕುದುರೆಯ ಮೇಲೆ ಸಂಚರಿಸುತ್ತಿದ್ದರು. ಮೂಲವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತ ಅಪ್ಪಣ್ಣನವರು ಉಸ್ತಾದ್ ಕರೀಮ್ ಖಾನ್ ಅವರಿಂದ ಹಿಂದೂಸ್ತಾನೀ ಸಂಗೀತವನ್ನು ಕಲಿತರು. ಬಿಳಗಿಯ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿದಿನ ಸಂಗೀತಾಭ್ಯಾಸ ಮಾಡುತ್ತಿದ್ದರು. ಸ್ವಾತಂತ್ರ್ಯಪೂರ್ವದ ಬಹುತೇಕ ರಾಜ ಮಹಾರಾಜರುಗಳ ಆಸ್ಥಾನದಲ್ಲಿ ಸಂಗೀತ ಕಛೇರಿ ನಡೆಸುತ್ತಿದ್ದರು. ವಿವಿಧ ಪ್ರಾಂತ್ಯಗಳ ಮಹಾರಾಜರುಗಳಿಂದ ಮೆಚ್ಚುಗೆ ಗಳಿಸಿದರು. ಸನಾದಿ ನುಡಿಸುವ ಕಲೆಯನ್ನು ಓದಿ ನೌಕರಿಗೆ ಸೇರಿದ ಮಗ ಮುಂದುವರೆಸಲಿಲ್ಲ. ಧರ್ಮಪತ್ನಿ ಪೀರವ್ವಳನ್ನು ಕಳೆದುಕೊಂಡ ಅವರು ತಮ್ಮ ಕೊನೆಯ ದಿನಗಳನ್ನು ನೋವಿನಲ್ಲೇ ಕಳೆದರು. ಲಾರಿ ಅಪಘಾತದಲ್ಲಿ ಸೆಪ್ಟೆಂಬರ್ 6, 1945ರಲ್ಲಿ ಮರಣ ಹೊಂದಿದರು. ಮುಧೋಳ ಮಹಾರಾಜರಿಂದ "ಸ್ವರ ಸಾಮ್ರಾಟ್" ಪಡೆದ ಅಪ್ಪಣ್ಣನವರ ಸಮಾಧಿ ಬಿಳಗಿಯಲ್ಲಿದೆ. ಅವರ ಮರಿಮೊಮ್ಮಗ ಬಸವರಾಜ ಭಜಂತ್ರಿ ಉತ್ತಮ ಸನಾದಿ ಕಲಾವಿದರಾಗಿದ್ದಾರೆ. ಹಾಗೇ ಅಪ್ಪಣ್ಣನವರ ಹೆಸರಿನಲ್ಲಿ ಕಲಾವಿದರ ಸಂಘ ಸ್ಥಾಪಿಸಿದ್ದಾರೆ. ಈ ಸಂಘ ಅನೇಕ ಕಲಾವಿದರನ್ನು ಸನ್ಮಾನಿಸುತ್ತಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ಬಿಸ್ಮಿಲ್ಲಾ ಖಾನ್ ರೋಚಕ ಸಂಗತಿಗಳು : ಬಿಸ್ಮಿಲ್ಲಾ ಖಾನ್ ಅಪ್ಪಟ ಶಾಸ್ತ್ರೀಯ ಸಂಗೀತಗಾರರು. ಹಾಗಾಗಿ ಅವರಿಗೆ ಸಿನಿಮಾ ಸಂಗೀತದ ಬಗ್ಗೆ ಕಿಂಚಿತ್ತೂ ಒಲವು ಇರಲಿಲ್ಲ. ' ಗೂಂಜ್ ಉಠಿ ಶೆಹನಾಯಿ ' ಹಿಂದಿ ಚಿತ್ರಕ್ಕೆ ಶೆಹನಾಯಿ ವಾದನದ ರೆಕಾರ್ಡಿಂಗ್ ಸಮಯದಲ್ಲಿ ಅವರ ಸಲಹೆಗಳಿಗೆ ಆ ಚಿತ್ರ ತಂಡದವರು ಬೆಲೆ ನೀಡದೇ ಇದ್ದ್ದಿದ್ದಕ್ಕೆ ಒಂದು ರೀತಿಯ ಬೇಸರ, ಅವಮಾನ ಉಂಟಾಗಿತ್ತು. ಈ ಕಾರಣಕ್ಕೇ ಅವರು ' ಸನಾದಿ ಅಪ್ಪಣ್ಣ' ಚಿತ್ರಕ್ಕೆ ಸನಾದಿ ನುಡಿಸುವ ಆಹ್ವಾನವನ್ನು ಖಡಾಖಂಡಿತವಾಗಿ ತಿರಸ್ಕರಿಸಿದ್ದರೇ ಹೊರತು ಯಾವುದೇ ಅಹಂಕಾರ ಅಥವಾ ಬೇಡಿಕೆಗಳಿಂದಲ್ಲ. ಅಂತಿಮವಾಗಿ ' ಸನಾದಿ ಅಪ್ಪಣ್ಣ' ಚಿತ್ರ ನಿರ್ಮಾಪಕ ಶ್ರೀನಿವಾಸ್, ಚಿತ್ರ ನಿರ್ದೇಶಕ ವಿಜಯ್, ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಮುಂತಾದವರ ಒತ್ತಾಯಕ್ಕೆ ಮಣಿದರೂ, ಕೆಲವು ಷರತ್ತುಗಳನ್ನು ಮುಂದಿಟ್ಟು ಶೆಹನಾಯಿ ನುಡಿಸುವ ಆಹ್ವಾನವನ್ನು ಸ್ವೀಕರಿಸಿದರು. ಅವರ ಷರತ್ತುಗಳಂತೆ ಅವರದೇ ಆದ ವಾದ್ಯಗಾರರ ತಂಡದೊಂದಿಗೆ ತಮಿಳುನಾಡಿನ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋಗೆ ಬಂದಿಳಿದರು. ಸುಮಾರು ಎಂಟು ದಿನಗಳ ತಂಗಿದ್ದರು. ' ಸನಾದಿ ಅಪ್ಪಣ್ಣ' ಚಿತ್ರಕ್ಕೆ ಕರೆದರೂ ಕೇಳದೇ... ಹಾಡಿನ ಜೊತೆಗೆ ಅಲ್ಲಲ್ಲಿ ಶೆಹನಾಯಿ ಸಂಗೀತದ ತುಣುಕುಗಳ ಅವಶ್ಯಕತೆ ಇತ್ತು. ಅವರ ಷರತ್ತುಗಳ ಪ್ರಕಾರ ನಮ್ಮ ಸಂಗೀತ ನಿರ್ದೇಶಕ ಆಯ್ಕೆ ಮಾಡಿದ ರಾಗಕ್ಕೆ ಶೆಹನಾಯಿ ನುಡಿಸಲಿಲ್ಲ. ಅದರ ಬದಲು ದಿನಕ್ಕೆ ಕೆಲವು ರಾಗಗಳಂತೆ ಸುಮಾರು ನಲವತ್ತು ರಾಗಗಳ ಝಲಕ್ ಗಳನ್ನು ಶೆಹನಾಯಿಯಲ್ಲಿ ನುಡಿಸಿ ತೋರಿಸಿದರಂತೆ. ಅವುಗಳಲ್ಲಿ ಜಿ.ಕೆ. ವೆಂಕಟೇಶ್ ಮತ್ತು ಚಿ.ಉದಯಶಂಕರ್ ರವರು 'ಬೇಹಾಗ್' ರಾಗವನ್ನು ಕರೆದರೂ ಕೇಳದೇ... ಹಾಡಿಗೆ ಆಯ್ಕೆ ಮಾಡಿದರಂತೆ. ಬಿಸ್ಮಿಲ್ಲಾ ಖಾನ್ ರವರು ಅಲ್ಲಿ ಇರುವಷ್ಟೂ ದಿನವೂ ಡಾ. ರಾಜಕುಮಾರ್ ರವರು ಹಾಜರಿದ್ದು, ಸನಾದಿ ಹಿಡಿಯುವ ಶೈಲಿ, ಬೆರಳುಗಳ ಚಲನೆ, ಅವರ ಹಾವಭಾವ ... ಎಲ್ಲವನ್ನೂ ಮಂತ್ರಮುಗ್ಧರಾಗಿ ಗಮನಿಸುತ್ತಿದ್ದರಂತೆ. ಹೀಗೆ ಎಕಲವ್ಯನಂತೆ ಕಲಿತಿದ್ದನ್ನು ಡಾ. ರಾಜಕುಮಾರ್ ರವರು ಚಿತ್ರದಲ್ಲಿ ಸನಾದಿ ಅಪ್ಪಣ್ಣ ಪಾತ್ರಕ್ಕೆ ನೈಜತೆಯ ಜೀವ ತುಂಬಿದರು. ಈ ಕಾರಣಕ್ಕೆ ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ' ಸನಾದಿ ಅಪ್ಪಣ್ಣ' ಶತದಿನೋತ್ಸವದ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಬಿಸ್ಮಿಲ್ಲಾ ಖಾನ್ ರವರು ಡಾ. ರಾಜಕುಮಾರ್ ಅಭಿನಯದ ವಿಷಯದಲ್ಲಿ ಬಹಳಷ್ಟು ಪ್ರಭಾವಿತರಾಗಿದ್ದಲ್ಲದೇ ಡಾ. ರಾಜಕುಮಾರ್ ರವರ ಅಭಿನಯ ಚಾತುರ್ಯವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ನನಗಿಂತಲೂ ಅಪ್ಪಟ ಶಹನಾಯಿ ಕಲಾವಿದನಂತೆ ಅಭಿನಯಿಸಿದ್ದೀರಿ ಎಂದು ಡಾ. ರಾಜಕುಮಾರ್ ರವರಿಗೆ ಅಭಿನದಿಸಿದ್ದರು. ಅವರ ಈ ಹೊಗಳಿಕೆಯ ಮಾತಿಗೆ ಪ್ರತಿಯಾಗಿ ಡಾ. ರಾಜಕುಮಾರ್ ರವರು ಈ ಚಿತ್ರದ ಆತ್ಮವೇ ತಾವು ಎಂದು ಉತ್ತರಿಸಿದ್ದರು.

