ಮಳವಳ್ಳಿ ಪಟ್ಟಣದಲ್ಲಿ ಬಿಗ್ಬಾಸ್ ವಿನ್ನರ್ ಗಿಲ್ಲಿ ನಟರಾಜುಗೆ ಅದ್ದೂರಿ ಸ್ವಾಗತ -ತೆರೆದ ವಾಹನದಲ್ಲಿ ಮೆರವಣಿಗೆ
ಮಳವಳ್ಳಿ ಪಟ್ಟಣದಲ್ಲಿ ಬಿಗ್ಬಾಸ್ ವಿನ್ನರ್ ಗಿಲ್ಲಿ ನಟರಾಜುಗೆ ಅದ್ದೂರಿ ಸ್ವಾಗತ -ತೆರೆದ ವಾಹನದಲ್ಲಿ ಮೆರವಣಿಗೆ • ಪಟ್ಟಣದಾದ್ಯಂತ ಭಾರಿ ಬಿಗಿ ಪೋಲಿಸ್ ಬಂದೋಬಸ್ಥ್-ಯಾವುದೆ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ • ನೂರಾರು ಕಾರುಗಳು-ಸಾವಿರಾರು Àಬೈಕ್ ಗಳೊಂದಿಗೆ ತೆರೆದ ವಾಹನದಲ್ಲಿ ಗಿಲ್ಲಿ ನಟನ ಮೆರವಣಿಗೆಯಲ್ಲಿ ಅಭಿಮಾನಿಗಳ ದಂಡು • ಪಟ್ಟಣದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಗಿಲ್ಲಿನಟನಿಗೆ ಶುಭಾಶಯ -ಸ್ವಾಗತ ಕೋರುವ ಬ್ಯಾನರ್ ಅಬ್ಬರ ಮಳವಳ್ಳಿ:ತಾಲೂಕಿನ ದಡದಪುರ ಗ್ರಾಮದ ಗಿಲ್ಲಿ ನಟರಾಜು ಬಿಗ್ ಬಾಸ್ ರಿಯಾಲಿಟಿ ಶೋನ ಇತಿಹಾಸದಲ್ಲೆ ಕೋಟ್ಯಾಂತರ ಜನರ ಮನಗೆದ್ದು ಬಿಗ್ಬಾಸ್ ಟ್ರೋಪಿ ತನ್ನದಾಗಿಸಿಕೊಂಡು ತವರಿಗೆ ಬರುತ್ತಿದ್ದಂತೆನೂರಾರು ಕಾರುಗಳಲ್ಲಿ,ಸಾವಿರಾರು ಬೈಕ್ ಗಳಲ್ಲಿ,೫ ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸಾರ್ವಜನಿಕರು ಗ್ರಾಮ ದೇವತೆ ದಂಡಿನ ಮಾರಮ್ಮ ದೇವಸ್ಥಾನದ ಬಳಿ ಸೋಮವಾರ ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಂಡರು. ಮದ್ದೂರು ಮೂಲಕ ಪಟ್ಟಣಕ್ಕೆ ಪ್ರವೇಶವಾಗುತ್ತಿದ್ದಂತೆ ಗ್ರಾಮದೇವತೆ ದಂಡಿನ ಮಾರಮ್ಮ ಶಕ್ತಿ ದೇವೆತಗೆ ವಿಶೇಷ ಪೂಜೆ ಸಲ್ಲಿಸಿದ ಗಿಲ್ಲಿ ನಟರಾಜು ಅಭಿಮಾನಿಗಳು ಅಯೋಜಿಸಿದ್ದ ತೆರೆದ ವಾಹನದಲ್ಲಿ ಮದ್ದೂರು ರಸ್ತೆ-ಕೊಳ್ಳೆಗಾಲ ರಸ್ತೆ,ಮೈಸೂರು ರಸ್ತೆ ಮೂಲಕ ಅನಿತಾ ಕಾನ್ವೆಂಟ್ ರಸ್ತಯ ಮೂಲಕ ಸುಲ್ತಾನ್ ರಸ್ತೆಗೆ ಮೆರವಣಿಗೆಯಲ್ಲಿ ಅಗಮಿಸಿದರು.ಈ ಸಂದರ್ಭದಲ್ಲಿ ರಸ್ತೆಯ ಎರಡು ಬದಿಯಲ್ಲೂ ಅಪಾರ ಜನರು ನಿಂತುಕೊAಡು ನೆಚ್ಚಿನ ಗಿಲ್ಲಿ ನಟನಿಗೆ ಜೈಕಾರ ಹಾಕುತ್ತಾ,ಶುಭಾಶಯ ಕೋರಿ ಗಿಲ್ಲಿ ನಟನನ್ನು ನೋಡಿ ಕಣ್ತುಂಬಿಕೊAಡರು. ಮಾಗನೂರಿನಲ್ಲಿ ಅಭಿನಂದನೆ: ದಡದಪುರ ಗ್ರಾಮಕ್ಕೆ ಸುಲ್ತಾನ್ ರಸ್ತೆಯ ಮೂಲಕ ಅಗಮಿಸಿದ ಗಿಲ್ಲಿ ನಟನನ್ನು ಮಾಗನೂರಿನ ಮಾಮರ ವೃತ್ತದಲ್ಲಿ ಗ್ರಾಮಸ್ಥರು,ಅಪಾರ ಅಭಿಮಾನಿಗಳು,ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಿಬ್ಬಂದಿಗಳು,ಮಾಮರ ಇಂಧನ ಸೇವಾ ಕೇಂದ್ರದ ವ್ಯವಸ್ಥಾಪಕರು,ಸಿಬ್ಬಂದಿಗಳು,ನಾಡಗೌಡರ ಕುಟುಂಬಸ್ಥರು ಅಭಿನಂಧಿಸಿ ಗೌರವಿಸಿದರು. ನಂತರ ಸ್ವಗ್ರಾಮ ದಡದಪುರಕ್ಕೆ ಗಿಲ್ಲಿ ನಟನನ್ನು ಅಪಾರ ಅಭಿಮಾನಿಗಳು ಹಿಂದೆ ಮುಂದೆ ಹಲವಾರು ವಾಹನಗಳ ಜೊತೆಯಲ್ಲಿ ತೆರೆದ ವಾಹನದಲ್ಲಿ ಕರೆದೊಯ್ಯಲಾಯಿತು.ರಸ್ತೆಯುದ್ದಕ್ಕೂ ಅಪಾರ ಅಭಿಮಾನಿಗಳು ನಿಂತುಕೊAಡು ಶುಭಾಶಯ ಕೋರಿದರು.ಸ್ವಗ್ರಾಮ್ಕಕೆ ತೆರಳುತ್ತಿದ್ದಂತೆ ಜೆಸಿಬಿಯಲ್ಲಿ ಬೃಹತ್ ಬೃಹದಾಕಾರದ ಹಾರ ಹಾಕಿ ಗಿಲ್ಲಿ ನಟನನ್ನು ಗ್ರಾಮಸ್ಥರು ಹೃದಯಪೂರ್ವಕವಾಗಿ ಪೂರ್ಣಕುಂಭ ಕಳಸದೊಂದಿಗೆ ಅರತಿ ಬೆಳಗಿಸಿ ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡು ಬಂಡೂರು ಶ್ರೀ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಗಿಲ್ಲಿ ನಟರಾಜು ನಿವಾಸಕ್ಕೆ ತೆರಳಿದರು.