ಪಾರಿಜಾತ ದಲ್ಲಿದೆ ರೋಗನಿರೋಧಕ ಹೆಚ್ಚಿಸುವ ಶಕ್ತಿ Health Benefits of Night Jasmine Harsingar पारिजात పారిజాత
ಪಾರಿಜಾತ - ಒಂದು ಬಗೆಯ ಹೂವು. ಈ ಹೂವನ್ನು ಭಾರತದಲ್ಲಿ ಹೆಚ್ಚಾಗಿ ಕಾಣಬಹುದು. ಕನ್ನಡ - ಪಾರಿಜಾತ ಆಂಗ್ಲ - ನೈಟ್ ಜಾಸ್ಮಿನ್,ಕೊರಲ್ ಜಾಸ್ಮಿನ್ ಹಿಂದಿ - ಹರಸಿಂಗಾರ್, ಷೆಫಾಲಿಕಾ ತಮಿಳು - ಮಂಜಪೂ, ಪವಳ ಮಲ್ಲಿಗೈ ತೆಲುಗು - ಪಗಡಮಲ್ಲೆ, ಪಾರಿಜಾತಮು ಮಲೆಯಾಳಂ -ಪವಿಳಮ್ಮಲ್ಲಿ,ಪಾರಿಜಾತಿಕಂ ಬಂಗಾಲಿ - ಷಿಯಲಿ ಒರಿಯಾ - ಗಂಗಾ ಷಿಯಲಿ ಮರಾಠಿ - ಖುರಸಳಿ,ಪಾರಿಜಾತಕ ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ. ಕ್ಷೀರಸಮುದ್ರದಿಂದ ಹುಟ್ಟಿದ ೫ ಕಲ್ಪವೃಕ್ಷಗಳಲ್ಲಿ ಇದೂ ಒಂದು. ನಂತರ ಇಂದ್ರನ ನಂದನವನದಲ್ಲಿ ಪಲ್ಲವಿಸಿತು. ಕೃಷ್ಣಾವತಾರ ಕಾಲದಲ್ಲಿ, ಕೃಷ್ಣನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕಥೆ ಇದೆ. ಕೃಷ್ಣಪರಮಾತ್ಮನಿಗೆ ಪಾರಿಜಾತಪುಷ್ಪವನ್ನು ಕಂಡರೆ ಪ್ರಾಣ. ಬೌದ್ಧಮಂದಿರಗಳಲ್ಲೂ ಈ ಹೂಗಳನ್ನು ಉಪಯೋಗಿಸುತ್ತಾರೆ. ಪುರಾಣಗಳಲ್ಲಿ ಉಲ್ಲೇಖಗೊಂಡ ಪಾರಿಜಾತದ ಹೂ, ಒಂದು ಕಾಲ್ಪನಿಕ ಪುಷ್ಪ. ಸಸ್ಯಶಾಸ್ತ್ರಜ್ಞರ ಪ್ರಕಾರ, ಇದು ಹೂವಲ್ಲವಂತೆ. ಜೀರ್ಣಾಂಗಗಳ ತೊಂದರೆಗೆ ಬೀಜದ ಪುಡಿಯನ್ನೂ ಜಾಂಡಿಸ್ ಹಾಗೂ ಮಲಬದ್ಧತೆಯ ತೊಂದರೆಗಳಿಗೆ, ಎಲೆಗಳ ರಸವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ ಕೀಲು ನೋವು, ತಲೆ ಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರ, ಯಕೃತ್ತಿನ ರೋಗ, ಕರುಳಿನ ಹುಳು ನಿವಾರಣೆಗೆ ಪಾರಿಜಾತವನ್ನು ಔಷಧಿಯಾಗಿ ಬಳಸುತ್ತಾರೆ.