ದ.ರಾ.ಬೇಂದ್ರೆ ಅಜ್ಜನ ಬಗ್ಗೆ ನಿಮಗೆಷ್ಟು ಗೊತ್ತು..? Dr. Da Ra Bendre |By Suresh Kulkarni |Classic Education

ದ.ರಾ.ಬೇಂದ್ರೆ ಅಜ್ಜನ ಬಗ್ಗೆ ನಿಮಗೆಷ್ಟು ಗೊತ್ತು..? Dr. Da Ra Bendre |By Suresh Kulkarni |Classic Education "ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು [೧] ಸಾಕ್ಷ್ಯಚಿತ್ರ ತಯಾರಾಗಿತ್ತು. ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ರಲ್ಲಿ ಅವರ ಮೊದಲ ಕವನ "ಪ್ರಭಾತ" ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. "ಗರಿ", "ಕಾಮಕಸ್ತೂರಿ ", "ಸೂರ್ಯಪಾನ", "ನಾದಲೀಲೆ", "ನಾಕುತಂತಿ" ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ ನಾಕುತಂತಿ ಕೃತಿಗೆ ೧೯೭೪ ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. ೧೯೨೧ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ "ಗೆಳೆಯರ ಗುಂಪು" ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು. ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು 1954ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವೆಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ. ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು. ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ. ಇವರು ಬರೆದ "ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ" ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ. ಗಣಿತದ ಲೆಕ್ಕಾಚಾರ ಮಾಡುತ್ತ ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ನಿಮ್ಮ ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ, ಎಲ್ಲೆಲ್ಲೂ ಲೆಕ್ಕಾಚಾರವಿದೆ ಅನ್ನುತ್ತಾ ಕೊನೆ ಕೊನೆಗೆ ದ.ರಾ.ಬೇಂದ್ರೆಯವರು ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದರು. ಇವರನ್ನು ಕನ್ನಡದ "ಕನ್ನಡದ ಠಾಗೋರ್" ಎಂದು ಕರೆಯಲಾಗುತ್ತದೆ. "ನಮನ" ಬೇಂದ್ರೆಯವರಿಗೆ ಸಂಖ್ಯೆಗಳು ಹೊಸ ಲೋಕವೊಂದನ್ನು ತೆರೆದಿದದ್ವವು. ಬೇಂದ್ರೆ ಮನಸಿಗೆ 441 ಹಾಗೂ ಹೃದಯಕ್ಕೆ 881 ಎಂದು ಸಂಖ್ಯೆ ನೀಡಿದ್ದರು. ಬೇಂದ್ರೆಯವರ ಸಾಹಿತ್ಯ ಧಾರವಾಡದಿಂದ ಪ್ರಕಟಗೊಳ್ಳುತ್ತಿದ್ದ ‘ಸ್ವಧರ್ಮ’ ಎನ್ನುವ ಪತ್ರಿಕೆಯಲ್ಲಿ. ಮೊದಲು ಪ್ರಕಟಗೊಂಡ ‘ಬೆಳಗು’ ಕವಿತೆಯು 1932ರಲ್ಲಿ ಪ್ರಕಟಗೊಂಡ ಬೇಂದ್ರೆಯವರ ಗರಿ ಸಂಕಲನದ ಮೊದಲ ಕವನವಾದ ‘ಗರಿ’ ಸಂಕಲನದಲ್ಲಿದೆ. ಅದರಲ್ಲಿ ಮೊದಲ ಕವನವಾದ ಈ ಕವಿತೆಯು ರಚನೆಗೊಂಡದ್ದು 1919ರಲ್ಲಿ, 2019ರಲ್ಲಿಯೂ ಪ್ರಸಿದ್ಧವಾಗಿದೆ. *ನೂರು ವರ್ಷದ ಹಿಂದಿನ ಕವನ - ಬೆಳಗು[೩] ಬೆಳಗು(ಮೊದಲ ಪದ್ಯ) ಮೂಡಲ ಮನೆಯಾ ಮುತ್ತಿನ ನೀರಿನ ಎರಕ$ವ ಹೊಯ್ದಾ ನುಣ್ಣ-ನ್ನೆರಕsವ ಹೊಯ್ದಾ ಬಾಗಿಲ ತೆರೆದೂ ಬೆಳಕು ಹರಿದೂ ಜಗವೆಲ್ಲಾ ತೊಯ್ದಾ ಹೋಯ್ತೋ-ಜಗವೆಲ್ಲಾ ತೊಯ್ದಾ.

ಗುರುರಾಜ ಕರಜಗಿ ಜೀವನದ ಕಥೆ | Weekend With Ramesh S5 | Full Episode 12 | Gururaj Karajagi @zeekannada
▶︎

ಗುರುರಾಜ ಕರಜಗಿ ಜೀವನದ ಕಥೆ | Weekend With Ramesh S5 | Full Episode 12 | Gururaj Karajagi @zeekannada

"ಹುಷಾರ್ ಹೆತ್ತವರೇ! ಮಕ್ಕಳಿಗೆ ಪಾಠ ಮಾಡದೇ ಮಾರ್ಕ್ಸ್ ಹಾಕ್ತಿದ್ದಾರೆ ದೊಡ್ಡ ಸ್ಕೂಲ್ ಗಳು!E01-Suresh Kulkarni
▶︎

"ಹುಷಾರ್ ಹೆತ್ತವರೇ! ಮಕ್ಕಳಿಗೆ ಪಾಠ ಮಾಡದೇ ಮಾರ್ಕ್ಸ್ ಹಾಕ್ತಿದ್ದಾರೆ ದೊಡ್ಡ ಸ್ಕೂಲ್ ಗಳು!E01-Suresh Kulkarni

"ಯಾವುದೇ ತರಗತಿಯ ಪ್ರಶ್ನೆಪತ್ರಿಕೆ ಹೇಗೆ ತಯಾರಾಗುತ್ತದೆ ಗೊತ್ತಾ?" | ಶ್ರೀ ಸುರೇಶ್ ಕುಲಕರ್ಣಿ
▶︎

"ಯಾವುದೇ ತರಗತಿಯ ಪ್ರಶ್ನೆಪತ್ರಿಕೆ ಹೇಗೆ ತಯಾರಾಗುತ್ತದೆ ಗೊತ್ತಾ?" | ಶ್ರೀ ಸುರೇಶ್ ಕುಲಕರ್ಣಿ

"ಕವಿ ಬೇಂದ್ರೆ ತೀರಿಕೊಂಡಾಗ ನಡೆದ ಘಟನೆಗಳನ್ನು ಬಿಚ್ಚಿಟ್ಟ ಸುರೇಶ ಕುಲಕರ್ಣಿ!"-E03-Suresh Kulkarni-Da Ra Bendre
▶︎

"ಕವಿ ಬೇಂದ್ರೆ ತೀರಿಕೊಂಡಾಗ ನಡೆದ ಘಟನೆಗಳನ್ನು ಬಿಚ್ಚಿಟ್ಟ ಸುರೇಶ ಕುಲಕರ್ಣಿ!"-E03-Suresh Kulkarni-Da Ra Bendre

ಪರಿಣಾಮಕಾರಿ ಬೋಧನೆ   - ಶ್ರೀ ಸುರೇಶ ಕುಲಕರ್ಣಿ ಅವರಿಂದ ಉಪನ್ಯಾಸ Talk by Sri Suresh Kulkarni
▶︎

ಪರಿಣಾಮಕಾರಿ ಬೋಧನೆ - ಶ್ರೀ ಸುರೇಶ ಕುಲಕರ್ಣಿ ಅವರಿಂದ ಉಪನ್ಯಾಸ Talk by Sri Suresh Kulkarni