ಈ ಸಂದರ್ಭದಲ್ಲಿ ಕುಟುಂಬಸ್ಥರು ಅರತಿ ಮಾಡಿ ಮನೆಗೆ ಬರಮಾಡಿಕೊಂಡರು. ಗಿಲ್ಲಿ ನಟನ ತೆರೆದ ವಾಹನದಲ್ಲಿ ಮೆರವಣಿಗೆ:ನೂರಾರು ವಾಹನಗಳ ಜೊತೆಯಲ್ಲಿ ಗಿಲ್ಲಿ ನಟನನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯುವುದನ್ನು ನೋಡಲು ಅಪಾರ ಅಭಿಮಾನಿಗಳು ನೆರೆದಿದ್ದರು,ಎಲ್ಲಿ ನೋಡಿದರೂ ಅಲ್ಲಿ ಬ್ಯಾನರ್ ಕಟೌಟ್ ಗಳು ಸ್ವಾಗತ ಕೋರುತ್ತಿದ್ದವು. ಗಿಲ್ಲಿ ನಟನಿಗೆ ಭಾರಿ ಬಿಗಿ ಪೋಲಿಸ್ ಬಂದೊಬಸ್ತ್: ಹೆಚ್ಚಿನ ಅಭಿಮಾನಿಗಳು ಬಾಗವಹಿಸುವ ಹಿನ್ನೆಲೆಯಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ ದಡದಪುರ ಗ್ರಾಮಸ್ಥರ ಮನವಿ ಮೇರೆಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲೂ ಭಾರಿ ಬಿಗಿ ಪೋಲಸ್ ಬಂದೋ ಬಸ್ತ್ ಕಲ್ಪಿಸಲಾಗಿದೆ.ಭಾನುವಾರ ಬಿಡಿದ ಸ್ಟೂಡಿಯೋ ಬಳಿ ನಡೆದ ಲಾಠಿ ಚಾರ್ಜು ಹಿನ್ನೆಲೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ಈ ಕ್ರಮವಹಿಸಲಾಗಿದೆ. ಮೆರೆವಣಿಗೆಯಲ್ಲಿ ಸಾವಿರಾರು ಅಭಿಮಾನಿಗಳು:ನಾಡಿನ ಹಲವೆಡೆಯಿಂದ ಬಂದ ನೂರಾರು ಕಾರುಗಳು,ಸಾವಿರಾರು ಬೈಕ್ ಗಳು ಸಾವಿರಾರು ಜನರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಬಾಗವಹಿಸುವುದರೊಂದಿಗೆ ರಸ್ತೆಯುದ್ದಕೂ ಜಯಘೋಷಘಲ್ನನೂಕೂಗುತ್ತಾ ತೆರಳಿದರು. ಪ್ಲೆಕ್ಸ್ ಪಿಂಟಿAಗ್ ಗೆ ಮುಗಿಬಿದ್ದ ಅಭೀಮಾನಿಗಳು:ಗಿಲ್ಲಿ ನಟ ಪಟ್ಟಣಕ್ಕೆ ಅಗಮಿಸುವ ಹಿನ್ನೆಲೆಯಲ್ಲಿ ತಮ್ಮ ತಮ್ಮ ಹೆಸರಿನಲ್ಲಿ ಶುಭಕೋರುವ ಬ್ಯಾನರ್ ಹಾಕಿಸುವತ್ತ ಯುವಕರು,ಅಭಿಮಾನಿಗಳು ಪಟ್ಟಣದ ಬಿಗ್ ಪ್ರಿಂಟ್ಸ್ ಅಂಗಿಡಿಗೆ ಮುಗಿ ಬಿದ್ದರು,ಯಾರಿಗೂ ಪ್ರಿಂಟ ಹಾಕಿಕೊಡುವುದು ಎಂಬ ಗೊಂದಲದಲ್ಲಿ ಪ್ರಿಂಟ್ಸ್ ಮಾಲಿಕರು ಕಸಿವಿಸಿಕೊಂಡು ತದ ನಂತರ ಎಲ್ಲರನ್ನು ಸಮಾದಾನ ಪಡಿಸಿ ಪ್ಲೆಕ್ಸ್ ಪ್ರೀಂಟ್ ಹಾಕಿಸಿ ಕಳುಹಿಸಿಕೊಟ್ಟರು. ಪ್ರತಿ ಕ್ರಿಯೆ: ನಮ್ಮ ಹೆಮ್ಮೆಯ ಹಳ್ಳಿ ಹೈದ ಗಿಲ್ಲಿ ನಟ ಬಿಗ್ ಬಾಸ್ ಶೋನಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವುದು ನಮಗೆ ಸಂತಸ ತಂದಿದೆ,ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ತನ್ನ ಹಾಸ್ಯ ಚಟಾಕಿ ಮಾತುಗಳಿಂದ ಇಡಿ ವಿಶ್ವದ ಜನರ ಪ್ರೀತಿ ವಿಶ್ವಾಸ ಗಳಿಸಿರುವುದು ನಮಗೆ ಹೆಮ್ಮೆ ಹಾಗೂ ಇಡಿ ಮಂಡ್ಯ ಜಿಲ್ಲೆಗೆ ಖುಷಿ ತರುವಂತಹ ವಿಷಯವಾಗಿದೆ ಎಂದು ಟಿಎಪಿಸಿಎಂಸ್ ನಿರ್ದೇಶಕ ಪುಟ್ಟಬಸವಯ್ಯ ಸಂತಸ ವ್ಯಕ್ತಪಡಿಸಿ ಮಾತನಾಡಿದರು. ಪ್ರತಿಕ್ರಿಯೆ: ದಡದಪುರ ಗ್ರಾಮದ ಬಡಕುರಿಗಾಯಿ ಕುಟುಂಬದ ಮಗನಾಗಿ ತನ್ನ ಮಾತುಗಳಿಂದ ರಾಜ್ಯದ ಜನೆತಯನ್ನು ರಂಜಿಸಿ ಮನೆಮಗನಾಗಿದ್ದ ಗಿಲ್ಲಿ ನಟ ಕಷ್ಟದಲ್ಲಿದ್ದರೂ ಯಾರಿಗೂ ಹೇಳಿಕೊಳ್ಳದೆ,ಸಿನಿಮಾರಂಗದಲ್ಲಿ ತನ್ನದೆ ಅದ ಇತಿಹಾಸ ಸೃಷ್ಟಿಸುವ ಕನಸ್ಸಿನ ಮಹಾದಾಸೆ ಇಟ್ಟುಕೊಂಡು ಹಗಳಿರುಲು ಕೆಲಸ ಮಾಡುತ್ತಾ,ಇಂದು ಬಿಗ್ ಬಾಸ್ ಶೋನಲ್ಲಿ ೪೦ ಕೋಟಿಗೂ ಅಧಿಕ ಜನರ ಮನಗೆದ್ದು ಗೆಲುವು ಸಾಧಿಸಿರುವುದು ತುಂಬಾ ಸಂತಸವನ್ನುAಟು ಮಾಡಿದೆ ಎಂದು ಗ್ರಾಮದ ಮುಖಂಡ ಬುಲೆಡಟ್ ನಿಂಗಣ್ಣ ತಮ್ಮ ಮನದಾಳದ ಮಾತನ್ನು ಹೇಳಿಕೊಂಡರು. ಪ್ರತಿಕ್ರಿಯೆ: ಗಿಲ್ಲಿ ನಟ ಎಂದರೆ ನಮಗೆ ಅಭಿಮಾನ,ನಮ್ಮ ಊರಿನವನು,ಈತನ ಸಾಧನೆ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನವನ್ನೆ ಮೂಡಿಸಿದೆ.ಈತ ಭವಿಷ್ಯದಲ್ಲಿ ಇನ್ನು ದೊಡ್ಡ ವ್ಯಕ್ತಿಯಾಗುತ್ತಾನೆ.ಆತನ ಸರಳ ಸಜ್ಜನಿಕೆಯ ನಡೆ-ನುಡಿಗಳು ಮಹಾನ್ ವ್ಯಕ್ತಿಯಾಗಲಿದ್ದಾರೆ. ಎಂ.ಎಸ್.ಶ್ರೀಕAಠಸ್ವಾಮಿ ವಕೀಲರು