MUSIC MANSION - KAREDARU KELADE - video song - The Music Sensation of Karnataka Ms. ANURADHA BHAT

"ನೀವು ಯಾಕೆ ಮುಖ್ಯಮಂತ್ರಿ ಆಗಬಾರದು..?" ಎಂದು ಕೇಳಿದಾಗ ಅಣ್ಣಾವ್ರು ಕೊಟ್ಟ ಉತ್ತರ..!! | Suresh Hebblikar | Ep 4

Nee hinga nodabyada nanna /#ಭಾವಗೀತೆ ✨

HOME TOUR-ಸ್ಟಾರ್ ನಟಿ ಅಮೀರ್ ಬಾಯಿ ಕರ್ನಾಟಕಿ ಮನೆ ಹುಡುಕುತ್ತಾ-Ep01-Amin Bai Karnataki-Kalamadhyama-#param

Sanadi Appanna | Kannada Movie Full HD | Dr.Rajkumar | Jayaprada | Ashok

ಭಾವಗೀತೆ.,.... ಚೆಲ್ಲಿದೆ ಚೆದುರಿದೆ... ಸಾಹಿತ್ಯ ಶ್ರೀಮತಿ ಕಮಲ ಕೊಂಡದಕುಳಿ

KAREDARU KELADE | Sanadi Appanna | Ankita Kundu - Prithwi Bhat | 60th Bengaluru Ganesh Utsava 2022

Master Hiranayya Comedy Speech | | Nagehabba | Hiranayya | Gangavathi Pranesh | SANDALWOOD TALKIES

Ee hasiru siriyali | Nagamandala | Swara prastara

Ep-580| ಹೆಣಗಳ ರಾಶಿ ರಾಶಿ! ಸ್ತ್ರೀಯರ ಆಕ್ರಂದನ! ಗಾಂಧಾರಿಯ ಕಣ್ಣಲ್ಲಿ ಯುದ್ಧ ಭೂಮಿಯ ಭೀಕರ ದೃಶ್ಯ! | Mahabharata

KAREDARU KELADE | Sanadi Appanna | Samanvitha Sharma |57th Bengaluru Ganesh Utsava 2019

ಹಾ.ಮಾ.ನಾಯಕರು ನನ್ನನ್ನು ಸಾಯೋ ವರೆಗೂ ರುಬ್ಬಿ..ರುಬ್ಬಿ ಬಿಸಾಡಿದರು..!!!

60ರ ನಂತರ ಪ್ರತಿದಿನ ತಿನ್ನಿ: ಕಾಲುಗಳ ನೋವು, ದುರ್ಬಲತೆ ಮತ್ತು ಆಯಾಸಕ್ಕೆ ವಿದಾಯ! #healthtips #kannada

Latest Pranesh Comedy Nagehabba 2026 Full Episode | Gangavathi Pranesh | SANDALWOOD TALKIES

Notations for "Sada Kannali Pranayada Kavithe" - ಸದಾ ಕಣ್ಣಲೀ ಪ್ರಣಯದ ಕವಿತೆ ಹಾಡಿನ ಸಂಪೂರ್ಣ ಸ್ವರಾಲಾಪ

Karedaru Kelade (Cover Song)

Karedaru Kelade - Audio Song | Sanaadi Appanna | G.K. Venkatesh | S. Janaki

| Swaram for Inji Iduppazhaga | Devar Magan | Dr Lavanya | Voice Culture Trainer | Carnatic Notes

ಭೀಮಸೇನ್ ಜೋಶಿ - ನಾಡಿನ ನಾದಪುತ್ರ | Pt Bhimsen Joshi: Naadina Naadaputra Noorakke Nooru Karnataka