"ನಿಮ್ಮ ಈ ಒಂದು ಕೆಲಸ ನಿಮ್ಮ ಮಕ್ಕಳ ಭವಿಷ್ಯ ಹಾಳುಮಾಡ್ತಿದೆ ಪೋಷಕರೇ!E02-Suresh Kulkarni-Kalamadhyama-#param
▶︎

"ನಿಮ್ಮ ಈ ಒಂದು ಕೆಲಸ ನಿಮ್ಮ ಮಕ್ಕಳ ಭವಿಷ್ಯ ಹಾಳುಮಾಡ್ತಿದೆ ಪೋಷಕರೇ!E02-Suresh Kulkarni-Kalamadhyama-#param

ಡಾ| ಸುರೇಶ್ ಕುಲಕರ್ಣಿ ಸರ್ ಇವರಿಂದ ಸ್ಪರ್ಧಾರ್ಥಿಗಳ ಕುರಿತು ವಿಶೇಷ ಉಪನ್ಯಾಸ || Vidyakashi Career academy
▶︎

ಡಾ| ಸುರೇಶ್ ಕುಲಕರ್ಣಿ ಸರ್ ಇವರಿಂದ ಸ್ಪರ್ಧಾರ್ಥಿಗಳ ಕುರಿತು ವಿಶೇಷ ಉಪನ್ಯಾಸ || Vidyakashi Career academy

ಬೇಂದ್ರೆ ಮಗ ಹೆಣ್ಣು ನೋಡಲು ಹೋದಾಗ ಏನಾಯಿತು? | Jayant Kaikini | Bendre Kavya Gayana Sanje | Book Brahma
▶︎

ಬೇಂದ್ರೆ ಮಗ ಹೆಣ್ಣು ನೋಡಲು ಹೋದಾಗ ಏನಾಯಿತು? | Jayant Kaikini | Bendre Kavya Gayana Sanje | Book Brahma

ಬೇಂದ್ರೆ ಮನೆ ಒಳಗೆ ಮ್ಯೂಸಿಯಂ - ಕುಟುಂಬದ ಪರಿಚಯ, ಇವರೇ ಬೇಂದ್ರೆ ಮೊಮ್ಮಗಳು |DHARWAD DARA BENDRE HOME TOUR-4
▶︎

ಬೇಂದ್ರೆ ಮನೆ ಒಳಗೆ ಮ್ಯೂಸಿಯಂ - ಕುಟುಂಬದ ಪರಿಚಯ, ಇವರೇ ಬೇಂದ್ರೆ ಮೊಮ್ಮಗಳು |DHARWAD DARA BENDRE HOME TOUR-4

ನಮ್ಮನ್ಯಾಗ ಬಡತನ ಇದ್ರೂನೂ, ನಾವು ಆರು ಜನ ಕ್ಲಾಸಿಗೆ ಫಸ್ಟ್ ||Suresh Kulkarani part-6
▶︎

ನಮ್ಮನ್ಯಾಗ ಬಡತನ ಇದ್ರೂನೂ, ನಾವು ಆರು ಜನ ಕ್ಲಾಸಿಗೆ ಫಸ್ಟ್ ||Suresh Kulkarani part-6

ಮಾತುಗಾರ, ಮಾತಿನ ಮಲ್ಲ ಮಾತಿನ ಮೋಡಿಗಾರ ಕೃಷ್ಣೇಗೌಡ್ರು! | Prof Krishne Gowda Interview | Suvarna News
▶︎

ಮಾತುಗಾರ, ಮಾತಿನ ಮಲ್ಲ ಮಾತಿನ ಮೋಡಿಗಾರ ಕೃಷ್ಣೇಗೌಡ್ರು! | Prof Krishne Gowda Interview | Suvarna News

Da.Ra Bendre Documentary |ದ. ರಾ ಬೇಂದ್ರೆ ವ್ಯಕ್ತಿಚಿತ್ರ |Kalamadhyam | Parameshwar
▶︎