Norwegen – Senegal Highlights | Gruppe I, FIFA WM 2026 | sportstudio

🔴LIVE | HC Balakrishna | ಬಿಡದಿ ಟೌನ್ಶಿಪ್ಗೆ ನಿಖಿಲ್ 5 ಎಕರೆ ಜಾಗ ಕೊಟ್ರೆ..ಇಡೀ ಏರಿಯಾ ನಿಖಿಲ್ ಲೇಔಟ್.! | SNK

ರೈತರ ಮುಂದೆ ಚರ್ಚೆಗೆ ಬಾಲಕೃಷ್ಣ ಹಿಂದೇಟು ಹಾಕುತ್ತಿರುವುದು ಏಕೆ? | Bidadi Township Controversy | Suvarna News

Jordanien – Algerien Highlights | Gruppe J, FIFA WM 2026 | sportstudio

ಡಿಕೆಶಿ ಸಂಪುಟಕ್ಕೆ 15 ಶಾಸಕರು!ಇವರೇ ಆ ಅದೃಷ್ಟವಂತರು? | Who Are The Lucky 15 In DK Cabinet

Yen Nim Problemu: ಅತ್ತೆ-ಸೊಸೆ ಕಲಹದಿಂದ ತಾಯಿ-ಮಕ್ಕಳ ಸಂಬಂಧ ದೂರ| Malavalli | Narendra Swamy

DV Sadananda Gowda : BJPಯಲ್ಲಿನ ಬಿರುಕು ಅಡ್ಡಮತದಾನಕ್ಕೆ ಪೂರಕ | MLC Election | Cross Voting |@newsfirst

‘ಕರ್ಣನಂತೆಯೇ ಅಂಬಿ ತ್ಯಾಗಮಯಿ’ | Actor Doddanna | Shraddhanjali Sabhe in Mandya

Udhayanidhi VS ரமேஷ்.. உச்சகட்ட விவாதத்தில் பேரவை | CM Vijay | TN Assembly | PTD

Middle Class Family Official 4K Full Video | Kannada | Arya Swaroop | Bazzar Bala | Nandini Raj

Yen Nim Problemu: ಮನೆಯಿಲ್ಲದೇ ಮುರುಕಲು ಮನೆಯಲ್ಲಿ ಜೀವನ | Malavalli | Narendra Swamy

HD Kumaraswamy Fans Craze In Malavalli HDK ಎಂಟ್ರಿಗೆ ಶಿಳ್ಳೆ, ಚಪ್ಪಾಳೆ ಇರಿಸುಮುರಿಸುಗೊಂಡ ಚಲುವರಾಯಸ್ವಾಮಿ

डान्सबार मधली कोमल बनली समीर चौघुलेची सून | Maharashtrachi Hasyajatra | New Marathi Comedy

Part 2 - ಬ್ರಹ್ಮಾಂಡ ಗುರೂಜಿ ಜೊತೆ ಮಜಾ ಮಾತುಕತೆ | Sowjanya Stores

President Ahmed al-Sharaa clarifies the truth about Trump's announcement to hand over the "Hezbol...

Rajendra Singh Babu | Bannada Hejje EP-2 | ನಟಿ ಕಲ್ಪನ ವಿಷಯ ಎಲ್ಲಾ ನನಗೆ ಗೊತ್ತಿತ್ತು..!

समीर समोर आली ओंकारची विदेशी गर्लफ्रेंड | Maharashtrachi Hasyajatra | Marathi Comedy Show | Scene

පාස්කු ප්රහාරය ගහන්න හිටියේ පෝයට පෙරහරට. අවුරුදු උත්සවයට ගහන්න පුපුරන ද්රව්ය වේළිලා තිබුන් නෑ.

Record-Breaking Heatwave with up to 40 Degrees, Extreme Tropical Nights - Plus Increasing Thunder...