[೧] ಪಂಚ ವೃಕ್ಷಗಳಲ್ಲಿ ಒಂದು. ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನಗಳೇ ಉಳಿದ ನಾಲ್ಕು ವೃಕ್ಷಗಳು. ಪಾರಿಜಾತದ ಕೆಂಪು ತೊಟ್ಟಿನಿಂದ ಪೂರ್ವಜರು ಬಟ್ಟೆಗೆ ಹಾಕುವ ಕಾವಿ ಬಣ್ಣವನ್ನು ತಯಾರಿಸುತ್ತಿದ್ದರು. ಪಾರಿಜಾತವನ್ನು ತಿಳಿವಳಿಕೆ ಮತ್ತು ಜ್ಞಾನದ ಸಂಕೇತವೆಂದು ಭಾವಿಸುತ್ತಿದ್ದರು. ನೆಲದ ಮೇಲೆ ಉದುರಿದ ಹೂವನ್ನು ದೇವರಿಗೆ ಸಮರ್ಪಿಸುವುದಿಲ್ಲ. ಆದರೆ ಪಾರಿಜಾತ ಮತ್ತು ಬಕುಳದ ಹೂವುಗಳಿಗೆ ಮಾತ್ರ ಇದರಿಂದ ವಿನಾಯಿತಿ ಉಂಟು. ನಮ್ಮ ದೇಶದ ಸುಗಂಧಿತ ಪುಷ್ಪಗಳಲ್ಲಿ 'ಪಾರಿಜಾತ,' ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಕನ್ನಡದ ಆದಿಕವಿ ಪಂಪ, ತನ್ನ ಕಾವ್ಯಗಳಲ್ಲಿ ಪಾರಿಜಾತದ ಹೂವಿನ ವರ್ಣನೆಯನ್ನು ಬಹಳವಾಗಿ ಮಾಡಿದ್ದಾನೆ. ಪಾರಿಜಾತದ ಕಂಪು ಮೂಗಿಗೆ ಹಿತ. ಹೆಚ್ಚಿನ ತೀಕ್ಷ್ಣತೆಯಿಲ್ಲದ ಕೋಮಲವಾದ ಹೂವನ್ನು ಎಲ್ಲರೂ ಪ್ರೀತಿಸುತ್ತಾರೆ.ಪಾರಿಜಾತ, 'Nyctanthes arbor-tristis', ಎಂಬ ಸಸ್ಯಶಾಸ್ತ್ರೀಯವರ್ಗಕ್ಕೆ ಸೇರುತ್ತದೆ. ಅಂದರೆ ರಾತ್ರಿಯಲ್ಲಿ ಅರಳುವ ಹೂ ಎಂದರ್ಥ ರಾತ್ರಿಯ ಹೊತ್ತೇ ಪಾರಿಜಾತದ ಹೂಗಳು ಅರಳಿ ಸುಗಂಧವನ್ನು ಹೊರಸೂಸುವುದರಿಂದ, ಟ್ರೀ ಆಫ್ ಸ್ಯಾಡ್ನೆಸ್, ಎನ್ನುವವರೂ ಇದ್ದಾರೆ ಪಾರಿಜಾತವೆಂಬ ಹೆಸರು ಬರಲು ಕಾರಣವಿದೆ. ಇದರಬಗ್ಗೆ ಒಂದು ಸುಂದರ ಕಥೆಯ ಪ್ರಕಾರ, ಪಾರಿಜಾತವೆಂಬ ಹೆಸರಿನ ರಾಜಕುವರಿಯೊಬ್ಬಳು, ಸೂರ್ಯನನ್ನು ಪ್ರೀತಿಸಿದಳಂತೆ. ಸೂರ್ಯ ಸ್ವಲ್ಪಸಮಯದಲ್ಲೇ ಅವಳನ್ನು ತೊರೆದುಬಿಟ್ಟ. ಪ್ರಿಯಕರನ ವಿರಹವನ್ನು ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಳಂತೆ. ಅವಳ ದೇಹವನ್ನು ಸುಟ್ಟಬೂದಿಯಿಂದ ಪಾರಿಜಾತದ ಗಿಡವು ಹುಟ್ಟಿತಂತೆ. ಆದ್ದರಿಂದಲೇ ಸೂರ್ಯ ಭಗವಾನನ ಪ್ರಖರ ಕಿರಣಗಳನ್ನು ಇದು ತಡೆದುಕೊಳ್ಳಲಾರದು. ಪಾರಿಜಾತ ಅದಕ್ಕಾಗಿಯೇ ಸೂರ್ಯಕಿರಣಗಳು ಮೂಡುವಮೊದಲೇ ಹೂ ಉದುರಿಸಿತ್ತವೆ. ಇಂತಹ ನೋವಿನ ಕಥೆಯಿಂದಾಗಿ ಸೊರಗಿದ ಮರವೆಂಬ ಹೆಸರು ಬಂದಿದೆ. ರಾತ್ರಿಅರಳುವಹೂವಾದ್ದರಿಂದ ನೈಟ್ ಜ್ಯಾಸ್ಮಿನ್ ಎನ್ನುವ ಹೆಸರೂ ಇದಕ್ಕೆ ಅನ್ವಯಿಸುತ್ತದೆ ಇದು ಮಧ್ಯಮ ಗಾತ್ರದ ಹೊದರು. ಅಥವಾ ಚಿಕ್ಕಮರವೆಂದು ಹೇಳಬಹುದು. ಪಾರಿಜಾತದ ಹೂಗಳನ್ನು ಮಲ್ಲಿಗೆ ಹೂವಿಗೆ ಹೋಲಿಸಬಹುದು. ಆದರೆ ಸುವಾಸನೆಯಲ್ಲಿ ಇವು ಬಹಳ ನಾಜೂಕು. ಗೊಂಚಲಿನ ರೂಪದಲ್ಲಿ ಅರಳುತ್ತವೆ. ೫ ರಿಂದ ೮ ದಳಗಳ ಬಿಳಿಹೂವಿಗೆ, ಹವಳಗೆಂಪಿನನಾಳ ಆಕರ್ಷಕವಾಗಿ ಜೋಡಿಸಲಾಗಿದೆ. ಮನಕ್ಕೆ ಮುದಕೊಡುವ ಹಿತ-ಮಿತವಾದ ಸುಗಂಧ ಪಾರಿಜಾತದ ಕೆಲವು ವಿಶೇಷಶತೆಗಳಲ್ಲೊಂದು. ಕೋಮಲವಾದ ಹೂಗಳನ್ನು ಮುಟ್ಟಿದರೆ ಗಿಡದಿಂದ ಕಳಚಿಕೊಳ್ಳುವ ಸಾಧ್ಯತೆಗಳಿವೆ. ಜುಲೈ ತಿಂಗಳಿನಿಂದ ನವೆಂಬರ್ ಮಾಸದವರೆಗೆ ದಂಡಿಯಾಗಿ ಹೂ ಸುರಿಸುತ್ತವೆ. ಸೂರ್ಯ ಮುಳುಗಿದಮೇಲೆ ಅರಳಿದ ಹೂವುಗಳು, ರಾತ್ರಿಯೇ ಉದುರಿ, ಬೆಳಿಗ್ಗೆ ಗಿಡದ ಕೆಳಭಾಗದಲ್ಲಿ, ಹೂವಿನ ಹಾಸಿಗೆಯಂತೆ ಕಾಣಿಸುತ್ತವೆ. ಈ ಹೂವುಗಳನ್ನು ಆಯ್ದು ಮನೆಯಲ್ಲಿಟ್ಟರೆ, ಜೇನಿನಂತಹ ಪರಿಮಳದ ಅನುಭವವಾಗುತ್ತದೆ. ಇದು ಎಲೆ ಉದುರಿಸುವ ಮರ. ಪಾರಿಜಾತದ ಹೂವಿನ ಕಾಲಮುಗಿದ ಮೇಲೆ ಕೊಂಬೆಯನ್ನು ಕತ್ತರಿಸಬೇಕು. ಗಿಡದ ರೆಂಬೆಗಳು ನಾಲ್ಕುಮೂಲೆ, ಎಲೆಗಳ ಆಕಾರ ಹೃದಯವನ್ನು ಹೋಲುತ್ತವೆ. ತುದಿ ಮೊನಚು. ಒರಟಾದ ಎಲೆಗಳು,ಬೂದಿಮಿಶ್ರಿತ ಹಸಿರುಬಣ್ಣ. ಉಪ್ಪುಕಾಗದದಂತೆ ಒರಟು. ಎಲೆತೊಟ್ಟು ಮೋಟಾಗಿರುತ್ತದೆ. ಕೊಂಬೆಗಳು ಸಾಮಾನ್ಯವಾಗಿ ಬಾಗಿರುತ್ತವೆ. ೪ ಮೀಟರ್ ಎತ್ತರ ಬೆಳೆಯುತ್ತವೆ. ಗಿಡ ವಿಶಾಲವಾಗಿ ಹಬ್ಬಿಕೊಂಡು ಎಲ್ಲಾ ಭಾಗದಲ್ಲೂ ಹರಡಿಕೊಂಡಿರುತ್ತದೆ. ಕಾಯಿಗಳು ಗುಂಡಾಗಿರುತ್ತವೆ. ದಕ್ಷಿಣಭಾರತದ ಉದ್ಯಾನವನಗಳಿಗೆ ಬಹಳ ಹಿಂದೆಯೇ ಬಂದಿದೆ. ಮಹಾರಾಷ್ಟದ ಮಣ್ಣು ಹಾಗೂ ಪರಿಸರ ಇದಕ್ಕೆ ಅನುಕೂಲಕರವಾಗಿದೆ. ರಸ್ತೆಯ ಅಕ್ಕ ಪಕ್ಕಗಳಲ್ಲೂ ಇದು ಮಹಾರಾಷ್ಟ್ರದಲ್ಲಿ ಬೆಳೆಯುತ್ತದೆ ಸುಗಂಧವನ್ನು ತಯಾರಿಸುತ್ತಾರೆ. ಹೂವಿನ ಕಿತ್ತಳೆಗೆಂಪಿನ ನಾಳ ಬಣ್ಣ ಕಟ್ಟಲು ಉಪಯೋಗಕ್ಕೆ ಬರುತ್ತದೆ. ಎಲೆಗಳನ್ನು ನಾಟವನ್ನು ಪಾಲಿಷ್ ಮಾಡಲು ಉಪಯೋಗಿಸುತ್ತಾರೆ. ಪಾರಿಜಾತ ಸಹಜವಾಗಿ ಅಸ್ಸಾಮ್ ಈಶಾನ್ಯ ಭಾರತದ ಕಾಡುಗಳಲ್ಲಿ ಬೆಳೆಯುತ್ತದೆ. ಮರದ ತೊಗಟೆಯಿಂದ ಟ್ಯಾನಿನ್ ಅನ್ನು ತಯಾರಿಸುತ್ತಾರೆ. ಮನೆಯ ಹತ್ತಿರದಲ್ಲಿ ಅಂಗಳದ ಮೂಲೆಯಲ್ಲಿ ಒಂದು ಪಾರಿಜಾತದ ಮರವಿದ್ದರೆ ಸಾಕು ; ಪ್ರದೇಶದ ಗಾಳಿಯಲ್ಲಿ ನವಿರಾದ ಸುಗಂಧದ ಎಳೆಗಳು ತೇಲಿಬರುವ ಅನುಭವನ್ನು ಸವಿಯುತ್ತೀರಿ