Da.Ra Bendre Documentary |ದ. ರಾ ಬೇಂದ್ರೆ ವ್ಯಕ್ತಿಚಿತ್ರ |Kalamadhyam | Parameshwar

ಪರೀಕ್ಷಾ ಸಿದ್ಧತೆಗೆ ಮುನ್ನ ನಮ್ಮ ದೃಷ್ಟಿಕೋನ ಹೇಗಿರಬೇಕು? | ಶ್ರೀ ಸುರೇಶ್ ಕುಲಕರ್ಣಿ| Class10
▶︎

ಪರೀಕ್ಷಾ ಸಿದ್ಧತೆಗೆ ಮುನ್ನ ನಮ್ಮ ದೃಷ್ಟಿಕೋನ ಹೇಗಿರಬೇಕು? | ಶ್ರೀ ಸುರೇಶ್ ಕುಲಕರ್ಣಿ| Class10

HOME TOUR-"ವರಕವಿ ದ.ರಾ ಬೇಂದ್ರೆ ಧಾರವಾಡ ಮನೆ ಒಳಗೆ ಏನೇನಿದೆ? ನೋಡೋಣ ಬನ್ನಿ!-Da.Ra Bendre Home-Sadhanakeri
▶︎

HOME TOUR-"ವರಕವಿ ದ.ರಾ ಬೇಂದ್ರೆ ಧಾರವಾಡ ಮನೆ ಒಳಗೆ ಏನೇನಿದೆ? ನೋಡೋಣ ಬನ್ನಿ!-Da.Ra Bendre Home-Sadhanakeri

Bendre’s Humour Live Performance | Ekabhinaya by Ananth Deshpande | Kannada Comedy Stage|  SKNEWS
▶︎

Bendre’s Humour Live Performance | Ekabhinaya by Ananth Deshpande | Kannada Comedy Stage| SKNEWS

ಯುದ್ಧದ ಭೀಕರತೆ: ಮನುಷ್ಯತ್ವ ಎತ್ತ ಸಾಗುತ್ತಿದೆ? | Dr. Gururaj Karjagi Speech | Impact of War| Suvarna News
▶︎

ಯುದ್ಧದ ಭೀಕರತೆ: ಮನುಷ್ಯತ್ವ ಎತ್ತ ಸಾಗುತ್ತಿದೆ? | Dr. Gururaj Karjagi Speech | Impact of War| Suvarna News

ಬೇಂದ್ರೆ ಬದುಕು - ಬರಹ
▶︎

ಬೇಂದ್ರೆ ಬದುಕು - ಬರಹ

ಬನ್ನಂಜೆ ಕಂಡ ಬೇಂದ್ರೆ - ಬನ್ನಂಜೆ ಗೋವಿಂದಾಚಾರ್ಯ - Bannanje Kanda Bendre - Bannanje Govindacharya
▶︎

ಬನ್ನಂಜೆ ಕಂಡ ಬೇಂದ್ರೆ - ಬನ್ನಂಜೆ ಗೋವಿಂದಾಚಾರ್ಯ - Bannanje Kanda Bendre - Bannanje Govindacharya

ಶಿಕ್ಷಕ - ಶಾಲೆ - ಸಂಸ್ಕಾರ - ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಂದ ಉಪನ್ಯಾಸ Talk by Kajampady Subrahmanya Bhat
▶︎

ಶಿಕ್ಷಕ - ಶಾಲೆ - ಸಂಸ್ಕಾರ - ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಂದ ಉಪನ್ಯಾಸ Talk by Kajampady Subrahmanya Bhat

ಮತ್ತೆ ಹುಟ್ಟಿ ಬಂದ್ರು ಬೇಂದ್ರೆ | ಡಾ. ದ.ರಾ. ಬೇಂದ್ರೆ ಜಯಂತಿ | Ananta Deshpande | Book Brahma
▶︎

ಮತ್ತೆ ಹುಟ್ಟಿ ಬಂದ್ರು ಬೇಂದ್ರೆ | ಡಾ. ದ.ರಾ. ಬೇಂದ್ರೆ ಜಯಂತಿ | Ananta Deshpande | Book Brahma