ಪಾರಿಜಾತ..! ಏನು ಗೊತ್ತಾ..ಇದರಲ್ಲಿರೋ ಆರೋಗ್ಯ ರಹಸ್ಯ..? the story of night-blooming jasmine..!

ದೇಹದ ತೂಕ / ಡಯಾಬಿಟಿಸ್ / ಬಿಪಿ / ಮಲಬದ್ಧತೆ / ಅಲರ್ಜಿ- 3 ಸೀಬೆ ಎಲೆ ಸಾಕು| Benefits of Guava and guava Leaves

ಮೋದಿನ ಅಡಕತ್ತರಿಗೆ ಸಿಲುಕಿಸಿದ ಇರಾನ್ ! UAE, ಇಸ್ರೇಲ್ ಸಹ ಕಾದು ನೋಡ್ತಿದೆ ಮೋದಿ ನಿರ್ಧಾರದ ಕಡೆ ?

Parijata | ಶ್ರೀಕೃಷ್ಣ ಸ್ವರ್ಗದಿಂದ ಭೂಮಿಗೆ ತಂದ ದೇವಪುಷ್ಪ ಪಾರಿಜಾತ | Parijat flower from Swarga lok

ಶತ್ರುವಿಗೂ ಬೇಡ ನನ್ನ ಪರಿಸ್ಥಿತಿ -ನನ್ನ ಕೊನೆಯ ಆಸೆ ಇದೊಂದೇ!? | Rajesh Reveals Ft. Vijayalakshmi | Rajesh

ಈ ಎಲೆ ಇದ್ದರೆ ಸಾಕು ನೂರಾರು ರೋಗಗಳು ಸರ್ವನಾಶ | Parijatha Leaves Kashaya Benefits Kannada ಪಾರಿಜಾತ ಕಷಾಯ

ಕಾನೂನು ಕುಣಿಕೆ ಹಿಡಿದು RSS ಬೆನ್ನಟ್ಟಿದ್ದ ಪ್ರಿಯಾಂಕ್ ಖರ್ಗೆಗೆ ಭೂ ಕಬಳಿಕೆಯ ಉರುಳು..!!!

ಪುನರ್ನವ ಔಷಧೀಯ ಸಸ್ಯ, ದೇಹಕ್ಕೆ ಪುನರ್ ಶಕ್ತಿ ಕೊಡುತ್ತದೆ Boerhaavia Diffusa, Spreading Hogweed, Red Hogweed

ಇವಳಂತ ಕಚಡಾ ಲವರ್ ಯಾರಿಗೂ ಬೇಡ, ದುರಂತ ನಾಯಕನಾದ ಪುಣೆಯ ಮುಗ್ಧ ಯುವಕ..! | Pune Ketan and Siya Case

ಪಾರಿಜಾತ ಕಷಾಯ || Parijatha Kashaya ||Nyctanthes arbor-tristis|| Dr. Khadar Lifestyle

HIBISCUS TEA Benefits - What Daily Use Can Do

ಆಧುನಿಕ ತೊಟ್ಟಿ ಮನೆ ನೋಡಿ | । Modern Interior Design । Architecture।Aesthetic Home

ash gourd juice health benefits | ಬೂದು ಕುಂಬಳಕಾಯಿ ಜ್ಯುಸ್ | ಗ್ಯಾಸ್ಟ್ರಿಕ್, ಮಲಬದ್ಧತೆ, ತೂಕ ಕಡಿಮೆ

ದೊಡ್ಡ ಪತ್ರೆ ಎಲೆಯ ಔಷಧೀಯ ಗುಣಗಳು | Doddapathre! ದೊಡ್ಡ ಪತ್ರೆ, Mexican Mint Health Benefits of Coleus.

Ayurvedic Vastu Tips: Evil Eye, Crystal & Gemstones | Dr. Jayashree on Body to Beiing | Shlloka

ಪಾರಿಜಾತ ಹೂಗಳಿಂದ ದೊರೆಯುವ ಲಾಭಗಳು By #AnanthJi #SwayamVaidya #YogaVismaya #FoodIsMedicine #Ayurveda

How to Control Uric Acid Naturally in Kannada ಯೂರಿಕ್ ಆಸಿಡ್ ಗೆ ಮನೆಮದ್ದು |What is Uric Acid in Kannada

👉ಸ್ನಾನ ಮಾಡೋಕೆ ಮುಂಚೆ ಈ ವಸ್ತುವನ್ನು ಹಚ್ಚಿ 😱 ನೀವೇ ಹುಡುಕುತ್ತೀರಾ ಬಿಳಿ ಕೂದಲು ಎಲ್ಲಿ ಅಂತ 💯 % ರಿಸಲ್ಟ್

सिर्फ 4 दिन नीम लो … Result देखकर विश्वास नहीं होगा | 20+ Health Benefits of Neem | Anurag Rishi

